• -40%

    ರಕ್ತಚಂದನ

    0

    ರಕ್ತಚಂದನ

    …..ಒಂದು ವೈವಿಧ್ಯಮಯ ಕಥಾ ಸಂಕಲನ

    ಹನ್ನೆರಡು ಕಥೆಗಳ ಹೂರಣ…
    ನಾಡಿನ ಪ್ರಮುಖ ಪತ್ರಿಕೆಗಳಾದ ಸುಧಾ, ತರಂಗ, ಉತ್ಥಾನ ಮತ್ತು ತುಷಾರದಲ್ಲಿ ಪ್ರಕಟಿತ ಸಾಮಾಜಿಕ ಮತ್ತು ಪತ್ತೇದಾರಿ ಕತೆಗಳ ಸಂಕಲನ

    Original price was: $1.92.Current price is: $1.15.
    Add to basket
  • -40%

    ನಾಳೆಯನ್ನು ಗೆದ್ದವನು

    0

    ನಾಳೆಯನ್ನು ಗೆದ್ದವನು
    ಅಭಿಮನ್ಯು ಎಂಬ ಇಂಟೆಲಿಜೆನ್ಸ್ ಉಪ ನಿರ್ದೇಶಕನನ್ನು ಅನ್ಯಗ್ರಹ ಜೀವಿಗಳು ತಮ್ಮ ನೌಕೆಗೆ ಕದ್ದೊಯ್ದು ಕಾಲಮಾನದ ರಹಸ್ಯ, ಅಂತರಿಕ್ಷದ ಗುಪ್ತ ಮತ್ತು ಅನೂಹ್ಯ ಸಂಗತಿಗಳನ್ನು ತೆರೆದಿಡುತ್ತದೆ…ಆದರೆ ಈ ಪರಮಸಶಕ್ತ ಮತ್ತು ಮುಂದುವರೆದ ಜೀವಿಗಳು ಭೂಮಿಯಲ್ಲಿನ ಮುಂದೆ ನಡೆಯುವ ದೊಡ್ಡ ಅನಾಹುತ ತಡೆಯಲು ಅಭಿಮನ್ಯುವಿನ ಸಹಾಯ ಬೇಡುತ್ತವೆ.. ಅಭಿಮನ್ಯುವಿನ ಜೀವನದ ಅತ್ಯಂತ ಸೂಕ್ಷ್ಮ ಹಾಗೂ ಅಪಾಯಕರ ಮಿಶನ್ ಇದಾಗುತ್ತದೆ. ಭೂತ, ವರ್ತಮಾನ, ಭವಿಷ್ಯ ಕಾಲಗಳ ಹಿನ್ನೆಲೆಯ ವೈಜ್ಞಾನಿಕ ಥ್ರಿಲ್ಲರ್!

    Original price was: $0.83.Current price is: $0.50.
    Add to basket
  • -20%

    ಸಮಸ್ತ ಕಥೆಗಳು

    0
    Original price was: $5.76.Current price is: $4.61.
    Add to basket
  • -40%

    ಬೆಳೆವ ಸಿರಿ ಮೊಳಕೆಯಲ್ಲಿ

    0

    ಬೆಳೆಯ ಸಿರಿಯನ್ನು ಮೊಳಕೆಯಲ್ಲೇ ನೋಡಬಹುದಂತೆ. ಹಾಗೆಯೇ ಮಕ್ಕಳ ಭವಿಷ್ಯವನ್ನು ಅವರು ಬೆಳೆವ ಸಮಯದಲ್ಲೇ ಕಾಣಬಹುದು.‘ಅಜ್ಜಾ ಕಥೆ ಹೇಳು’ ಎಂದ ಮೊಮ್ಮಕ್ಕಳು ದುಂಬಾಲು ಬಿದ್ದಾಗ, ಅವರಿಂದಲೇ ಒಂದು ಕಥೆಯನ್ನು ರಚಿಸಬಹುದಲ್ಲ ಅನ್ನಿಸಿ ಪ್ರಯತ್ನಿಸಿದೆ.
    -ಹ. ಶಿ. ಭೈರನಟ್ಟಿ

    Original price was: $0.48.Current price is: $0.29.
    Add to basket
  • -40%

    ಮೃಗಶಿರ

    0

    ಮೃಗಶಿರ
    ‘ಮೃಗಶಿರ’ ಒಂದು ಸಣ್ಣಕಥೆಗಳ ಸಂಕಲನ, ಇದರಲ್ಲಿ ಕಂಡುಬರುವ ಬೋರವ್ವ, ಮಲ್ಲಿ, ಶಾರಿ, ಉಮಾಪತಿರಾಯ ಇವರೆಲ್ಲಾ ನಮ್ಮ ಸಮಾಜದಲ್ಲಿ ಎಲ್ಲೆಲ್ಲಿಯೂ ಕಾಣಸಿಗುವ ವ್ಯಕ್ತಿಗಳು. ಇವರೆಲ್ಲರ ನಡುವಳಿಕೆ, ಮೇಲು ನೋಟಕ್ಕೆ ‘ನಾಗರಿಕ’ ನಡುವಳಿಕೆಯಾದರೂ, ಹಿನ್ನೆಲೆಯಲ್ಲಿ ಕಾಡಿನ ಪ್ರಾಣಿಗಳ ಪಶುಸಹಜ ನಡುವಳಿಕೆಗಳನ್ನು ಮನುಷ್ಯ ಮಾನಸಿಕವಾಗಿ ಅನುಸರಿಸುತ್ತಿದ್ದಾನೋ ಎಂಬ ಸಂಶಯ     ಬರುವಂತೆ ಅವುಗಳ ನಡುವಣ ಸಾಮ್ಯತೆಯನ್ನು ರಾ.ಶಿ.ಯವರು ಈ ಪುಸ್ತಕದಲ್ಲಿ ನಮ್ಮ ಮುಂದಿಟ್ಟಿದ್ದಾರೆ. ಈ ಪುಸ್ತಕದಲ್ಲಿನ ಹತ್ತು ಹನ್ನೆರಡು ಕಥೆಗಳು ಓದುಗರ  ಆಸಕ್ತಿಯನ್ನು ಉಳಿಸಿಕೊಳ್ಳುತ್ತಲೇ, ಪ್ರಾಣಿಲೋಕದ ನಡುವಳಿಕೆ ಇಂದಿಗೂ ಮಾನವನ ಸುಪ್ತ ಮನಸ್ಸಿನಲ್ಲಿ ಎಷ್ಟು ಭದ್ರವಾಗಿ ನೆಲೆಯೂರಿಗೆ ಎಂಬ ಸಂಗತಿಯನ್ನು ಬಹು ಸ್ಪಷ್ಟವಾಗಿ ತೋರಿಸಿಕೊಡುತ್ತೇವೆ. ಕಥೆಗಳ ಕೊನೆಯಲ್ಲಿ ರಾ.ಶಿ ಯವರು ಬರೆದಿರುವ ಸುದೀರ್ಘ ಪ್ರಸ್ತಾವನೆ, ಮನುಕುಲಕೆ ವಿಕಾಸ ಹಾಗೂ ಮನಸ್ಸಿನ ವಿವಿಧ ವ್ಯಾಪಾರಗಳ ಬಗ್ಗೆ ಹೇಳುವುದಾರೆ,  ‘ವಿಚಾರ ಪ್ರಚೋದನೆಳು ಮಹತ್ಕಾರ್ಯಕ್ಕೆ ಇಷ್ಟೊಂದು ಪರಿಣಾಮಕಾರಿಯಾಗಿ ಲಲಿತ ಸಾಹಿತ್ಯದ ಬಳಕೆಯಾಗುವುದು ಎಂದಾದರೊಮ್ಮೆ’ ಈ ಕಾರಣದಿಂದ ಈ ಕೃತಿ ಅಮೂಲ್ಯವಾದದ್ದು. 

    Original price was: $1.08.Current price is: $0.65.
    Add to basket
  • -40%

    ಚೌಕಟ್ಟಿನಾಚೆ

    0

    ಚೌಕಟ್ಟಿನಾಚೆ
    ಕಥಾ ಸಂಕಲನ
    ಉಮೇಶ್ ದೇಸಾಯಿ ಆಧುನಿಕ ಕಾಲದ ತಲ್ಲಣಗಳನ್ನು ಕತೆಗಳ ಮೂಲಕ ಹಿಡಿಯಲು ಹೊರಡುತ್ತಾರೆ. ಅವರದು ಅಪಾರ್ಟ್ ಮೆಂಟು ಬದುಕಿನ ಅಪರೂಪದ ಕಥಾ ಪ್ರಪಂಚ. ಅಪಾರ್ಟುಮೆಂಟು ಬದುಕು ಅನ್ನುವ ಪದವೇ ನಗರಾಧುನಿಕ ಜೀವನಶೈಲಿಯನ್ನೂ ಅದರ ಏಕತಾನತೆ, ಒತ್ತಡ ಮತ್ತು ಏಕಾಂತಗಳನ್ನು ಸೂಚಿಸುತ್ತದೆ. ನಗರ ಜೀವನದ ಅತಿದೊಡ್ಡ ಸಂಕಟವೆಂದರೆ ಏಕಾಂತ, ಕಡಿದ ಕೊಂಡಿಗಳು, ಚದುರಿದ ಸಂಬಂಧಗಳು ಮತ್ತು ಬೆಸೆಯಲಾಗದ ಮನಸ್ಸುಗಳು ಎಂಬುದನ್ನು ಹೇಳುವಂಥ ಅನೇಕ ಕತೆಗಳು ಈ ಸಂಕಲನದಲ್ಲಿವೆ.

    Original price was: $1.44.Current price is: $0.86.
    Add to basket
  • -40%

    ಮಠದ ಹೋರಿ ಮತ್ತು ಈವರೆಗಿನ ಕತೆಗಳು

    0

    ಮಠದ ಹೋರಿ ಮತ್ತು ಈವರೆಗಿನ ಕತೆಗಳು
    ಕತೆಗಾರನ ಮಾತಿನಲ್ಲಿ ಹನುಮಂತ ಹಾಲಿಗೇರಿ ಹೇಳಿಕೊಂಡಿರುವಂತೆ “ಇಲ್ಲಿನ ಎಲ್ಲ ಕತೆಗಳು ನಮ್ಮೂರು ಸೀಮೆಯಲ್ಲಿ ನೆಡಯುವಂಥವೆ. ಕಥೆ ನನ್ನೊಳಗಡೆ ಹುಟ್ಟುವುದಿಲ್ಲ . ದಿನನಿತ್ಯದ ಬದುಕಿನಲ್ಲಿ ಸಂಭವಿಸಿ, ನನ್ನೊಳಗೆ ಬೆಳೆದು ಕಥೆಯಾಗಿ ಹರಡಿಕೊಳ್ಳುತ್ತದೆ. ನನ್ನೂರು ಸೀಮೆಯಲ್ಲಿ ಇಲ್ಲಿನ ಪಾತ್ರಗಳೆಲ್ಲವೂ ಇನ್ನೂ ಜೀವಂತವಾಗಿವೆ. ಕಥೆಗಳಲ್ಲಿ ಅವುಗಳ ಸಂಕಷ್ಟ ಒಂದು ತಹಬಂದಿಗೆ ಬಂದಿದ್ದರೂ ಬದುಕಿನಲಿ ಇನ್ನೂ ಮುಂದುವರಿದೇ ಇದೆ.
    ಓದುಗನಿಗೆ ಮನರಂಜನೆ ನೀಡುವುದಕ್ಕಾಗಿ ನನ್ನಂಥವರು ಕಥೆ ಕಟ್ಟುವುದಿಲ್ಲ. ಈ ಕತೆಗಳನ್ನು ಓದುವವರ ಮನದಲ್ಲಿ ರಂಜನೆ ಹುಟ್ಟುವುದಕ್ಕಿಂತಲೂ ತಳಮಳ ಹುಟ್ಟಿದರೆ, ಚಿಂತೆನೆಗ ಹಚ್ಚಿದರೆ ಅಷ್ಟರಮಟ್ಟಿಗೆ ಈ ಕತೆಗಳು ಸಾರ್ಥಕ್ಕೆ ಕಂಡಂತೆ.”

    Original price was: $2.88.Current price is: $1.73.
    Add to basket
  • -40%

    ಜಯ

    0

    ಮಹಾಭಾರತದ ಬೃಹತ್ ಕಥೆಯನ್ನು ಸಂಗ್ರಹವಾಗಿ ನಿರೂಪಿಸಿರುವ ಈ ಕಥನ ತನ್ನ ಅಚ್ಚುಕಟ್ಟಾದ ನಿರೂಪಣೆ, ಚಕಮಕಿಯಂತೆ ಮಿಂಚುವ ಚುರುಕಾದ ಸಂಭಾಷಣೆಗಳಿಂದ ಆಕರ್ಷಕವಾಗಿ, ಸವೇಗವಾಗಿ ಕಥೆಯನ್ನು ನಡೆಸಿಕೊಂಡು ಹೋಗುತ್ತದೆ. ಕಥೆಗಳನ್ನು ಸಂಗ್ರಹಿಸಿ ಹೇಳಿದ್ದರೂ, ಅವುಗಳ ನಾಟ್ಯಾಯಮಾನತೆ ಎದ್ದುಕಾಣುತ್ತದೆ. ಇದೆಲ್ಲ ಪಟ್ಟನಾಯಕರು ಸಿದ್ಧಹಸ್ತ ಕತೆಗಾರರು ಎಂಬುದಕ್ಕೆ ಸಾಕ್ಷಿಯಾಗಿದೆ.

    Original price was: $7.81.Current price is: $4.68.
    Add to basket
  • -19%

    ಉಘೇ ಉಘೇ

    0

    ಉಘೇ ಉಘೇ
    ಕಥಾ ಸಂಕಲನ
    ನನಗೆ ಬರೆಯುವುದಕ್ಕಿಂತಲೂ ಓದುವುದೇ ಇವತ್ತಿಗೂ ಹೆಚ್ಚು ಇಷ್ಟದ ವಿಷಯ. ಆದರೂ ಬಿಡುವು ಸಿಕ್ಕಾಗಲೆಲ್ಲಾ ನನ್ನ ತಲೆಯಲ್ಲಿ ವರ್ಷಗಟ್ಟಲೇ ಗಿರಕಿ ಹೊಡೆಯುವ ಕಥೆಗಳನ್ನು ಬರೆದೆ. ಅದರಲ್ಲಿ ‘ಟ್ಯೂಷನ್ ಫೀ’ ಎಂಬ ಕತೆ ನನಗೆ ಒಂದು ಬಹುಮಾನವನ್ನು ಮತ್ತು ಅಪಾರ ಜನಮನ್ನಣೆಯನ್ನು ತಂದು ಕೊಟ್ಟಿತು. ಈ ಕತೆಯಿಂದ ನಾನು ಕತೆಗಾರ ಎಂದು ಗುರುತಿಸಿಕೊಳ್ಳಲು ಸಾಧ್ಯವಾಯಿತು. ಮತ್ತಷ್ಟು ಉತ್ತಮ ಕತೆಗಳನ್ನು ಬರೆಯಬೇಕೆಂಬ ಹಂಬಲದಿಂದಲೇ ಬಹುತೇಕ ಎಲ್ಲಾ ಉತ್ತಮ ಕನ್ನಡ ಮತ್ತು ಇಂಗ್ಲೀಷ್ ಕತೆಗಾರರನ್ನು ಸಾಧ್ಯವಾದಷ್ಟು ಓದಿಕೊಂಡೆ. ಅದರ ಫಲವೇ ಈ ಸಂಕಲನ.
    -ಗುಬ್ಬಚ್ಚಿ ಸತೀಶ್

    Original price was: $0.72.Current price is: $0.58.
    Add to basket
  • -20%

    ಭಾವದ ಅಂಬಾರಿ

    0

    ಭಾವದ ಅಂಬಾರಿ
    ‘ಭಾವದ ಅಂಬಾರಿ’ ಎಂಬುದು ಅವರ ಒಂಬತ್ತು ಕಥೆಗಳ ಸಂಕಲನ. ಇದರಲ್ಲಿನ ಕೆಲವು ಕಥೆಗಳು ‘ಮಂಗಳ’, ‘ಕರ್ಮವೀರ’ ದಂಥ ವಾರಪತ್ರಿಕೆಗಳಲ್ಲಿ, ‘ಅಡ್ವೈಸರ್’ನಂಥ ಮಾಸಪತ್ರಿಕೆಯಲ್ಲಿ ಈಗಾಗಲೇ ಬೆಳಕು ಕಂಡಿವೆ. ಹೀಗಾಗಿ ಅವರು ಉದಯೋನ್ಮುಖ ಕಥೆಗಾರರಾಗಿಯೂ ಹೊಮ್ಮುತ್ತಿರುವುದನ್ನು ದಾಖಲಿಸಿದ್ದಾರೆ. ಅವರ ಈ ಸಂಕಲನ ಇದಕ್ಕೆ ಇನ್ನೊಂದು ಸಾಕ್ಷಿಯನ್ನು ಒದಗಿಸಿದೆ.

    Original price was: $1.20.Current price is: $0.96.
    Add to basket
  • -21%

    ಬೆಳದಿಂಗಳು ಮತ್ತು ಮಳೆ

    0

    ಬೆಳದಿಂಗಳು ಮತ್ತು ಮಳೆ
    ‘ಐದು ನಿಮಿಷದಲ್ಲಿ ಐದು ಕತೆಗಳು, ಊಹಿಸಲಾಗದ ಅಂತ್ಯಗಳು’ – ದಟ್ಸ್ ಕನ್ನಡ ಡಾಟ್ ಕಾಂ
    ಈ ಸಂಕಲನದಲ್ಲಿ ಜೀವನದ ಸಮಗ್ರ ಮತ್ತು ಪರಿಪಕ್ವವಾದ ಮನೋಭಾವನೆ ಮೂಡಿಬಂದಿರುವುದನ್ನು ಕಾಣಬಹುದಾಗಿದೆ. ಇಲ್ಲಿನ ಕಥೆಗಳಲ್ಲಿ ವಿರಳ, ವಿಷಾದ, ಸೂಕ್ಷ್ಮ ಸಂವೇದನಾಶೀಲ ಜೀವನದರ್ಶನ ಪಡೆಯಬಹುದು. ಇಲ್ಲಿಯ ಚುಟುಕು ಕಥೆಗಳು ಕೆಲವೇ ಕ್ಷಣದಲ್ಲಿ ಓದಬಹುದಾದರೂ ಇಡೀ ದಿನ ಯೋಚಿಸುವಂತೆ ಮಾಡುತ್ತವೆ.
    ಈ ಕಥೆಗಳಲ್ಲಿ ಸಾಮಾಜಿಕ ಕಾಳಜಿಯ ಸ್ಪರ್ಶ, ಪ್ರಗತಿಪರ ಚಿಂತನೆಗಳ ಮನೋಭಾವನೆ, ಪ್ರಕೃತಿ ಬಗೆಗಿನ ಒಲವು ಮತ್ತು ಸಮಕಾಲೀನ ವಿದ್ಯಮಾನಗಳ ಅಂತರ್ಗತದೃಷ್ಟಿ, ಗತಕಾಲದ ನೆನಪು ಪ್ರಸ್ತುತ ವ್ಯವಸ್ಥೆಯ ಕೈಗನ್ನಡಿಯಾಗಿ ಮೂಡಿಬಂದಿವೆ.

    Original price was: $0.48.Current price is: $0.38.
    Add to basket
  • -40%

    ರಾಘವೇಂದ್ರ ಖಾಸನೀಸ ಸಮಗ್ರ

    0

    ರಾಘವೇಂದ್ರ ಖಾಸನೀಸ ಸಮಗ್ರ
    ರಾಘವೇಂದ್ರ ಖಾಸನೀಸರು ಕನ್ನಡದ ಅತ್ಯಂತ ಮಹತ್ವದ ಕಥೆಗಾರರಲ್ಲಿ ಒಬ್ಬರು. ಸಾಮಾನ್ಯವಾಗಿ ಎಲ್ಲ ಪ್ರಾತಿನಿಧಿಕ ಕಥಾ ಸಂಗ್ರಹಗಳಲ್ಲಿ ಅವರ ಕಥೆಗಳು ಕಾಣಿಸಿಕೊಳ್ಳುವವು. ಕೆಲವೇ ಕಥೆಗಳನ್ನು ಬರೆದರೂ ಖಾಸನೀಸರು ಸಣ್ಣ ಕಥೆಯ ಪ್ರಕಾರದ ಸಾಧ್ಯತೆಗಳನ್ನು ಸೊರೆಗೊಂಡಿದ್ದಾರೆ ಅಷ್ಟೇ ಅಲ್ಲದೆ ಅವುಗಳನ್ನು ಆಶ್ಚರ್ಯಕರವಾಗಿ ವಿಸ್ತರಿಸಿದ್ದಾರೆ. ಅವರ ಚಿಂತನೆ ಸ್ವರೂಪ ಹಾಗೂ ಅವರ ಕಥೆಗಳ ಬಂಧ ಅವ್ರಿಗೆಯೇ ವಿಶಿಷ್ಟವಾದವುಗಳು. ಈ ಕೃತಿಯಲ್ಲಿ ಖಾಸನೀಸರ ೧೬ ಪ್ರಕಟಿತ ಕಥೆಗಳು ಮತ್ತು ೭ ಅಪ್ರಕಟಿತ ಕಥೆಗಳು ಸೇರಿವೆ. ಇವುಗಳನ್ನು ಡಾ. ಜಿ.ಎಸ್ ಅಮೂರ ಹಾಗೂ ಡಾ. ರಮಾಕಾಂತ ಜೋಶಿ ಸಮರ್ಥವಾಗಿ ಸಂಪಾದನೆ ಮಾಡಿದ್ದಾರೆ.

    Original price was: $3.00.Current price is: $1.80.
    Add to basket
  • -39%

    ಬೆಳಕಿನ ಬೇಲಿ

    0

    ಬೆಳಕಿನ ಬೇಲಿ :

    {ನ್ಯಾನೋ ಕತೆಗಳು}

    ‘ನ್ಯಾನೋ ಕತೆ’, ‘ಸೂಜಿ ಮಲ್ಲಿಗೆ’, ‘ಚೌಕಟ್ಟು ಮೀರಿದ ಚಿತ್ರ’, ‘ಹನಿಗತೆ’ ಹೀಗೆ ನಾನಾ ಹೆಸರುಗಳಡಿ ಕನ್ನಡಪ್ರಭ, ವಿಜಯವಾಣಿ, ಪ್ರಜೋದಯ ಮತ್ತು ತುಷಾರ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಇಲ್ಲಿನ ಬರಹಗಳನ್ನು ಬರೆದಿದ್ದಾರೆ.

    Original price was: $0.67.Current price is: $0.41.
    Add to basket
  • -40%

    ಕರಗದ ನಗು

    0

    ಕರಗದ ನಗು

    ಪತ್ರಕರ್ತೆ ಕಾವೇರಿ ಎಸ್ ಎಸ್ ಅವರ ಕಥಾಸಂಕಲನವಿದು. ಇದರಲ್ಲಿ ಹನ್ನೆರಡು ಕಥೆಗಳಿದ್ದು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದವುಗಳು. ಈ ಕೃತಿ ಕನ್ನಡ ಪುಸ್ತಕ ಪ್ರಾಧಿಕಾರ ಯುವ ಬರಹಗಾರರ ಚೊಚ್ಚಲ ಕೃತಿಗೆ ನೀಡುವ ಪ್ರೋತ್ಸಾಹ ಧನ ಯೋಜನೆಗೆ ಆಯ್ಕೆಯಾಗಿದೆ.

    Original price was: $0.78.Current price is: $0.47.
    Add to basket
  • -40%

    ಸ್ಪೂಕಿ ಎಂಬ ಹಾವು ಮತ್ತು ಫ್ಯಾಸಿಸ್ಟ್ ಅಪ್ಪ

    0

    ಲೋಹಿತ್ ನಾಯ್ಕರ್ ಅವರು ವೃತ್ತಿಯಿಂದ ನ್ಯಾಯವಾದಿಗಳು. ಅವರಿಗೆ ಮಾನವ ಹಕ್ಕುಗಳ ವಿಷಯದಲ್ಲಿ ವಿಶೇಷ ಆಸಕ್ತಿ. ಅವರ ಹಿಂದಿನ ಎರಡು ಕಥಾ ಸಂಕಲನಗಳಲ್ಲಿ ಕಾಣಿಸಿಕೊಂಡಿದ್ದ ಈ ಆಸಕ್ತಿ ಈ ಸಂಕಲನದಲ್ಲೂ ಮುಂದುವರೆದಿದೆ. ಮಾನವ ಹಕ್ಕುಗಳಿಗೆ ಸಂಬಂಧಿಸಿದ ಸಂದರ್ಭ ಒಂದೆಡೆ ಕಾಯಿದೆ ದೃಷ್ಟಿಯಿಂದ ಸಮಸ್ಯೆಗಳಾಗಿದ್ದರೆ, ಇನ್ನೊಂದೆಡೆ ನೈತಿಕ ದೃಷ್ಟಿಯಿಂದ ಸಮಸ್ಯೆಗಳಾಗಿವೆ. ಈ ಸಂದಿಗ್ಧತೆಯನ್ನು ಲೋಹಿತ್ ಅವರ ಸಣ್ಣಕತೆಗಳು ಸಮರ್ಥವಾಗಿ ಚಿತ್ರಿಸುತ್ತವೆ.

    Original price was: $0.84.Current price is: $0.50.
    Add to basket
  • -40%

    ಗಿರಡ್ಡಿಯವರ ಸಣ್ಣಕತೆಗಳು

    0

    ಗಿರಡ್ಡಿಯವರ ಸಣ್ಣಕತೆಗಳು :

    ಗಿರಡ್ಡಿಯವರು ಮೊದಲ ಓದಿಗೆ ಮನಸ್ಸಿಗೆ ತೆಕ್ಕೆ ಬೀಳುವಂಥ… ಕಥೆಗಳನ್ನು ಕೊಟ್ಟಿದ್ದಾರೆ. ಇವರ ಕಥೆಗಳಲ್ಲಿ ಥಟ್ಟನೆ ಓದುಗರ ಮನಸ್ಸನ್ನು ಆಕರ್ಷಿಸುವ ಗುಣಗಳೆಂದರೆ ಸದ್ದಿಲ್ಲದೆ ಭಾಷೆ ಕೊಡುವ ಅನುಭವ. ಇಲ್ಲಿ ಕಥೆಗಾರರ ನಿರ್ಲಿಪ್ತತೆಯಿಂದ ಹಲವು ಶಕ್ತಿಗಳು ಹೆಣೆದುಕೊಂಡು ತುಂಬಾ ಪರಿಣಾಮಕಾರಿಯಾದ ಮುಕ್ತಾಯವನ್ನು ಮುಟ್ಟಿ ಒಂದು ಸಂಕೀರ್ಣ, ಪರಿಪೂರ್ಣ ಅನುಭವವನ್ನು ಸಾಧಿಸುತ್ತದೆ.

    Original price was: $3.00.Current price is: $1.80.
    Add to basket
  • -40%

    ಎಷ್ಟು ಕಾಡತಾವ ಕಬ್ಬಕ್ಕೀ…

    0

    ರಾಘವೇಂದ್ರ ಪಾಟೀಲರ ‘ಮತ್ತೊಬ್ಬ ಮಾಯಿ’ ಮತ್ತು ‘ಎಷ್ಟು ಕಾಡತಾವ ಕಬ್ಬಕ್ಕೀ…’ ಓದುವಾಗ ನಾವು ಬದುಕಿನೊಂದಿಗೇ, ಅದರ ನಿಷ್ಠುರ ಅನಿಯತಿಯೊಂದಿಗೇ ಹೊಕ್ಕಾಡುವ ಅನುಭವವಾಗುತ್ತದೆ. ಕಥೆಯನ್ನೂ ಅದೊಂದು ಬದುಕು ಎನ್ನುವಂತೆ ಬೆಳೆದುಕೊಳ್ಳುವುದು ಅಸಾಮಾನ್ಯ ಕತೆಗಾರನಿಗೆ ಮಾತ್ರ ಸಾಧ್ಯ. ಕಥೆಗಾಗಿ ಬದುಕು ಇರುವುದಿಲ್ಲ. ಲೇಖಕ ಎಂಬ ಹುಲುಮಾನವನು, ತಾನು ಕಂಡುಂಡು ಕಳವಳಿಸಿದ ಬದುಕನ್ನು ಅದರ ಎಲ್ಲ ವೈರುಧ್ಯ, ತೀವ್ರತೆ, ಅತಾರ್ಕಿಕತೆಯೊಂದಿಗೆ ಭಾಷೆಯ ಪಾದಯಾತ್ರೆಯಲ್ಲಿ ಹಿಡಿಯಲು ಸಾಧ್ಯವೇ ಎಂದು, ಪಾಟೀಲರ ಕಥೆಗಳು ಪರಮ ವಿನಯದಲ್ಲಿ ಪ್ರಯತ್ನ ಮಾಡುತ್ತವೆ. ಪಾಟೀಲರ ಹೊಸ ಸಂಗ್ರಹದಲ್ಲಿ ನಾವು ನೋಡುತ್ತಿರುವುದು ಅಂಥ ಕಥೆಗಳನ್ನು. ಬದುಕಿನ ನಿಬಿಡತೆಯನ್ನು ಯಾವ ಸಂವಿಧಾನದಲ್ಲಿ ಮಂಡಿಸಿದಾಗ ದರ್ಶನದ ಹೊಳಹೊಂದು ಫಳಕ್ಕನೆ ಮಿಂಚುವುದು ಎಂಬ ಸಂಗತಿಯು ಹಗಲೆಚ್ಚರಕ್ಕೆ ಏನು ಗೊತ್ತು? ಚಾರಣವೇ ತುದಿಗುರಿಯೆಂಬಂತೆ ಪಾಟೀಲ ತಮ್ಮ ಕಥೆಗಳನ್ನು ಬರೆಯುತ್ತಾರೆ. ಅದೇ ಅವರ ಅನನ್ಯತೆ.

    Original price was: $1.56.Current price is: $0.94.
    Add to basket
  • -40%

    ಜನಪದ ರಮ್ಯ ಕಥಾನಕಗಳು

    0

    ಜನಪದ ರಮ್ಯ ಕಥಾನಕಗಳು
    ಜನಪದರು ಕಥೆಯ ವಿಚಾರಗಳೆಲ್ಲ ಸತ್ಯ ಎಂದೇ ನಂಬಿಕೊಳ್ಳುತ್ತಾರೆ. ಕಥೆಗಳನ್ನು ಕೇಳುವವರು ತಮ್ಮ ಹಗಲಿನ ನೋವು ನಲಿವುಗಳನ್ನು ಇರುಳಿನ ಬೆಳದಿಂಗಳಿನಲ್ಲಿ ಕಥೆಗಾರನ ಬಾಯಿಂದ ಬಂದ ಕಥೆಯ ಪಾತ್ರಗಳ ನೋವು ನಲಿವುಗಳಿಗೆ ಹೋಲಿಸಿಕೊಂಡು ಸಾಂತ್ವನ ಹೊಂದುತ್ತಾರೆ. ಕಥೆಗಾರನ ಪ್ರತಿಯೊಂದು ಮಾತನ್ನು ಶ್ರದ್ಧೆಯಿಟ್ಟು ಆಲಿಸುತ್ತಾರೆ. ಈ ಸಂಗ್ರಹದಲ್ಲಿ ಚಿತ್ರದುರ್ಗದ ಪ್ರಾಂತೀಯ ಭಾಷೆಯಲ್ಲಿ ಆರು ಕಥೆಗಳನ್ನು ಸಂಗ್ರಹಿಸಲಾಗಿದೆ. ಹಾಗೆಯೇ ಈ ಕಥೆಗಳು ಎಲ್ಲರೂ ಓದುವಂತಾಗಬೇಕು ಮತ್ತು ಮೂಲಕಥೆಗಾರನ ನುಡಿಗಟ್ಟುಗಳನ್ನು ಉಳಿಸಿಕೊಳ್ಳಲಾಗಿದೆ.

    Original price was: $1.68.Current price is: $1.01.
    Add to basket
  • -40%

    ದಿನಚರಿಯ ಕಡೇ ಪುಟದಿಂದ…

    0

    ದಿನಚರಿಯ ಕಡೇ ಪುಟದಿಂದ…
    ಸುಮಾರು ಎರಡು ದಶಕಗಳ ತಮ್ಮ ಬರವಣಿಗೆಯುದ್ದಕ್ಕೂ ಶ್ರೀಮತಿ ಜಯಶ್ರೀಯವರು ಕಥನ ಶೈಲಿಯಲ್ಲಿ ನಡೆಸಿರುವ ಪ್ರಯತ್ನಗಳು ಮಹಿಳಾ ಕಥಾ ಪರಂಪರೆಯಲ್ಲಿ ಮಾತ್ರವಲ್ಲ, ಒಟ್ಟು ಕನ್ನಡ ಕಥನ ಪರಂಪರೆಯಲ್ಲೂ ಮುಖ್ಯವಾಗಿವೆ. ಇದರ ಮುಖ್ಯ ಗುಣವೆಂದರೆ ಅದು ದಶದಿಕ್ಕುಗಳಿಗೂ ಕುತೂಹಲದಿಂದ ಕೈಚಾಚುವ ಬಗೆಯದ್ದಲ್ಲ. ತನ್ನ ಅನುಭವಕ್ಕೆ ಆಳವಾಗಿ ದಕ್ಕಿರುವ, ತನಗೆ ಪರಿಚಿತವಾದ, ತಾನು ಅಧಿಕಾರದಿಂದ ಮಾತನಾಡಾಬಲ್ಲ ಬದುಕಿನ ಮಾದರಿಗಳನ್ನೇ ಅದು ಹಲವು ಮಗ್ಗುಲುಗಳಿಂದ ನೋಡಲು ಬಯಸುತ್ತದೆ. ಈ ನಿರ್ದಿಷ್ಟ ಮಾದರಿಯನ್ನು ಅದು ಈಗಾಗಲೆ ಮತ್ತೆ ಮತ್ತೆ ನೋಡಲಾಗಿರುವ ದೃಷ್ಟಿಕೋನದಾಚೆಗೆ ವಿಸ್ತರಿಸಲು ತೀವ್ರವಾಗಿ ಹಂಬಲಿಸುತ್ತದೆ. ಹೆಣ್ಣಿನ ಘರ್ಷಣೆಗಳ ಮೂಲ ಒಳಗಿನದೇ ಹೊರಗಿನದೇ ಅಥವಾ ಅವುಗಳ ಒಳಹೊರಗುಗಳನ್ನು ಮೂರ್ತವಾಗಿ ಬೇರ್ಪಡಿಸುವುದಾದರೂ ಸಾಧ್ಯವಿದೆಯೇ ಎಂದು ಆತಂಕ ಮತ್ತು ಆರ್ತತೆಗಳೆರಡೂ ಬೆರೆತೆ ಸ್ಥಿತಿಯಲ್ಲಿ ಇವರ ಬಹುಪಾಲು ಕಥೆಗಳಿವೆ.

    Original price was: $1.32.Current price is: $0.79.
    Add to basket
  • -40%

    ಹೆಗ್ಗುರುತು

    0

    ಹಿರಿಯ ಕತೆಗಾರ ಕೆ ಸತ್ಯನಾರಾಯಣ ಅವರ ಕಥಾಸಂಕಲನ ಇದು. ಚಿಕ್ಕತಾಯಿ, ಡಾಕ್ಟರನ ಹುಚ್ಚುಮಗು ಸೇರಿದಂತೆ ೨೦೧೦ರ ಈಚೆಗೆ ಬರೆದ ಅವರ ಹತ್ತು ಕತೆಗಳನ್ನು ನಾವಿಲ್ಲಿ ಓದಬಹುದು. ಪುಸ್ತಕದ ಕಡೆಯಲ್ಲಿ ಕತೆ ಕತೆಯಾಗುವ ರೀತಿ ಎಂಬ ಅನುಬಂಧವೂ ಇದೆ.ಇದರಲ್ಲಿನ ಕಥೆಗಳು ಸಮಕಾಲೀನ ಸಾಮೂಹಿಕ ವಾಸ್ತವಗಳ ಶೋಧನೆಯನ್ನು ಬದುಕಿನ ವೈರುಧ್ಯಗಳು ಹಾಗೂ ಜಠಿಲತೆಗಳನ್ನು ಗ್ರಹಿಸಿಕೊಂಡ ಸಮೃದ್ಧವಾದ ಕಥೆಗಳಿವೆ. ಅವು ಇವತ್ತಿನ ನಮ್ಮ ಬದುಕಿನ ಅನೇಕ ಮಗ್ಗಲುಗಳ ನೆಲೆಗಳ ಅನ್ವೇಷಣೆಗೆ ತೊಡಗಿಕೊಳ್ಳುತ್ತವೆ. ಸಮಷ್ಠಿತ ಸಹಬಾಳ್ವೆಗಾಗಿ ತುಡಿಯುವ ಕಥೆಗಳಿವು.

    Original price was: $1.92.Current price is: $1.15.
    Add to basket
  • -40%

    ಹೊಡಿ ಚಕ್ಕಡಿ

    0

    ಡಾ. ಬಸು ಬೇವಿನಗಿಡದ ಅವರ ಕತೆಗಳ ಸಂಕಲನ – ‘ಹೊಡಿ ಚಕ್ಕಡಿ’

    Original price was: $1.20.Current price is: $0.72.
    Add to basket
  • -20%

    ಐದು ದಶಕದ ಕಥೆಗಳು

    0
    Original price was: $2.88.Current price is: $2.31.
    Add to basket