ರಾಘವೇಂದ್ರ ಪಾಟೀಲರ ಹೊಸ ಕಾದಂಬರಿ `ಗೈರ ಸಮಜೂತಿ’ಯು ಒಂದು ಪಿಂಡಗೊಂಡ ಸಶಕ್ತ ಸಂಕಥನವಾಗಿದೆ. ಗೈರ ಸಮಝೂತಿ ಎಂದರೆ ತಪ್ಪು ಕಲ್ಪನೆ, ಭ್ರಾನ್ತಿ. ಈ ಶಬ್ದದ ಅರ್ಥದ ಪದರುಗಳು ವಿಸ್ತಾರವಾದ ಅರ್ಥವ್ಯಾಪ್ತಿಯುಳ್ಳ ಶಕ್ತಿ ಉಳ್ಳವುಗಳಾಗಿವೆ.
$5.40Original price was: $5.40.$4.86Current price is: $4.86.
ಭಾರತದ ಸಂಗೀತದಲ್ಲಿ ಸಪ್ತ ಸ್ವರಗಳು ಒಂದೇ ಆದರೂ ಅವುಗಳನ್ನು ರಾಗಗಳ ಮೂಲಕ ಪ್ರಸ್ತುತ ಪಡಿಸುವ ವಿಚಾರದಲ್ಲಿ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಈ ಎರಡು ಪ್ರಕಾರಗಲು ಭಿನ್ನವಾಗಿ ಕವಲೊಡೆದಿರುವುದು ವಿಶೇಷ. ದಕ್ಷಿಣ ಭಾರತದಲ್ಲಿ ಕರ್ನಾಟಕ ಸಂಗೀತ ಮುನ್ನೆಲೆಗೆ ಬಂದಂತೆ, ಉತ್ತರ ಭಾರತದಲ್ಲಿ ಹಿಂದೂಸ್ತಾನಿ ಸಂಗೀತವು ರಾಜಾಶ್ರಯಗಳ ಮೂಲಕ ಮಜರಂಜನೆಯ ಭಾಗವಾಗಿ ಮತ್ತು ದೇವರ ಸ್ಮರಣೆ ಹಾಗೂ ಸ್ತುತಿಸುವ ಮಾಧ್ಯಮಗಳಾಗಿ ಇಂದಿಗೂ ಭಾರತದ ಜನಮಾನಸದಲ್ಲಿ ಅಗ್ರಸ್ಥಾನ ಪಡೆದಿವೆ.
$2.40Original price was: $2.40.$2.16Current price is: $2.16.
ಕಳೆದ ಒಂದು ದಶಕದಿಂದ ಗಂಭೀರವಾದ ಸಂಶೋಧನೆಯನ್ನು ಕೈಗೊಂಡ ಡಾ.ಲಲಿತ ಕೆ.ಪಿ.ಅವರು ತಮ್ಮ ಡಾಕ್ಟರೇಟ್ ಪದವಿ ಪಡೆಯುವ ಮೊದಲು ‘ವಿವಕ್ಷಾ’ . ಕೊಡಗಿನ ಮೂಲೆ ಮೂಲೆಗಳಲ್ಲಿ ಓಡಾಡಿ ಸಂಗ್ರಹಿಸಿದ ಮೌಖಿಕ ಆಕರಗಳನ್ನು ಪ್ರಕಟಗೊಂಡ ಸಂಶೋಧನಾ ಕ್ರತಿಗಳ ಹಾಗೂ ಪ್ರಚಲಿತದಲ್ಲಿರುವ ಸೈದ್ಧಾಂತಿಕ ಪರಿಪೇಕ್ಷ್ಯಗಳ ಜೊತಗೆ ತುಲನೆ ಮಾಡಿ ಕೊಡಗಿನ ಸಾಹಿತ್ಯ, ಜಾನಪದ,ಚರಿತ್ರೆ, ಭಾಷಾ ವಿಜ್ಞಾನಕ್ಕೆ ಸಂಬಂಧಿಸಿದಂತಹ ಉತ್ಕೃಷ್ಠ ಮಾಹಿತಿಗಳನ್ನು ಡಾ.ಲಲಿತ ಅವರು ಸೈದ್ಧಾಂತಿಕರಿಸಿದ್ದಾರೆ. ಭಾಷೆ ಹಾಗೂ ಸಮಾಜ ವಿಜ್ಞಾನಗಳ ಅಧ್ಯಯನಗಳಲ್ಲಿ ತೊಡಗಿಸಿಕೊಂಡ ಸಂಶೋಧಕರಿಗೆ ಈ ಕೃತಿ ಭಿನ್ನವಾದ ಒಳನೋಟಗಳನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.
$1.20Original price was: $1.20.$0.96Current price is: $0.96.
ಹಸಿರುಶಾಲು ಬಾರುಕೋಲು – ಪ್ರೊ. ಎಂ.ಡಿ.ಎನ್. ಅವರ ಚಿಂತನೆ ಹಾಗೂ ಹೋರಾಟಗಳ ವಿಶ್ಲೇಷಣೆ
ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರು ರೈತ ಚಳವಳಿಗೆ ಓನಾಮ ಹಾಡಿದವರು. ರೈತ ಚಳವಳಿ ಎಂದರೆ ಪ್ರೊ. ಎಂಡಿಎನ್ ನೆನಪಾಗಲೇಬೇಕು. ಅವರ ಮೊನಚು ಮಾತು ರೈತರನ್ನು ಸಂಘಟಿಸಿದ ರೀತಿ ಎಲ್ಲವನ್ನು ಡಾ. ಬಿ.ಸಿ.ಸವಿತ ಅವರು ಕಣ್ಣಿಗೆ ಕಟ್ಟುವಂತೆ ಈ ಕೃತಿಯಲ್ಲಿ ವಿಶ್ಲೇಷಿಸಿದ್ದಾರೆ.
$4.20Original price was: $4.20.$3.78Current price is: $3.78.