• -40%

    ಹೊಸ ಹಾಡಿನ ಪಲ್ಲವಿ ಮತ್ತು ಇತರ ಕಥೆಗಳು

    0

    ಅತಿ ಸಂಶಯ ಪ್ರವೃತ್ತಿಯ ಗಂಡ, ಅವನಿಂದ ಹಿಂಸೆಗೊಳಗಾಗುವ ಪತ್ನಿ ‘ಹೊಸ ಹಾಡಿನ ಪಲ್ಲವಿ’ ಕತೆಯ ಕೇಂದ್ರಬಿಂದು. ಗಂಡ ಕೊನೆಗೆ ಬದಲಾಗುವ ಸನ್ನಿವೇಶ ಹೃದಯಸ್ಪರ್ಶಿಯಾಗಿದೆ. ‘ತಿರುವು’ ಅನೀರಿಕ್ಷಿತ ತಿರುವು ಹೊಂದಿರುವ ಕತೆ. ಸ್ವಾರಸ್ಯಕರವಾಗಿ ನಿರೂಪಿತವಾಗಿದೆ. ಅಂತರ್ಜಾತಿ ವಿವಾಹಕ್ಕೆ ಮನೆಯವರ ಅಡ್ಡಿ, ಅದಕ್ಕಾಗಿ ಮಗ ಅನುಸರಿಸುವ ತಂತ್ರ ಇಲ್ಲಿಯ ವಿಶೇಷ.

    Original price was: $0.72.Current price is: $0.43.
    Add to basket
  • -40%

    ಅಕ್ವೇರಿಯಮ್ ಮೀನು

    0

    ಅಕ್ವೇರಿಯಮ್ ಮೀನು
    ಇದು ನನ್ನ ಮೊದಲ ಕವನ ಸಂಕಲನ. ಆಗೀಗ ಬರೆಯುತ್ತ ಬಂದ ಕವಿತೆಗಳಲ್ಲಿ ಕೆಲವನ್ನು ಆಯ್ದು ಇಲ್ಲಿ ಸಂಗ್ರಹಿಸಿದ್ದೇನೆ. ಕೆಲವು ರೂಪಾಂತರಗಳೂ ಇವೆ. ನಲ್ವತ್ತೊಂದು ವರ್ಷಗಳ ಹಿಂದೆ ನನ್ನ ಕವನ ಸಂಕಲನ ‘ಅಕ್ವೇರಿಯಮ್ ಮೀನು’ ಪ್ರಕಟವಾಯಿತು.

    Original price was: $0.84.Current price is: $0.50.
    Add to basket
  • -40%

    ಷಾಪುರದ ಸೀನಿಂಗಿ-ಸತ್ಯ

    0

    ಷಾಪುರದ ಸೀನಿಂಗಿ-ಸತ್ಯ
    ಇದು ೧೯೯೨ರಲ್ಲಿ ಆರಂಭಿಸಿ ೧೯೯೫ರಲ್ಲಿ ಬರವಣಿಗೆ ಮುಗಿಸಿದ ನಾಟಕ. ಈ ನಾಟಕ ಬರೆಯಲು ಕಾರಣರಾದವರು ಬಿ. ಜಯಶ್ರೀ. ಅವರ ತಂಡಕ್ಕಾಗಿಯೇ ನಾಟಕ ಕಟ್ಟಲು ಹೊರಟವನಿಗೆ ಹಿರಿಯರು, ಮೇಷ್ಟರು ಆದ ಕ.ವೆಂ. ರಾಜಗೋಪಾಲ ಅವರು ಜನಪದ ಗೀತೆಯೊಂದನ್ನು ಕೇಳಿಸಿ ವಸ್ತುವನ್ನು ಒದಗಿಸಿದರು. ಅಲ್ಲಿಂದಾಚೆಗೆ ಅನೇಕ ಊರುಗಳನ್ನು ತಿರುಗಿ, ಅನೇಕ ಪವಾಡ ಸದೃಶ ಸತ್ಯಗಳನ್ನು ಸ್ವತಃ ಕಂಡೆ. ಜೀವಂತ ದೇವರುಗಳ ದರುಶನ ಪಡೆದೆ. ಈ ಪಯಣದಲ್ಲಿ ಜೊತೆಯಾದ ಗುಲ್ಬರ್ಗದ ವಿಜಯಹಾಗರಗುಂಡಿಗಿಯ ಸಹವಾಸವು ನಾನು ಕಂದ್ದನ್ನ ವಿಭಿನ್ನವಾಗಿ ಅರ್ಥೈಸಲು ಸಹಾಯಮಾಡಿತು.

    Original price was: $0.84.Current price is: $0.50.
    Add to basket
  • -40%

    ಹಾಗೇ ಸುಮ್ಮನೇ

    0

    ಹಾಗೇ ಸುಮ್ಮನೇ
    ಮನೆಯಲ್ಲೇ ಜರುಗಿದ ಹಾಸ್ಯ ಪ್ರಸಂಗಗಳನ್ನು  ಆಗಾಗ್ಗೆ ಬರೆದು  ಮಯೂರ, ಕಸ್ತೂರಿ ತುಷಾರಕ್ಕೆ ಕಳುಹಿಸುತ್ತಿದ್ದೆ. ಅದನ್ನೋದಿದ ಸಾಕಷ್ಟು ಜನ  ಫೊನಾಯಿಸಿ ಅಭಿನಂದಿಸುತ್ತಿದ್ದರು. ಹೀಗಾಗಿ ದೊಡ್ಡ ಪ್ರಸಂಗಗಳನ್ನೇ: ಸೇರಿಸಿ  ಬರೆಯಬಾರದೇಕೆ ಎಂದು ಅನ್ನಿಸಿದ್ದುಂಟು, ಬಾಲ್ಯದಲ್ಲಿ ಜರುಗಿದ ಘಟನೆಗಳೋ,  ಪತಿಯೊಂದಿಗಿನ ಹಾಸ್ಯ ಪ್ರಸಂಗವೋ ತೆಗೆದುಕೊಂಡು ಬರದೆ, ಮನೆಗೆ ಬಂದ  ಅಣ್ಣ ಅಕ್ಕಂದಿರ ಮುಂದೆ ಓದಿ ತೋರಿಸುತ್ತಿದ್ದೆ.  ಅವರ ಮುಖದಲ್ಲಿ ಅರಳಿದ  ಮುಗುಳ್ನಗೆ ನನ್ನಲ್ಲಿ ಬರೆಯುವುದಕ್ಕೆ ಪ್ರೆರೇಪಿಸಿತು ಎಂದು ಹೇಳಬಹುದು.

    Original price was: $0.60.Current price is: $0.36.
    Add to basket
  • -40%

    ಕೋತಿಕಥೆ

    0

    ಕೋತಿಕಥೆ
    ಬೆಸಗರಹಳ್ಳಿ ರಾಮಣ್ಣ
    ರಂಗರೂಪ
    ಸುರೇಶ ಬಿ.
    ಇದೊಂದು ರಾಜಕೀಯ ನಾಟಕ.

    Original price was: $0.84.Current price is: $0.50.
    Add to basket
  • -40%

    ಓಡಬೇಡ ಎದುರಿಸು…

    0

    ಓಡಬೇಡ ಎದುರಿಸು…
    ಉತ್ತುಂಗ ಬದುಕಿಗೆ ಧೀಮಂತ ಚಿಂತನೆಗಳು
    ಈ ಕೃತಿಯು ಪರಮ ಪೂಜ್ಯ ಸ್ವಾಮಿ ವಿಜಯಾನಂದ ಸರಸ್ವತಿಯವರು ತಮ್ಮ ಆಶ್ರಮ ಕಳೆದ ಹಲವಾರು ವರ್ಷಗಳಿಂದ ಪ್ರಕಟಿಸುತ್ತಿರುವ ‘ನವ ಚಿಂತನ’ ತ್ರೈಮಾಸಿಕ ಪತ್ರಿಕೆಗೆ ಬರೆಯುತ್ತ ಬಂದಿರುವ ಸಂಪಾದಕೀಯ ಲೇಖನಗಳಿಂದ ಆಯ್ದ ಮೌಲಿಕ ಲೇಖನಗಳನ್ನು ಒಳಗೊಂಡಿದೆ. ವರ್ತಮಾನದಲ್ಲಿ ಕುಸಿಯುತ್ತಿರುವ ನೈತಿಕಪ್ರಜ್ಞೆಯನ್ನು, ರಾಷ್ಟ್ರಪ್ರೇಮವನ್ನು, ನಿರ್ಭಯತೆಯನ್ನು, ವಿವೇಕವನ್ನು, ವಿನಯವನ್ನು, ಧೀರೊದ್ಧಾತ್ತ ನಾಯಕತ್ವದ ಗುಣಗಳನ್ನು ವಿಶೇಷವಾಗಿ ಯುವಮನಸ್ಸುಗಳಲ್ಲಿ ಮರುಬಿತ್ತನೆ ಮಾಡುವ ತೀವ್ರತರವಾದ ತುಡಿತ ಪ್ರಸ್ತುತ ಲೇಖನಗಳಲ್ಲಿ ವ್ಯಾಪ್ತವಾಗಿರುವುದನ್ನು ಯಾರೂ ಪರಿಭಾವಿಸಬಾರದು. ಬದುಕಿನ ಹತಾಶೆಗೆ, ಅರಿವಿನ ಅಭಾವಕ್ಕೆ, ಮನುಷ್ಯತ್ವದ ಕೊರತೆಗೆ, ಬದುಕಿನ ಅನರ್ಥಕತೆಗೆ, ತಂದೆ-ತಾಯಿಗಳ ಬೇಜವಾಬ್ದಾರಿಕೆಗೆ, ಅಭಿಮಾನಶೂನ್ಯತೆಗೆ, ಮಾನಸಿಕ ಅನಾರೋಗ್ಯಕ್ಕೆ ಸರಿಯಾದ ಚಿಕಿತ್ಸೆ ನೀಡಬಲ್ಲ ಮತ್ತು ಬದುಕಿಗೆ ದಾರಿದೀಪವಾಗಬಲ್ಲ ಕೃತಿ ಇದಾಗಿದೆ.

    Original price was: $1.32.Current price is: $0.79.
    Add to basket
  • -40%

    ರೆಕ್ಕೆ ಕಟ್ಟುವಿರಾ

    0

    ರೆಕ್ಕೆ ಕಟ್ಟುವಿರಾ:
    ೧೯೪೫ ರಲ್ಲಿ, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅಮೆರಿಕಾ ಮೊದಲಬಾರಿಗೆ ಅಣುಬಾಂಬನ್ನು ಜಪಾನಿನ ಮೇಲೆ ಎಸೆಯಿತು. ಹಿರೋಷಿಮಾ, ನಾಗಾಸಾಕಿ ನಗರದಲ್ಲಿ ಎರಡು ಲಕ್ಷಕ್ಕೂ ಹೆಚ್ಚಿನ ಜನತೀರಿಕೊಂಡರು. ಲಕ್ಷಾಂತರ ಜನ ಅಂಕವಿಕಲರಾದರು. ಜೀವ ಉಳಿಸಿಕೊಂಡ ಒಬ್ಬೊಬ್ಬರ ಬದುಕೂ ದಾರುಣವಾಯಿತು. ಅದಾಗಿ ಮೂರು ತಲೆಮಾರುಗಳು ದಾಟಿದರೂ ಹುಟ್ಟುವ ಮಕ್ಕಳ ಕೈಕಾಲುಗಳು ಊನವಾಗಿವೆ. ಅಣುಬಾಂಬ್ ಎಂತಹ ವಿನಾಶಕಾರಿ ಎಂಬುದಕ್ಕೆ ಇಡೀ ಸಮುದಾಯ ಸಾಕ್ಷಿಯಾಗಿ ನಿಂತಿದೆ.
    ಇಂತಹ ಸಮುದಾಯದ ನಡುವೆ ಪುಟ್ಟ ಸಂಸಾರ, ಸುಂದರ ಬದುಕು ಎಂದು ಕನಸು ಕಟ್ಟಿಕೊಂಡು ಬದುಕುತ್ತಿದ್ದ “ಕಿನ್ಲು” ಎಂಬ ಮಹಿಳೆ ಬಾಂಬಿನ ಅನುಭವವನ್ನು, ಅದು ತನ್ನ ಕನಸುಗಳನ್ನು ನುಚ್ಚುನೂರು ಮಾಡಿದ್ದನ್ನು ಕುರಿತು ೨೫ ವರ್ಷಗಳಾದ ನಂತರ ಹೇಳಿಕೊಂಡ ವಿವರಗಳು ಈ ನಾಟಕಕ್ಕೆ ಕಾರಣವಾಗಿದೆ.

    Original price was: $0.84.Current price is: $0.50.
    Add to basket
  • -40%

    ಕಾಡು ಮಲ್ಲಿಗೆ

    0

    ಕಾಡು ಮಲ್ಲಿಗೆ
    ೧೯೮೪ರಲ್ಲಿ ವ್ಯಾಸರಾಯ ಬಲ್ಲಾಳರ ಕೃತಿಗಳನ್ನು ಕುರಿತ ವಿಚಾರ ಸಂಕಿರಣ ನಡೆದಾಗ ಈ ನಾಟಕವನ್ನು ಸಿದ್ಧಪಡಿಸಲಾಯಿತು.
    “ಟೆರೇಸ್ ಥಿಯೇಟರ್” ಎಂಬ ಆಲೋಚನೆಯಡಿಯಲ್ಲಿ ಕಲಾಮಂದಿರದ ಮಹಡಿಯ ಮೇಲೆ ಮೊದಲ ಪ್ರಯೋಗವನ್ನು ಬಿ.ಸುರೇಶ ನಿರ್ದೇಶನದಲ್ಲಿ ಚಿತ್ರಾ ತಂಡದ ಗೆಳೆಯರು ಅಭಿನಯಿಸಿದರು. ಬೆಂಗಳೂರು ದೂರದರ್ಶನದ ಮೂಲಕ ೧೯೯೧ರಲ್ಲಿ ನಾಟಕವು ಪ್ರಸಾರವಾಯಿತು.
    ಈ ನಾಟಕ ಕತೆ ಭಾರತಕ್ಕೆ ಸ್ವಾತಂತ್ರ್ಯ ಬಂದ ಆರಂಭದ ದಿನಗಳದ್ದು ಸುಮಾರು ೧೯೫೦ರ ಆಸುಪಾಸು. ಆದರೆ ೧೯೭೦ರ ದಶಕದ ಭರತರಾಜ್ ಸಿಂಗ್ ಅವರ ವಿವರವೂ ಮಾತಾಗಿ ನಾಟಕದಲ್ಲಿ ಬರುತ್ತದೆ.
    ಹೀಗೆ ‘ಕಾಲ’ವನ್ನು ಹಾರುವುದು ವಿಮರ್ಶಾ ಮಾನ್ಯವಲ್ಲ, ಆದರೆ ಕಷ್ಟವಲ್ಲ. ಅಭಿನಯಿಸುವವರಿಗೆ ಎದುರಿಗೆ ಕೂತವರು ಪ್ರಬುದ್ಧರು ಎಂಬ ನಂಬಿಕೆ ಇದ್ದರೆ ಸಾಕು.
    ಹೀಗೆಯೇ ೧೯೬೦ರ ದಶಕದ ಮಿಲ್ಲುಗಳ ಮುಷ್ಕರ ಹಾಗೂ ಗೋಲಿಬಾರು ಸಹ ಈ ನಾಟಕದೊಳಗೆ ಪ್ರಸ್ತಾಪವಾಗುತ್ತದೆ. ಈ ‘ಕಾಲೋಲ್ಲಂಘನ” ಕಥನ ಕಾರಣಕ್ಕಾಗಿ ಮಾತ್ರ ಆಗಿದೆ.

    Original price was: $0.84.Current price is: $0.50.
    Add to basket
  • -40%

    ತಲೆಬುರುಡೆ ಬಿಡಿಸಿದ ಕೊಲೆ ರಹಸ್ಯ

    0

    ತಲೆ ಬುರುಡೆ
    ಬಿಡಿಸಿದ ಕೊಲೆ ರಹಸ್ಯ
    ಮೂಲ : ಶ್ರೀ ಕೆ. ರಾಮಯ್ಯ ರೈ
    ಅನುವಾದ: ಕೆದಂಬಾಡಿ ಜತ್ತಪ್ಪ ರೈ
    ಸಮಾಜದ ಈ ಸ್ವಾಸ್ಥ್ಯ ಕಾಪಾಡಲು ನಾವೇ ಪೊಲೀಸ್ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಪೊಲೀಸರು ನಾಗರಿಕರ ಸ್ನೇಹಿತರಾಗಿದ್ದರೆ ಅದರಿಂದ ಎಲ್ಲರಿಗೂ ಹಿತ. ಒಳ್ಳೆಯ ಪೊಲೀಸ್ ಅಧಿಕಾರಿಗಳಿಗೆ ಯಾವತ್ತೂ ಜನರ ನೈತಿಕ ಬೆಂಬಲ ಸಿಕ್ಕಿಯೇ ಸಿಗುತ್ತದೆ. ಪೊಲೀಸರೇ ನಾಗರಿಕರ ಸಹಕಾರ ಪಡೆಯದೆ ದೂರ ಸರಿದರೆ ಈ ಮಾತು ವಿರೋಧಾಭಾಸದ್ದು ಅನಿಸುತ್ತದೆ.
    ಆದರೆ ನಮ್ಮ ನಡುವೆ ಶ್ರೀ ಕೆ. ರಾಮಯ್ಯ ರೈ ಅವರಂಥ ದಕ್ಷ, ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳೂ ಇದ್ದರು. ಅವರ ಅನುಭವ ನೆನಪುಗಳೇ ಇಂದಿನವರಿಗೆ ಆದರ್ಶವಾಗಲಿ. ಅವರ ಸ್ವಾನುಭವದ ಸತ್ಯಕಥೆ ‘ತಲೆಬುರುಡೆ’ ಕಾದಂಬರಿ ರೂಪದಲ್ಲಿ ಸ್ವಾರಸ್ಯಕರವಾಗಿ ಹರಿದು ಬಂತು.

    Original price was: $2.10.Current price is: $1.26.
    Add to basket
  • -40%

    ಬೆಟ್ಟದ ತಪ್ಪಲಿನಿಂದ ಕಡಲ ತಡಿಗೆ

    0

    ಬೆಟ್ಟದ ತಪ್ಪಲಿನಿಂದ ಕಡಲ ತಡಿಗೆ
    ಬೆಟ್ಟದ ತಪ್ಪಲಿನಿಂದ ಕಡಲ ತಡಿಗೆ ಪುಸ್ತಕವು ಬೆಟ್ಟದ ತಪ್ಪಲ ಮಾರಿಯಾದ ಹುಲಿಯನ್ನು ಮನೆಗೆ ತಂದು, ಅದು ಪಾಪ ರೂಪದ ಬೇತಾಳನಾಗಿ ಬೆಂಬತ್ತಿ ಹೆಗಲೇರಿ ಅನುದಿನವೂ ಪೀಡಿಸುತ್ತಿರಲಾಗಿ, ಅದರ ಜೀವನವನ್ನು ದುರಂತದಲ್ಲಿ ಅಂತ್ಯಗೊಳಿಸಿದ ಘಟನೆಯಾಗಿದೆ.

    Original price was: $0.96.Current price is: $0.58.
    Add to basket
  • -40%

    ಈಡೊಂದು ಹುಲಿಯೆರಡು 

    0

    ಈಡೊಂದು ಹುಲಿಯೆರಡು
    ‘ಬೇಟೆಯ ನೆನಪುಗಳು ‘ ಕನ್ನಡ ಜನತೆಯಲ್ಲಿ ಮೂಡಿಸಿದ ಪರಿಣಾಮ ರಮಣೀಯತೆಗೆ ಸರಿಮಿಗಿಲೆನಿಸಿ ‘ ಈಡೊಂದು ಹುಲಿಯೆರಡು’ ಎಂಬೀ ಕೃತಿಯು ಮತ್ತಷ್ಟು ಬಣ್ಣ ಬೆಡಗು ಬೆರಗುಗಳನ್ನು ಹೊತ್ತು ವಿಜೃಂಭಿಸುವುದರಲ್ಲಿ ಸಂಶಯವಿಲ್ಲ.  ಇಲ್ಲಿರುವುದು ಬರಿಯ ಬೇಟೆಯ ವ್ಯಸನದ ಕ್ರೌರ್ಯದ ರಕ್ತರಂಜಿತ ಕಥನವಲ್ಲ; ನಾಲ್ಕೈದು ದಶಕಗಳ ಹಿಂದಿನ ತುಳುವ ಮಲೆನಾಡಿನ ಬದುಕಿನ ಜೀವಂತ ಚಿತ್ರಣ; ಒಂದು ಸೀಮೆಯ ಜನದ ನಡವಳಿಕೆಯನ್ನು ನಿಚ್ಚಳವಾಗಿ ಬಣ್ಣಿಸಿದ ಕುಂಚದ ಕುಶಲತೆ.

    Original price was: $1.80.Current price is: $1.08.
    Add to basket
  • -40%

    ವಿಚ್ಛೇದನಾ ಪರಿಣಯ

    0

    ವಿಚ್ಛೇದನಾ ಪರಿಣಯ
    ಕತೆಯನ್ನು ಹುಡುಕುವ ಒಂದು ಕಾದಂಬರಿ
    ಸುಮಾರು ಏಳೆಂಟು ತಿಂಗಳ ಕಾಲಾವಧಿಯಲ್ಲಿ ಬರೆದ ಈ ಕಾದಂಬರಿಯ ಈ ರೂಪಕ್ಕೆ ಕಾರಣರಾದವರು ರಚನೆಯ ಬೇರೆ ಬೇರೆ ಹಂತಗಳಲ್ಲಿ ಓದಿ ತಮ್ಮ ಮೆಚ್ಚುಗೆ-ಟೀಕೆ-ನಿರೀಕ್ಷೆಗಳನ್ನು ತಿಳಿಸಿದ ಆತ್ಮೀಯರು. ಈ ಆತ್ಮೀಯರಿಗೆಲ್ಲ ಕೃತಜ್ಞನಾಗಿದ್ದೇನೆ.

    Original price was: $0.84.Current price is: $0.50.
    Add to basket
  • -40%

    ಗಿರಿಜಾ ಕಲ್ಯಾಣ

    0

    ಬಿ. ಸುರೇಶ ಅವರ
    ಗಿರಿಜಾ ಕಲ್ಯಾಣ
    ಒಂದು ಆಧುನಿಕ ಪುರಾಣ
    ಈ ನಾಟಕವನ್ನು ಬರೆದವರು ಬಿ.ಸುರೇಶ ಅವರು ಬರೆದಿದ್ದಾರೆ. ಈ ನಾಟಕದ ಪ್ರಥಮ ಪ್ರದರ್ಶನವು ಸ್ಪಂದನ ತಂಡದಿಂದ ಬಿ.ಜಯಶ್ರೀ ಅವರ ನಿರ್ದೇಶನದಲ್ಲಾಯಿತು. ನಂತರ ಮುಂಬೈನ ಇಷ್ಟಾ ರಂಗತಂಡದವರು ಎಂ.ಎಸ್.ಸತ್ಯು ಅವರ ನಿರ್ದೇಶನದಲ್ಲಿ ಶೈಲಜಾ ಅವರ ಹಿಂದಿ ಅನುವಾದವನ್ನು “ಗಿರಜಾ ಕೆ ಸಪ್ನೆ” ಎಂದು ರಂಗಕ್ಕೆ ತಂದರು.

    Original price was: $1.32.Current price is: $0.79.
    Add to basket
  • -40%

    ಬಾಳೂರ ಗುಡಿಕಾರ

    0

    ‘ಬಾಳೂರ ಗುಡಿಕಾರ’
    ಹೆನ್ರಿಕ್ ಇಬ್ಸೆನ್ ನ ‘ಮಾಸ್ಟರ್ ಬಿಲ್ಡರ್’ ನಾಟಕದ
    ಸ್ಫೂರ್ತಿಯಿಂದ ರಚಿತವಾದ ನಾಟಕ.
    ಈ ನಾಟಕದ ಪ್ರಥಮ ಪ್ರದರ್ಶನವು ಡಿಸೆಂಬರ್ ೫, ೨೦೧೦ರಂದು ನವದೆಹಲಿಯ ಕಾಮಾನಿ ರಂಗಮಂದಿರದಲ್ಲಿ ನಡೆದ ಇಬ್ಸೆನ್ ನಾಟಕೋತ್ಸವದಲ್ಲಿ ಆಯಿತು.

    Original price was: $1.32.Current price is: $0.79.
    Add to basket
  • -40%

    ಯವನ ಯಾಮಿನಿ ಕಥಾಚರಿತ್ರವು

    0

    ಯವನಯಾಮಿನಿ ಕಥಾಚರಿತ್ರವು
    ಅಥವಾ
    ಭ್ರೂಣದಿಂದ ‘ಬಯಲಿ’ನವರೆಗೆ ಎಂಬ ‘ಫ್ಯೂಚರಿಸ್ಟಿಕ್’ ಐತಿಹಾಸಿಕ ನಾಟಕವು
    ಈ ನಾಟಕವನ್ನು ಬಿ ಸುರೇಶ ರವರು ರಚಿಸಿದ್ದಾರೆ.

    Original price was: $0.84.Current price is: $0.50.
    Add to basket
  • -39%

    ತಲಲಂ ಪಂ ಪಂ 

    0

    ತಲಲಂ ಪಂ ಪಂ
    (ಮಕ್ಕಳ ಕವನಗಳು)
    ಶ್ರೀಮತಿ ಶ್ವೇತಾ ನರಗುಂದ ಅವರ ‘ಕಿಂಕಿಣಿ’ ಕವನ ಸಂಕಲನವನ್ನು 2006 ರಲ್ಲಿ ಜಡಭರತ ಪ್ರಕಾಶನದಿಂದ ಪ್ರಕಟಿಸಲಾಗಿತ್ತು. ಕಳೆದ 2-3 ವರ್ಷಗಳಲ್ಲಿ ಅವರ ಸೃಜನಶೀಲ ಪ್ರಕ್ರಿಯೆ ಮಕ್ಕಳ ಓಲೈಕೆಯ ಹಿನ್ನೆಲೆಯಲ್ಲಿ ಅವರಿಗಾಗಿ ಗುಣುಗುಣಿಸುತ್ತಿರುವ ಲಾಲಿ ಪದ್ಯಗಳ ಜೊತೆಗೆ ಶಬ್ದಗಳ ಕಿಂಕಿಣಿ ನಾದವನ್ನು ಶಬ್ದಗಳಲ್ಲಿ ಹಿಡಿದಿಟ್ಟು ಇತರರಿಗೂ ನೀಡುವಂತೆ ಪ್ರಯತ್ನಿಸಿದ್ದಾರೆ.

    Original price was: $0.36.Current price is: $0.22.
    Add to basket
  • -40%

    ಕರ್ಣಾಟಕ ಭಾಗವತ – 1

    0

    ಕರ್ಣಾಟಕ ಭಾಗವತ
    ಪ್ರಥಮ ಸಂಪುಟ (೧-೯ ಸ್ಕಂಧಗಳು)
    ತಾಳೆಗರಿಗಳಲ್ಲಿದ್ದ ‘ಕರ್ಣಾಟಕ ಭಾಗವತ’ದ ಬರವಣಿಗೆಯನ್ನು ಗ್ರಂಥರೂಪದಲ್ಲಿ ಹೊರತರುವ ‘ಕಲ್ಪನೆ ಹಾಗೂ ಅದರ ಪೂರ್ವ-ವೃತ್ತಾಂತ ಹೀಗಿದೆ. ಚಿತ್ರದುರ್ಗ ಜಿಲ್ಲೆಯ, ಹೊಳಲ್ಕೆರೆ ಗ್ರಾಮದ ತಮ್ಮ ಪುರಾತನ ಕಾಲದ ಮನೆಯಲ್ಲಿ ‘ನಿತ್ಯಾತ್ಮ ಶುಕಯೋಗಿ’, ವಿರಚಿತ ಕನ್ನಡ ಭಾಗವತ ಮಹಾಕಾವ್ಯವನ್ನು ಅವರ ವಂಶದ ಪೂರ್ವಿಕರಾದ ‘ಶ್ರೀ ರಾಮಣ್ಣಯ್ಯವರು’ ೧೭೫೫ ರಲ್ಲಿ ತಾಳೆಗರಿಯಲ್ಲಿ ಬರೆದ್ದರು. ಈ ಬೃಹತ್ಗ್ರಂಥದ ಇರುವಿಕೆಯ ಬಗ್ಗೆಯೂ, ಚಂದ್ರಶೇಖರ್, ಅವರಿಗೆ ಸರಿಯಾಗಿ ಗೊತ್ತಿರಲಿಲ್ಲ. ೧೯೯೧ ರಲ್ಲಿ ಅಂರ್ತರಾಷ್ಟ್ರೀಯ ಸಮ್ಮೆಳನದಲ್ಲಿ ಭಾಗವಹಿಸಲು ಭಾರತಕ್ಕೆ ಬಂದಾಗ, ಇವುಗಳ ಇರುವಿಕೆಯ ಅರಿವಾಯಿತು. ನಮ್ಮ ಭಾರತದೇಶದ ಪುರಾತನ ಸಂಸ್ಕೃತಿಯ ಕುರುಹಾಗಿ ಗ್ರಂಥವನ್ನು ನೋಡಿದೊಡನೆಯೇ, ಅದನ್ನು ಪರಿಷ್ಕರಿಸಿ ನವೀನ ರೀತಿಯ ಮುದ್ರಣದಲ್ಲಿ ತರುವ ಉತ್ಕಟವಾದ ಆಕಾಂಕ್ಷೆಗಳು ಬಂದವು. ೨೩೨ ತಾಳೆಗರಿಗಳ ಚಿಕ್ಕ ಅಕ್ಷರಗಳಲ್ಲಿ ಬರೆದ ಸುಮಾರು ೧೨,೦೦೦, ಭಾಮಿನಿ ಷಟ್ಪದಿಯ ಪದ್ಯಗಳನ್ನು ಪರಿಷರಿಸುವ ಕಾರ್ಯ ೧೯೯೨ ರಲ್ಲಿ ಪ್ರಾರಂಭವಾಗಿ ೨೦೦೮ ಸಂಪನ್ನವಾಯಿತು. ಸುಮಾರು ೫೦೦ ವರ್ಷಗಳ ಹಿಂದೆ ರಚಿಸಿದ ತಾಳೆಗರಿ ಗ್ರಂಥಗಳಿಂದ ಉಳಿದು ಬಂದ ಈ ಮಹಾಕಾವ್ಯವನ್ನು ೨ ಸಂಪುಟಗಳಲ್ಲಿ ಸಂಪಾದಿಸಿ, ಕನ್ನಡದ ಓದುಗರಿಗೆ ಅರ್ಪಿಸಿದ್ದಾರೆ.

    Original price was: $12.01.Current price is: $7.20.
    Add to basket
  • -42%

    ಗರ್ಭಗುಡಿಯ ಶಿಶು ಚೇತನ

    0

    ಗರ್ಭಗುಡಿಯ ಶಿಶು ಚೇತನ
    ಶ್ರೀಮತಿ ಪರಿಮಳಾರಾವ್ ಅವರು ಹನಿಗವನ, ಹಾಯಿಕುಗಳನ್ನಷ್ಟೇ ಅಲ್ಲ, ನೀಳ್ಗವನಗಳನ್ನು ಬರೆಯಬಲ್ಲರೆಂಬುದಕ್ಕೆ ‘ಗರ್ಭಗುಡಿಯ ಶಿಶುಚೇತನ’ ಎಂಬ ನೀಳ್ಗವನ ಒಂದು ಅತ್ಯುತ್ತಮ ನಿದರ್ಶನ. ಈ ಕವನದಲ್ಲಿ ಕವಿಯತ್ರಿ , ಕೂಸು, ತಾಯಿಯ ಗರ್ಭದಲ್ಲಿ ನವಮಾಸ ಇದ್ದಾಗ, ಬೆಳೆಯುವ ಆ ಕೂಸಿನ ಕಲ್ಪನೆ, ಹಾಗೂ ಮಾತೆಯ ಮಮತೆಯ ಭಾವನೆಗಳನ್ನು ತುಂಬಾ ಅಪ್ಮಾಯಮಾನವಾಗಿ ವರ್ಣಿಸಿದ್ದಾರೆ. ಸೃಷ್ಟಿಯ ಸೊಬಗಿನ ಸುಂದರ ಚಿತ್ರಣ ಇಲ್ಲಿದೆ.

    Original price was: $0.24.Current price is: $0.14.
    Add to basket
  • -40%

    ಬೇಟೆಯ ನೆನಪುಗಳು

    0

    ಬೇಟೆಯ ನೆನಪುಗಳು
    ಪ್ರವಾಸ ಕಥನ ಸಾಹಿತ್ಯದ ಒಂದು ಪ್ರಕಾರ; ಅದರಲ್ಲಿ ಕತೆಗಾರಿಕೆಯ ಅಂಶ ಅಡಕವಾಗಿರುವುದರಿಂದ ಆ ಪ್ರಬಂಧಪ್ರಕಾರ ಹೆಚ್ಚಿನ ಮೆಚ್ಚುಗೆ ಪಡೆದಿದೆ. `ಬೇಟೆಯ ನೆನಪುಗಳು’ ಎಂಬೀ ತೆರನ ಬರವಣಿಗೆ ಅದೇ ಹಾದಿಯಲ್ಲಿ ಸಾಗಿದರೂ, ಅದಕ್ಕಿಂತಲೂ ಆಕರ್ಷಕವಾಗಿ ಮೂಡಿಬಂದ ಒಂದು ಮಹತ್ತರ ಸಾಹಿತ್ಯ ಪ್ರಕಾರವೆನ್ನಬೇಕು. ಇದರಲ್ಲಿನ ವರ್ಣನೆ ಕಾದಂಬರಿಗಳ ವರ್ಣನೆಯ ಮಟ್ಟವನ್ನು ಮುಟ್ಟಬಲ್ಲುದು; ಅನೇಕ ಕುತೂಹಲಕಾರೀ ಘಟನೆಗಳು ಅಲ್ಲಲ್ಲಿ ಮೂಡಿ ಬಂದಿರುವುದರಿಂದ ಪತ್ತೇದಾರಿ ಕತೆಗಳ ಆಸಕ್ತಿ ಕೆರಳಿಸುವ ಅಂಶಗಳೂ ಇಲ್ಲಿ ವಿಪುಲವಾಗಿ ತುಂಬಿರುತ್ತವೆ.

    Original price was: $1.80.Current price is: $1.08.
    Add to basket
  • -40%

    ಬೇಟೆಯ ಉರುಳು

    0

    ಬೇಟೆಯ ಉರುಳು
    ತುಳುನಾಡ ಮಲೆನಾಡ ಮಣ್ಣಿನ – ಕನ್ನಡದ ಕೊಡುಗೆ. ಈ ಮಾತಿಗೆ ಪೂರಕವಾಗಿ ಭಾವೀ ಜನಾಂಗಕ್ಕಾಗಿ `ಬೇಟೆಯ ಉರುಳು’ – ಎಂಬ ಈ ಕೃತಿಯನ್ನು ರಚಿಸಿದ್ದಾರೆ. ಬೇಟೆಯ ಕುರಿತಾದ ಇವರ ಅನುಭವ ಬತ್ತದ ತೊರೆಯಾಗಿ ಹರಿಯುತ್ತದೆ.
    ಇಲ್ಲಿ ಚಿಕ್ಕ ಪುಟ್ಟ ಬೇಟೆಗಳಲ್ಲಿರುವ ಜಾಣ್ಮೆ, ವಿಶಿಷ್ಟತೆಗಳ ಸಜೀವ ವಿವರಣೆಗಳಿವೆ. ಬೇಟೆಯ ಹವ್ಯಾಸ ಕಾರಣಾಂತರಗಳಿಂದ ದೂರವಾಗುತ್ತಿರುವ ಈ ಕಾಲದಲ್ಲಿ ಈ ಸಂಬಂಧವಾದ ಸಾಕ್ಷ್ಯಚಿತ್ರದ ದಾಖಲೆಯು ಇದಾಗಿದೆ. ಬಾಯಿಮಾತಿನ ಅನುಭವವು ಬರೆಹರೂಪವಾಗಿ ಚಿತ್ರವತ್ತಾಗಿ ಇಲ್ಲಿ ಉಳಿಯುತ್ತದೆ.
    ಭಾವೀಜನಾಂಗಕ್ಕಾಗಿ ಬೇಟೆಯ ಉರುಳು ಎಂಬ ಈ ಕೃತಿಯು ಶ್ರೀ ಜತ್ತಪ್ಪ ರೈಗಳ ಈ ಹಿಂದಿನ ಎರಡು ಕೃತಿಗಳನ್ನೂ ಇನ್ನೊಂದು ಮುಖವಾಗಿ ದಾಟಿಹೋಗಿದೆ ಎನ್ನಬೇಕು. ಪುರಾಣ ಚರಿತ್ರೆಗಳ ಕಾಲದಲ್ಲಿ ದೊರೆಯುವ ಬೇಟೆಯ ಸಂದರ್ಭಗಳ ಸಂಶೋಧಕ ಮೌಲ್ಯವನ್ನು ಈ ಕೃತಿಯು ಎತ್ತಿ ತೋರಿಸುತ್ತದೆ. ಇದು ಇದರ ಹೆಚ್ಚಳ. ಮಕ್ಕಳಿಗಾಗಿ ಕಥೆ ಹೇಳುವಾಗ ಕೊಂಡಿ ಕಳಚಿಕೊಳ್ಳದಂತೆ ಕುತೂಹಲ ಕೊನರಿಡುವಂತೆ ಮಾಡುವ ತನ್ನದೇ ಆದ ಕಥಾನಕದ ತಂತ್ರವಿಲ್ಲಿ ಎದ್ದು ತೋರುತ್ತಿದೆ. ಕಥೆಗಳನ್ನು ಹೇಳುವಾಗ ವಿವರಣೆಗಾಗಿ ತಡಕಾಡುವುದಿಲ್ಲ. ಅವೆಲ್ಲ ತಾವಾಗಿಯೇ ಒಂದರ ಹಿಂದೊಂದು ಹರಿದುಬಂದಿವೆ.

    Original price was: $1.80.Current price is: $1.08.
    Add to basket
  • -40%

    ಕರಾಳ ಗರ್ಭ

    0

    ಈ ಕಾದಂಬರಿಯನ್ನು ನಾಗೇಶ ಕುಮಾರ ಸಿ ಎಸ್ ಅವರು ಬರೆದಿದ್ದಾರೆ. ಇದು  ಒಂದು ರಹಸ್ಯಮಯ  ಪತ್ತೇದಾರಿ ಕಾದಂಬರಿಯಾಗಿದೆ.

    Original price was: $0.83.Current price is: $0.50.
    Add to basket
  • -40%

    ಸುವರ್ಣ ಕರಾವಳಿ

    0

    ಸುವರ್ಣ ಕರಾವಳಿ
    ಈ ಕಾದಂಬರಿಯನ್ನು ನಾಗೇಶ ಕುಮಾರ ಸಿ ಎಸ್ ಅವರು ಬರೆದಿದ್ದಾರೆ. ಇದು  ಒಂದು ರಹಸ್ಯಮಯ  ಪತ್ತೇದಾರಿ ಕಾದಂಬರಿಯಾಗಿದೆ.

    Original price was: $0.83.Current price is: $0.50.
    Add to basket
  • -40%

    ಮಾತು ಮೌನ

    0

    ಮಾತು ಮೌನ
    ಸಾಹಿತ್ಯ ಪರಿಷತ್ತಿನವರು ಏರ್ಪಡಿಸಿದ ಕವಿಗೋಷ್ಟಿಗಳಲ್ಲಿ ವಾಚಿಸಲೆಂದೇ ರಚಿಸಿದ ಕವಿತೆಗಳಿವು. ಈ ಕವನ ಸಂಕಲನದಲ್ಲಿ ನಿಸರ್ಗ ಪ್ರೇಮ, ಜೀವನ ಸೌಂದರ್ಯ , ಬದುಕಿನ ಬವಣೆ, ಹೆಣ್ಣಿನ ಶೋಷಣೆ, ಸಾಂಸ್ಕೃತಿಕ ಚಿಂತನೆ, ಪ್ರೀತಿ ಪ್ರೇಮ , ನಾಡು ನುಡಿ , ದೇಶಭಕ್ತಿ , ಗಣ್ಯವ್ಯಕ್ತಿ , ಹಾಗೂ ‘ಅಹಲ್ಯ’ ಎಂಬ ಕಿರುಕಥನಗೀತೆ, ಭಕ್ತಿಗೀತೆ, ಹೀಗೆ ಸಾಕಷ್ಟು ವೈವಿಧ್ಯತೆಯನ್ನು ಕಾಣುತ್ತೇವೆ. ಇವರು ಸಾಹಿತ್ಯದ ದೋಣಿಯನ್ನು ನಡೆಸುವಲ್ಲಿ ಗದ್ಯ ಪದ್ಯದ ಹುಟ್ಟನ್ನು ಹಾಕಿದ್ದಾರೆ.

    Original price was: $1.08.Current price is: $0.65.
    Add to basket
  • -40%

    ಮುಳುಗುವ ಕೊಳ

    0

    ಮುಳುಗುವ ಕೊಳ
    ಈ ಕಾದಂಬರಿಯನ್ನು ನಾಗೇಶ ಕುಮಾರ ಸಿ ಎಸ್ ಅವರು ಬರೆದಿದ್ದಾರೆ. ಇದು  ಒಂದು ರಹಸ್ಯಮಯ  ಪತ್ತೇದಾರಿ ಕಾದಂಬರಿಯಾಗಿದ್ದು ಪೊಲೀಸರು ಕೊಲೆಗಾರರನ್ನು ಹೇಗೆ ಪತ್ತೆ ಮಾಡುತ್ತಾರೆ ಎಂಬುದನ್ನು ಈ ಕಾದಂಬರಿಯಲ್ಲಿ ವಿವರಿಸಿದ್ದಾರೆ. ಕೊಲೆಗಾರರು ಪೋಲೀಸರ ಜೊತೆಯಲ್ಲೇ ಇದ್ದು ಪೊಲೀಸರಿಗೆ ಯಾವುದೇ ರೀತಿಯ ಸಂಶಯ ಬರದಂತೆ ನಡೆದುಕೊಂಡು ಅವರು  ಯಾವ ರೀತಿ  ದಾರಿ ತಪ್ಪಿಸಲು ನೋಡುತ್ತಾರೆ ಎಂಬುದನ್ನು ತಿಳಿಸಿದ್ದಾರೆ ಹೀಗಾಗಿ ಈ ಕಾದಂಬರಿಯು ತುಂಬಾ ಕುತೂಹಲಕಾರಿಯಾಗಿದೆ.

    Original price was: $0.83.Current price is: $0.50.
    Add to basket
  • -40%

    ರಾಜಕೀಯ ಮತ್ತು ಧರ್ಮ

    0

    ರಾಜಕೀಯ ಮತ್ತು ಧರ್ಮ

    ಲೇಖನಗಳು ತಮ್ಮ ವಸ್ತುವನ್ನು ಬೆಳಗಿಸುತ್ತವೆ. ಅದಕ್ಕಿಂತ ಹೆಚ್ಚಾಗಿ ಲೇಖಕನ ವ್ಯಕ್ತಿತ್ವದ ಬಗ್ಗೆ ಕೂಡ ಕೆಲ ಮಾತುಗಳನ್ನೂ ಹೇಳುತ್ತವೆ. ಈ ದೃಷ್ಟಿಯಿಂದ ಓದುಗರು ಇವುಗಳನ್ನು ಸ್ವೀಕರಿಸಬೇಕು. ಒಟ್ಟಿನಲ್ಲಿ ಹೇಳುವದಾದರೆ ಸುತ್ತಲಿನ ಜಗತ್ತಿನೊಡನೆ ನಡೆದ ಒಂದು ನಿರಂತರ ಪ್ರತಿಕ್ರಿಯೆಯ ಫಲವಾಗಿ ಈ ಲೇಖನಗಳು ಮೂಡಿಬಂದಿದೆ.

    Original price was: $1.08.Current price is: $0.65.
    Add to basket
  • -25%

    ಮಾತುಕತೆ ೧೧೧

    0

    ಮಾತುಕತೆ ೧೧೧
    ನೀನಾಸಮ್ ಹೆಗ್ಗೋಡು (ಸಾಗರ) ಕರ್ನಾಟಕ ೫೭೭ ೪೧೭

    ಆಗಸ್ಟ್ ೨೦೧೪
    ವರ್ಷ ಇಪ್ಪತ್ತೆಂಟು
    ಸಂಚಿಕೆ ಮೂರು

    ಖಾಸಗಿ ಪ್ರಸಾರದ ತ್ರೈಮಾಸಿಕ ಸಂಪರ್ಕಪತ್ರ
    (ಫೆಬ್ರವರಿ-ಮೇ-ಆಗಸ್ಟ್-ನವೆಂಬರ್)
    ಸಂಪಾದಕ: ಬಿ.ಆರ್. ವೆಂಕಟರಮಣ ಐತಾಳ
    ಸಂಪಾದಕ ಮಂಡಳಿ: ಟಿ.ಪಿ.ಅಶೋಕ, ಜಶವಂತ ಜಾಧವ್

    Original price was: $0.24.Current price is: $0.18.
    Add to basket
  • -25%

    ಮಾತುಕತೆ ೧೧೨

    0

    ಮಾತುಕತೆ ೧೧೨
    ನೀನಾಸಮ್ ಹೆಗ್ಗೋಡು (ಸಾಗರ) ಕರ್ನಾಟಕ ೫೭೭ ೪೧೭

    ನವೆಂಬರ್  ೨೦೧೪
    ವರ್ಷ  ಇಪ್ಪತ್ತೆಂಟು
    ಸಂಚಿಕೆ  ನಾಲ್ಕು

    ಖಾಸಗಿ ಪ್ರಸಾರದ ತ್ರೈಮಾಸಿಕ ಸಂಪರ್ಕಪತ್ರ
    (ಫೆಬ್ರವರಿ-ಮೇ-ಆಗಸ್ಟ್-ನವೆಂಬರ್)
    ಸಂಪಾದಕ: ಬಿ.ಆರ್. ವೆಂಕಟರಮಣ ಐತಾಳ
    ಸಂಪಾದಕ ಮಂಡಳಿ: ಟಿ.ಪಿ.ಅಶೋಕ, ಜಶವಂತ ಜಾಧವ್

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    • ವೈಚಾರಿಕ ಆಕೃತಿಗಳ ಸಾಂಸ್ಕೃತಿಕ ನೆಲೆ ಮತ್ತು ರಾಜಕೀಯ ಭಿತ್ತಿ
    • ಅಥಾತೋ ಭಾರತಜಿಜ್ಞಾಸಾ
    • ರಾಮಾನುಜನ್ ಲೇಖನದ ವಿನ್ಯಾಸ
    • ಶೀರ್ಷಿಕೆಯ ಪ್ರತಿಪದಾರ್ಥ
    • ಕಾವ್ಯಯೋಗ ಸ್ಪಂದನ
    • ಆತಂಕ – ಸಮಾಧಾನ
    • ಆಶಯದ  ನಿರ್ವಚನ
    • ಭಾರತೀಯ ಚಿಂತನಕ್ರಮ : ಒಂದು ಸ್ಪಷ್ಟೀಕರಣ 
    • ನಮ್ಮ ಸಂವಿಧಾನದಲ್ಲಿ ಗಾಂಧಿ ವಿಚಾರಧಾರೆ
    • ನಾಗಚಂದ್ರನ ರಾಮಾಯಣದಲ್ಲಿ ಕಥಾಂತರ
    Original price was: $0.24.Current price is: $0.18.
    Add to basket
  • -25%

    ಮಾತುಕತೆ ೧೧೦

    0

    ಮಾತುಕತೆ ೧೧೦
    ನೀನಾಸಮ್ ಹೆಗ್ಗೋಡು (ಸಾಗರ) ಕರ್ನಾಟಕ ೫೭೭ ೪೧೭

    ಮೇ  ೨೦೧೪
    ವರ್ಷ  ಇಪ್ಪತ್ತೆಂಟು
    ಸಂಚಿಕೆ  ಎರಡು

    ಖಾಸಗಿ ಪ್ರಸಾರದ ತ್ರೈಮಾಸಿಕ ಸಂಪರ್ಕಪತ್ರ
    (ಫೆಬ್ರವರಿ-ಮೇ-ಆಗಸ್ಟ್-ನವೆಂಬರ್)
    ಸಂಪಾದಕ: ಬಿ.ಆರ್. ವೆಂಕಟರಮಣ ಐತಾಳ
    ಸಂಪಾದಕ ಮಂಡಳಿ: ಟಿ.ಪಿ.ಅಶೋಕ, ಜಶವಂತ ಜಾಧವ್

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    • ಸೃಜನಶೀಲತೆಯ ಆಳ-ನಿಗೂಢಗಳ ಹುಡುಕಾಟ
      ಯು.ಆರ್.ಅನಂತಮೂರ್ತಿಯವರ ಕಥೆಗಳ ಜಿಜ್ಞಾಸೆ
    • ‘ರಾಮಧಾನ್ಯ ಚರಿತೆ’ಯಲ್ಲಿ ಸತ್ಯದರ್ಶನ
    • ಕಾವ್ಯಬಂಧದ ನಕಾಶೆ
    • ಮತತ್ರಯಕ್ಕೆ ಗೌರವಾರ್ಪಣೆ
    • ಮುಗಿಸಿದ ಯುದ್ಧಗಳು
    • ಗ್ರಹಿಕೆಗಳ ಸ್ಪಷ್ಟತೆ
    • ನ್ಯಾಯನಿರ್ಣಯ ಪದ್ಧತಿ
    • ತಜ್ಞರ ಅಭಿಮತ
    • ರಾಮನ ಹೃದಯಸಾಕ್ಷಿ
    • ವಾಗ್ವಾದಗಳ ಇತಿಮಿತಿ
    • ಸತ್ಯಸುಖವುಳ್ಳವರ ಕುಲ
    Original price was: $0.24.Current price is: $0.18.
    Add to basket
  • -25%

    ಮಾತುಕತೆ ೧೦೯

    0

    ಮಾತುಕತೆ ೧೦೯

    ಫೆಬ್ರುವರಿ  ೨೦೧೪
    ವರ್ಷ  ಇಪ್ಪತ್ತೆಂಟು
    ಸಂಚಿಕೆ  ಒಂದು

    ಖಾಸಗಿ ಪ್ರಸಾರದ ತ್ರೈಮಾಸಿಕ ಸಂಪರ್ಕಪತ್ರ
    (ಫೆಬ್ರವರಿ-ಮೇ-ಆಗಸ್ಟ್-ನವೆಂಬರ್)
    ಸಂಪಾದಕ: ಬಿ.ಆರ್. ವೆಂಕಟರಮಣ ಐತಾಳ
    ಸಂಪಾದಕ ಮಂಡಳಿ: ಟಿ.ಪಿ.ಅಶೋಕ, ಜಶವಂತ ಜಾಧವ್

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಮೊಟಕುಗೊಳಿಸಿದ ಮಹಾತ್ಮ

    ರಂಗಭೂಮಿ,  ಚಳವಳಿ, ಚಳವಳಿಗಳು, ತಳಮಳ, ಮಿಡಿತ, ಚಳವಳ

    Original price was: $0.24.Current price is: $0.18.
    Add to basket
  • -40%

    ರಕ್ತಚಂದನ

    0

    ರಕ್ತಚಂದನ

    …..ಒಂದು ವೈವಿಧ್ಯಮಯ ಕಥಾ ಸಂಕಲನ

    ಹನ್ನೆರಡು ಕಥೆಗಳ ಹೂರಣ…
    ನಾಡಿನ ಪ್ರಮುಖ ಪತ್ರಿಕೆಗಳಾದ ಸುಧಾ, ತರಂಗ, ಉತ್ಥಾನ ಮತ್ತು ತುಷಾರದಲ್ಲಿ ಪ್ರಕಟಿತ ಸಾಮಾಜಿಕ ಮತ್ತು ಪತ್ತೇದಾರಿ ಕತೆಗಳ ಸಂಕಲನ

    Original price was: $1.92.Current price is: $1.15.
    Add to basket