• -40%

    ಹೊಳೆಮಕ್ಕಳು

    0

    ಇದು ಬಿದರಹಳ್ಳಿ ನರಸಿಂಹಮೂರ್ತಿಯವರ ಕಾದಂಬರಿ.

    Original price was: $2.40.Current price is: $1.44.
    Add to basket
  • -100%

    ಪರಾಗ

    0

    ಪರಾಗ
    (ಕವನ ಸಂಕಲನ) :
    ಶ್ರೀ ಅರವಿಂದ ಅವರು ಬರೆದ ಮೊದಲ ಕವನ ಸಂಕಲನ ಇದಾಗಿದೆ. ಇವರು ಕರ್ನಾಟಕದವರೇ ಆಗಿದ್ದರೂ ಸಹ ಅವರ ಸರ್ಕಾರಿ ಸೇವೆ ಅವಧಿಯಲ್ಲಿ ಕರ್ನಾಟಕ ಹೊರತು ಪಡಿಸಿ ದೇಶದ ಎಲ್ಲ ಪ್ರಮುಖ ಪಟ್ಟಣಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಪುಣೆಯಲ್ಲಿ ನೆಲೆಸಿದ್ದರು ಕನ್ನಡ ಭಾಷೆಯ ಮೇಲಿನ ಪ್ರೀತಿಯಿಂದ ಅವರ ಜೀವಮಾನದ ಅನುಭವಗಳನ್ನೆಲ್ಲ ಕ್ರೂಡೀಕರಿಸಿ ಬರೆದಂತಹ ಮೊದಲ ಕವನ ಸಂಕಲನ ಇದಾಗಿದೆ.

    Original price was: $1.44.Current price is: $0.00.
    Add to basket
  • -100%

    ಅಗಸ್ತ್ಯನಿಂದ ಐ.ಟಿ.ವರೆಗೆ

    0

    ಅಗಸ್ತ್ಯನಿಂದ ಐ.ಟಿ.ವರೆಗೆ :
    (ದ್ವಿಪಾತ್ರ ನಾಟಕ ಪ್ರಸಂಗಗಳು)

    ಬಹುಕಲಾವಿದರ ತಂಡಗಳ ಪ್ರದರ್ಶನದಿಂದ ಏಕವ್ಯಕ್ತಿ ಪ್ರದರ್ಶನದ ಹಂತಕ್ಕೆ ಬಂದು ನಿಂತಿರುವ ಇಂದಿನ ದಿನಗಳಲ್ಲಿ ಆರ್ಯರ ದ್ವಿಪಾತ್ರ ನಾಟಕಗಳು ಹೊಸತನ್ನೇ ನೀಡಿ ಮತ್ತು ಸಾಧ್ಯತೆಯನ್ನು ಸಾಬೀತುಪಡಿಸಿವೆ. ಇದರಲ್ಲಿನ ಏಳು ನಾಟಕಗಳು ವಸ್ತುವಿನ ಆಯ್ಕೆಯಲ್ಲಿ ವೈವಿಧ್ಯತೆ ಆಯಾ ಕಾಲಘಟ್ಟದ ವಸ್ತುವಿಗೆ ತಕ್ಕಂತೆ ಭಾಷೆಯ ಬಳಕೆ ಮತ್ತು ಸರಳ ಸಂಭಾಷಣೆ ಎನಿಸಿದರೂ ಅವುಗಳ ಒಳ ಅರ್ಥ ಪ್ರೇಕ್ಷಕನ ಮೆದುಳು ಹಾಗೂ ಮನಸ್ಸನ್ನು ಮತ್ತು ಹೃದಯವನ್ನು ಯಶಸ್ವಿಯಾಗಿ ತಲುಪುತ್ತವೆ. ಈಗಾಗಲೇ ಈ ನಾಟಕಗಳು ಆಕಾಶವಾಣಿಯಲ್ಲಿ ಪ್ರಸಾರಗೊಂಡು ಪುರಸ್ಕಾರಕ್ಕೂ ಪಾತ್ರವಾಗಿವೆ.

    Original price was: $0.72.Current price is: $0.00.
    Add to basket
  • -39%

    ಬೆಳಕಿನ ಬೇಲಿ

    0

    ಬೆಳಕಿನ ಬೇಲಿ :

    {ನ್ಯಾನೋ ಕತೆಗಳು}

    ‘ನ್ಯಾನೋ ಕತೆ’, ‘ಸೂಜಿ ಮಲ್ಲಿಗೆ’, ‘ಚೌಕಟ್ಟು ಮೀರಿದ ಚಿತ್ರ’, ‘ಹನಿಗತೆ’ ಹೀಗೆ ನಾನಾ ಹೆಸರುಗಳಡಿ ಕನ್ನಡಪ್ರಭ, ವಿಜಯವಾಣಿ, ಪ್ರಜೋದಯ ಮತ್ತು ತುಷಾರ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಇಲ್ಲಿನ ಬರಹಗಳನ್ನು ಬರೆದಿದ್ದಾರೆ.

    Original price was: $0.67.Current price is: $0.41.
    Add to basket
  • -39%

    ಅಕ್ಷಯಪಾತ್ರೆ

    0

    ಅಕ್ಷಯಪಾತ್ರೆ
    (ಕಾಂದಬರಿ)
    ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ಸಾಹಸ ಕಥೆ ಕಾದಂಬರಿಗಳು ಕಮ್ಮಿಯಾಗಿವೆ. ಮೊದಲೇ ಕನ್ನಡ ಸಾಹಿತ್ಯವು ಓದುಗರ ಕ್ಷಾಮವನ್ನು ಎದುರಿಸುತ್ತಿದೆ. ಟಿವಿ, ಸಿನಿಮಾದ ಅಬ್ಬರದಲ್ಲಿ ಕಾದಂಬರಿ ಓದಿಗರ ಸಂಖ್ಯೆ ಕಡಿಮೆಯಾಗಿದೆ. ಅದರಲ್ಲೂ ಯುವವರ್ಗ ಸಾಹಿತ್ಯ ಕ್ಷೇತ್ರದತ್ತ ನಿರಾಸಕ್ತಿ ಹೊಂದಿದೆ. ಇಂತಹ ವಿಷಮ ಘಟ್ಟದಲ್ಲಿ ಮಿತ್ರ ಶ್ರೀ ಎಚ್.ಜಿ.ಮಳಗಿಯವರು ರೋಚಕ ಸಾಹಸ ಕಾದಂಬರಿಯನ್ನು ಕನ್ನಡ ಓದುಗರಿಗೆ ನೀಡುವ ಸಾಹಸ ಮಾಡಿದ್ದು ಅಭಿನಂದನೀಯ. ಮಹಾಭಾರತ ಕಾಲದ ಅಕ್ಷಯಪಾತ್ರೆಯನ್ನು ಹುಡುಕಿಕೊಂಡು ಪ್ರಾಚ್ಯವಸ್ತು ಸಂಶೋಧನಾ ತಂಡವು ದೂರದ ಅಫಘಾನಿಸ್ತಾನಕ್ಕೆ ಹೋಗಿ ಅಲ್ಲಿ ಭಯೋತ್ಪಾದರಿಂದ, ಖಳನಾಯಕನಿಂದ ಅನೇಕ ತೊಂದರೆಗಳನ್ನು ಎದುರಿಸಿ ಬರುವ ರೋಚಕ ಕಥಾವಸ್ತುವನ್ನು ಹೊಂದಿದೆ. ಕ್ಷಣಕ್ಷಣಕ್ಕೂ ಎದುರಾಗುವ ಅಪಾಯಗಳು, ವಿಕ್ಷಿಪ್ತ ಖಳನಾಯಕನ ಕ್ರೂರ ನಡೆಗಳು. ನಾಯಕನ ಮೈನವಿರೇಳಿಸುವ ಸಾಹಸಗಳು, ನಾಯಕಿಯ ಅಹಂ, ಸಿಟ್ಟು, ಅಸಹಾಯಕತೆ ಎಲ್ಲವೂ ರೋಚಕತೆಗೆ ಮೆರಗನ್ನು ತಂದಿವೆ. ನಾಯಕಿ ಅಫಘಾನಿಸ್ತಾನದ ಹಳ್ಳಿಯ ತಾಂಡಾವೊಂದರಲ್ಲಿ ಅಲ್ಲಿನ ನೃತ್ಯಗಾತಿಯೊಂದಿಗೆ ಸ್ಪರ್ಧೆಗೆ ಬಿದ್ದು ನೃತ್ಯ ಮಾಡುವುದಂತೂ ಥೇಟ್ ಹಿಂದೀ ಚಿತ್ರದಲ್ಲಿ ಬರುವ ಸನ್ನಿವೇಶದಂತಿದೆ.

    Original price was: $0.77.Current price is: $0.47.
    Add to basket
  • -40%

    ಕರಗದ ನಗು

    0

    ಕರಗದ ನಗು

    ಪತ್ರಕರ್ತೆ ಕಾವೇರಿ ಎಸ್ ಎಸ್ ಅವರ ಕಥಾಸಂಕಲನವಿದು. ಇದರಲ್ಲಿ ಹನ್ನೆರಡು ಕಥೆಗಳಿದ್ದು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದವುಗಳು. ಈ ಕೃತಿ ಕನ್ನಡ ಪುಸ್ತಕ ಪ್ರಾಧಿಕಾರ ಯುವ ಬರಹಗಾರರ ಚೊಚ್ಚಲ ಕೃತಿಗೆ ನೀಡುವ ಪ್ರೋತ್ಸಾಹ ಧನ ಯೋಜನೆಗೆ ಆಯ್ಕೆಯಾಗಿದೆ.

    Original price was: $0.78.Current price is: $0.47.
    Add to basket
  • -40%

    ಲಿಲ್ಲಿ ಪುಟ್ಟ

    0

    ಲಿಲ್ಲಿ ಪುಟ್ಟ
    ಲಿಲ್ಲಿ ಪುಟ್ಟ ಸಹಜ ಲಹರಿಯಲ್ಲಿ ಹರಿದು ಬರುವ ಕಾದಂಬರಿ. ರೋಚಕತೆ ಮತ್ತು ನಾಟಕೀಯತೆ ಇದರ ಪ್ರಧಾನ ಗುಣಗಳು. ಪಕ್ಕ ಧಾರವಾಡದ ಶೈಲಿ ಭಾಷಾ ಸೊಗಡು, ತಿಳಿ ಹಾಸ್ಯ, ದಟ್ಟ ಪಾತ್ರ ಚಿತ್ರಿಕತೆ, ಇಲ್ಲಿಯ ಸತ್ವವಾಗಿದೆ. ಯಾರಾದರು, ಎಂದಾದರೂ ತಮ್ಮ ಯವ್ವನದಲ್ಲಿ ಅನುಭವಿಸಿರಬಹುದಾದ ಕಥಾಕೋಷ ಇಲ್ಲಿಯದು. ಏಕಕಾಲಕ್ಕೆ ಸೀರಿಯಲ್ ಮತ್ತು ಸಿನೇಮಾ ಶೈಲಿ ಈ ಕಾದಂಬರಿಯ ಕಥಾ ಕೇಂದ್ರ ಯವ್ವನದ ರೋಚಕ ದಿನಗಳದ್ದಾಗಿದ್ದರಿಂದ ಒಂದು ವರ್ಗದ ಓದುಗರಿಗೆ ಗಕ್ಕನೆ ಹಿಡಿಯಬಲ್ಲ ಶಕ್ತಿ ಇದಕ್ಕಿದೆ.

    Original price was: $1.20.Current price is: $0.72.
    Add to basket
  • -40%

    ಸರದಿ

    0

    ಸರದಿ
    ಡಾ.ನಾ. ದಾಮೋದರ ಶೆಟ್ಟಿ ಅವರ ‘ಸರದಿ’ ಕಾದಂಬರಿಯು ಆಧುನಿಕತೆ ಮತ್ತು ಜಾಗತಿಕರಣದ ಪರಿಣಾಮವಾಗಿ ನಮ್ಮ ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆ ಸಾಗುತ್ತಿರುವ ದಾರಿ ಎಲ್ಲೆಡೆಯೂ ಅಭಯಾಶ್ರಮದ ಕಡೆ ಚಲಿಸುತ್ತಿರುವ ದೃಶ್ಯಗಳನ್ನು ಚಿತ್ರಿಸುತ್ತದೆ. ಈ ಎಲ್ಲ ಸಂದರ್ಭಗಳಲ್ಲಿ ಆಶ್ರಮ ಸೇರುತ್ತಿರುವವರೆಲ್ಲಾ ಹೆಂಗಸರು ಮತ್ತು ತಾಯಂದಿರು ಎನ್ನುವುದು ವಿಶೇಷವಾದುದು. ಈ ಕಾದಂಬರಿಯು ಕುಟುಂಬ ಮತ್ತು ತಾಯಿಯನ್ನು ಕೇಂದ್ರವಾಗಿ ಇಟ್ಟುಕೊಂಡು ಈ ಕಾಲದ ಭಿನ್ನ ಅನನ್ಯತೆಗಳ ನಡುವಿನ ಸಂಘರ್ಷ ಮತ್ತು ಅದರಿಂದ ಸಂಭವಿಸುವ ನೋವು, ಅದನ್ನು ನಿವಾರಿಸಲು ಮಾಡುವ ಪ್ರಯತ್ನಗಳು – ಹೀಗೆ ಅನೇಕ ಸಂಗತಿಗಳನ್ನು ಚರ್ಚಿಸುತ್ತದೆ.

    Original price was: $0.84.Current price is: $0.50.
    Add to basket
  • -40%

    ಅಂತರಂಗದ ಮೃದಂಗ

    0

    ಅಂತರಂಗದ ಮೃದಂಗ
    (ವೈಚಾರಿಕ ಪ್ರಬಂಧಗಳು)
    ನರಹಳ್ಳಿಯವರ ಪ್ರಬಂಧಗಳದ್ದು ಸಾವಧಾನದ ವಿಲಂಬಿತ ನಡೆ ಆದುದರಿಂದ ಅದಕ್ಕೆ ದಕ್ಕುವ ಸೂಕ್ಷ್ಮಗಳು ಅಪರೂಪದವು. ಆಧುನಿಕ ಜೀವನದ ಬಿಕ್ಕಟ್ಟುಗಳ ಬಗ್ಗೆ ನರಹಳ್ಳಿಯವರ ಚಿಂತನೆಗಳು ಸ್ವಾನುಭವ ಅನುಸಂಧಾನದಿಂದಲೇ ತತ್ವೀಕರಣಗೊಳ್ಳುವುದರಿಂದ ಅಧೀಕೃತತೆಯ ಮುದ್ರೆಯನ್ನು ಅನಾಯಾಸವಾಗಿ ಪಡೆಯುತ್ತವೆ. ಲಲಿತ ಪ್ರಬಂಧಕ್ಕೆ ಬೌದ್ಧಿಕತೆಯ ಬೆನ್ನೆಲುಬು ದೊರಕಿಸಿದ್ದು ನರಹಳ್ಳಿಯವರ ಪ್ರಬಂಧಗಳ ವೈಶಿಷ್ಟ್ಯವಾಗಿದೆ. ಸಮಕಾಲೀನ ಜೀವನದ ಉಪಯೋಗಿ ದೃಷ್ಟಿಯ ಅವಸರ ಗತಿಗೆ ವಿಲಂಬಿತ ನಡೆಯ ಎದುರೀಜು ಹಾಕುವ ಪ್ರಬಂಧಗಳ ಚಿಂತನ ದ್ರವ್ಯ ಹೊಸ ನೆಲೆಯಲ್ಲಿ ಓದುಗ ಯೋಚಿಸುವುದನ್ನು ಒತ್ತಾಯಿಸುವಷ್ಟು ಸಮರ್ಥವಾಗಿವೆ. ಪ್ರಬಂಧಗಳ ಶೈಲಿ ಪು.ತಿ.ನ. ಅವರ ಪ್ರಬಂಧಗಳ ರಚನಾ ಕ್ರಮವನ್ನು ನೆನಪಿಸುವಂತಿವೆ. ಈ ಹೊತ್ತಿನ ಸಾಮಾಜಿಕ ಪಲ್ಲಟಗಳನ್ನು ಗಾಢವಾದ ವಿಶಾದದ ನೆಲೆಯಲ್ಲಿ ಹಿಡಿದಿಡುವ ಈ ಪ್ರಬಂಧಗಳು ನಿರ್ಭಾವುಕ ವೈಚಾರಿಕ ಪ್ರಬಂಧಗಳಿಗೆ ಸಮರ್ಥ ಪರ್ಯಾಯಗಳೆನಿಸುತ್ತವೆ.

    Original price was: $1.20.Current price is: $0.72.
    Add to basket
  • -40%

    ಸ್ಪೂಕಿ ಎಂಬ ಹಾವು ಮತ್ತು ಫ್ಯಾಸಿಸ್ಟ್ ಅಪ್ಪ

    0

    ಲೋಹಿತ್ ನಾಯ್ಕರ್ ಅವರು ವೃತ್ತಿಯಿಂದ ನ್ಯಾಯವಾದಿಗಳು. ಅವರಿಗೆ ಮಾನವ ಹಕ್ಕುಗಳ ವಿಷಯದಲ್ಲಿ ವಿಶೇಷ ಆಸಕ್ತಿ. ಅವರ ಹಿಂದಿನ ಎರಡು ಕಥಾ ಸಂಕಲನಗಳಲ್ಲಿ ಕಾಣಿಸಿಕೊಂಡಿದ್ದ ಈ ಆಸಕ್ತಿ ಈ ಸಂಕಲನದಲ್ಲೂ ಮುಂದುವರೆದಿದೆ. ಮಾನವ ಹಕ್ಕುಗಳಿಗೆ ಸಂಬಂಧಿಸಿದ ಸಂದರ್ಭ ಒಂದೆಡೆ ಕಾಯಿದೆ ದೃಷ್ಟಿಯಿಂದ ಸಮಸ್ಯೆಗಳಾಗಿದ್ದರೆ, ಇನ್ನೊಂದೆಡೆ ನೈತಿಕ ದೃಷ್ಟಿಯಿಂದ ಸಮಸ್ಯೆಗಳಾಗಿವೆ. ಈ ಸಂದಿಗ್ಧತೆಯನ್ನು ಲೋಹಿತ್ ಅವರ ಸಣ್ಣಕತೆಗಳು ಸಮರ್ಥವಾಗಿ ಚಿತ್ರಿಸುತ್ತವೆ.

    Original price was: $0.84.Current price is: $0.50.
    Add to basket
  • -40%

    ಸಾಹಿತ್ಯಲೋಕದ ಸುತ್ತ-ಮುತ್ತ

    0

    ಸಾಹಿತ್ಯಲೋಕದ ಸುತ್ತ–ಮುತ್ತ :
    (ಪ್ರಸಂಗಗಳು)

    ತುಂಬಾ ಗಂಭೀರ ಧಾಟಿಯ ನಿಷ್ಠುರ ವಿಮರ್ಶಕರೆಂದೇ ಪ್ರಸಿದ್ಧರಾಗಿರುವ ಗಿರಡ್ಡಿ ಗೋವಿಂದರಾಜರ ವ್ಯಕ್ತಿತ್ವ ಮತ್ತು ಬರವಣಿಗೆಯ ಮತ್ತೊಂದು ಮುಖ್ಯ ಆಯಾಮವನ್ನು ತೋರುವ ಕೃತಿ ”ಸಾಹಿತ್ಯ ಲೋಕದ ಸುತ್ತ–ಮುತ್ತ ”. ಪಠ್ಯ ಕೇಂದ್ರಿತ ವಿಮರ್ಶಕ ಈಗ ಪಠ್ಯದ ಸುತ್ತಮುತ್ತಲೂ ನೋಡುತ್ತಿದ್ದಾನೆ. ತನ್ನ ಗಮನಕ್ಕೆ ಬಂದ ಸ್ವಾರಸ್ಯಕರ ಸಂಗತಿಗಳನ್ನು ಪೂರ್ವ ಗ್ರಹಗಳಿಲ್ಲದೆ ಆಸ್ವಾದಿಸುತ್ತಾ ಅವುಗಳನ್ನು ಇತರ ಸಾಹಿತ್ಯಾಸಕ್ತರಿಗೂ ದಾಟಿಸುತ್ತಿದ್ದಾನೆ. ಈ ಪುಸ್ತಕವನ್ನು ‘ಪ್ರಸಂಗಗಳು‘ ಎಂದು ಕರೆದಿರುವುದು ಉಚಿತವಾಗಿಯೇ ಇದೆ. ಸಾಹಿತ್ಯ, ರಂಗಭೂಮಿಗಳನ್ನು ಹತ್ತಿರದಲ್ಲಿ ಬಲ್ಲ ಗಿರಡ್ಡಿಯವರು ಪ್ರಸಂಗ‘ಗಳ ಹಲವು ಮಾದರಿಗಳನ್ನು ಇಲ್ಲಿ ಲವಲವಿಕೆ ಇಂದ ನಿರೂಪಿಸಿದ್ದಾರೆ.ಈ ಪ್ರಸಂಗಗಳಲ್ಲಿ ಕೆಲವು ಸಾಂದರ್ಭಿಕ ಹಾಸ್ಯ, ಸಂದಿಗ್ಧತೆ ಮತ್ತು ಅವುಗಳ ಅನಿರೀಕ್ಷಿತತೆಗಳಿಂದ ಮುದಗೊಳಿಸಿದರೆ, ಮತ್ತೆ ಕೆಲವು ಪರಿಚಿತ ಲೇಖಕರ ಅಪರಿಚಿತ ಮುಖಗಳನ್ನು ಕಾಣಿಸಿ ಬೆಚ್ಚಿಬೀಳಿಸುವಂತಿದೆ. ಮತ್ತೆ ಕೆಲವು ಸಾಹಿತ್ಯ ಚರಿತ್ರೆಯ ಭಾಗಗಳಾಗಿಯೂ ಮುಖ್ಯವೆನಿಸುತ್ತದೆ. ಸಾಹಿತ್ಯ ಲೋಕದ ಸುತ್ತಮುತ್ತ ಹಬ್ಬಿರುವ ಗಾಸಿಪ್ಪುಗಳಿಗೆ ಮತ್ತಷ್ಟು ಬಣ್ಣ ತುಂಬುವ ಕೆಲಸವನ್ನಿ ಇಲ್ಲಿ ಗಿರಡ್ಡಿ ಮಾಡ ಹೊರಟಿಲ್ಲ. ಸಾಹಿತ್ಯ ಸಂಶೋಧಕರಂತೆ ಕೆಲವು ವದಂತಿಗಳ ಜಾಡು ಹಿಡಿದು ಇತರ ವ್ಯಕ್ತಿಗಳಿಂದ ಸಾಕ್ಷ್ಯಗಳನ್ನು ಕಲೆಹಾಕಿ, ಕೆಲವೊಮ್ಮೆ ಲಿಖಿತ ದಾಖಲೆಗಳನ್ನು ಸಂಗ್ರಹಿಸಿ, ಅವುಗಳನ್ನು ಅನಗತ್ಯ ಗೋಜಲುಗಳಿಂದ ಮುಕ್ತಗೊಳಿಸಲು ಶ್ರಮಿಸಿದ್ದಾರೆ.

    Original price was: $1.80.Current price is: $1.08.
    Add to basket
  • -40%

    ಗಿರಡ್ಡಿಯವರ ಸಣ್ಣಕತೆಗಳು

    0

    ಗಿರಡ್ಡಿಯವರ ಸಣ್ಣಕತೆಗಳು :

    ಗಿರಡ್ಡಿಯವರು ಮೊದಲ ಓದಿಗೆ ಮನಸ್ಸಿಗೆ ತೆಕ್ಕೆ ಬೀಳುವಂಥ… ಕಥೆಗಳನ್ನು ಕೊಟ್ಟಿದ್ದಾರೆ. ಇವರ ಕಥೆಗಳಲ್ಲಿ ಥಟ್ಟನೆ ಓದುಗರ ಮನಸ್ಸನ್ನು ಆಕರ್ಷಿಸುವ ಗುಣಗಳೆಂದರೆ ಸದ್ದಿಲ್ಲದೆ ಭಾಷೆ ಕೊಡುವ ಅನುಭವ. ಇಲ್ಲಿ ಕಥೆಗಾರರ ನಿರ್ಲಿಪ್ತತೆಯಿಂದ ಹಲವು ಶಕ್ತಿಗಳು ಹೆಣೆದುಕೊಂಡು ತುಂಬಾ ಪರಿಣಾಮಕಾರಿಯಾದ ಮುಕ್ತಾಯವನ್ನು ಮುಟ್ಟಿ ಒಂದು ಸಂಕೀರ್ಣ, ಪರಿಪೂರ್ಣ ಅನುಭವವನ್ನು ಸಾಧಿಸುತ್ತದೆ.

    Original price was: $3.00.Current price is: $1.80.
    Add to basket
  • -40%

    ಭಾಷಾಂತರ : ಸೈದ್ಧಾಂತಿಕ ಹಾಗೂ ಆನ್ವಯಿಕ ನೆಲೆಗಳು

    0

    ಭಾಷಾಂತರ : ಸೈದ್ಧಾಂತಿಕ ಹಾಗೂ ಆನ್ವಯಿಕ ನೆಲೆಗಳು

    ಕಳೆದ ಎರಡು–ಮೂರು ದಶಕಗಳಲ್ಲಿ ಪಾಶ್ಚಿಮಾತ್ಯ–ಭಾರತೀಯ ವಿಶ್ವ ವಿದ್ಯಾಲಯಗಳಲ್ಲಿ ಭಾಷಾಂತರವನ್ನು ಕುರಿತು ಅಗಾಧ ಚಿಂತನೆ ನಡೆದಿದೆ; ಭಾಷಾಶಾಸ್ತ್ರೀಯ, ವಸಾಹತೋತ್ತರ, ಸ್ತ್ರೀವಾದಿ, ಜಾನಾಂಗಿಕ, ಇತ್ಯಾದಿ ನೆಲೆಗಳಲ್ಲಿ ಭಾಷಾಂತರಕ್ರಿಯೆಯ ಸ್ವರೂಪ ಹಾಗೂ ಪರಿಣಾಮಗಳನ್ನು ಕುರಿತು ಅನೇಕ ಸ್ವೋಪಜ್ಞ ಸಿದ್ಧಾಂತಗಳು ಮೂಡಿ ಬಂದಿವೆ. ಅವುಗಳಲ್ಲಿ, ನನಗೆ ಮಹತ್ವಪೂರ್ಣವಾದ ಕೆಲವು ಸೈದ್ಧಾಂತಿಕ ಧಾರೆಗಳನ್ನು ಇಲ್ಲಿ ಪರಿಚಯಿಸಲಾಗಿದೆ.

    Original price was: $2.10.Current price is: $1.26.
    Add to basket
  • -40%

    ಸೊನಾಟಾ

    0

    ಸೊನಾಟಾ –

    ಪಾಶ್ಚಾತ್ಯ ಸಂಗೀತದಲ್ಲಿ ಪಿಯನೋದಂಥಹ ಏಕ ವಾದ್ಯಕ್ಕಾಗಿ ಅಥವಾ ಅದರ ಜೊತೆಗೆ ಹೆಚ್ಚೆಂದರೆ ಪಿಟೀಲು – ಚೆಲೋದಂಥಹ ಒಂದು ತಂತು ವಾದ್ಯಕ್ಕಾಗಿ ರಚಿಸಿರುವ ಬೃಹತ್ ಗಾತ್ರದ ಕೃತಿ. (ಮರಾಠಿಯಲ್ಲಿ ‘ಸನ್ನಾಟಾ‘ ಎಂದರೆ ‘ಸ್ಮಶಾನ ಮೌನ‘ ಎಂದರ್ಥ.)
    ಈ ನಾಟಕದ ಮೂಲ ಮರಾಠಿ ಲೇಖಕರು ಶ್ರೀ ಮಹೇಶ ಎಲಕುಂಚವಾರ . ಕನ್ನಡ ಅನುವಾದ ಶ್ರೀ ಗಿರೀಶ ಕಾರ್ನಾಡ

    Original price was: $0.60.Current price is: $0.36.
    Add to basket
  • -40%

    ಕುವೆಂಪು : ಯುಗದ ಕವಿ

    0

    ಕುವೆಂಪು ಅವರ ವ್ಯಕ್ತಿತ್ವದ ಮೂಲನೆಲೆಯಾಗಿ ಆಧ್ಯಾತ್ಮಿಕತೆ, ಅವರ ಬರವಣಿಗೆಯು ಸ್ಥಳೀಯ ಮತ್ತು ವೈಶ್ವಿಕಗಳನ್ನು ಹೆಣೆಯುವ ಬಗೆ, ಅವರು ಲೌಕಿಕ ಮತ್ತು ಆಗಮಿಕಗಳ ನಡುವೆ ಸಾಧಿಸಿರುವ ಸಹಯೋಗದ ಸ್ವರೂಪ, ಅವರ ನಾಟಕಗಳ ಸಮಕಾಲೀನತೆ ಮತ್ತು ಸಾಮಾಜಿಕತೆ, ಕಾದಂಬರಿಗಳ ದಾರ್ಶನಿಕ ನೆಲೆಗಟ್ಟು ಮುಂತಾದ ಸಂಗತಿಗಳು ಇಲ್ಲಿ ಹೊಸ ಆಯಾಮಗಳನ್ನು ಪಡೆದುಕೊಂಡಿವೆ.

    Original price was: $1.80.Current price is: $1.08.
    Add to basket
  • -39%

    ಬೆಂದ ಕಾಳು ಆನ್ ಟೋಸ್ಟ್

    0

    ಬೆಂದ ಕಾಳು ಆನ್ ಟೋಸ್ಟ್

    ಒಂದು ಆಖ್ಯಾಯಿಕೆಯ ಪ್ರಕಾರ ಅರಸ ವೀರ ಬಲ್ಲಾಳ ಬೇಟೆಗೆಂದು ಹೊರಟವನು ಕಾಡಿನಲ್ಲಿ ದಾರಿ ತಪ್ಪಿ, ರಾತ್ರಿಯಿಡೀ ಸುತ್ತಾಡಿ ಹಸಿದು ಬಳಲಿ ಬಸವಳಿದಾಗ, ಒಬ್ಬ ಮುದುಕಿ ಅವನಿಗೆ ಬೆಂದ ಕಾಳುಗಳನ್ನು ನೀಡಿ ಅವನ ಪ್ರಾಣ ಉಳಿಸಿದಳು. ಆ ಉಪಕಾರವನ್ನು ಸ್ಮರಿಸಿ ಅರಸ ಆ ಸ್ಥಾನದಲ್ಲಿ ‘ಬೆಂದಕಾಳೂರು’ ಎಂಬ ಊರನ್ನು ಸ್ಥಾಪಿಸಿದ. ಅದೇ ಮುಂದೆ ‘ಬೆಂಗಳೂರು’ ಆಯಿತು.

    Original price was: $0.76.Current price is: $0.46.
    Add to basket
  • -40%

    ಮದುವೆಯ ಆಲ್ಬಮ್

    0

    ಮದುವೆಯ ಆಲ್ಬಮ್
    – ನಾಟಕ –
    ಮದುವೆಯ ಅಲ್ಬಮ್ ಸಮಕಾಲೀನ ಜೀವನದ ಬಗ್ಗೆ ಗಿರೀಶ ಕಾರ್ನಾಡ ಅವರು ಬರೆದ ನಾಟಕ. ಇದರಲ್ಲಿರುವುದು ಸಮಕಾಲೀನ ಸಂವೆದನೆಯೇ ಹೊರತು ವಿಷಯವಲ್ಲ ಎಂದು ಗಿರೀಶ ಕಾರ್ನಾಡರ ಅಭಿಪ್ರಾಯ.
    ‘ಮದುವೆಯ ಆಲ್ಬಮ್’ ನಾಟಕದ ಮೊದಲನೆಯ ಪ್ರಯೋಗವನ್ನು Prime Time Theatre Company ಅವರು ಇಂಗ್ಲಿಷ್ ನಲ್ಲಿ Wedding Album ಎಂಬ ಹೆಸರಿನಲ್ಲಿ ಮುಂಬಯಿಯ National Centre for the Performing Arts ಅವರ ಟಾಟಾ ನಾಟ್ಯಗೃಹದಲ್ಲಿ ಶನಿವಾರ ೧೦ಮೇ ೨೦೦೮ರಂದು ಸಾದರಪಡಿಸಿದರು.

    Original price was: $1.08.Current price is: $0.65.
    Add to basket
  • -40%

    ಜನನಾಯಕ -ಡಿ. ಕೆ. ನಾಯ್ಕರ್

    0

    ಜನನಾಯಕ –ಡಿ. ಕೆ. ನಾಯ್ಕರ್

    ರಾಜ್ಯ ರಾಜಕಾರಣದಲ್ಲಿ ಅಷ್ಟೇ ಅಲ್ಲ, ರಾಷ್ಟ್ರ ರಾಜಕಾರಣದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದ ಶ್ರೀ ನಾಯ್ಕರ್ ವಿಶಿಷ್ಟ ವ್ಯಕ್ತಿತ್ವದ ರಾಜಕಾರಣಿ. ಇಂಥ ಅಪರೂಪದ ರಾಜಕಾರಣಿ ಕುರಿತು ಪುಸ್ತಕ ಬರೆಯುವ ಅವಕಾಶ ಸಿಕ್ಕಿದ್ದು ನನಗೆ ಸಹಜವಾಗಿಯೇ ಸಂತೋಷ ಉಂಟು ಮಾಡಿದೆ.
    ಶ್ರೀ ಡಿ. ಕೆ. ನಾಯ್ಕರ್ ಅವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹತ್ತು ಹಲವು ಹುದ್ದೆ, ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಆದರೆ ಅವರಿಗೆ ಮುಖ್ಯಮಂತ್ರಿಯ ಗದ್ದುಗೆ ದೂರವೇ ಉಳಿದದ್ದು ಈಗ ಇತಿಹಾಸ. ಒಂದು ಬಡ, ಹಿಂದುಳಿದ ಕುಟುಂಬದ ಹಿನ್ನೆಲೆಯಿಂದ ಬಂದು ರಾಜಕಾರಣದಲ್ಲಿ ನೆಲೆ ಕಂಡುಕೊಂಡು ರಾಜ್ಯದ ಸಮಸ್ತ ಜನರ ಶ್ರೇಯೋಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ ಶ್ರೀ ಡಿ. ಕೆ. ನಾಯ್ಕರ್ ಈಗಲೂ ಜನಮಾನಸದಲ್ಲಿ ನೆಲೆ ನಿಂತಿದ್ದಾರೆ.

    Original price was: $3.00.Current price is: $1.80.
    Add to basket
  • -40%

    ಎಷ್ಟು ಕಾಡತಾವ ಕಬ್ಬಕ್ಕೀ…

    0

    ರಾಘವೇಂದ್ರ ಪಾಟೀಲರ ‘ಮತ್ತೊಬ್ಬ ಮಾಯಿ’ ಮತ್ತು ‘ಎಷ್ಟು ಕಾಡತಾವ ಕಬ್ಬಕ್ಕೀ…’ ಓದುವಾಗ ನಾವು ಬದುಕಿನೊಂದಿಗೇ, ಅದರ ನಿಷ್ಠುರ ಅನಿಯತಿಯೊಂದಿಗೇ ಹೊಕ್ಕಾಡುವ ಅನುಭವವಾಗುತ್ತದೆ. ಕಥೆಯನ್ನೂ ಅದೊಂದು ಬದುಕು ಎನ್ನುವಂತೆ ಬೆಳೆದುಕೊಳ್ಳುವುದು ಅಸಾಮಾನ್ಯ ಕತೆಗಾರನಿಗೆ ಮಾತ್ರ ಸಾಧ್ಯ. ಕಥೆಗಾಗಿ ಬದುಕು ಇರುವುದಿಲ್ಲ. ಲೇಖಕ ಎಂಬ ಹುಲುಮಾನವನು, ತಾನು ಕಂಡುಂಡು ಕಳವಳಿಸಿದ ಬದುಕನ್ನು ಅದರ ಎಲ್ಲ ವೈರುಧ್ಯ, ತೀವ್ರತೆ, ಅತಾರ್ಕಿಕತೆಯೊಂದಿಗೆ ಭಾಷೆಯ ಪಾದಯಾತ್ರೆಯಲ್ಲಿ ಹಿಡಿಯಲು ಸಾಧ್ಯವೇ ಎಂದು, ಪಾಟೀಲರ ಕಥೆಗಳು ಪರಮ ವಿನಯದಲ್ಲಿ ಪ್ರಯತ್ನ ಮಾಡುತ್ತವೆ. ಪಾಟೀಲರ ಹೊಸ ಸಂಗ್ರಹದಲ್ಲಿ ನಾವು ನೋಡುತ್ತಿರುವುದು ಅಂಥ ಕಥೆಗಳನ್ನು. ಬದುಕಿನ ನಿಬಿಡತೆಯನ್ನು ಯಾವ ಸಂವಿಧಾನದಲ್ಲಿ ಮಂಡಿಸಿದಾಗ ದರ್ಶನದ ಹೊಳಹೊಂದು ಫಳಕ್ಕನೆ ಮಿಂಚುವುದು ಎಂಬ ಸಂಗತಿಯು ಹಗಲೆಚ್ಚರಕ್ಕೆ ಏನು ಗೊತ್ತು? ಚಾರಣವೇ ತುದಿಗುರಿಯೆಂಬಂತೆ ಪಾಟೀಲ ತಮ್ಮ ಕಥೆಗಳನ್ನು ಬರೆಯುತ್ತಾರೆ. ಅದೇ ಅವರ ಅನನ್ಯತೆ.

    Original price was: $1.56.Current price is: $0.94.
    Add to basket
  • -40%

    ಆಗೊಮ್ಮೆ ಈಗೊಮ್ಮೆ

    0

    ಆಗೊಮ್ಮೆ ಈಗೊಮ್ಮೆ

    (ಗದ್ಯ ಲೇಖನಗಳ ಸಂಗ್ರಹ)

    ಇದೊಂದು ಭಾಷಣಗಳು, ಲೇಖನಗಳು ಮತ್ತು ವ್ಯಕ್ತಿ ಚಿತ್ರಗಳ ಸಂಕಲನ. ಇದರಲ್ಲಿ ಗಿರೀಶ ಕಾರ್ನಾಡ ಅವರು ಕಳೆದ ಐದು ದಶಕಗಳಲ್ಲಿ ಬೇರೆ ಬೇರೆ ವೇದಿಕೆಗಳಲ್ಲಿ ಮಾಡಿದ 11 ಭಾಷಣಗಳು, ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳು ಮತ್ತು 6 ವ್ಯಕ್ತಿಚಿತ್ರಗಳು ಸೇರಿವೆ.

    Original price was: $2.40.Current price is: $1.44.
    Add to basket
  • -40%

    ಅದ್ದ್ಯಾ

    0

    ಅದ್ದ್ಯಾ
    ಅದ್ದ್ಯಾ ಎಂಬ ನಾಮನಿರ್ದೇಶನಗಳಿಲ್ಲದ ವ್ಯಕ್ತಿಯು ತನ್ನದಲ್ಲದ ಬೇರೆಯವರ ಮನೆಯಲ್ಲಿ ಬದುಕಿ ಆ ಮನೆಯ ಸುಃಖ ದುಃಖಗಳಲ್ಲಿ ತಾನೂ ಭಾಗಿಯಾಗಿ ತಾನು ಜೀವನದಲ್ಲಿ ಕಲಿತ ಪಾಠಗಳನ್ನು ಆ ಮನೆಯ ಮಕ್ಕಳಿಗೆ ಕಲಿಸಿ ಅವರ ಜೀವನವನ್ನು ರೂಪಿಸಿದ ಚಿತ್ರ. ತಾನು ಸಮರ್ಪಿಸಿಕೊಂಡ ಮನೆಗೆ ತನ್ನನ್ನು ಸೀಮಿತಗೊಳಿಸಿಕೊಂಡು ಮನೆಯ ಸಂಸ್ಕೃತಿಗೆ ತಾನೂ ಭಾಗೀದಾರಳಾಗಿ ಅದಕ್ಕೆ ತನ್ನ ಕೊಡುಗೆಯನ್ನು ಇತ್ತವಳು ಈ ಅದ್ದ್ಯಾ. ಅದ್ದ್ಯಾ ತನ್ನ ಮೇರೆಯಲ್ಲಿನ ಸಮಾಜದ ಭಾಷೆ ನೀತಿ ನಿಲುವುಗಳನ್ನು ನಿರ್ದೇಶಿಸುವ ಜೀವ. ಆದ್ದರಿಂದ ಇದು ಒಮ್ಮೆ ನಾವು ಕಳಕೊಂಡ ತಿರುಗಿ ಮರಳಿ ಬಾರದ ಸಂಸ್ಕೃತಿಯ ಚಿತ್ರವೆಂದರೂ ಸರಿ.

    Original price was: $1.20.Current price is: $0.72.
    Add to basket
  • -40%

    ಹಿಡಿಯದ ಹಾದಿ

    0

    ಹಿಡಿಯದ ಹಾದಿ
    (ಲಲಿತ ಪ್ರಬಂಧಗಳು)
    ಗಿರಡ್ಡಿ ಗೋವಿಂದರಾಜ ಅವರು ತಮ್ಮೆಲ್ಲ ಪೂರ್ವಗ್ರಹಗಳು ವೈಯಕ್ತಿಕ ಬೇಕು ಬೇಡಗಳು,  ಸ್ವಂತದ ವಿಚಾರಗಳು ಎಲ್ಲವನ್ನೂ ನಿರ್ಮಲ ಹಾಸ್ಯದಲ್ಲಿ ಯಾರನ್ನೂ ತೇಜೋವಧೆ ಮಾಡದಂತ ತುಂಟತನದಲ್ಲಿ ಆಪ್ತಸಂವಾದದ ಸಹಜ ಬೆಚ್ಚನೆಯ ಧಾಟಿಯಲ್ಲಿ ಈ ಪ್ರಂಬಂಧಗಳನ್ನು ರಚಿಸಿದ್ದಾರೆ. ಇವು ಕನ್ನಡ ಪ್ರಬಂಧಕ್ಕೆ ನಿಜವಾದ ಅರ್ಥದಲ್ಲಿ ಆಧುನಿಕತೆಯ ನೆಲೆಯನ್ನು ದೊರಕಿಸಿವೆ. ಇವುಗಳಲ್ಲಿ ಜೀವನ ದೃಷ್ಟಿ, ಹುರುಪು,ಉಲ್ಲಾಸ, ಹಾಗು ಜೀವಪ್ರೀತಿ ಈ ಪ್ರಬಂಧಗಳ ಮುಖ್ಯ ಶಕ್ತಿ.

    Original price was: $1.20.Current price is: $0.72.
    Add to basket
  • -40%

    ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು

    0

    ಸಮೃದ್ಧ ಅನುಭವ ಸುತ್ತಲಿನ ಜಗತ್ತಿನಲ್ಲಿ ಲವಲವಿಕೆಯ ಆಸಕ್ತಿಯಿರುವ ಮನುಷ್ಯ ನಿರೂಪಿಸಿದ ಪುಸ್ತಕಗಳಲ್ಲಿ ‘ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು’ ಒಂದು. ಈ ಪುಸ್ತಕದ ಬರಹದಲ್ಲಿ ನಯ ನಾಜೂಕು, ಕಲೆ ಇಲ್ಲ. ನೇರವಾಗಿ ನಿರೂಪಣೆ. ಅನುಭವದಿಂದ ಎದ್ದು ಬಂದ ಚಿಂತನೆ. ಕಾರಂತರ ಅಪೂರ್ವ ಪ್ರಾಮಾಣಿಕತೆಯ ಶ್ರದ್ಧಾವಂತ ಜೀವನದ ಪರಿಚಯವಾಗುತ್ತದೆ.

    ಅಪೂರ್ವಜೀವನದ ನೆನಪುಗಳನ್ನು ನಮಗೆ ಒದಗಿಸುವ ಪುಸ್ತಕ. ‘ಸಮಾಜದ ಋುಣ ಹೇಗೆ ತೀರಿಸಿಯೇನು?’ ಎಂದು ಬಹುಶಃ ಕೋ.ಲ.ಕಾರಂತರು ಹೇಳಿಕೊಂಡರೆ ಅದು ಅವರ ಹಿರಿತನವನ್ನು ತೋರಿಸುತ್ತದೆ.

    ವೈದೇಹಿಯವರ ಸುಂದರ ನಿರೂಪಣೆ ಇದಾಗಿದೆ.

    Original price was: $1.80.Current price is: $1.08.
    Add to basket
  • -40%

    ಜನಪದ ರಮ್ಯ ಕಥಾನಕಗಳು

    0

    ಜನಪದ ರಮ್ಯ ಕಥಾನಕಗಳು
    ಜನಪದರು ಕಥೆಯ ವಿಚಾರಗಳೆಲ್ಲ ಸತ್ಯ ಎಂದೇ ನಂಬಿಕೊಳ್ಳುತ್ತಾರೆ. ಕಥೆಗಳನ್ನು ಕೇಳುವವರು ತಮ್ಮ ಹಗಲಿನ ನೋವು ನಲಿವುಗಳನ್ನು ಇರುಳಿನ ಬೆಳದಿಂಗಳಿನಲ್ಲಿ ಕಥೆಗಾರನ ಬಾಯಿಂದ ಬಂದ ಕಥೆಯ ಪಾತ್ರಗಳ ನೋವು ನಲಿವುಗಳಿಗೆ ಹೋಲಿಸಿಕೊಂಡು ಸಾಂತ್ವನ ಹೊಂದುತ್ತಾರೆ. ಕಥೆಗಾರನ ಪ್ರತಿಯೊಂದು ಮಾತನ್ನು ಶ್ರದ್ಧೆಯಿಟ್ಟು ಆಲಿಸುತ್ತಾರೆ. ಈ ಸಂಗ್ರಹದಲ್ಲಿ ಚಿತ್ರದುರ್ಗದ ಪ್ರಾಂತೀಯ ಭಾಷೆಯಲ್ಲಿ ಆರು ಕಥೆಗಳನ್ನು ಸಂಗ್ರಹಿಸಲಾಗಿದೆ. ಹಾಗೆಯೇ ಈ ಕಥೆಗಳು ಎಲ್ಲರೂ ಓದುವಂತಾಗಬೇಕು ಮತ್ತು ಮೂಲಕಥೆಗಾರನ ನುಡಿಗಟ್ಟುಗಳನ್ನು ಉಳಿಸಿಕೊಳ್ಳಲಾಗಿದೆ.

    Original price was: $1.68.Current price is: $1.01.
    Add to basket
  • -40%

    ಮನಸುಖರಾಯನ ಮನಸು

    0

    ಮನಸುಖರಾಯನ ಮನಸು :
    (ಕತೆ – ಹರಟೆ)
    ಇದರಲ್ಲಿರುವ ಆರು ಲೇಖನಗಳಲ್ಲಿ ‘‘ಬಾಶಿಂಗ ಬಲ’’ ‘‘ತ್ರಯಸ್ಥ’’ ಹಾಗೂ ‘‘ಗಧೇ ಪಂಚವೀಶಿ’’ ಇವು ಮೂರು ಕಥಾ ರೂಪಿ ಹರಟೆಗಳು. ‘‘ಗಾಯಕವಾಡ ದಾದಾ’’ ಹರಟೆ ರೂಪಿ ವ್ಯಕ್ತಿ ಚಿತ್ರಣ; ‘‘ಶ್ರದ್ಧಾ’’ ಒಂದು ಬಾಲ್ಯಕಾಲದ ಚಿತ್ರಣ. ‘‘ಪುಸ್ತಕದ ಹುಳ’’ ಒಂದು ಶುದ್ಧ ತಲೆಹರಟೆ ರೂಪಿ ಹರಟೆ…………….

    Original price was: $1.80.Current price is: $1.08.
    Add to basket
  • -40%

    ನಾ ಬದುಕಲಿಕ್ಕೆ ಒಲ್ಲೆಪಾ

    0

    ನಾ ಬದುಕಲಿಕ್ಕೆ ಒಲ್ಲೆಪಾ
    ಇದು ದ್ವಿಪಾತ್ರ ನಾಟಕಗಳ ಸಂಕಲನ. ದ್ವಿಪಾತ್ರ ನಾಟಕಗಳಿಗೆ ಸಂಭಾಷಣೆಯೇ ಜೀವಾಳ . ಸಂಭಾಷಣೆ ಮೂಲಕವೇ ಕುತೂಹಲವನ್ನು ಹುಟ್ಟಿಸುವ ತಂತ್ರಗಾರಿಕೆಯೇ ನಾಟಕದ ಮೂಲ ವಸ್ತು. ಯಾವುದೇ ಒಂದು ಸಮಸ್ಯೆಯನ್ನು ಎದುರಿಗಿಟ್ಟುಕೊಂಡು ಅದರ ಪರ ಮತ್ತು ವಿರೋಧದ ವಾಗ್ವಾದದ ಮೂಲಕವೇ ನಾಟಕವನ್ನು ರಚಿಸುವ ಜಾಣಕಲಾತ್ಮಕಯೇ ನಾಟಕಕಾರಣನ ಹಿರಿಮೆ. ಈ ನಿಟ್ಟಿನಲ್ಲಿ ಲೋಹಿತ ನಾಯ್ಕರ್ ಯಶಸ್ವಿಯಾಗಿದ್ದಾರೆ.
    ಈ ನಾಟಕಗಳು ಹವ್ಯಾಸಿ ರಂಗಭೂಮಿಗೆ ಸೂಕ್ತವಾಗಿವೆ.

    Original price was: $0.96.Current price is: $0.58.
    Add to basket
  • -39%

    ಗೋರಾ

    0

    ಗೋರಾ
    (ಜೀವನ ಚರಿತ್ರೆ)
    ಅತಿ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಗೋರಾ (ಗೋಪರಾಜು ರಾಮಚಂದ್ರರಾವ) ಜಗತ್ತಿನ ಪ್ರಪ್ರಥಮ ನಾಸ್ತಿಕ ಕೇಂದ್ರವನ್ನು ಸ್ಥಾಪಿಸಿದರು. ನಾಸ್ತಿಕವಾದದ ಪ್ರಚಾರಕ್ಕಾಗಿ ಪ್ರಪಂಚದಾದ್ಯಂತ ಸಂಚರಿಸಿ ಪ್ರಥಮ ಅಂತರಾಷ್ಟ್ರೀಯ  ನಾಸ್ತಿಕ ಸಮ್ಮೇಳನವನ್ನು ಏರ್ಪಡಿಸಿದರು. ನಾಸ್ತಿಕತೆ ಎಂದರೆ ಕೇವಲ ನಿರೀಶ್ವರ ವಾದಿಗಳೆಂದು  ತಿರಸ್ಕ್ರತ ದೃಷ್ಟಿಯಿಂದ  ಕಾಣುವಂತಹ ವಾತಾವರಣ ಇರುವ ನಮ್ಮ ಸಾಮಾಜಿಕ ಪರಿಸ್ಥಿತಿಯಲ್ಲಿ ಬದುಕು ಹಸನಗೊಳ್ಳಲು ದಾರಿದೀಪ ಎಂದು ತಮ್ಮ ಬದುಕಿನ ಕೊನೆಯ ಘಳಿಗೆಯವರೆಗೂ ‘ಇತ್ಯಾತ್ಮಕ ನಾಸ್ತಿಕವಾದ’ದ ಪರ ಹೋರಾಡಿದ ಅಪರೂಪದ ವ್ಯಕ್ತಿಯ ಜೀವನ ಚರಿತ್ರೆ ಇದು.

    Original price was: $0.36.Current price is: $0.22.
    Add to basket
  • -40%

    ಹಯವದನ

    0

    ಹಯವದನ
    ಶ್ರೀ ಗಿರೀಶ ಕಾರ್ನಾಡರ ‘ಹಯವದನ’ ನಾಟಕವು ಎಪ್ಪತ್ತರ ದಶಕದಲ್ಲಿ ಅವರು ಹೋಮಿಭಾಭಾ ಫೆಲೋಶಿಪ್ ಪಡೆದು ಧಾರವಾಡದಲ್ಲಿದ್ದಾಗ ಬರೆದದ್ದು. ಈ ನಾಟಕಕ್ಕೆ ರಾಷ್ಟ್ರಮಟ್ಟದ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿಯೂ ದೊರಕಿದೆ. ಶ್ರೀ ಸತ್ಯದೇವ ದುಬೆ, ಬಿ.ವಿ. ಕಾರಂತರಂಥ ನಿರ್ದೇಶಕರಿಂದ ಅನೇಕ ಪ್ರದರ್ಶನಗಳನ್ನು ಕಂಡಿದೆ. ಶ್ರೀ ದುಬೆಯವರ ಹಿಂದೀ ಪ್ರದರ್ಶನದಲ್ಲಿ ಶ್ರೀ ಅಮೋಲ ಪಾಲೇಕರ, ದಿ. ಅಮರೀಶಪುರಿ ಶ್ರೀಮತಿ ಸುನೀತಾ ಪ್ರಧಾನ ಮುಂತಾದವರು ಪಾತ್ರವಹಿಸಿ, ಈ ನಾಟಕದ ಪ್ರದರ್ಶನ ಅತ್ಯಂತ ಯಶಸ್ವಿಯಾಗಲು ಮತ್ತು ಬಹುಕಾಲ ಜನರ ಮನಸ್ಸಿನಲ್ಲಿ ಬೇರೂರಲು ಕಾರಣವಾಯಿತು.

    Original price was: $1.08.Current price is: $0.65.
    Add to basket
  • -40%

    ಟಿಪೂ ಸುಲ್ತಾನ ಕಂಡ ಕನಸು

    0

    ಟಿಪೂ ಸುಲ್ತಾನ ಕಂಡ ಕನಸು
    1997 ರಲ್ಲಿ ಭಾರತೀಯ ಸ್ವಾತಂತ್ರ್ಯಕ್ಕೆ ಐವತ್ತು ತುಂಬಿದ ಸಂದರ್ಭದಲ್ಲಿ ಇಂಗ್ಲೆಂಡಿನ ಬಿ.ಬಿಸಿ. ರೇಡಿಯೋದವರು ನನಗೆ ಸ್ವಾತಂತ್ರ್ಯ ದಿನಂದು ಬಿತ್ತರಿಸಲಿಕ್ಕಾಗಿ ಒಂದು ನಾಟಕ ಬರೆದುಕೊಡಲು ಕೇಳಿಕೊಂಡರು. ನಾಟಕದ ವಸ್ತು ಆಂಗ್ಲ-ಭಾರತೀಯ ಸಂಬಂಧವನ್ನು ಕುರಿತದ್ದಾಗಿರಬೇಕು ಎಂಬ ಮಾತು ಸೂಚ್ಯವಾಗಿ ಬಂದಾಗ ನನಗೆ ಕೂಡಲೆ ಹೊಳೆದದ್ದು ಕರ್ನಾಟಕದ ಕೊನೆಯ ಸ್ವತಂತ್ರ ಶಾಸಕನಾದ ಟಿಪೂ ಸುಲ್ತಾನನ ದುರಂತ! ತನ್ನ ಇಡಿಯ ಬಾಳನ್ನು ಬಡಿದಾಟದಲ್ಲೇ ನೀಗಿಸಿದ ಈ ವ್ಯಕ್ತಿ ಗುಟ್ಟಾಗಿ ತನ್ನ ಕನಸುಗಳನ್ನು ಬರೆದಿಡುತ್ತಿದ್ದ ಎಂಬ ಮಾತನ್ನು ಏ.ಕೆ.ರಾಮಾನುಜನ್‍ರಿಂದ ಕೇಳಿದಂದಿನಿಂದ ನನಗೆ ಟಿಪೂವಿನಲ್ಲಿ ವಿಶೇಷ ಆಸಕ್ತಿ ಉಂಟಾಗಿತ್ತು. ಅದೇ ನಾಟಕ ರಚನೆಗೆ ಪ್ರೇರಣೆಯಾಯಿತು.

    Original price was: $0.72.Current price is: $0.43.
    Add to basket
  • -40%

    ಪಾಚಿ ಕಟ್ಟಿದ ಪಾಗಾರ

    0

    ಪಾಚಿ ಕಟ್ಟಿದ ಪಾಗಾರ
    (ಕಾದಂಬರಿ)
    ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಬದುಕನ್ನು ಕಣ್ಣಿಗೆ ಕಟ್ಟುವಂತೆ ಕಾದಂಬರಿಗಾರ್ತಿ ಮಿತ್ರಾ ವೆಂಕಟರಾಜ ಈ ಕಾದಂಬರಿಯಲ್ಲಿ ಬರುವ ಪಾತ್ರಗಳು ಜೀವನದಲ್ಲಿ ಎದುರಾಗುವ ಘಟನೆಗಳಿಗೆ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಮತ್ತು ಹಳ್ಳಿಯಲ್ಲಿ ಪ್ರಮುಖವಾಗಿರುವ ಕುಟುಂಬಗಳ ರೀತಿ ನೀತಿಗಳ ಇತರ ಸಾಧಾರಣ ಕುಟುಂಬಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ ಎಂಬುದನ್ನು ಸವಿವರವಾಗಿ ಚಿತ್ರಿಸಲಾಗಿದೆ. ಮಿತ್ರಾ ವೆಂಕಟರಾಜ ಅವರು ಎರಡು ಭಾಗಗಳಲ್ಲಿ ಕಾದಂಬರಿಯ ಒಟ್ಟು ಜೀವನದ ಪರಂಪರೆ ಅಳಿಸಿಹೋಗದಹಾಗೆ ಚಿತ್ರಿಸಿ ಮುಂದಿನ ತಲೆಮಾರಿಗೆ ದಾಖಲೆ ಉಳಿಸಿದ್ದಾರೆ.

    Original price was: $3.60.Current price is: $2.16.
    Add to basket