• -40%

    ಬೇಟೆಯ ನೆನಪುಗಳು

    0

    ಬೇಟೆಯ ನೆನಪುಗಳು
    ಪ್ರವಾಸ ಕಥನ ಸಾಹಿತ್ಯದ ಒಂದು ಪ್ರಕಾರ; ಅದರಲ್ಲಿ ಕತೆಗಾರಿಕೆಯ ಅಂಶ ಅಡಕವಾಗಿರುವುದರಿಂದ ಆ ಪ್ರಬಂಧಪ್ರಕಾರ ಹೆಚ್ಚಿನ ಮೆಚ್ಚುಗೆ ಪಡೆದಿದೆ. `ಬೇಟೆಯ ನೆನಪುಗಳು’ ಎಂಬೀ ತೆರನ ಬರವಣಿಗೆ ಅದೇ ಹಾದಿಯಲ್ಲಿ ಸಾಗಿದರೂ, ಅದಕ್ಕಿಂತಲೂ ಆಕರ್ಷಕವಾಗಿ ಮೂಡಿಬಂದ ಒಂದು ಮಹತ್ತರ ಸಾಹಿತ್ಯ ಪ್ರಕಾರವೆನ್ನಬೇಕು. ಇದರಲ್ಲಿನ ವರ್ಣನೆ ಕಾದಂಬರಿಗಳ ವರ್ಣನೆಯ ಮಟ್ಟವನ್ನು ಮುಟ್ಟಬಲ್ಲುದು; ಅನೇಕ ಕುತೂಹಲಕಾರೀ ಘಟನೆಗಳು ಅಲ್ಲಲ್ಲಿ ಮೂಡಿ ಬಂದಿರುವುದರಿಂದ ಪತ್ತೇದಾರಿ ಕತೆಗಳ ಆಸಕ್ತಿ ಕೆರಳಿಸುವ ಅಂಶಗಳೂ ಇಲ್ಲಿ ವಿಪುಲವಾಗಿ ತುಂಬಿರುತ್ತವೆ.

    Original price was: $1.80.Current price is: $1.08.
    Add to basket
  • -40%

    ಬೇಟೆಯ ಉರುಳು

    0

    ಬೇಟೆಯ ಉರುಳು
    ತುಳುನಾಡ ಮಲೆನಾಡ ಮಣ್ಣಿನ – ಕನ್ನಡದ ಕೊಡುಗೆ. ಈ ಮಾತಿಗೆ ಪೂರಕವಾಗಿ ಭಾವೀ ಜನಾಂಗಕ್ಕಾಗಿ `ಬೇಟೆಯ ಉರುಳು’ – ಎಂಬ ಈ ಕೃತಿಯನ್ನು ರಚಿಸಿದ್ದಾರೆ. ಬೇಟೆಯ ಕುರಿತಾದ ಇವರ ಅನುಭವ ಬತ್ತದ ತೊರೆಯಾಗಿ ಹರಿಯುತ್ತದೆ.
    ಇಲ್ಲಿ ಚಿಕ್ಕ ಪುಟ್ಟ ಬೇಟೆಗಳಲ್ಲಿರುವ ಜಾಣ್ಮೆ, ವಿಶಿಷ್ಟತೆಗಳ ಸಜೀವ ವಿವರಣೆಗಳಿವೆ. ಬೇಟೆಯ ಹವ್ಯಾಸ ಕಾರಣಾಂತರಗಳಿಂದ ದೂರವಾಗುತ್ತಿರುವ ಈ ಕಾಲದಲ್ಲಿ ಈ ಸಂಬಂಧವಾದ ಸಾಕ್ಷ್ಯಚಿತ್ರದ ದಾಖಲೆಯು ಇದಾಗಿದೆ. ಬಾಯಿಮಾತಿನ ಅನುಭವವು ಬರೆಹರೂಪವಾಗಿ ಚಿತ್ರವತ್ತಾಗಿ ಇಲ್ಲಿ ಉಳಿಯುತ್ತದೆ.
    ಭಾವೀಜನಾಂಗಕ್ಕಾಗಿ ಬೇಟೆಯ ಉರುಳು ಎಂಬ ಈ ಕೃತಿಯು ಶ್ರೀ ಜತ್ತಪ್ಪ ರೈಗಳ ಈ ಹಿಂದಿನ ಎರಡು ಕೃತಿಗಳನ್ನೂ ಇನ್ನೊಂದು ಮುಖವಾಗಿ ದಾಟಿಹೋಗಿದೆ ಎನ್ನಬೇಕು. ಪುರಾಣ ಚರಿತ್ರೆಗಳ ಕಾಲದಲ್ಲಿ ದೊರೆಯುವ ಬೇಟೆಯ ಸಂದರ್ಭಗಳ ಸಂಶೋಧಕ ಮೌಲ್ಯವನ್ನು ಈ ಕೃತಿಯು ಎತ್ತಿ ತೋರಿಸುತ್ತದೆ. ಇದು ಇದರ ಹೆಚ್ಚಳ. ಮಕ್ಕಳಿಗಾಗಿ ಕಥೆ ಹೇಳುವಾಗ ಕೊಂಡಿ ಕಳಚಿಕೊಳ್ಳದಂತೆ ಕುತೂಹಲ ಕೊನರಿಡುವಂತೆ ಮಾಡುವ ತನ್ನದೇ ಆದ ಕಥಾನಕದ ತಂತ್ರವಿಲ್ಲಿ ಎದ್ದು ತೋರುತ್ತಿದೆ. ಕಥೆಗಳನ್ನು ಹೇಳುವಾಗ ವಿವರಣೆಗಾಗಿ ತಡಕಾಡುವುದಿಲ್ಲ. ಅವೆಲ್ಲ ತಾವಾಗಿಯೇ ಒಂದರ ಹಿಂದೊಂದು ಹರಿದುಬಂದಿವೆ.

    Original price was: $1.80.Current price is: $1.08.
    Add to basket
  • -40%

    ಕರಾಳ ಗರ್ಭ

    0

    ಈ ಕಾದಂಬರಿಯನ್ನು ನಾಗೇಶ ಕುಮಾರ ಸಿ ಎಸ್ ಅವರು ಬರೆದಿದ್ದಾರೆ. ಇದು  ಒಂದು ರಹಸ್ಯಮಯ  ಪತ್ತೇದಾರಿ ಕಾದಂಬರಿಯಾಗಿದೆ.

    Original price was: $0.83.Current price is: $0.50.
    Add to basket
  • -40%

    ಸುವರ್ಣ ಕರಾವಳಿ

    0

    ಸುವರ್ಣ ಕರಾವಳಿ
    ಈ ಕಾದಂಬರಿಯನ್ನು ನಾಗೇಶ ಕುಮಾರ ಸಿ ಎಸ್ ಅವರು ಬರೆದಿದ್ದಾರೆ. ಇದು  ಒಂದು ರಹಸ್ಯಮಯ  ಪತ್ತೇದಾರಿ ಕಾದಂಬರಿಯಾಗಿದೆ.

    Original price was: $0.83.Current price is: $0.50.
    Add to basket
  • -40%

    ಮಾತು ಮೌನ

    0

    ಮಾತು ಮೌನ
    ಸಾಹಿತ್ಯ ಪರಿಷತ್ತಿನವರು ಏರ್ಪಡಿಸಿದ ಕವಿಗೋಷ್ಟಿಗಳಲ್ಲಿ ವಾಚಿಸಲೆಂದೇ ರಚಿಸಿದ ಕವಿತೆಗಳಿವು. ಈ ಕವನ ಸಂಕಲನದಲ್ಲಿ ನಿಸರ್ಗ ಪ್ರೇಮ, ಜೀವನ ಸೌಂದರ್ಯ , ಬದುಕಿನ ಬವಣೆ, ಹೆಣ್ಣಿನ ಶೋಷಣೆ, ಸಾಂಸ್ಕೃತಿಕ ಚಿಂತನೆ, ಪ್ರೀತಿ ಪ್ರೇಮ , ನಾಡು ನುಡಿ , ದೇಶಭಕ್ತಿ , ಗಣ್ಯವ್ಯಕ್ತಿ , ಹಾಗೂ ‘ಅಹಲ್ಯ’ ಎಂಬ ಕಿರುಕಥನಗೀತೆ, ಭಕ್ತಿಗೀತೆ, ಹೀಗೆ ಸಾಕಷ್ಟು ವೈವಿಧ್ಯತೆಯನ್ನು ಕಾಣುತ್ತೇವೆ. ಇವರು ಸಾಹಿತ್ಯದ ದೋಣಿಯನ್ನು ನಡೆಸುವಲ್ಲಿ ಗದ್ಯ ಪದ್ಯದ ಹುಟ್ಟನ್ನು ಹಾಕಿದ್ದಾರೆ.

    Original price was: $1.08.Current price is: $0.65.
    Add to basket
  • -40%

    ಮುಳುಗುವ ಕೊಳ

    0

    ಮುಳುಗುವ ಕೊಳ
    ಈ ಕಾದಂಬರಿಯನ್ನು ನಾಗೇಶ ಕುಮಾರ ಸಿ ಎಸ್ ಅವರು ಬರೆದಿದ್ದಾರೆ. ಇದು  ಒಂದು ರಹಸ್ಯಮಯ  ಪತ್ತೇದಾರಿ ಕಾದಂಬರಿಯಾಗಿದ್ದು ಪೊಲೀಸರು ಕೊಲೆಗಾರರನ್ನು ಹೇಗೆ ಪತ್ತೆ ಮಾಡುತ್ತಾರೆ ಎಂಬುದನ್ನು ಈ ಕಾದಂಬರಿಯಲ್ಲಿ ವಿವರಿಸಿದ್ದಾರೆ. ಕೊಲೆಗಾರರು ಪೋಲೀಸರ ಜೊತೆಯಲ್ಲೇ ಇದ್ದು ಪೊಲೀಸರಿಗೆ ಯಾವುದೇ ರೀತಿಯ ಸಂಶಯ ಬರದಂತೆ ನಡೆದುಕೊಂಡು ಅವರು  ಯಾವ ರೀತಿ  ದಾರಿ ತಪ್ಪಿಸಲು ನೋಡುತ್ತಾರೆ ಎಂಬುದನ್ನು ತಿಳಿಸಿದ್ದಾರೆ ಹೀಗಾಗಿ ಈ ಕಾದಂಬರಿಯು ತುಂಬಾ ಕುತೂಹಲಕಾರಿಯಾಗಿದೆ.

    Original price was: $0.83.Current price is: $0.50.
    Add to basket
  • -40%

    ರಾಜಕೀಯ ಮತ್ತು ಧರ್ಮ

    0

    ರಾಜಕೀಯ ಮತ್ತು ಧರ್ಮ

    ಲೇಖನಗಳು ತಮ್ಮ ವಸ್ತುವನ್ನು ಬೆಳಗಿಸುತ್ತವೆ. ಅದಕ್ಕಿಂತ ಹೆಚ್ಚಾಗಿ ಲೇಖಕನ ವ್ಯಕ್ತಿತ್ವದ ಬಗ್ಗೆ ಕೂಡ ಕೆಲ ಮಾತುಗಳನ್ನೂ ಹೇಳುತ್ತವೆ. ಈ ದೃಷ್ಟಿಯಿಂದ ಓದುಗರು ಇವುಗಳನ್ನು ಸ್ವೀಕರಿಸಬೇಕು. ಒಟ್ಟಿನಲ್ಲಿ ಹೇಳುವದಾದರೆ ಸುತ್ತಲಿನ ಜಗತ್ತಿನೊಡನೆ ನಡೆದ ಒಂದು ನಿರಂತರ ಪ್ರತಿಕ್ರಿಯೆಯ ಫಲವಾಗಿ ಈ ಲೇಖನಗಳು ಮೂಡಿಬಂದಿದೆ.

    Original price was: $1.08.Current price is: $0.65.
    Add to basket
  • -40%

    ರಕ್ತಚಂದನ

    0

    ರಕ್ತಚಂದನ

    …..ಒಂದು ವೈವಿಧ್ಯಮಯ ಕಥಾ ಸಂಕಲನ

    ಹನ್ನೆರಡು ಕಥೆಗಳ ಹೂರಣ…
    ನಾಡಿನ ಪ್ರಮುಖ ಪತ್ರಿಕೆಗಳಾದ ಸುಧಾ, ತರಂಗ, ಉತ್ಥಾನ ಮತ್ತು ತುಷಾರದಲ್ಲಿ ಪ್ರಕಟಿತ ಸಾಮಾಜಿಕ ಮತ್ತು ಪತ್ತೇದಾರಿ ಕತೆಗಳ ಸಂಕಲನ

    Original price was: $1.92.Current price is: $1.15.
    Add to basket
  • -40%

    ನಾಳೆಯನ್ನು ಗೆದ್ದವನು

    0

    ನಾಳೆಯನ್ನು ಗೆದ್ದವನು
    ಅಭಿಮನ್ಯು ಎಂಬ ಇಂಟೆಲಿಜೆನ್ಸ್ ಉಪ ನಿರ್ದೇಶಕನನ್ನು ಅನ್ಯಗ್ರಹ ಜೀವಿಗಳು ತಮ್ಮ ನೌಕೆಗೆ ಕದ್ದೊಯ್ದು ಕಾಲಮಾನದ ರಹಸ್ಯ, ಅಂತರಿಕ್ಷದ ಗುಪ್ತ ಮತ್ತು ಅನೂಹ್ಯ ಸಂಗತಿಗಳನ್ನು ತೆರೆದಿಡುತ್ತದೆ…ಆದರೆ ಈ ಪರಮಸಶಕ್ತ ಮತ್ತು ಮುಂದುವರೆದ ಜೀವಿಗಳು ಭೂಮಿಯಲ್ಲಿನ ಮುಂದೆ ನಡೆಯುವ ದೊಡ್ಡ ಅನಾಹುತ ತಡೆಯಲು ಅಭಿಮನ್ಯುವಿನ ಸಹಾಯ ಬೇಡುತ್ತವೆ.. ಅಭಿಮನ್ಯುವಿನ ಜೀವನದ ಅತ್ಯಂತ ಸೂಕ್ಷ್ಮ ಹಾಗೂ ಅಪಾಯಕರ ಮಿಶನ್ ಇದಾಗುತ್ತದೆ. ಭೂತ, ವರ್ತಮಾನ, ಭವಿಷ್ಯ ಕಾಲಗಳ ಹಿನ್ನೆಲೆಯ ವೈಜ್ಞಾನಿಕ ಥ್ರಿಲ್ಲರ್!

    Original price was: $0.83.Current price is: $0.50.
    Add to basket
  • -40%

    ಚಂದಪ್ಪನ ಶಾಲೆ

    0

    ಚಂದಪ್ಪನ ಶಾಲೆ
    ಈ ಮಕ್ಕಳ ಕವಿತಾ ಪುಸ್ತಕದಲ್ಲಿ ಒಟ್ಟು ಒಪ್ಪತ್ತೊಂಬತ್ತು ಕವಿತೆಗಳಿವೆ. ಅವರ ಪರಿಸರ ಪ್ರೇಮ, ಗಿಡಮರಗಳಿಂದ ಆಗುವ ಲಾಭ, ಅಜ್ಜ, ಅಜ್ಜಿಯರ ಸಂಭ್ರಮ, ಊರಲ್ಲಿಯ ಶೆಟ್ಟಿ ಅಂಗಡಿ, ಅನ್ನದಾತ ರೈತನ ಜೀವನ, ಅಂಚೆಯವನ ಕಾರ್ಯ, ವನಮಹೋತ್ಸವ, ಮುಂತಾದ ವಿಶಿಷ್ಟವೆನ್ನಬಹುದಾದ ಆದರ್ಶಗುಣಗಳು ಈ ಪುಸ್ತಕದಲ್ಲಿ ಒಡೆಮೂಡಿವೆ. ಇನ್ನೊಂದು ವಿಶೇಷತೆಯೆಂದರೆ ಆಯಾ ಕವಿತೆಗೆ ಹೋಲುವ ರೇಖಾ ಚಿತ್ರಗಳು ಮಕ್ಕಳ ಗಮನ ಸೆಳೆಯುತ್ತವೆ.

    Original price was: $0.48.Current price is: $0.29.
    Add to basket
  • -40%

    ಅಜ್ಜಿ ‘ಪಂಚ್’ತಂತ್ರ

    0

    ಅಜ್ಜಿ ‘ಪಂಚ್’ತಂತ್ರ

    ಜೀವನದ ಚೈತನ್ಯ, ಉತ್ಸಾಹಗಳಿಗೆ ಜೀವಸೆಲೆ ನಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೂ ಅವಳ ಕಷ್ಟ, ಅವಹೇಳನ, ಅವಮಾನ ಆಕೆ ಅನುಭಸಿದಷ್ಟು ಇನ್ನಾರೂ ಅನುಭವಿಸಿಲ್ಲ. ಇವುಗಳೆಲ್ಲದರ ನಡುವೆ, ಆಕೆಯ ಜೀವನೋತ್ಸಾಹ ಕುಗ್ಗಿಲ್ಲ. ಬದುಕಿನ ಹೋರಾಟ ಸ್ಫೂರ್ತಿ ಕಳೆದುಕೊಂಡಿಲ್ಲ. ಅಂದಿನಿಂದ ಇಂದಿನವರೆಗೆ, ನಮ್ಮೆಲ್ಲರ ಅಳು ನಗುವಿಗೆ ಸಹವರ್ತಿಯಾಗಿದ್ದಾಳೆ. ತುಂಬಾ ಗಂಭೀರವಾಗಿ ಹೇಳಬೇಕೆಂದರೆ ಹೆಣ್ಣು-ಮಗು, ಬಾಲೆ, ಹುಡುಗಿ, ಮಹಿಳೆ, ಮುದುಕಿ ಎಲ್ಲಾ ಪಾತ್ರಗಳಲ್ಲಿ, ಎಲ್ಲ ಅವಸ್ಥೆಗಳಲ್ಲಿ ವ್ಯವಸ್ಥೆಯ ಒತ್ತಡದಲ್ಲಿ ಸಂಘರ್ಷದ ಬದುಕು ಸಾಗಿಸಿದ್ದಾಳೆ. ಇವುಗಳ ನಡುವೆ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಲು ನಿರಂತರ ಪ್ರಯತ್ನ ನಡೆಸಿದ್ದಾಳೆ. ಅವಳ ಹೋರಾಟವೆ ಒಂದೊಂದು ಮಹಾಕಾವ್ಯಗಳಾಗಿವೆ. ಆ ಹೋರಾಟದ ಕತೆಗಳಿಗೆ ಕಾಲಘಟ್ಟ, ಸಂದರ್ಭಕ್ಕೆ ತಕ್ಕಂತೆ ಬೇರೆ ಬೇರೆ ಹೆಸರು, ವರ್ಷಗಳ ಸಂಕೇತವಿದೆ ಮಂಥರೆಯ ಬದುಕಿನ ಆಸೆ ಸೀತೆಗೆ ವನವಾಸ ಒದಗಿಸಿದ್ದಿರಬಹುದು. ಅವಳ ಬದುಕಿನ ಭದ್ರತೆಯ ಅನಿವಾರ್ಯತೆ, ತನ್ನ ಅಸ್ಥಿತ್ವಕ್ಕೆ ಆ ಸಂದರ್ಭದಲ್ಲಿ ಆ ರೀತಿಯ ಮಾತು ವರ್ತನೆಯನ್ನು ಸೃಷ್ಟಿಸಿರಬಹುದಲ್ಲವೆ? ಅದು ಪುರಾತನ ಕಥೆ. ಹೀಗೆ ಹಲವು ಹತ್ತು ನಮ್ಮಲ್ಲಿ ಸಿಗುತ್ತವೆ. ಅವು ಆ ಪಾತ್ರಗಳ ದುರಂತವನ್ನು, ಕರುಣೆಯನ್ನು, ಮರುಕವನ್ನು, ಹಾಸ್ಯವನ್ನು ಸೃಷ್ಟಿಸುತ್ತವೆ.

    Original price was: $1.80.Current price is: $1.08.
    Add to basket
  • -40%

    ವಚನವಲ್ಲಿ

    0

    ವಚನವಲ್ಲಿ
    ಶ್ರೀ ಉಮೇಶ ಮುನವಳ್ಳಿ
    ಈ ವಚನಗಳಲ್ಲಿ ಶ್ರೀಯುತರು ಪರಮ ಶಕ್ತಿ ಸಚ್ಛದಾನಂದ ಸ್ವರೂಪವೆನಿಸಿದ ಭಾವನೆಗಳನ್ನು ಮನೋಜ್ಞವಾಗಿ ಅರ್ಥೈಸಿದ್ದಾರೆ. ಪ್ರಸ್ತುತ ‘ವಚನವಲ್ಲಿ’ ಕನ್ನಡ ಇಂಗ್ಲೀಷ ಹಾಗೂ ಹಿಂದಿ ಬಾಷೆಗಳಲ್ಲಿ ನಿರೂಪಿತವಾಗಿರುವದು ಲೇಖಕರ ಬಹುಮುಖ ಪ್ರತಿಭೆ – ಪಾಂಡಿತ್ಯಕ್ಕೆ ಸಾಕ್ಷಿಯಾಗಿದೆ. ಇಂದಿನ ವಿಷಮ ಪರಿಸ್ಥಿತಿಯಲ್ಲಿ ಆಧ್ಯಾತ್ಮಿಕ ತಿಳುವಳಿಕೆಯನ್ನು ಪಡೆಯಲು ಈ ವಚನಗಳು, ಕಾರ್ಗತ್ತಲೆಯಲ್ಲಿ ಸಮುದ್ರ ಯಾತ್ರಿಕನಾಗಿ ದಿಕ್ಕನ್ನು ಹಾಗೂ ನೆಲೆಯನ್ನು ಸೂಚಿಸುವಂಥ ದೀಪಸ್ಥಂಭ lighthouse ಇದ್ದಂತೆ.

    Original price was: $0.96.Current price is: $0.58.
    Add to basket
  • -42%

    ಕುಶಲೋಪರಿ

    0

    ಕುಶಲೋಪರಿ
    ಶರತ್ ಎಚ್.ಕೆ.
    ‘ಕುಶಲೋಪರಿ’ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳ ಗುಚ್ಛ.  ಲೇಖಕರ  ಕಿವಿಗೆ ಬಿದ್ದ ಹಾಗೂ ಸ್ವತಃ ಲೇಖಕರೇ  ಭಾಗಿಯಾದ ಮಾತುಕತೆಗಳ ಹಿನ್ನೆಲೆಯಲ್ಲಿ ರೂಪುಗೊಂಡ ಬರಹಗಳು ಇಲ್ಲಿವೆ.

    Original price was: $0.24.Current price is: $0.14.
    Add to basket
  • -20%

    ಸಮಸ್ತ ಕಥೆಗಳು

    0
    Original price was: $5.76.Current price is: $4.61.
    Add to basket
  • -40%

    ಸ್ವಪ್ನದರ್ಶಿ  ಮತ್ತು ಇತರ ಗೀತನಾಟಕಗಳು

    0

    ಸ್ವಪ್ನದರ್ಶಿ  ಮತ್ತು ಇತರ ಗೀತನಾಟಕಗಳು
    ಈ ನಾಟಕಗಳನ್ನು ಕೀರ್ತಿನಾಥ ಕುರ್ತಕೋಟಿ ಅವರು ರಚಿಸಿದ್ದಾರೆ. ಈ ಕೃತಿಯು ಸ್ವಪ್ನದರ್ಶಿ, ರಾಮಾವಸಾನ, ಮಹಾಪ್ರಸ್ಥಾನ, ಮಹಾಶ್ವೇತೆ, ಶೋಕವೃಕ್ಷ -ಈ ಐದು ನಾಟಕಗಳನ್ನು ಒಳಗೊಂಡಿದೆ.

    Original price was: $0.48.Current price is: $0.29.
    Add to basket
  • -42%

    ಆಮನಿ

    0

    ಆಮನಿ
    ಈ ನಾಟಕದಲ್ಲಿ ಮಹತ್ವವನ್ನು ವಾತಾವರಣ ಸೃಷ್ಟಿಗೆ ಕೊಟ್ಟಿದ್ದಾರೆ. ಅಂತಲೇ ಇಲ್ಲಿಯ ಕಥಾವಸ್ತುವಿನ ಇತಿಹಾಸ ದೂರ ಬಹುದೂರ ಓಡುತ್ತದೆ. ಕೃತಿಯ ಗಮನ ವರ್ತಮಾನಕಾಲದಿಂದ ಭೂತಕಾಲಕ್ಕೆ ಹೋಗಿ, ಆಮೇಲೆ ವರ್ತಮಾನದಿಂದ ಮುಂದುವರಿಯುತ್ತದೆ. ಇದು ಮಕ್ಕಳ ಜೀವನದಲ್ಲಿಯ ಕೆಲವು ಸನ್ನಿವೇಶಗಳನ್ನು ರೂಪಿಸುವ ನಾಟಕವಾಗಿದ್ದರೂ ಕೂಡ ಅದೇ ಅದರ ಉದ್ದೇಶವಲ್ಲ. ಜೀವನಕ್ಕೆ ಜೀವನವೇ ಇಲ್ಲಿ ಸಂಕೇತವಾಗಿದೆ. ವಾಸ್ತವತೆಯ ಅದ್ಭುತ ರಮ್ಯತೆಯನ್ನು ತೆರೆದು ತೋರುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಜೀವನದಲ್ಲಿ ಕಾಣುವ ಸತ್ಯದ ಪರಿಗಳನ್ನು ಒಂದೊಂದಾಗಿ ಬಿಚ್ಚಿ ನೋಡಿದಾಗ ಕೊನೆಗೆ ಅನಿರ್ವಚನೀಯವಾದ ಗೂಢವೊಂದೇ ಉಳಿಯುತ್ತದೆ. ಮಕ್ಕಳ ಜೀವನದಲ್ಲಿ ಆಟಗಳಲ್ಲಿ , ಉತ್ಸಾಹದಲ್ಲಿ, ಅನುಕರಣದಲ್ಲಿ ಮನುಕುಲದ ಹೃದಯಸ್ಪಂದನ ಕೇಳುತ್ತಿದೆ. ಇತಿಹಾಸದ ಫಲವಾಗಿ, ಭವಿಷ್ಯದ ಬೀಜವಾಗಿರುವ ಶೈಶವದ ಅಲೌಕಿಕ ಸೌಂದರ್ಯವನ್ನು ಸೆರೆಹಿಡಿಯುವ ಸಾಹಸ ಇಲ್ಲಿದೆ.

    Original price was: $0.24.Current price is: $0.14.
    Add to basket
  • -40%

    ಕನ್ನಡ ವ್ಯಾಕರಣ

    0

    ಕನ್ನಡ ವ್ಯಾಕರಣ
    ಶೈಕ್ಷಣಿಕ ಅಭಿವೃದ್ಧಿಗೆ ಭದ್ರ ನೆಲೆಗಟ್ಟನ್ನು ಒದಗಿಸುವಂಥದ್ದು ಪ್ರಾಥಮಿಕ ಶಾಲಾ ಹಂತ. ನಂತರ ಪ್ರೌಢಶಾಲೆ ಕಾಲೇಜು ಘಟ್ಟಗಳಲ್ಲಿ ಭಾಷಾ ಅಭಿವೃದ್ಧಿ ಪೂರ್ಣತೆಯತ್ತ ಸಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಇಂಗ್ಲೀಷ ಮಾಧ್ಯಮ ಶಾಲೆಗಳತ್ತ ಪಾಲಕರ ಒಲವು ಹೆಚ್ಚಾಗುತ್ತಿದೆ. ಇದರಿಂದಾಗಿ ಪ್ರಾಥಮಿಕ ಹಂತದಲ್ಲಿ ಪ್ರಾದೇಶಿಕ ಕನ್ನಡ ಭಾಷೆ, ಸಾಹಿತ್ಯ, ವ್ಯಾಕರಣದ ಮೂಲಜ್ಞಾನ ದೊರಬೇಕಾದಷ್ಟು ದೊರೆಯದೆ ಹೋಗುವದರಿಂದ ಇಂದು ಬಹುಪಾಲು ವಿದ್ಯಾರ್ಥಿಗಳ ಕನ್ನಡ ಓದು ಬರಹದ ಸ್ಥಿತಿಗತಿ ಅಷ್ಟಕ್ಕಷ್ಟೆ. ಅಷ್ಟೇ ಏಕೆ, ಪದವೀಧರರ ಕನ್ನಡ ಬರವಣಿಗೆ ಹೇಗಿರುತ್ತದೆಂಬುದು ಎಲ್ಲರ ಅನುಭವಕ್ಕೆ ಬಂದ ವಿಷಯ. ಇಂತಹ ಸಂದರ್ಭದಲ್ಲಿ ಐದರಿಂದ ಹತ್ತನೇ ತರಗತಿ ವರೆಗಿನ ಮಕ್ಕಳಿಗೆ ಕನ್ನಡ ವ್ಯಾಕರಣದ ಮೂಲ ಸ್ವರೂಪವನ್ನು ತಿಳಿಸಿ ಕೊಡುವ “ಕನ್ನಡ ವ್ಯಾಕರಣ” ಎಂಬ ಕೃತಿಯನ್ನು ಡಾ.ಜಯಶ್ರೀ ಎಸ್. ಮುದಿಗೌಡರರವರು ಹೊರತಂದಿದ್ದು ಅತ್ಯಂತ ಮಹತ್ವದ ವಿಷಯ.

    Original price was: $0.48.Current price is: $0.29.
    Add to basket
  • -40%

    ಕೆಂಗುಲಾಬಿ

    0

    ವೇಶ್ಯಾ ಜಗತ್ತಿನ ಅನಾವರಣ
    ಅಂದಿನ ದೇವದಾಸಿಯರಿಂದ , ಇಂದಿನ ಕಾಲ್ ಗರ್ಲ್ಸ್ ವರೆಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಣ್ಣಿನ ಕುರಿತ ಹಾಗೆ ಬರೆದದ್ದು ಸಮುದ್ರದಷ್ಟಿದೆ. ಅದರಲ್ಲಿಯೂ ವೇಶ್ಯಾ ಸಮಸ್ಯೆಯ ಕುರಿತ ಹಾಗೇ ಬರೆಯದ ಲೇಖಕರೆ ಇಲ್ಲ ಎನ್ನುವಷ್ಟು ಸಾಹಿತ್ಯ ಬಂದಿದೆ. ಆದರೆ ಬರೆದವರೆಲ್ಲರ ಕಣ್ಣಲ್ಲಿ ಪಸೆಯಿರಲಿಲ್ಲವೆಂಬುದು ವಿಷಾದದ ಸಂಗತಿ. ಹೆಣ್ಣಿನ ದೇಹ ಸಂಬಂಧಿ ಸಂಗತಿಗಳ ಬಗ್ಗೆ ಇರುವ ಕೆಟ್ಟ ಕುತೂಹಲದಿನದ ಹೆಣ್ಣಿನ ಮನಸ್ಸನ್ನು ಮುಟ್ಟುವುದು ಸಾಧ್ಯವಾಗಲೇ ಇಲ್ಲ. ಇಡೀ ನಮ್ಮ ಬದುಕಿನುದ್ದಕ್ಕೂ ಹೆಣ್ಣು ಕಪ್ಪು, ಬಿಳುಪಿನ ಪಾತ್ರದಲ್ಲಿ ಕಾಣಿಸುತ್ತಿರುವ ಕಾರಣದಿಂದ ಸ್ತ್ರೀ ಲೋಕದಲ್ಲಿಯೇ ಪರಸ್ಪರ ಹಗೆತನ ಮನೆ ಮಾಡಿದೆ. ಗರತಿ, ಗಣಿಕೆ, ಗಯ್ಯಾಳಿ ಪಾತ್ರಗಳನ್ನು ಸೃಷ್ಟಿಸಿದ ವ್ಯವಸ್ಥೆಯನ್ನು ಅರ್ಥೈಸುವುದರಲ್ಲಿ ವಿಫಲರಾದ ಕಾರಣದಿಂದಲೇ ಇಂದಿಗೂ ವೇಶ್ಯಾ ಸಮಸ್ಯೆ ಕುರಿತು ಬರೆಯುವ, ಮಾತನಾಡುವ ಮಾತುಗಳಿಗೆ ಸಾಮಾಜಿಕ ನೈತಿಕ ಹೊಣೆಗಾರಿಕೆಯನ್ನು ಹೊರಲು ಆಗುತ್ತಿಲ್ಲ. ಅತ್ಯಂತ ಅಮಾನವೀಯ ಈ ಸಾಮಾಜಿಕ ಸಮಸ್ಯೆಯೊಳಗಿನ ಸಂಕಟ ಅರ್ಥವಾಗುತ್ತಿಲ್ಲವೆಂಬ ನೋವು ಕೈಬೆರಳೆಣಿಕೆಯ ಲೇಖಕರನ್ನಾದರೂ ಕಾಡಿದೆ ಎಂಬುದಕ್ಕೆ ಸಾಕ್ಷಿ ನೀಡುವಂತೆ ಕೆಲವು ಕೃತಿಗಳಾದರೂ ನಮ್ಮೆದುರಿಗಿವೆ. ಅಂತಹ ಕೃತಿಗಳ ಸಾಲಿಗೆ ಹನುಮಂತ ಹಾಲಿಗೇರಿಯ ‘ಕೆಂಗುಲಾಬಿ’ ಸೇರುತ್ತದೆ.

    Original price was: $1.44.Current price is: $0.86.
    Add to basket
  • -39%

    ಗೋಡೆಗಳ ನಡುವೆ 

    0

    ಗೋಡೆಗಳ ನಡುವೆ 
    ವೈಯಕ್ತಿಕ ಅನುಭವಗಳ ಮೂಲಕ ಕಂಡುಕೊಂಡ ಸಂಗತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಸಾಮಾಜಿಕ ವಿದ್ಯಮಾನಗಳ ಕುರಿತು  ಬರೆದಿರುವ ಬರಹಗಳು. ಇಲ್ಲಿನ ಬರಹಗಳು ಪ್ರಜಾವಾಣಿ, ವಿಜಯವಾಣಿ, ಕನ್ನಡಪ್ರಭ, ಉದಯವಾಣಿ, ಗೌರಿ ಲಂಕೇಶ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
    ಈ ಪುಸ್ತಕದಲ್ಲಿ ಬರುವ ಬರಹಗಳು ಈ ಕೆಳಗಿನಂತಿವೆ :
    ಗೋಡೆಗಳ ನಡುವೆ
    ನಾನೇಕೆ ಬರೆಯುತ್ತೇನೆ?
    ಪೂರ್ವಗ್ರಹಗಳ ಪಾದಕ್ಕೆ ಮಾಧ್ಯಮ ಎರಗಬಹುದೇ?
    ಪುಟ್ಟ ಹುಡುಗನ ಕಣ್ಣಲ್ಲಿ ನಾವು…?
    ಆತ್ಮವಂಚನೆಯ ಸ್ವಚ್ಛ ಭಾರತ!
    ಅಂಬೇಡ್ಕರ್ ಫೋಟೊ ಮತ್ತು ಅಸಹನೆಯ ಭಾವಚಿತ್ರ
    ಬಣ್ಣದ ಬೆನ್ನೇರಿ…
    ಹಸಿದವರ ಎದುರು ಹೊಟ್ಟೆ ತುಂಬಿದವರ ಪೌರುಷ
    ಜಾತಿಯೂ… ಉದ್ಯೋಗದಾತರ ಮನಸ್ಥಿತಿಯೂ…
    ಮಾನ ಮರ್ಯಾದೆಯ ಪರದೆ ಹಿಂದಿನ ದುಗುಡ
    ಮೀಸಲಾತಿ ಬಲಾಢ್ಯರ ಪಾಲಾಗದಿರಲಿ
    ಮೊಬೈಲೂ… ಕಾಣದ ಮುಖಗಳ ಕಾಟವೂ…
    ಮೌಢ್ಯದ ಬೇರು ಸಡಿಲಗೊಳ್ಳುವುದೇ?
    ಮುಖಪುಟದ ವಿಕೃತ ಮುಖಗಳು
    ನೆಮ್ಮದಿ ಕಸಿದುಕೊಳ್ಳುವ ‘ಜನರೇಷನ್ ಗ್ಯಾಪ್’
    ಜಯಂತಿ ಆಚರಿಸಿ ಸರ್ಕಾರ ಸಾಧಿಸಿದ್ದೇನು?
    ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆ ಮೂಡುವುದು ಅಪರಾಧವೇ?
    ಬದುಕಲು ಧರ್ಮ ಬೇಕೆ?

    Original price was: $0.36.Current price is: $0.22.
    Add to basket
  • -40%

    ಬೀಜದೊಳಗಣ ವೃಕ್ಷ

    0

    ಬೀಜದೊಳಗಣ ವೃಕ್ಷ
    ಶ್ರೀಮತಿ ಗೀತಾ ವಸಂತ ಅವರು ಬೇಂದ್ರೆ ಕಾವ್ಯದ ವಿರಾಟ್ ಸ್ವರೂಪದ ಬಗ್ಗೆ `ಬೀಜದೊಳಗಣ ವೃಕ್ಷ’ ಎಂಬ ಹೆಸರಿನಿಂದ ಅಧ್ಯಯನ ಗ್ರಂಥವೊಂದನ್ನು ಬರೆದು ಪ್ರಸ್ತುತ ಪಡಿಸುತ್ತಿದ್ದಾರೆ. ಈ ವಿಷಯದ ಬಗ್ಗೆ ಅವರು ತುಮಕೂರು ವಿಶ್ವವಿದ್ಯಾಲಯಕ್ಕೆ ಮಹಾಪ್ರಬಂಧವನ್ನು ಸಲ್ಲಿಸಿ ಡಿ.ಲಿಟ್. ಪದವಿ ಪಡೆದಿದ್ದಾರೆ. ಅದನ್ನು ಓದುಗರಿಗೆ ಉಪಯೋಗವಾಗುವ ರೀತಿಯಲ್ಲಿ ಮಾರ್ಪಡಿಸಿ ಕೃತಿ ರಚಿಸಿದ್ದಾರೆ.

    Original price was: $2.16.Current price is: $1.30.
    Add to basket
  • -40%

    ಕನ್ನಡ ಸಾಂಪ್ರದಾಯಿಕ ವ್ಯಾಕರಣಗಳು

    0

    ಕನ್ನಡ ಸಾಂಪ್ರದಾಯಿಕ ವ್ಯಾಕರಣಗಳು
    ಪ್ರೊ. ಪಿ. ಶ್ರೀಕೃಷ್ಣ ಭಟ್
    ಪ್ರೊ.ಪಿ.ಕೃಷ್ಣ ಭಟ್ಟರ ‘ಕನ್ನಡ ಸಾಂಪ್ರದಾಯಿಕ ವ್ಯಾಕರಣಗಳು’ ಕನ್ನಡ ವಿದ್ವತ್ ಪರಂಪರೆಯನ್ನು ನೆನಪಿಸುವ ಕೃತಿ. ಇದರಲ್ಲಿ ವ್ಯಾಕರಣದ ಜಟಿಲ ಸಮಸ್ಯೆಗಳನ್ನು ಸರಳವಾಗಿ ವಿವರಿಸಲಾಗಿದೆ. ಸಂಸ್ಕೃತದ ಪ್ರಭಾವವನ್ನು ಕನ್ನಡದ ಸ್ವಂತಿಕೆಯನ್ನು ಸ್ಪಷ್ಟವಾಗಿ ಗುರುತಿಸಿ ವಿವರಿಸುವ ಕೃತಿಗಳು ಕನ್ನಡದಲ್ಲಿ ವಿರಳ. ವ್ಯಾಕರಣ ಶಾಸ್ತ್ರಗಳು ಕಾಲಾತೀತಾದ ವಿಚಾರಗಳೆಂಬಂತೆ ಅಧ್ಯಯನ  ಕ್ಷೇತ್ರದಿಂದ ಮರೆಯಾಗುತ್ತಿವೆ.  ಭಾಷಾ ಕಲಿಕೆಗಾಗಲಿ, ಸಾಹಿತ್ಯ ಓದಿಗಾಗಲಿ ವ್ಯಾಕರಣದ ಹಂಗಿಲ್ಲದಿರಬಹುದು. ಆದರೆ ಹಳಗನ್ನಡ ಕಾವ್ಯಗಳನ್ನು ಓದಿ ಭಾಷೆಯ ವೈಶಿಷ್ಟ್ಯವನ್ನು ಅರ್ಥೈಸಿಕೊಳ್ಳಬೇಕಾದರೆ ವ್ಯಾಕರಣ ವಿಶೇಷವನ್ನು ತಿಳಿದಿರಬೇಕಾದುದು ಅವಶ್ಯ. ಭಾಷೆಯ ಹಾಗೂ ಸಾಹಿತ್ಯದ ಇತಿಹಾಸದಲ್ಲಿ ವ್ಯಾಕರಣಕ್ಕೆ ಈ ನೆಲೆಯಿಂದ ಪ್ರಾಶಸ್ತ್ಯವಿದೆ. ಕನ್ನಡ ವ್ಯಾಕರಣ ಪರಂಪರೆಯನ್ನು ಸ್ಪಷ್ಟವಾಗಿ ತಿಳಿಸುವ ಆಕರಗ್ರಂಥವಾಗಿ ಇದು ಗಮನ ಸೆಳೆಯುತ್ತದೆ. ಆಳವಾದ ಅಧ್ಯಯನ, ಖಚಿತವಾದ ತಿಳುವಳಿಕೆ, ಅಗಾಧವಾದ ಪಾಂಡಿತ್ಯದಿಂದ ಸ್ಫುರಿಸಿದ ಪರಂಪರಾಗತ ವ್ಯಾಕರಣ ವಿಚಾರಗಳನ್ನು ಸಮಕಾಲೀನ ಭಾಷಾಭಿತ್ತಿಯಲ್ಲಿ ಅಭಿವ್ಯಕ್ತಗೊಳಿಸಿದ ಸರಳ ನಿರೂಪಣೆಯ ಈ ಗ್ರಂಥ ಕನ್ನಡ ಅಧ್ಯಯನ ಕ್ಷೇತ್ರಕ್ಕೊಂದು ಅನನ್ಯ ಕೊಡುಗೆಯಾಗಿದೆ.

    Original price was: $3.60.Current price is: $2.16.
    Add to basket
  • -40%

    ಶೋಕಚಕ್ರ

    0

    ಶೋಕಚಕ್ರ
    ಮಹಾತ್ಮಾ ಗಾಂಧಿಯವರ ಚಳವಳಕ್ಕೆ ಪ್ರಾರಂಭವಾದದ್ದು ೧೯೨೦ರಲ್ಲಿ . ೧೯೨೪ರಲ್ಲಿ ೨೦ ನಿಮಿಷಗಳ ವರೆಗೆ ಅವರ ಸಂದರ್ಶವನ್ನು ಪಡೆದಿದ್ದೆ. ರಾಜಕೀಯಕ್ಕಿಂತ ಸಾಮಾಜಿಕ, ಅದಕ್ಕಿಂತ , ಅಂತರಂಗಿಕ  ಸುಧಾರಣೆ ಅಗತ್ಯ ಎಂಬುದನ್ನು ಆಗ ನಾನು ಕಲಿತುಕೊಂಡ ಪಾಠ.
    ಸ್ವಾತಂತ್ರ್ಯ ಪ್ರಾಪ್ತಿಯ ತರುವಾಯ ನಾನು ಬಹಳ ಆಶೆಯಿಂದ ಪರಿಸ್ಥಿತಿಯನ್ನು ನೋಡುತ್ತಲಿದ್ದೆ. ಯಾವುದೊ ಒಂದು ಕಾರಣಕ್ಕೆ ರಾಜಕೀಯ ಸ್ವಾತಂತ್ರ್ಯದ ಅವಸರವಿದ್ದು ಮಹಾತ್ಮಾಜಿಯವರು ಅದಕ್ಕೆ ಪ್ರಾಶಸ್ತ್ಯವನ್ನು ಕೊಟ್ಟಿದ್ದರು. ಈಗ ಆ ಜಂಜಾಟ ಮುಗಿಯುತ್ತಲ್ಲ? ಸಾವಿರಾರು ವರ್ಷಗಳಿಗೊಮ್ಮೆ ಅವತರಿಸುವ ಭಗವಂತನ ಅಂಶದಂತಿದ್ದ ಮಹಾತ್ಮಾಜಿಯವರಿಂದ ನಿಜವಾದ- ಅಂತರಂಗಿಕ-ಸುಧಾರಣೆ ಜನತೆಯಲ್ಲಿ ಮೂಡುವುದಲ್ಲ? ಹೀಗೆ ಉತ್ಸಾಹಗೊಳ್ಳುತ್ತಿರುವಾಗ ಜನವರಿ ೩೦, ೧೯೮೯ರ ದುರ್ಘಟನೆ ನಡೆದುಹೋಯಿತು. “ಜಗತ್ತಿನ ದೀಪ ನಂದಿತು.”
    ಈ ಸಂದರ್ಭದ ಹಿನ್ನಲೆಯಲ್ಲಿ ದೇಶದ ಚುನಾವಣಾ, ಸ್ಥಾನಿಕ ಮುಂದಾಳುಗಳ ಸಾಂಸ್ಕೃತಿಕ ಮಟ್ಟ ಇದನ್ನೆಲ್ಲ ನೋಡಿ ಮೂಡಿದ ಭಾವನೆಗಳೇ ಈ ‘ಶೋಕಚಕ್ರ ‘ ನಾಟಕದಲ್ಲಿ ಮೂಡಿದೆ. ಇಲ್ಲಿಯ ಆಯಾ ಪಾತ್ರಗಳೇ ಪರಿಸ್ಥಿತಿಯನ್ನು ಚನ್ನಾಗಿ ಚಿತ್ರಿಸುವುವು.

    Original price was: $0.72.Current price is: $0.43.
    Add to basket
  • -40%

    ತೇಲಿ ಬಂದ ಎಲೆಗಳು

    0

    ತೇಲಿ ಬಂದ ಎಲೆಗಳು
    ದಿ. ಪಡುಕೋಣೆ ರಮಾನಂದರಾಯರ ‘ಹುಚ್ಚು ಬೆಳುದಿಂಗಳಿನ ಹೂಬಾಣಗಳು’ ಗ್ರಂಥಮಾಲೆಯ ಹಳೆಯ ಚಂದಾದಾರರಿಗೆ ಬಹಳ ಮೆಚ್ಚುಗೆಯಾದ ಕೃತಿ. ಅವರು ತಮ್ಮ ವೃದ್ಧಾಪ್ಯದಲ್ಲಿ ತಮ್ಮ ಮಗ-ಪ್ರಭಾಶಂಕರ-ಅವರ ಹತ್ತಿರವೇ ಇರುತ್ತಿದ್ದರು. ಮುಂಬಯಿ ಹಾಗೂ ಬೆಂಗಳೂರಲ್ಲಿ ವಾಸವಾಗಿದ್ದರು. ಆ ಕಾಲದಲ್ಲಿ ತಮ್ಮ ಸಂಪರ್ಕಕ್ಕೆ  ಬಂದ ಲೇಖಕರ ಹಾಗೂ ಇತರ ಕಲಾವಿದರ ಜೊತೆಗಿನ ಅನುಭವಗಳನ್ನು ಬರೆದು ಇಟ್ಟಿದ್ದರು, ಅದನ್ನು ನಮಗೆ ಕಳಿಸುವ ಮೊದಲೇ ಅವರು ತೀರಿಕೊಂಡರು. ಅವರ ಮಗ-ಮಹೇಶ ಪಿ. ಪಡುಕೋಣೆಯವರು-ತಂದೆಯವರ ಹಸ್ತಪ್ರತಿಯನ್ನು ಶ್ರೀ ಜಯಂತ ಕಾಯ್ಕಿಣಿಯವರ ಮುಖಾಂತರ ಕಳುಹಿಸಿ, ಪ್ರಕಟಿಸಲು ಸಾಧ್ಯವೇ? ಎಂದು ಕೇಳಿದರು. ಗ್ರಂಥಮಾಲೆಯ ಚಂದಾದಾರರಿಗೆ ಈ ಕೃತಿಯನ್ನು ನೀಡಲು ಅತ್ಯಂತ  ಸಂತೋಷವೆನಿಸುತ್ತದೆ.

    Original price was: $0.72.Current price is: $0.43.
    Add to basket