• -40%

    ಸಾವಿನ ಸೆರಗಿನಲ್ಲಿ

    0

    ನಿವೃತ್ತ ಪೋಲೀಸ್ ಮಹಾನಿರ್ದೇಶಕರಾದ ಡಾ. ಡಿ. ವಿ. ಗುರುಪ್ರಸಾದರು “ಸಾವಿನ ಸೆರಗಿನಲ್ಲಿ” ಎಂಬ ಕುತೂಹಲಕಾರಿ ಕೃತಿಯನ್ನು ರಚಿಸಿದ್ದಾರೆ. ಮರಣದಂಡನೆಗೀಡಾದ ಪ್ರತಿಯೊಬ್ಬ ಕೈದಿಯನ್ನು ಜೈಲಿನಲ್ಲಿ ಸಂದರ್ಶನ ಮಾಡಿ ಅಪರಾಧಿಗಳ ಮನಸ್ಸಿನ ಒಳಸುರುಳಿಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟು ಪಾಪಿಗಳ ಲೋಕಕ್ಕೆ ಕ್ಷ-ಕಿರಣವನ್ನು ಬೀರಿದ್ದಾರೆ. ಒಟ್ಟು 14 ಕತೆಗಳು ಇಲ್ಲಿ ನಿರೂಪಿಸಿದ್ದಾರೆ.

    Original price was: $2.40.Current price is: $1.44.
    Add to basket
  • -40%

    ಚಿತ್ತ ಚಿತ್ತಾರ

    0

    ಈ ಕೃತಿಯು ಶ್ರೀಮತಿ ಮಾಲತಿ ಮುದಕವಿಯವರು ಬರೆದ ಕಥೆಗಳನ್ನು ಒಳಗೊಂಡಿದೆ. ಮಹಿಳೆಯರ ಜೀವನದ ವಾಸ್ತವ ಚಿತ್ರಣ, ಬದಲಾದ ಪರಿಸ್ಥಿತಿಯಲ್ಲಿಯೂ ಮುಂದೆ ಸಾಗಿದ ಗಂಡು-ಹೆಣ್ಣಿನಲ್ಲಿಯ ತಾರತಮ್ಯ, ಹೆಣ್ಣಿನ ಅಸಹಾಯಕ ಸ್ಥಿತಿ, ಅಸ್ತಿತ್ವಕ್ಕೆ ಬಂದ ಹೊಸ ಸಮಸ್ಯೆಗಳು – ಇವೆಲ್ಲವುಗಳಿಗೆ ಪ್ರಸ್ತುತ ಕಥಾ ಸಂಕಲನವು ತನ್ನದೇ ಆದ ವಿಶಿಷ್ಟ ಕನ್ನಡಿಯನ್ನು ಹಿಡಿಯುತ್ತದೆ.

    Original price was: $1.20.Current price is: $0.72.
    Add to basket
  • -40%

    A Bond so Sacred

    0

    A Bond So Sacred tells the story of Raman, a satyagrahi, who adopts Kokila, an orphan.

    Original price was: $5.40.Current price is: $3.24.
    Add to basket
  • -40%

    ಟಕ್ ಟಿಕ್ ಪೆನ್ನು

    0

    ಟಕ್ ಟಿಕ್ ಪೆನ್ನು
    ಟಕ್ ಟಿಕ್ ಪೆನ್ನು ಈ ಪುಸ್ತಕವು ಶ್ರೀ ನರೇಂದ್ರ ಪೈ ಅವರು ಬರೆದ ಕಥೆಗಳನ್ನು ಒಳಗೊಂಡಿದೆ.

    Original price was: $0.48.Current price is: $0.29.
    Add to basket
  • -40%

    ಮೀಸೆ ಮಾವ

    0

    ಮೀಸೆ ಮಾವ

    ಮೀಸೆ ಮಾವ- ಶ್ರೀ ಭಾಸ್ಕರ ಹೆಗಡೆಯವರ ಕಥಾಸಂಕಲನ .

    Original price was: $1.56.Current price is: $0.94.
    Add to basket
  • -40%

    ತುಕ್ಕಪ್ಪಾ ಮಾಸ್ತರ

    0

    ತುಕ್ಕಪ್ಪಾ ಮಾಸ್ತರ
    (ಕತೆಗಳು)

    ಶ್ರೀ ಚಂದ್ರಕಾಂತ ಕುಸನೂರ

    ಈ ಕೃತಿಯು ಶ್ರೀ ಚಂದ್ರಕಾಂತ ಕುಸನೂರರ ೮ ವಿಭಿನ್ನ ಕತೆಗಳನ್ನು ಒಳಗೊಂಡಿದೆ.

    Original price was: $1.20.Current price is: $0.72.
    Add to basket
  • -52%

    ಮೊಲೆವಾಲು ನಂಜಾಗಿ

    0

    ಮೊಲೆವಾಲು ನಂಜಾಗಿ

    ಕತೆಗಳು

    ಶ್ರೀ ಮಲ್ಲಿಕಾರ್ಜುನ ಹಿರೇಮಠ

    ‘‘ಮೊಲೆವಾಲು ನಂಜಾಗಿ….’’ ಎಂಬ ಈ ಕಥಾ ಸಂಕಲನದ ತಲೆ ಬರಹವನ್ನು ಅವರು ಬಸವಣ್ಣನವರ ಒಂದು ವಚನದಿಂದ ಆಯ್ದುಕೊಂಡಿದ್ದಾರೆ. ಅಲ್ಲದೆ ಆ ಹೆಸರಿನ ಕಥೆಯೊಂದು ಈ ಸಂಕಲನದ ಕೇಂದ್ರದಲ್ಲಿಯೇ ಇದೆ. ‘‘ಅವನತಿ’’ ಕಥೆಯು ಮೇಲ್ನೋಟಕ್ಕೆ ಒಂದು ಗ್ರಾಮೀಣ ಪ್ರದೇಶದಲ್ಲಿಯ ಕಾಲೇಜಿನಲ್ಲಿ ನಡೆಯುವ ವಿದ್ಯಮಾನದಂತೆ ತೋರುತ್ತದೆ. ‘‘ತಯಾರಿ’’ ಕಥೆಯು  ಹೆಚ್ಚು ಜಟಿಲವಾಗಿದ್ದು ಕಥೆಯು ಸ್ತ್ರೀ ಕೇಂದ್ರಿತವಾಗಿದೆ. ವಿಧವೆಯೊಬ್ಬಳು ಮರುಮದುವೆಯಾಗಿದ್ದಾಳೆ. ಅವಳ ಮನೆಯವರ ವಿರೋಧದಿಂದಾಗಿ ಮತ್ತು ಗಂಡನ ತಂದೆ-ತಾಯಿಗಳಿಗೆ ಈ ಮದುವೆ ಸ್ವೀಕೃತವಾಗಿಲ್ಲವಾದುದರಿಂದ, ಪ್ರೀತಿಯ ಆಧಾರವೊಂದರಲ್ಲಿಯೇ ಅವರು ಬಾಳಬೇಕಾಗಿದೆ. ಆದರೆ ಪ್ರೀತಿಯೊಂದೇ ಆಧಾರವಾಗಿ ಬಾಳಬೇಕಿದ್ದ ಮಹಿಳೆಯು ತನ್ನ ಗಂಡನನ್ನೇ ಅರ್ಥಾತ್ ತನ್ನ ಪ್ರೀತಿಯನ್ನೇ ಕಳೆದುಕೊಂಡಾಗ ಬದುಕಲು ಅವಳು ಮಾಡಿಕೊಳ್ಳಬೇಕಾದ ಸಿದ್ಧತೆಯೇ ಈ ಕಥೆಯ ವಸ್ತು. ಸಂಕಲನದ ಕೊನೆಯ ಕಥೆ ‘‘ಮಾಗಿ’’ ಸ್ವಲ್ಪ ದೀರ್ಘವಾದ ಕತೆಯೆ. ಮೂವರು ಮಿತ್ರರು ಒಂದು ಪ್ರವಾಸದಲ್ಲಿ ತಮ್ಮನ್ನೇ ತಾವು ಗುರುತಿಸಿಕೊಳ್ಳುವ ವಿಧಾನವನ್ನು ಕುರಿತು  ಕಥೆಯು ಚಿಂತಿಸುತ್ತದೆ. 

    Original price was: $1.80.Current price is: $0.86.
    Add to basket
  • -29%

    Time Renewed !

    0

    A Scientific Thriller

    Original price was: $0.83.Current price is: $0.59.
    Add to basket
  • -40%

    ಮಹಾಪ್ರಸ್ಥಾನ

    0

    ಮಹಾಪ್ರಸ್ಥಾನ

    ಒಬ್ಬಳೇ ಹಿಂದೆ ಹಿಂದೆ ಅನುಸರಿಸುತ್ತಾ, ಪಾಂಡವರು ಮುಂದೆ ಮುಂದೆ ಸರಿಯುತ್ತಾ, ಇವಳ ಹೃದಯಾಳದ ನೋವಿನ ಪಾತಾಳಗರಡಿಯ ದರ್ಶನದಲ್ಲಿ ನನಗೆ ಅನೇಕ ತಾತ್ತ್ವಿಕ ಪ್ರಶ್ನೆಗಳನ್ನು ಎತ್ತಿ, ಆಯಾಮಗಳನ್ನು ವಿವರಿಸುವ ಅವಕಾಶವೂ ಲಭ್ಯವಾಯ್ತು. ಏನು ಈ “ಸಶರೀರಸ್ವರ್ಗಪ್ರಾಪ್ತಿ” ಎಂದರೆ? ಧರ್ಮಜ ಹಾಗೆ ಆಶಿಸಿದ್ದು ಯುಕ್ತವೇ? ತಮ್ಮಂದಿರಿಗೆ, ಪತ್ನಿಗೆ ಬಲಾತ್ಕಾರ ‘ಆರೋಹಣವೇ?’ “ಎಲ್ಲಿಗೆ” ಎಂದರೆ, ತಿಳಿಯದವರಿಗೆ “ಸ್ವರ್ಗಾರೋಹಣದ ಬಲಾತ್ಕಾರವೇಕೆ? ಅದು ಅವರಿಗೆ ಸಾಧ್ಯವೂ ಆಗಲಿಲ್ಲವೆಂದಾದರೆ, ಧರ್ಮಜನಿಗೆ ಮುಂಚೆ ಏಕೆ ತಿಳಿಯಲಿಲ್ಲ? ಮೂಲ ಮಹಾಭಾರತದಲ್ಲಿ ಈ ಯಾವುದೂ ಸ್ಪಷ್ಟ ಉತ್ತರ ಪಡೆದಿಲ್ಲ. ನಮಗೆ, ಇಂದಿನವರಿಗೆ ಪ್ರಶ್ನೆ ತೀರುವುದಿಲ್ಲ! ಹೇಗೆ ಬಗೆಹರಿಸುವುದು? ಈ ದಿಸೆಯಲ್ಲೇ ಇಲ್ಲಿ ಕಥೆ, ಅದರ ಸೂತ್ರ ನಡೆಯುತ್ತದೆ.

    Original price was: $1.80.Current price is: $1.08.
    Add to basket
  • -40%

    ಅಮೀನಪುರದ ಸಂತೆ

    0

    ಅಮೀನಪುರದ ಸಂತೆ
    ಕಥಾ ಸಂಕಲನ

    ಕನ್ನಡ ರಂಗಭೂಮಿಯ ವೈವಿಧ್ಯಗಳನ್ನು ಹೆಚ್ಚಿಸಿದ್ದಾರೆ. ಮಾಸ್ತಿ, ಅನಂತಮೂರ್ತಿ, ತೇಜಸ್ವಿ, ಕುಂ.ವೀರಭದ್ರಪ್ಪ ಮೊದಲಾದವರು ಸಣ್ಣಕತೆಗಳ ಆಳ, ವಿಸ್ತಾರವನ್ನು ಗಮನಾರ್ಹವಾಗಿ ವಿಸ್ತರಿಸಿದ್ದಾರೆ. ನವೋದಯ, ಪ್ರಗತಿಶೀಲ, ನವ್ಯ, ದಲಿತ-ಬಂಡಾಯಗಳೆಂಬ ಘಟ್ಟಗಳ ಮೂಲಕ ಹಾದು ಬಂದ ಕನ್ನಡ ಸಾಹಿತ್ಯವು ಈ ಶತಮಾನದ ಅಂಚಿನಲ್ಲಿ ಮತ್ತೆ ಹೊಸತನಕ್ಕಾಗಿ ಹಾತೊರೆಯುತ್ತಿದೆ. ಮಲ್ಲಿಕಾರ್ಜುನ ಹಿರೇಮಠರವರ ‘ಅಮೀನಪುರದ ಸಂತೆ’ಯಲ್ಲಿ ಅಂತಹ ಹೊಸ ಬಗೆಯ ತುಡಿತ ವೊಂದಿರುವುದನ್ನು ಪ್ರಸ್ತುತ ಪ್ರಬಂಧದಲ್ಲಿ ಗುರುತಿಸಲು ಪ್ರಯತ್ನಿಸಲಾಗಿದೆ.

    Original price was: $0.84.Current price is: $0.50.
    Add to basket
  • -40%

    ಶ್ರೀ ಭಾಗವತ ಕಥಾ ಪ್ರಪಂಚ

    0

    ಶ್ರೀ ಭಾಗವತ ಕಥಾ ಪ್ರಪಂಚ

    ಶ್ರೀ ಭಾಗವತಧಾರಾತೀರ್ಥ ವಾಹಿನಿ

    ಈ “ಶ್ರೀ ಭಾಗವತ ಧಾರಾತೀರ್ಥವಾಹಿನೀ-ಶ್ರೀ ಭಾಗವತ ಕಥಾ ಪ್ರಪಂಚ” ಗ್ರಂಥದ ಪ್ರಕೃತ ಸಂಪುಟದ ಬಹುಭಾಗವನ್ನು ನಾನು ಬರೆದೇ ೧೬- ಅಥವಾ ೧೮ ವರ್ಷಗಳಾಗಿರಬೇಕು. ಮೊದಲ ಭಾಗಕ್ಕೆ ಸೇರ್ಪಡೆಯಾಗಬೇಕಿದ್ದ ಇನ್ನಷ್ಟನ್ನು ಇದೀಗ ಸೇರಿಸಿ ಒಂದು ರೂಪಕ್ಕೆ ತಂದು, ನನ್ನ ಮಿತ್ರ ಶ್ರೀ ಸುಬ್ರಹ್ಮಣ್ಯ ಅವರ ಪ್ರಕಾಶನದಿಂದ ಪ್ರಕಟಿಸಿ ನಿಮ್ಮ ಕೈ ಸೇರುವಂತೆ ಮಾಡಲಾಗಿದೆ. “ಈ ಗ್ರಂಥ ಏಕೆ ಇಷ್ಟು ತಡವಾಯಿತು? ಇದರಲ್ಲೇನಿದೆ? ಇದರ ಅವಶ್ಯಕತೆಯೇನು?” ಎಂಬ ಬಗೆಗೆ ನಾಲ್ಕು ಮಾತು ವಿವರಣೆ ಅವಶ್ಯವಾಗುತ್ತದೆ.
    “ಶ್ರೀಕೃಷ್ಣಾವತಾರ” (ಎರಡು ಭಾಗಗಳು) ಬರೆದಾಗಿತ್ತು. ಮೊದಲನೆಯದು ಭಾಗವತ ದಶಮಸ್ಕಂಧದ ಪೂರ್ವಾರ್ಧದ ಕಾದಂಬರೀಕರಣ, ಕಥಾರೂಪ ನಿವೇದನೆಯಾಗಿದ್ದು “ತರಂಗ” ವಾರಪತ್ರಿಕೆಯಲ್ಲಿ ಪ್ರಕಟವಾಗಲು ವಾರಾವಾರಾ ಕಂತಿನಲ್ಲಿ ಬರುವಂತೆ ಬರೆಯಲಾಗಿದ್ದು ಪ್ರಕಟವೂ ಆಯಿತು.

    Original price was: $4.20.Current price is: $2.52.
    Add to basket
  • -40%

    ಅತಿಥಿ ದೇವೋ ಭವ

    0

    ಅತಿಥಿ ದೇವೋ ಭವ
    (ಅತಿಥಿಯ ರಸಪ್ರಸಂಗಗಳು)

    ಸ್ವಾಮಿರಾವ ಕುಲಕರ್ಣಿಯವರ  `ಅತಿಥಿ ದೇವೋ ಭವ’ ಎಂಬ ಅತಿಥಿಯ ಅನುಭವಗಳ ರಸಪ್ರಸಂಗಗಳ ಕುರಿತಾಗಿ ಬರೆದ ಪ್ರಬಂಧಗಳ ಸಂಕಲನ.
    “ಕನ್ನಡ ಸಾಹಿತ್ಯದಲ್ಲಿ ಇದೊಂದು ಹೊಸ ಪ್ರಯೋಗದ ಅಪರೂಪದ ಸಾಹಿತ್ಯ ಪ್ರಕಾರವಾಗಿದೆ.” ೧೯೯೮ರಲ್ಲಿ ಪ್ರಕಟವಾದ ನನ್ನ `ರಂಗನಾಟಕದ ರಸಪ್ರಸಂಗಳು’- ರಂಗಾನುಭವದ ಕಿರುಲೇಖನಗಳ ಕೃತಿಯ ಬಗ್ಗೆ ಹಿರಿಯ ಸಾಹಿತಿ ದಿ. ಡಾ. ಹಾ. ಮಾ. ನಾಯಕರ ಮಾತುಗಳಿವು. ರಂಗಭೂಮಿಯ ಹಿರಿಯರಾದ ಮಾಸ್ಟರ್ ಹಿರಣ್ಣಯ್ಯನವರು “ನಾನೂ ಹಲವು ದಶಕಗಳಿಂದ ನಾಟಕ ಮಾಡತಿದ್ದೀನಿ. ಇಂತಹ ಅನೇಕ ಘಟನೆಗಳು, ಪ್ರಸಂಗಗಳು ನಡೆದಿವೆ. ನಿಮ್ಮ `ರಂಗನಾಟಕಗಳ ರಸಪ್ರಸಂಗಗಳು’ ಓದಿದ ಮೇಲೆ, ನಾನು ಇಂತಹ ಪ್ರಸಂಗಗಳನ್ನು ಬರೆಯದೇ ತಪ್ಪು ಮಾಡಿದೆ ಅನಿಸುತ್ತದೆ.’ ಈರ್ವರು ಹಿರಿಯರ ಈ ಮಾತುಗಳೇ `ಅತಿಥಿ ದೇವೋಭವ’ ಬರಹಕ್ಕೆ ಮೂಲ ಪ್ರೇರಣೆಯಾಗಿವೆ.

    Original price was: $0.84.Current price is: $0.50.
    Add to basket
  • -40%

    ಮ್ಯೂಟೇಶನ್

    0

    ಮ್ಯೂಟೇಶನ್
    (ಕಥಾಸಂಕಲನ)

    ಇದು ‘ಆರಾಮಕುರ್ಚಿ ಮತ್ತು ಕತೆಗಳು’ ನಂತರದ, ನನ್ನ ಎರಡನೆಯ ಕಥಾಸಂಕಲನವಾಗಿದೆ. ಈ ಕತೆಗಳನ್ನು ಬೇರೆ ಬೇರೆ ಕಾಲಘಟ್ಟದಲ್ಲಿ ಬರೆಯಲಾಗಿದೆ. ಸಣ್ಣಕತೆಗಳು ನನ್ನನ್ನು ತಿಳಿಗೊಳಿಸುತ್ತಾ ಬಂದಿವೆ. ಬರೆದಾದ ಮೇಲೆ ಅವುಗಳಲ್ಲಿ ನನ್ನ ಮುಖ ನೋಡುತ್ತಾ ಸಂತೋಷಪಟ್ಟಿದ್ದೇನೆ. ಅಲ್ಲಿ ಕಂಡ ಇತರ ಮುಖಗಳು ಕೂಡ ಅಚ್ಚರಿ ಹುಟ್ಟಿಸಿವೆ. ಬರೆಯುವ ಕ್ರಿಯೆಯೇ ನನ್ನನ್ನು ನಾನು ಶುದ್ಧೀಕರಿಸಿಕೊಳ್ಳುವ ಕ್ರಿಯೆಯಾಗಿದೆ. ಬರೆದಾದ ಮೇಲೆ ಅದು ಮೂಡಿಸುವ ಪ್ರಸನ್ನತೆ ಬಿಡುಗಡೆಯ ಭಾಗ್ಯ ಕೊಟ್ಟಿದೆ. ನಾಟಕ, ಕಾವ್ಯ ಸಾಹಿತ್ಯದ ಪ್ರಮುಖ ಅಂಗಗಳಾದರೂ ಕೂಡ, ಕತೆ-ಕಾದಂಬರಿ ಮಾತ್ರ ಪೂರ್ಣದೇಹಿಗಳಂತೆ ಕಂಡಿವೆ. ಬಹುತೇಕ ಓದುಗರು ಸಣ್ಣಕತೆಗಳಿಗೆ ಭೇಟಿಕೊಡುವಷ್ಟು, ಉಳಿದ ಪ್ರಕಾರಗಳಿಗೆ ಭೇಟಿ ಕೊಡಲಾರರು. ಸಣ್ಣಕತೆಯ, ಸಣ್ಣದೆನ್ನುವ ಭಾವನೆಯೇ ಮನುಷ್ಯನ ಸಾವನ್ನು ನೆನಪಿಸುತ್ತಿರಬಹುದು! ಹುಟ್ಟು ಸಾವಿನ ಮಧ್ಯದ ಬದುಕು ಬರಿ ಸಣ್ಣ ಕತೆಯಾಗಿರಬಹುದು! ಹೀಗಾಗಿ ಓದುಗರಿಗೆ ಇದರ ಬಗ್ಗೆ ವಿಲಕ್ಷಣವಾದ ಸೆಳೆತವಿದೆ.

    Original price was: $0.84.Current price is: $0.50.
    Add to basket
  • -40%

    ಕಾಲು ದಾರಿಯ ಕಥನಗಳು

    0

    ಕಾಲು ದಾರಿಯ ಕಥನಗಳು
    (ಜಾನಪದ-ಜೀವನ-ಕಥನ)

    ಶ್ರೀ ಕೃಷ್ಣಮೂರ್ತಿ ಹನೂರು ಇವರ `ಕಾಲು ದಾರಿಯ ಕಥನಗಳು’ (ಜಾನಪದ-ಜೀವನ-ಕಥನ) ಕೃತಿಯನ್ನು ಚಂದಾದಾರರಿಗೆ ತಲುಪಿಸಲು ಸಂತೋಷವಾಗುತ್ತಿದೆ. ಶ್ರೀ ಹನೂರು ಅವರು ತಮ್ಮ ಜೀವನದ ಅಮೂಲ್ಯ ಭಾಗವನ್ನು ಜಾನಪದ ಜೀವನದೊಂದಿಗೆ ಕಳೆದು, ಅದು ನಶಿಸಿ ಹೋಗದಂತೆ ತಮ್ಮ ಅಕ್ಷರ ಸಾಹಿತ್ಯದ ಮೂಲಕ ಕೊನೆಯವರೆಗೂ ಉಳಿಯುವಂತೆ ನೋಡಿಕೊಂಡಿದ್ದಾರೆ. ಅವರಿಗೆ ಕನ್ನಡ ಸಾಹಿತ್ಯ ಋಣಿಯಾಗಿರಬೇಕು.

    Original price was: $3.12.Current price is: $1.87.
    Add to basket
  • -40%

    ಮಲೆನಾಡಿನ ರೋಚಕ ಕತೆಗಳು

    0

    ಮಲೆನಾಡಿನ ರೋಚಕ ಕತೆಗಳು
    (ಸುಧಾ ಧಾರಾವಾಹಿ `ಕಾಫಿನಾಡಿನ ಕಿತ್ತಳೆ’ಯ ಪರಿಷ್ಕೃತ ಮುದ್ರಣ)
    ಶತಮಾನದಲ್ಲಿ ಇದ್ದಕ್ಕಿದ್ದಂತೆ ಚಿಗುರೊಡೆದು ದಿಕ್ಕು ದಿಕ್ಕುಗಳಲ್ಲಿ ಹರಡತೊಡಗಿತು. ಅದರಲ್ಲೂ ತೀರ ಇತ್ತೀಚಿನ ಕಂಪ್ಯೂಟರ್, ಮೊಬೈಲ್ ಮತ್ತು ಇಂಟರ್ ನೆಟ್ ಗಳು ಕ್ರಾಂತಿಯನ್ನೇ ಮಾಡಿದವು. ನಮ್ಮ ಭೂಮಂಡಲದ ಒಳಗಿರುವ ದೇಶಗಳು ನಮಗೀಗ ನೆರೆಮನೆಗಳಾಗಿವೆ. ನಾವೀಗ ಇಪ್ಪತ್ತೊಂದನೆ ಶತಮಾನದ ಹೊಸ್ತಿಲಲ್ಲಿದ್ದೇವೆ. ನಾವು ಅಂದರೆ ಮಧ್ಯ ವಯಸ್ಸು ದಾಟಿದವರು ಕಳೆದ ಶತಮಾನದ ಮತ್ತು ಮುಂದಿನ ಆಧುನಿಕ ಜನಾಂಗದ ನಡುವಿನ ಕೊಂಡಿಗಳಾಗಿದ್ದೇವೆ. ಬಹಳಷ್ಟು ಹಳೆಯ ಸಂಗತಿಗಳು ನಮ್ಮೊಂದಿಗೇ ಅಳಿಸಿ ಹೋಗಲಿವೆ. ಏಕೆಂದರೆ ಈಗಿನ ಮಕ್ಕಳು ಮೊಬೈಲ್ ಮತ್ತು ಕಂಪ್ಯೂಟರುಗಳನ್ನು ಕೈಯಲ್ಲಿ ಹಿಡಿದೇ ಎಂಬಂತೆ ಜನ್ಮ ತಾಳುತ್ತಿದ್ದಾರೆ. ನಡೆದೇ ಶಾಲೆಗೆ ಹೋಗುವ, ಮನೆಗಳಿಗೆ ಹೋಗಿ ಸಂಗತಿ ತಿಳಿಸುವ, ಪತ್ರ ಮುಖೇನ ವಿಷಯ ರವಾನಿಸುವ, ಟೆಲಿಗ್ರಾಂ ಕಳಿಸುವ ಕಾಲವಿತ್ತು ಎನ್ನುವುದರ ಅರಿವೇ ಇಲ್ಲದಂತೆ ಬೆಳೆಯುತ್ತಿದ್ದಾರೆ ಈಗಿನ ಮಕ್ಕಳು. ಈಗೊಂದು ನಲವತ್ತು ವರ್ಷಗಳ ಹಿಂದಿನ ದಶಕದ ಕಾಲಘಟ್ಟದಲ್ಲಿ ಹೀಗೆಲ್ಲಾ ಇತ್ತು ಎಂದರೆ ನಂಬಲಾಗದ ಸ್ಥಿತಿ ಅವರದು! ಅಂಥವರಿಗೆ `ಮಲೆನಾಡು ಎಂದರೆ ಹೇಗಿರುತ್ತದೆ? ಆಗಿನ ನಮ್ಮ ಬದುಕು ಹೇಗಿತ್ತು? ಅದರೊಳಗೂ ಯಾವೆಲ್ಲಾ ರೋಚಕ ಸಂಗತಿಗಳಿರುತ್ತಿದ್ದವು ಎನ್ನುವುದು ತಿಳಿಯುವುದಾದರೂ ಹೇಗೆ?’ ಇದರಲ್ಲಿ ವಿವರಿಸಿದ ಘಟನೆಗಳ ಚಿತ್ರಣದಿಂದ ಅದರ ಬಗ್ಗೆ ಒಂದು ಸ್ಪಷ್ಟ ಕಲ್ಪನೆ ಬರಬಹುದು.

    Original price was: $1.56.Current price is: $0.94.
    Add to basket
  • -40%

    ಕಾಣುತಿದೆ ನದಿಯ ಆಚೆಯ ದಂಡೆ

    0

    ಕಾಣುತಿದೆ ನದಿಯ ಆಚೆಯ ದಂಡೆ
    ಕಾಣುತಿದೆ ನದಿಯ ಆಚೆಯ ದಂಡೆ- ಈ ಸಂಗ್ರಹದಲ್ಲಿಯ ಕೆಲವೊಂದು ಕಥೆಗಳು “ಇದು ನನ್ನ ಜೀವನ. ನನ್ನ ಮನಸ್ಸಿನಂತೆ ತುಂಬಿದ ಭಾವರಂಗಗಳನ್ನು ಉಪಯೋಗಿಸುವ ಪೂರ್ಣ ಅಧಿಕಾರ ನನಗಿದೆ” – ಈ ರೀತಿಯ ಸ್ವಾಭಿಮಾನವನ್ನುಂಟು ಮಾಡುವಂಥವುಗಳು ಹಾಗೂ ಪರಂಪರೆಯಲ್ಲಿಯ ಒಳ್ಳೆಯದನ್ನು ಸ್ವತಃ ಬಿತ್ತುವ ಮಹಿಳೆಯರ ಕಥೆಗಳು ಇಲ್ಲಿವೆ.

    Original price was: $1.44.Current price is: $0.86.
    Add to basket
  • -40%

    ಮಳೆ ನಿಂತು ಹೋದ ಮೇಲೆ

    0

    ಮಳೆ ನಿಂತು ಹೋದ ಮೇಲೆ
    ಮಳೆ ನಿಂತು ಹೋದ ಮೇಲೆ ಇದು ಪ್ರಚಲಿತ ವಿದ್ಯಮಾನಗಳ ಮೇಲೆ ಬೆಳಕೆರೆವ ಕಿರು ವೈಚಾರಿಕ ಲೇಖನಗಳ ಸಂಗ್ರಹ. ಈ ಸಂಕಲನದ ‘ಸಿಇಓ ಆಫ್ ದ ಹೋಮ’, ‘ಕೆಪಿಒದಲ್ಲಿ ಸಂಧಿ’, ‘ತ್ಸುನಾಮಿ’ಯಂತಹ ಲೇಖನಗಳು ಲೇಖಕಿಯ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆ, ಬೆಳವಣಿಗೆಗಳ ಸೂಕ್ಷ್ಮ ನೋಟವನ್ನು ಅನಾವರಣಗೊಳಿಸುತ್ತದೆ. ‘ಬದಲಾಗುತ್ತಿರುವ ಅತ್ತೆ-ಸೊಸೆಯರ ಸಂಬಂಧ’ ಮತ್ತು ‘ಪ್ರಬುದ್ಧ ಮಹಿಳೆಯ ಸಾಮಾಜಿಕ ಜವಾಬ್ದಾರಿ’ ಲೇಖನಗಳಲ್ಲಿ ಲೇಖಕಿ ಇಂದಿನ ಸುಶಿಕ್ಷಿತ ಮತ್ತು ಪ್ರಜ್ಞಾವಂತ ಮಹಿಳೆ ಇಡಬೇಕಾದ ಎಚ್ಚರಿಕೆಯ ಹೆಜ್ಜೆ ಗುರುತುಗಳ ನೀಲನಕ್ಷೆಯಿದೆ. ವಿವಿಧ ಸಂಬಂಧಗಳಲ್ಲಿದ್ದುಕೊಂಡು ಮಹಿಳೆ ನಿರ್ವಹಿಸಬೇಕಾದ ಕರ್ತವ್ಯ ಮತ್ತು ಜವಾಬ್ದಾರಿಗಳ ಮಾಹಿತಿಯನ್ನು ನೀಡುತ್ತವೆ.

    Original price was: $0.96.Current price is: $0.58.
    Add to basket
  • -40%

    ಮಾತು ಹೇಗಿದ್ದರೆ ಚೆನ್ನ ?

    0

    ಮಾತು ಹೇಗಿದ್ದರೆ ಚೆನ್ನ ?
    (ವ್ಯಕ್ತಿತ್ವ ವಿಕಸನ)
    ಮಾತಿನಿಂದ ಏನೆಲ್ಲಾ ಸಾಧ್ಯ? ಎಂಬ ಪ್ರಶ್ನೆಗೆ `ಮಾತಿನಿಂದ ಎಲ್ಲವೂ ಸಾಧ್ಯ’ ಎನ್ನುವುದೊಂದೇ ಉತ್ತರ. ಮಾತನ್ನು ಬರೀ ಆಡಲು ಕಳಿತರೆ ಸಾಲದು. ಹೇಗೆ? ಎಲ್ಲಿ? ಎಷ್ಟು ಆಡಬೇಕು? ಹೇಗೆ ಆಡಬಾರದು? ಯಾಕೆ ಆಡಬಾರದು? ಎನ್ನುವುದನ್ನೂ ತಿಳಿದಿರಬೇಕು. ಮಾತಿನ ಬಗ್ಗೆ ಎಲ್ಲವೂ ಈ ಪುಸ್ತಕದಲ್ಲಿ ಇದೆ ಎಂದಲ್ಲ. ಅದು ಸಾಧ್ಯವೂ ಇಲ್ಲ. ಆದರೆ ಕನಿಷ್ಟ ಇಷ್ಟನ್ನಾದರೂ ತಿಳಿದಿದ್ದರೆ ಒಂದಿಷ್ಟು ವ್ಯಕ್ತಿತ್ವ ವಿಕಸನ ಸಾಧ್ಯ.

    Original price was: $1.44.Current price is: $0.86.
    Add to basket
  • -40%

    ಪರಿತ್ಯಕ್ತ ಮತ್ತು ಇತರ ಕತೆಗಳು

    0

    ಪರಿತ್ಯಕ್ತ ಮತ್ತು ಇತರ ಕತೆಗಳು
    ಮೊದಲ ಸ್ಪಂದನ
    ಇವರ ‘ಪರಿತ್ಯಕ್ತ ಮತ್ತು ಇತರ ಕಥೆಗಳು’ ಎಂಬ ಪ್ರಥಮ ಕಥಾ ಸಂಕಲನದಲ್ಲಿ ಆಧುನಿಕ ಪರಿಸರದಲ್ಲಿ ಮಹಿಳಾ ಸಂವೇದನೆ ಕುರಿತ ಕಥೆಗಳೇ ಇವೆ. ವಿವಿಧ ಪತ್ರಿಕೆಗಳಲ್ಲಿ ಅನೇಕ ವೈಚಾರಿಕ ಲೇಖನಗಳನ್ನು ಪ್ರಕಟಿಸಿದ ಲೇಖಕಿ ಅದರ ಮುಂಬಡ್ತಿ ಎಂಬಂತೆ ಕಥೆಗಳಿಗೆ ಕೈ ಇಕ್ಕಿರುವುದು ಸಹಜವೇ ಆಗಿದೆ. ಹತ್ತು ಕಥೆಗಳ ಹರಹಿನಲ್ಲಿ ಅವರ ಅನುಭವಗಳು ಅನಾವರಣಗೊಂಡಿವೆ.

    Original price was: $0.72.Current price is: $0.43.
    Add to basket
  • -40%

    ಹೊಸ ಹಾಡಿನ ಪಲ್ಲವಿ ಮತ್ತು ಇತರ ಕಥೆಗಳು

    0

    ಅತಿ ಸಂಶಯ ಪ್ರವೃತ್ತಿಯ ಗಂಡ, ಅವನಿಂದ ಹಿಂಸೆಗೊಳಗಾಗುವ ಪತ್ನಿ ‘ಹೊಸ ಹಾಡಿನ ಪಲ್ಲವಿ’ ಕತೆಯ ಕೇಂದ್ರಬಿಂದು. ಗಂಡ ಕೊನೆಗೆ ಬದಲಾಗುವ ಸನ್ನಿವೇಶ ಹೃದಯಸ್ಪರ್ಶಿಯಾಗಿದೆ. ‘ತಿರುವು’ ಅನೀರಿಕ್ಷಿತ ತಿರುವು ಹೊಂದಿರುವ ಕತೆ. ಸ್ವಾರಸ್ಯಕರವಾಗಿ ನಿರೂಪಿತವಾಗಿದೆ. ಅಂತರ್ಜಾತಿ ವಿವಾಹಕ್ಕೆ ಮನೆಯವರ ಅಡ್ಡಿ, ಅದಕ್ಕಾಗಿ ಮಗ ಅನುಸರಿಸುವ ತಂತ್ರ ಇಲ್ಲಿಯ ವಿಶೇಷ.

    Original price was: $0.72.Current price is: $0.43.
    Add to basket
  • -40%

    ಅಕ್ವೇರಿಯಮ್ ಮೀನು

    0

    ಅಕ್ವೇರಿಯಮ್ ಮೀನು
    ಇದು ನನ್ನ ಮೊದಲ ಕವನ ಸಂಕಲನ. ಆಗೀಗ ಬರೆಯುತ್ತ ಬಂದ ಕವಿತೆಗಳಲ್ಲಿ ಕೆಲವನ್ನು ಆಯ್ದು ಇಲ್ಲಿ ಸಂಗ್ರಹಿಸಿದ್ದೇನೆ. ಕೆಲವು ರೂಪಾಂತರಗಳೂ ಇವೆ. ನಲ್ವತ್ತೊಂದು ವರ್ಷಗಳ ಹಿಂದೆ ನನ್ನ ಕವನ ಸಂಕಲನ ‘ಅಕ್ವೇರಿಯಮ್ ಮೀನು’ ಪ್ರಕಟವಾಯಿತು.

    Original price was: $0.84.Current price is: $0.50.
    Add to basket
  • -40%

    ಹಾಗೇ ಸುಮ್ಮನೇ

    0

    ಹಾಗೇ ಸುಮ್ಮನೇ
    ಮನೆಯಲ್ಲೇ ಜರುಗಿದ ಹಾಸ್ಯ ಪ್ರಸಂಗಗಳನ್ನು  ಆಗಾಗ್ಗೆ ಬರೆದು  ಮಯೂರ, ಕಸ್ತೂರಿ ತುಷಾರಕ್ಕೆ ಕಳುಹಿಸುತ್ತಿದ್ದೆ. ಅದನ್ನೋದಿದ ಸಾಕಷ್ಟು ಜನ  ಫೊನಾಯಿಸಿ ಅಭಿನಂದಿಸುತ್ತಿದ್ದರು. ಹೀಗಾಗಿ ದೊಡ್ಡ ಪ್ರಸಂಗಗಳನ್ನೇ: ಸೇರಿಸಿ  ಬರೆಯಬಾರದೇಕೆ ಎಂದು ಅನ್ನಿಸಿದ್ದುಂಟು, ಬಾಲ್ಯದಲ್ಲಿ ಜರುಗಿದ ಘಟನೆಗಳೋ,  ಪತಿಯೊಂದಿಗಿನ ಹಾಸ್ಯ ಪ್ರಸಂಗವೋ ತೆಗೆದುಕೊಂಡು ಬರದೆ, ಮನೆಗೆ ಬಂದ  ಅಣ್ಣ ಅಕ್ಕಂದಿರ ಮುಂದೆ ಓದಿ ತೋರಿಸುತ್ತಿದ್ದೆ.  ಅವರ ಮುಖದಲ್ಲಿ ಅರಳಿದ  ಮುಗುಳ್ನಗೆ ನನ್ನಲ್ಲಿ ಬರೆಯುವುದಕ್ಕೆ ಪ್ರೆರೇಪಿಸಿತು ಎಂದು ಹೇಳಬಹುದು.

    Original price was: $0.60.Current price is: $0.36.
    Add to basket
  • -40%

    ಕೋತಿಕಥೆ

    0

    ಕೋತಿಕಥೆ
    ಬೆಸಗರಹಳ್ಳಿ ರಾಮಣ್ಣ
    ರಂಗರೂಪ
    ಸುರೇಶ ಬಿ.
    ಇದೊಂದು ರಾಜಕೀಯ ನಾಟಕ.

    Original price was: $0.84.Current price is: $0.50.
    Add to basket
  • -40%

    ಕಾಡು ಮಲ್ಲಿಗೆ

    0

    ಕಾಡು ಮಲ್ಲಿಗೆ
    ೧೯೮೪ರಲ್ಲಿ ವ್ಯಾಸರಾಯ ಬಲ್ಲಾಳರ ಕೃತಿಗಳನ್ನು ಕುರಿತ ವಿಚಾರ ಸಂಕಿರಣ ನಡೆದಾಗ ಈ ನಾಟಕವನ್ನು ಸಿದ್ಧಪಡಿಸಲಾಯಿತು.
    “ಟೆರೇಸ್ ಥಿಯೇಟರ್” ಎಂಬ ಆಲೋಚನೆಯಡಿಯಲ್ಲಿ ಕಲಾಮಂದಿರದ ಮಹಡಿಯ ಮೇಲೆ ಮೊದಲ ಪ್ರಯೋಗವನ್ನು ಬಿ.ಸುರೇಶ ನಿರ್ದೇಶನದಲ್ಲಿ ಚಿತ್ರಾ ತಂಡದ ಗೆಳೆಯರು ಅಭಿನಯಿಸಿದರು. ಬೆಂಗಳೂರು ದೂರದರ್ಶನದ ಮೂಲಕ ೧೯೯೧ರಲ್ಲಿ ನಾಟಕವು ಪ್ರಸಾರವಾಯಿತು.
    ಈ ನಾಟಕ ಕತೆ ಭಾರತಕ್ಕೆ ಸ್ವಾತಂತ್ರ್ಯ ಬಂದ ಆರಂಭದ ದಿನಗಳದ್ದು ಸುಮಾರು ೧೯೫೦ರ ಆಸುಪಾಸು. ಆದರೆ ೧೯೭೦ರ ದಶಕದ ಭರತರಾಜ್ ಸಿಂಗ್ ಅವರ ವಿವರವೂ ಮಾತಾಗಿ ನಾಟಕದಲ್ಲಿ ಬರುತ್ತದೆ.
    ಹೀಗೆ ‘ಕಾಲ’ವನ್ನು ಹಾರುವುದು ವಿಮರ್ಶಾ ಮಾನ್ಯವಲ್ಲ, ಆದರೆ ಕಷ್ಟವಲ್ಲ. ಅಭಿನಯಿಸುವವರಿಗೆ ಎದುರಿಗೆ ಕೂತವರು ಪ್ರಬುದ್ಧರು ಎಂಬ ನಂಬಿಕೆ ಇದ್ದರೆ ಸಾಕು.
    ಹೀಗೆಯೇ ೧೯೬೦ರ ದಶಕದ ಮಿಲ್ಲುಗಳ ಮುಷ್ಕರ ಹಾಗೂ ಗೋಲಿಬಾರು ಸಹ ಈ ನಾಟಕದೊಳಗೆ ಪ್ರಸ್ತಾಪವಾಗುತ್ತದೆ. ಈ ‘ಕಾಲೋಲ್ಲಂಘನ” ಕಥನ ಕಾರಣಕ್ಕಾಗಿ ಮಾತ್ರ ಆಗಿದೆ.

    Original price was: $0.84.Current price is: $0.50.
    Add to basket
  • -40%

    ಬೆಟ್ಟದ ತಪ್ಪಲಿನಿಂದ ಕಡಲ ತಡಿಗೆ

    0

    ಬೆಟ್ಟದ ತಪ್ಪಲಿನಿಂದ ಕಡಲ ತಡಿಗೆ
    ಬೆಟ್ಟದ ತಪ್ಪಲಿನಿಂದ ಕಡಲ ತಡಿಗೆ ಪುಸ್ತಕವು ಬೆಟ್ಟದ ತಪ್ಪಲ ಮಾರಿಯಾದ ಹುಲಿಯನ್ನು ಮನೆಗೆ ತಂದು, ಅದು ಪಾಪ ರೂಪದ ಬೇತಾಳನಾಗಿ ಬೆಂಬತ್ತಿ ಹೆಗಲೇರಿ ಅನುದಿನವೂ ಪೀಡಿಸುತ್ತಿರಲಾಗಿ, ಅದರ ಜೀವನವನ್ನು ದುರಂತದಲ್ಲಿ ಅಂತ್ಯಗೊಳಿಸಿದ ಘಟನೆಯಾಗಿದೆ.

    Original price was: $0.96.Current price is: $0.58.
    Add to basket
  • -40%

    ಈಡೊಂದು ಹುಲಿಯೆರಡು 

    0

    ಈಡೊಂದು ಹುಲಿಯೆರಡು
    ‘ಬೇಟೆಯ ನೆನಪುಗಳು ‘ ಕನ್ನಡ ಜನತೆಯಲ್ಲಿ ಮೂಡಿಸಿದ ಪರಿಣಾಮ ರಮಣೀಯತೆಗೆ ಸರಿಮಿಗಿಲೆನಿಸಿ ‘ ಈಡೊಂದು ಹುಲಿಯೆರಡು’ ಎಂಬೀ ಕೃತಿಯು ಮತ್ತಷ್ಟು ಬಣ್ಣ ಬೆಡಗು ಬೆರಗುಗಳನ್ನು ಹೊತ್ತು ವಿಜೃಂಭಿಸುವುದರಲ್ಲಿ ಸಂಶಯವಿಲ್ಲ.  ಇಲ್ಲಿರುವುದು ಬರಿಯ ಬೇಟೆಯ ವ್ಯಸನದ ಕ್ರೌರ್ಯದ ರಕ್ತರಂಜಿತ ಕಥನವಲ್ಲ; ನಾಲ್ಕೈದು ದಶಕಗಳ ಹಿಂದಿನ ತುಳುವ ಮಲೆನಾಡಿನ ಬದುಕಿನ ಜೀವಂತ ಚಿತ್ರಣ; ಒಂದು ಸೀಮೆಯ ಜನದ ನಡವಳಿಕೆಯನ್ನು ನಿಚ್ಚಳವಾಗಿ ಬಣ್ಣಿಸಿದ ಕುಂಚದ ಕುಶಲತೆ.

    Original price was: $1.80.Current price is: $1.08.
    Add to basket
  • -40%

    ಬೇಟೆಯ ನೆನಪುಗಳು

    0

    ಬೇಟೆಯ ನೆನಪುಗಳು
    ಪ್ರವಾಸ ಕಥನ ಸಾಹಿತ್ಯದ ಒಂದು ಪ್ರಕಾರ; ಅದರಲ್ಲಿ ಕತೆಗಾರಿಕೆಯ ಅಂಶ ಅಡಕವಾಗಿರುವುದರಿಂದ ಆ ಪ್ರಬಂಧಪ್ರಕಾರ ಹೆಚ್ಚಿನ ಮೆಚ್ಚುಗೆ ಪಡೆದಿದೆ. `ಬೇಟೆಯ ನೆನಪುಗಳು’ ಎಂಬೀ ತೆರನ ಬರವಣಿಗೆ ಅದೇ ಹಾದಿಯಲ್ಲಿ ಸಾಗಿದರೂ, ಅದಕ್ಕಿಂತಲೂ ಆಕರ್ಷಕವಾಗಿ ಮೂಡಿಬಂದ ಒಂದು ಮಹತ್ತರ ಸಾಹಿತ್ಯ ಪ್ರಕಾರವೆನ್ನಬೇಕು. ಇದರಲ್ಲಿನ ವರ್ಣನೆ ಕಾದಂಬರಿಗಳ ವರ್ಣನೆಯ ಮಟ್ಟವನ್ನು ಮುಟ್ಟಬಲ್ಲುದು; ಅನೇಕ ಕುತೂಹಲಕಾರೀ ಘಟನೆಗಳು ಅಲ್ಲಲ್ಲಿ ಮೂಡಿ ಬಂದಿರುವುದರಿಂದ ಪತ್ತೇದಾರಿ ಕತೆಗಳ ಆಸಕ್ತಿ ಕೆರಳಿಸುವ ಅಂಶಗಳೂ ಇಲ್ಲಿ ವಿಪುಲವಾಗಿ ತುಂಬಿರುತ್ತವೆ.

    Original price was: $1.80.Current price is: $1.08.
    Add to basket
  • -40%

    ಬೇಟೆಯ ಉರುಳು

    0

    ಬೇಟೆಯ ಉರುಳು
    ತುಳುನಾಡ ಮಲೆನಾಡ ಮಣ್ಣಿನ – ಕನ್ನಡದ ಕೊಡುಗೆ. ಈ ಮಾತಿಗೆ ಪೂರಕವಾಗಿ ಭಾವೀ ಜನಾಂಗಕ್ಕಾಗಿ `ಬೇಟೆಯ ಉರುಳು’ – ಎಂಬ ಈ ಕೃತಿಯನ್ನು ರಚಿಸಿದ್ದಾರೆ. ಬೇಟೆಯ ಕುರಿತಾದ ಇವರ ಅನುಭವ ಬತ್ತದ ತೊರೆಯಾಗಿ ಹರಿಯುತ್ತದೆ.
    ಇಲ್ಲಿ ಚಿಕ್ಕ ಪುಟ್ಟ ಬೇಟೆಗಳಲ್ಲಿರುವ ಜಾಣ್ಮೆ, ವಿಶಿಷ್ಟತೆಗಳ ಸಜೀವ ವಿವರಣೆಗಳಿವೆ. ಬೇಟೆಯ ಹವ್ಯಾಸ ಕಾರಣಾಂತರಗಳಿಂದ ದೂರವಾಗುತ್ತಿರುವ ಈ ಕಾಲದಲ್ಲಿ ಈ ಸಂಬಂಧವಾದ ಸಾಕ್ಷ್ಯಚಿತ್ರದ ದಾಖಲೆಯು ಇದಾಗಿದೆ. ಬಾಯಿಮಾತಿನ ಅನುಭವವು ಬರೆಹರೂಪವಾಗಿ ಚಿತ್ರವತ್ತಾಗಿ ಇಲ್ಲಿ ಉಳಿಯುತ್ತದೆ.
    ಭಾವೀಜನಾಂಗಕ್ಕಾಗಿ ಬೇಟೆಯ ಉರುಳು ಎಂಬ ಈ ಕೃತಿಯು ಶ್ರೀ ಜತ್ತಪ್ಪ ರೈಗಳ ಈ ಹಿಂದಿನ ಎರಡು ಕೃತಿಗಳನ್ನೂ ಇನ್ನೊಂದು ಮುಖವಾಗಿ ದಾಟಿಹೋಗಿದೆ ಎನ್ನಬೇಕು. ಪುರಾಣ ಚರಿತ್ರೆಗಳ ಕಾಲದಲ್ಲಿ ದೊರೆಯುವ ಬೇಟೆಯ ಸಂದರ್ಭಗಳ ಸಂಶೋಧಕ ಮೌಲ್ಯವನ್ನು ಈ ಕೃತಿಯು ಎತ್ತಿ ತೋರಿಸುತ್ತದೆ. ಇದು ಇದರ ಹೆಚ್ಚಳ. ಮಕ್ಕಳಿಗಾಗಿ ಕಥೆ ಹೇಳುವಾಗ ಕೊಂಡಿ ಕಳಚಿಕೊಳ್ಳದಂತೆ ಕುತೂಹಲ ಕೊನರಿಡುವಂತೆ ಮಾಡುವ ತನ್ನದೇ ಆದ ಕಥಾನಕದ ತಂತ್ರವಿಲ್ಲಿ ಎದ್ದು ತೋರುತ್ತಿದೆ. ಕಥೆಗಳನ್ನು ಹೇಳುವಾಗ ವಿವರಣೆಗಾಗಿ ತಡಕಾಡುವುದಿಲ್ಲ. ಅವೆಲ್ಲ ತಾವಾಗಿಯೇ ಒಂದರ ಹಿಂದೊಂದು ಹರಿದುಬಂದಿವೆ.

    Original price was: $1.80.Current price is: $1.08.
    Add to basket