• -40%

    ಸ್ಥವಿರ ಜಂಗಮಗಳಾಚೆ

    0

    ಶ್ರೀಮತಿ ಜಯಶ್ರೀ ದೇಶಪಾಂಡೆ ಅವರು `ಸ್ಥವಿರ ಜಂಗಮಗಳಾಚೆ’ ಕಥಾಸಂಕಲನದಲ್ಲಿ ಇವರು ತಮ್ಮ ಜನರೊಡನಾಟ, ಪಕ್ವವಾದ ಜೀವನಾನುಭವ, ಹಾಗೂ ಸಾಮಾಜಿಕ ಕಾಳಜಿಯಿಂದ ಬದುಕನ್ನು ಸೂಕ್ಷ್ಮವಾಗಿ ಅವಲೋಕಿಸಿ ಓದುಗರ ಮುಂದೆ ನಿರ್ಭಿಡೆಯಿಂದ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸಾಮಾಜಿಕ ಸಮಸ್ಯೆಗಳನ್ನು ಓದುಗರ ಮುಂದಿಟ್ಟು ಪರಿಹಾರವೇನು ಎಂದು ಯೋಚಿಸುವಂತೆ ಮಾಡುವ ಪ್ರೌಢಿಮೆ ತೋರಿದ್ದಾರೆ.

    Original price was: $1.80.Current price is: $1.08.
    Add to basket
  • -40%

    ಯತ್ಕಿಂಚಿತ್

    0

    ಈ ‘ಯತ್ಕಿಂಚಿತ್; ಎನ್ನುವ ಸಂಕಲನದಲ್ಲಿ ಕವಿತೆಗಳನ್ನು ನೋಡಬಹುದು. ಇದರಲ್ಲಿ ಸೇರಿರುವ 45 ಕವಿತೆಗಳು ಅಂಥ ವಿಶಿಷ್ಟ ಅನುಭವಗಳನ್ನು ಕಟ್ಟಿಕೊಡಲು ಯತ್ನಿಸುತ್ತವೆ.

    Original price was: $0.96.Current price is: $0.58.
    Add to basket
  • -40%

    ಮಾಯಿ ಕೆಂದಾಯಿ

    0

    ನೆನಪುಗಳು, ಹಳೆ ಸಿನಿಮಾದ ರೀಲಿನ ಡಬ್ಬಿ, ಗಾಲಿಗೆ ಸಿಕ್ಕು, ಸುರುಳಿ ಸುರುಳಿ ಬಿಚ್ಚುತ್ತಾ ಒಂದೊಂದೇ ದೃಶ್ಯಗಳನ್ನ ಕಣ್ಣೆದುರು ಬಿಡಿಸಿಟ್ಟು, ಮನಸಿನ ತುಂಬೆಲ್ಲ ದೃಶ್ಯಗಳ ಸಾಲು ಮೆರವಣಿಗೆ ಹೊರಡಿಸಿ, ನಮ್ಮ ಸುತ್ತಮುತ್ತಲಿನದನ್ನೆಲ್ಲ ಮರೆಯುವಂತೆ ಮಾಡಿಬಿಡುತ್ತವೆ. ಕನ್ನಡದ ಹಿರಿಯ ಕತೆಗಾರ್ತಿ, ಜಯಶ್ರೀ ದೇಶಪಾಂಡೆ ಅವ್ರ ‘ಮಾಯಿ’ ಓದೂವಾಗ್ಲೂ ಇದೆ ಅನುಭವ ನನಗೆ ! ಇವನ್ನೆಲ್ಲ ಓದೋವಾಗ ಜಯಶ್ರೀ ಅವರ ಜೊತೆ ಜೊತೆಗೆ ನೀವೂ ನಗ್ತೀರಿ,
    ಅಳ್ತೀರಿ, ಭಾವುಕ ಆಗ್ತೀರಿ, ಮದುವೆ ಗದ್ದಲದಲ್ಲಿ ಬೀಳ್ತೀರಿ, ಸ್ಕೂಲು, ಕಾಲೇಜು, ಪಡಸಾಲಿ, ಕೊಟ್ಟಿಗೆಗಳಲ್ಲೆಲ್ಲ ಓಡಾಡ್ತೀರಿ, ರಾಮಾಯಣ ಮಹಾಭಾರತಗಳ ಪಾತ್ರಗಳೊಂದಿಗೆ ಮುಖಾಮುಖಿಯಾಗ್ತೀರಿ, ಮತ್ತು ಜಯಶ್ರೀ ದೇಶಪಾಂಡೆ ಅವರಷ್ಟೇ ಮಾಯಿ ಹಾಗು ಕೆಂದಾಯಿಯನ್ನ ಪ್ರೀತಿಸ್ತೀರಿ ಸಹ!

    – ಜಯಲಕ್ಷ್ಮೀ ಪಾಟೀಲ್

    ಈ ಕೋಶದ ಕೇಂದ್ರಬಿಂದು ಅಂದರ ‘ಮಾಯಿ’. ಮಾಯಿ ಅಂದರ ತಾಯಿ, ಅಜ್ಜೀನೂ ಹೌದು, ‘ಮಾಯಾ’ನೂ ಹೌದು. ಮಾಯಾದ ಅರ್ಥ ಅಂತ:ಕರಣ. ಈ ಮಾಯಿಯ ಅಂತ:ಕರಣ ಕೃಷ್ಣಾ ನದಿಯ ಪ್ರವಾಹದ ಹಂಗ ವಿಶಾಲ. ಖಾಸ್ ಬಳಗಕ್ಕಷ್ಟೇ ಮಾಯಿಯ ಈ ಅಂತ:ಕರಣ ಸೀಮಿತ ಆಗಿದ್ದಿಲ್ಲ. ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು ಅಂತೂ ಸೈಯೇ ಸೈ ಇವರಲ್ಲದ ನಿಮಾ ಕಾಕೂ, ಕಾಂತಾಮಾಮೀ, ಮೊಹರಂ ಕುಣಿತದ ಹುಸೇನಿ ಇವರೆಲ್ಲ ಮಾಯಿಯ ವಾತ್ಸಲ್ಯದ ಪರಿಧಿಯೊಳಗ ಬಂದವರೇ. ಇಷ್ಟs ಯಾಕ ಅವರ ಪ್ರೀತಿಯ ಆಕಳು ‘ಕೆಂದಾಯಿ’ ಅಂತೂ ಮಾಯಿಗೆ ಸ್ವಂತ ಮಗಳಿದ್ದಂಗ. ಈ ಕೆಂದಾಯಿಯ ಕರು ಸತ್ತಾಗ ಅದರ ಸಂಕಟಾ ನೋಡಲಾರದ ಮಾಯಿ ಇಡೀ ರಾತ್ರಿ ಚಡಪಡಿಸ್ತಾರ. ‘ನಿನ್ನ ಸಂಕಟಾ ನಾ ಹ್ಯಾಂಗ ತೊಗೊಳ್ಳೇ ಗೌರೀ’ ಅಂತ ರಾತ್ರಿಯಿಡೀ ಹಲಬ್ತಾರ.

    – ಸುನಾಥ ದೇಶಪಾಂಡೆ

    Original price was: $1.44.Current price is: $0.86.
    Add to basket
  • -40%

    ಶೃಂಖಲಾ

    0

    ಉತ್ತರ ಕರ್ನಾಟಕದ ಟಿಪಿಕಲ್ ಶೈಲಿಯ ಧಾರವಾಡದ ಕಡೆ ಭಾಷೆ ಮತ್ತೂ ಅಂಥಹುದೇ ಕೌಟುಂಬಿಕ ಹಿನ್ನೆಲೆಯ ಕಾದಂಬರಿ ಶೃಂಖಲಾ.

    Original price was: $2.70.Current price is: $1.62.
    Add to basket
  • -40%

    Shabari

    0

    A Novel by Dr. Baraguru Ramachandrappa, translated into English by Dr.Basavaraj Donur &
    K. Aravind Mitra.

    Original price was: $1.44.Current price is: $0.86.
    Add to basket
  • -40%

    ಸಂತೆ ಸರಕು

    0

    ಕವನಗಳ ಸಂಗ್ರಹ

    Original price was: $0.96.Current price is: $0.58.
    Add to basket
  • -40%

    ರೆಡ್ ಲೈಟ್ ಮತ್ತಿತರ ಕವನಗಳು

    0

    ರೆಡ್ ಲೈಟ್ ಮತ್ತಿತರ ಕವನಗಳು’ ಕವನಸಂಕಲನವು ನಳಿನ ಡಿ. ಅವರ ಪ್ರಥಮ ಸಂಕಲನ.

    Original price was: $0.84.Current price is: $0.50.
    Add to basket
  • -40%

    ಬೆಳಕ ಜೋಳಿಗೆ

    0

    ಬೆಳಕ ಜೋಳಿಗೆ

    ಈ ಪುಸ್ತಕವು ನಳಿನಿ .ಡಿ ಅವರು ಬರೆದ ಕವನಗಳನ್ನು ಒಳಗೊಂಡಿದೆ.

    Original price was: $1.68.Current price is: $1.01.
    Add to basket
  • -40%

    ಅಲೆಯೊಳಗಿನ ಮೌನ

    0

    ಅಲೆಯೊಳಗಿನ ಮೌನ

    (ಗಜಲ್‍ಗಳು)

    ಶ್ರೀದೇವಿ ಕೆರೆಮನೆ

    ಈ ಪುಸ್ತಕವು ಶ್ರೀದೇವಿ ಕೆರೆಮನೆಯವರು ರಚಿಸಿದ ಗಝಲ್ ಗಳ ಸಂಗ್ರಹವಾಗಿದೆ.

     

    Original price was: $0.96.Current price is: $0.58.
    Add to basket
  • -40%

    Seasons Heart Beat

    0

    It is a collection of Haiku Poems by G.R. Parimala Rao.

    Original price was: $0.60.Current price is: $0.36.
    Add to basket
  • -40%

    ನಂದನ ವನ

    0

    ನಂದನ ವನ
    ಈ ಪುಸ್ತಕವು ಜಿ . ಆರ್ . ಪರಿಮಳ ರಾವ್ ಅವರು ಬರೆದ ಶಿಶುಗೀತೆ ಗಳನ್ನು ಒಳಗೊಂಡಿದೆ.

    Original price was: $0.72.Current price is: $0.43.
    Add to basket
  • -40%

    ಮರುಭೂಮಿಯ ಹೂ

    0

    “ಕುವೆಂಪು ಭಾಷಾ ಭಾರತಿ ಪ್ರಾಧಿಕಾರ” ಪ್ರಶಸ್ತಿ ವಿಜೇತ ಕೃತಿ

    ಕನ್ನಡ ಅನುವಾದ
    ಡಾ. ಎನ್. ಜಗದೀಶ್ ಕೊಪ್ಪ

    ಸೋಮಾಲಿಯಾದ ಹೆಣ್ಣು ಮಗಳು ವಾರಿಸ್ ಡೀರೀಳ ಆತ್ಮಕಥೆ “ಮರುಭೂಮಿಯ ಹೂ”.

    Original price was: $1.56.Current price is: $0.94.
    Add to basket
  • -40%

    Bharata Sindhu Rashmi

    0

    This epic has got Jnanapith award. It’s a summary of Epic Bharata Sindhu Rashmi in English, prepared by the author.

    Original price was: $0.90.Current price is: $0.54.
    Add to basket
  • -40%

    ಮತ್ತೊಬ್ಬ ರಾಧೆ

    0

    ಮತ್ತೊಬ್ಬ ರಾಧೆ
    (ಕೀರ್ತನಕಾರ್ತಿ ಗಲಗಲಿ ಅವ್ವನವರನ್ನು ಕುರಿತ ನಾಟಕ)
    ಈ ನಾಟಕವು ಹದಿನೆಂಟನೇ ಶತಮಾನದ ಕೀರ್ತನಕಾರ್ತಿ ಗಲಗಲಿ ಅವ್ವನವರನ್ನು ಕುರಿತದ್ದಾಗಿದೆ. ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿಯಲ್ಲಿ ಪ್ರಸಿದ್ಧ ಪಂಡಿತರಾಗಿದ್ದ ಗಲಗಲಿ ಮುದಗಲ್ಲಾಚಾರ್ಯರ ಕಿರುಪತ್ನಿಯಾಗಿ ರಮಾ ತನ್ನ ಹನ್ನೆರಡು ವರ್ಷದಲ್ಲಿಯೇ ಮದುವೆಯಾಗಿ ಗಲಗಲಿ ಗ್ರಾಮವನ್ನು ಪ್ರವೇಶಿಸಿದಳು. ಮದುವೆಯಾದ ಎಂಟು ದಿನಕ್ಕೇ ವಿಧವೆಯಾದಳು. ವಿಧವೆಯಾಗಿ ಬತ್ತಿ ಹೊಸೆಯದೆ, ನ್ಯಾಯಪಂಡಿತಳಾಗಿ ಪೇಶ್ವೇ ಅರಸರ ಪಂಡಿತರನ್ನು ಸೋಲಿಸಿ, ಪುಣೆಯ ಅರಸರಿಂದ ವರ್ಷಾಶನ ಪಡೆದಳು. ಅವ್ವನವರ ಮುನ್ನೂರು ಕೀರ್ತನೆಗಳು ಪ್ರಕಟವಾಗಿವೆ. ಕನ್ನಡದಲ್ಲಿ ಕೀರ್ತನೆ ರಚಿಸಿದ ಮೊದಲ ಮಹಿಳೆಯೆಂಬ ಹೆಗ್ಗಳಿಕೆಗೆ ಗಲಗಲಿ ಅವ್ವ ಸಾಕ್ಷಿಯಾಗಿದ್ದಾಳೆ. ಪುಟ್ಟ ವಿಧವೆಯಾಗಿ ಕಾಣಿಸಿಕೊಂಡ ಈ ಮಹಿಳೆ ಗಲಗಲಿ ಅವ್ವನಾಗಿ ಬೆಳೆದು ನಿಂತದ್ದು, ಅಧ್ಯಾತ್ಮ ಮತ್ತು ಸಾಹಿತ್ಯದಲ್ಲಿ ಮಹತ್ತರ ಸಾಧನೆ ಮಾಡಿದ್ದು ಈಗ ಚರಿತ್ರೆಗೆ ಸೇರಿದ ವಿಷಯವಾಗಿದೆ.

    Original price was: $0.84.Current price is: $0.50.
    Add to basket
  • -40%

    ಗಿರಿಜಾ ಕಲ್ಯಾಣ

    0

    ಬಿ. ಸುರೇಶ ಅವರ
    ಗಿರಿಜಾ ಕಲ್ಯಾಣ
    ಒಂದು ಆಧುನಿಕ ಪುರಾಣ
    ಈ ನಾಟಕವನ್ನು ಬರೆದವರು ಬಿ.ಸುರೇಶ ಅವರು ಬರೆದಿದ್ದಾರೆ. ಈ ನಾಟಕದ ಪ್ರಥಮ ಪ್ರದರ್ಶನವು ಸ್ಪಂದನ ತಂಡದಿಂದ ಬಿ.ಜಯಶ್ರೀ ಅವರ ನಿರ್ದೇಶನದಲ್ಲಾಯಿತು. ನಂತರ ಮುಂಬೈನ ಇಷ್ಟಾ ರಂಗತಂಡದವರು ಎಂ.ಎಸ್.ಸತ್ಯು ಅವರ ನಿರ್ದೇಶನದಲ್ಲಿ ಶೈಲಜಾ ಅವರ ಹಿಂದಿ ಅನುವಾದವನ್ನು “ಗಿರಜಾ ಕೆ ಸಪ್ನೆ” ಎಂದು ರಂಗಕ್ಕೆ ತಂದರು.

    Original price was: $1.32.Current price is: $0.79.
    Add to basket
  • -40%

    ಅಜ್ಜಿ ‘ಪಂಚ್’ತಂತ್ರ

    0

    ಅಜ್ಜಿ ‘ಪಂಚ್’ತಂತ್ರ

    ಜೀವನದ ಚೈತನ್ಯ, ಉತ್ಸಾಹಗಳಿಗೆ ಜೀವಸೆಲೆ ನಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೂ ಅವಳ ಕಷ್ಟ, ಅವಹೇಳನ, ಅವಮಾನ ಆಕೆ ಅನುಭಸಿದಷ್ಟು ಇನ್ನಾರೂ ಅನುಭವಿಸಿಲ್ಲ. ಇವುಗಳೆಲ್ಲದರ ನಡುವೆ, ಆಕೆಯ ಜೀವನೋತ್ಸಾಹ ಕುಗ್ಗಿಲ್ಲ. ಬದುಕಿನ ಹೋರಾಟ ಸ್ಫೂರ್ತಿ ಕಳೆದುಕೊಂಡಿಲ್ಲ. ಅಂದಿನಿಂದ ಇಂದಿನವರೆಗೆ, ನಮ್ಮೆಲ್ಲರ ಅಳು ನಗುವಿಗೆ ಸಹವರ್ತಿಯಾಗಿದ್ದಾಳೆ. ತುಂಬಾ ಗಂಭೀರವಾಗಿ ಹೇಳಬೇಕೆಂದರೆ ಹೆಣ್ಣು-ಮಗು, ಬಾಲೆ, ಹುಡುಗಿ, ಮಹಿಳೆ, ಮುದುಕಿ ಎಲ್ಲಾ ಪಾತ್ರಗಳಲ್ಲಿ, ಎಲ್ಲ ಅವಸ್ಥೆಗಳಲ್ಲಿ ವ್ಯವಸ್ಥೆಯ ಒತ್ತಡದಲ್ಲಿ ಸಂಘರ್ಷದ ಬದುಕು ಸಾಗಿಸಿದ್ದಾಳೆ. ಇವುಗಳ ನಡುವೆ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಲು ನಿರಂತರ ಪ್ರಯತ್ನ ನಡೆಸಿದ್ದಾಳೆ. ಅವಳ ಹೋರಾಟವೆ ಒಂದೊಂದು ಮಹಾಕಾವ್ಯಗಳಾಗಿವೆ. ಆ ಹೋರಾಟದ ಕತೆಗಳಿಗೆ ಕಾಲಘಟ್ಟ, ಸಂದರ್ಭಕ್ಕೆ ತಕ್ಕಂತೆ ಬೇರೆ ಬೇರೆ ಹೆಸರು, ವರ್ಷಗಳ ಸಂಕೇತವಿದೆ ಮಂಥರೆಯ ಬದುಕಿನ ಆಸೆ ಸೀತೆಗೆ ವನವಾಸ ಒದಗಿಸಿದ್ದಿರಬಹುದು. ಅವಳ ಬದುಕಿನ ಭದ್ರತೆಯ ಅನಿವಾರ್ಯತೆ, ತನ್ನ ಅಸ್ಥಿತ್ವಕ್ಕೆ ಆ ಸಂದರ್ಭದಲ್ಲಿ ಆ ರೀತಿಯ ಮಾತು ವರ್ತನೆಯನ್ನು ಸೃಷ್ಟಿಸಿರಬಹುದಲ್ಲವೆ? ಅದು ಪುರಾತನ ಕಥೆ. ಹೀಗೆ ಹಲವು ಹತ್ತು ನಮ್ಮಲ್ಲಿ ಸಿಗುತ್ತವೆ. ಅವು ಆ ಪಾತ್ರಗಳ ದುರಂತವನ್ನು, ಕರುಣೆಯನ್ನು, ಮರುಕವನ್ನು, ಹಾಸ್ಯವನ್ನು ಸೃಷ್ಟಿಸುತ್ತವೆ.

    Original price was: $1.80.Current price is: $1.08.
    Add to basket
  • -40%

    ಮಕ್ಕಳಿಗಾಗಿ ದೇಶವಿದೇಶಿಯ ಜಾನಪದ ಕಥೆಗಳು

    0

    ಮಕ್ಕಳಿಗಾಗಿ ದೇಶವಿದೇಶಿಯ ಜಾನಪದ ಕಥೆಗಳು
    ಮಕ್ಕಳಿಗಾಗಿ ಕಥೆ ಬರೆಯುವುದು ಒಂದು ಕಲೆ, ಮಕ್ಕಳ ಮನಸ್ಸನ್ನು ಮುಟ್ಟುವ , ಅವರ ಕಲ್ಪನಾ ಶಕ್ತಿಯನ್ನು ತಟ್ಟುವ, ಸರಳ ಸುಂದರ ಭಾಷೆಯ ಕಥೆಗಳನ್ನು ಮಕ್ಕಳ ವಯೋಗುಣಕ್ಕೆ ಅನುಗುಣವಾಗಿ ವಿಂಗಡಿಸಿ ಬರೆಯುವುದು ಇನ್ನೂ ಉತ್ತಮ, ಇನ್ನು ಶಾಲೆಗೆ ಹೋಗದ ಮಕ್ಕಳಿಗಾಗಿ ದೊಡ್ಡವರು ಇಂತಹ ಕತೆಗಳನ್ನು ಓದಿ ಹೇಳಿ , ಮುಂದೆ ಅವರಿಗೆ ಕಥೆಗಳನ್ನು ಓದುವ ಚಟ, ಆಸಕ್ತಿ ಬೆಳೆಸಬಹುದು.
    ಈಗಿನ ಮಕ್ಕಳಿಗೆ ಪ್ರಪಂಚದ ಅಗುಹೋಗುಗಳನ್ನು ತಿಳಿಯಲು ನಾನಾ ವಿಧವಾದ ಅನುಕೂಲಗಳಿವೆ. ರೇಡಿಯೋ, ದೂರದರ್ಶನ, ಇಂಟರ್ ನೆಟ್ ಗಳ ಮೂಲಕ ಅವರ ತಿಳುವಳಿಕೆ ಬಹಳಷ್ಟು ಹೆಚ್ಚುತ್ತಿದೆ. ಅವರಲ್ಲಿ ಜ್ಞಾನದಾಹ ಹೆಚ್ಚುತ್ತಿದೆ. ಇಂಟರ್ ನೆಟ್ ನಲ್ಲಿ ಬೇರೆ ಬೇರೆ ವೆಬ್ ಸೈಟುಗಳಿಗೆ ಹೋಗಿ ಅವರು ಹೊಸ ವಿಷಯಗಳನ್ನು ಸಾಹಿತ್ಯಿಕ ವಿಚಾರಗಳನ್ನು ತಿಳಿಯಬಲ್ಲರು. ಏನೇ ಆದರು ಪುಸ್ತಕ ಪ್ರಿಯತೆ, ಪುಸ್ತಕಗಳನ್ನು ಓದಿ ಮನನ ಮಾಡುವುದು ಅದೊಂದು ಆತ್ಮೀಯ ಹವ್ಯಾಸವಾಗಬೇಕು. ಮಕ್ಕಳಿಗೆ ಈ ನಿಟ್ಟಿನಲ್ಲಿ ಹೊಸ ಹೊಸ ಪುಸ್ತಕಗಳನ್ನು ಹೊರತರಲು ಪ್ರಕಾಶಕರು ಕಾರ್ಯವನ್ನು ಮಾಡಬೇಕು. ಅಂತಹ ಧ್ಯೇಯವನ್ನು ಇಟ್ಟುಕೊಂಡಿರುವ ಓಂಶಕ್ತಿ ಪ್ರಕಾಶನದ ಶ್ರೀ ವಿ. ಹೇಮಂತುಕುಮಾರ್ ರವರು ಈ ಹೊತ್ತಿಗೆಯನ್ನು ಕೃತಿ ರೂಪಕ್ಕೆ ತಂದಿರುವುದಕ್ಕೆ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತಿರುವೆ.

    Original price was: $1.20.Current price is: $0.72.
    Add to basket
  • -40%

    ಜಲಪಾತ

    0

    ಜಲಪಾತ
    ಕವಯತ್ರಿ ಶ್ರೀಮತಿ ಜಿ.ಆರ್. ಪರಿಮಳಾರಾವ್ ಅವರ ಜಲಪಾತದ ಭೋರ್ಗರೆತವನ್ನು ನೋಡಿದೆ. ಆ ಅಬ್ಬರದ ನಾದವನ್ನೂ ಕೇಳಿಸಿಕೊಂಡೆ! ಅಲ್ಲಿ ಅನುಭವದ ಹನೀ ಹನಿಯೂ ಶೇಖರವಾಗಿ ಹರಿಯುತ್ತಾ ಬಂದು ಮೋಹಕವಾಗಿ ತಡಸಲಾಗಿ ಅವರ್ಣನೀಯ ವಿನ್ಯಾಸ ಮೂಡಿಸಿದೆ. ಕವಿಯ ಮನೋಮಂಡಲದ ಶ್ವೇತ ಪರದೆಯ ಮೇಲೆ ವರ್ಣ ಚಿತ್ರ !
    ಸೃಜನಶೀಲತೆಯ ನೀರ್ಬೀಳಲ್ಲಿ ಮಧು ಮಧುರ ಕಾವ್ಯದ ಪದ ಪದದ ಅನನ್ಯ ಇಂಚರವಿದೆ. ಹರಿತದ ಮನೋಹರ ಸಂಚಾರವಿದೆ! ನೆಲ ಮುಗಿಲು ಮಣ್ಣು-ನೀರು ಸಂಬಂಧವಿದೆ. ವಾಗರ್ಥದ ಅದ್ವಿತೀಯ ಬೆಸುಗೆ ಇದೆ. ಒಟ್ಟಾರೆ ಕಾವ್ಯದ ಧಾರೆ ಧಾರೆಯಲ್ಲಿ ಬದುಕಿದೆ. ಬರಹ ಇದೆ! ತನಿ, ನುಡಿ, ತನಿ , ಅರ್ಥ, ತನಿತನಿ ಕವಿತೆಯ ಬೀವ ಜಲ ಇದೆ!

    Original price was: $0.96.Current price is: $0.58.
    Add to basket
  • -40%

    ಝೆನ್ ಹಾಯಿಕು

    0

    ಝೆನ್ ಹಾಯಿಕು
    ಬಹಿರಂಗದ ಹೊರೆತೆರೆಯನ್ನು ಸರಿಸಿ ಅಂತರಂಗದ ಮೆಟ್ಟಿಲಲ್ಲಿ ಇಳಿದು, ನನ್ನ ಹೃದಯ ಕೇಂದ್ರದಲ್ಲಿ ನೆಲೆ ನಿಂತಾಗ ಸ್ಪಂದಿಸಿವೆ ಈ ಝೆನ್ ಹಾಯಿಕುಗಳು.
    ಕೇಂದ್ರದಲ್ಲಿ ನೆಲೆ ನಿಂತಾಗ ಸ್ಪಂದಿಸಿವೆ ಈ ಝೆನ್ ಹಾಯಿಕುಗಳು.
    ಸ್ವಿಟ್ಜರ ಲ್ಯಾಂಡ್, ಐರ್ ಲ್ಯಾಂಡ್, ಜರ್ಮನಿ, ಇಟಲಿ, ವೆನೆಸ್, ಬೆಲ್ಜಿಯಂ, ಫ್ರಾನ್ಸ, ರೋಮ್ ಮುಂತಾದ ಯೂರೂಪಿನ್ ದೇಶಗಳನ್ನು, ಅಮೇರಿಕಾದ ಕೆಲವು ಭಾಗಗಳನ್ನು ನೋಡಿ ಕಿಂಚಿತ್ ಪ್ರಪಂಚ ಪರ್ಯಟನೆಯಲ್ಲಿ ಕಂಡ ಪ್ರಕೃತಿಯ ಅದ್ಭುತ ವೈಚಿತ್ರಗಳನ್ನು ನೋಡಿ, ನನ್ನ ಮನವು ಝೆನ್ ಎಳೆಯಲ್ಲಿ ಬಿಗಿದು ಮೂರು ಸಾಲಿನ, ಐದು, ತಾರು ಸಾಲಿನ ಹಾಯಿಕುಗಳನ್ನು ಪೋಣಿಸಿತು. ಈ ಭಾವನಾ ತರಂಗದಲ್ಲಿ ತೇಲಿ ನಾನು ಜೀವನ ದರ್ಶನ ಪಡೆದಿರುವೆ. ಈ ಹಾಯಿಕುಗಳ ಮಿಣುಕಿದೆ ಬೆಳಕು ನನ್ನ ಕೈಹಿಡಿದು ನಡೆಸುತ್ತಿದೆ. ನನ್ನಲ್ಲಿ ಚೈತನ್ಯ ತುಂಬಿಸಿ ಒಳ ಕಣ್ಣಿನ ದೃಷ್ಟಿಗೆ ಬೆಳಕು ನೀಡುತ್ತಿದೆ.
    -ಜಿ. ಆರ್. ಪರಿಮಳಾ ರಾವ್

    Original price was: $0.60.Current price is: $0.36.
    Add to basket
  • -40%

    ಮುತ್ತಿನ ಮಳೆ

    0

    ಮುತ್ತಿನ ಮಳೆ
    ಹನಿಗವನಗಳು
    ಶ್ರೀಮತಿ ಜಿ. ಆರ್.ಪರಿಮಳಾರಾವ್ ಅವರು ತಮ್ಮ ಹನಿಗವನಗಳಲ್ಲಿ ಎಲ್ಲಾ ಬಗೆಯ ವೈವಿಧ್ಯತೆಯನ್ನು ಮೆರೆದಿದ್ದಾರೆ. ಇವರ ಸಾಮಾಜಿ ಕಾಳಜಿ ತಮ್ಮ ಕವಿತೆಗಳಲ್ಲಿ ಎಚ್ಚರಿಕೆಯ ಗಂಟೆ ಬಾರಿಸಿದೆ. ಇಂದಿನ ಸಾಮಾಜಿಕ ಬದುಕಿಗೆ ಇದು ತೀರಾ ಪ್ರಸ್ತುತವೂ ಆಗಿದೆ.
    ಬಹಿರಂಗದ ವಾಸ್ತವದ ಮಜಲಿನಿಂದ ಅಂತರಂಗದ ಆತ್ಮ ಶೋಧದ ಪ್ರಪಂಚಕ್ಕೆ ಕಾಲಿಡುತ್ತಿರುವ ಇವರ ಕಾವ್ಯ ಪ್ರಕೃತಿಯ ಮೋಡಿಯಲ್ಲಿ ಸಿಲುಕಿ ಕಲ್ಪನೆಯ ವರ್ಣಮಯ ಲೋಕದಲ್ಲಿ ವಿಹರಿಸಿ ಕೊನೆಗೆ ಒಳ ಹುಡುಕಾಟದ ಭಾರತೀಯ ಸಂಸ್ಕಾರವೇ ಇಲ್ಲಿನ ಕಾವ್ಯಭಿವ್ಯಕ್ತಿಯನ್ನು ಆವರಿಸಿಕೊಳ್ಳುತ್ತದೆ.

    Original price was: $0.96.Current price is: $0.58.
    Add to basket
  • -40%

    ಮಿನುಗು ದೀಪ

    0

    ಮಿನುಗು ದೀಪ
    ಬದುಕಿನ ಶುಷ್ಕ ವಸ್ತುಗಳನ್ನು ಕಾವ್ಯರಸದಲ್ಲಿ ಅದ್ದಿ ಚಪ್ಪರಿಸಿ ಸವಿಯುವಂತೆ ಮಾಡುವ ಕಾವ್ಯ ಪಾಕ ಪ್ರವೀಣೆ ಇವರು. ನಮ್ಮ ಮುಂದಿರುವ ಪ್ರಕೃತ ಹನಿಗವನ ಸಂಕಲನದಲ್ಲಿ ‘ಮುಕ್ತಕಗೀತೆ’, ಮತ್ತು ‘ಚುಟುಕ’ಗಳ ಬಗೆಯವು. ಇಲ್ಲಿಯ ವಿಷಯಗಳ ಹರವು ಅಣುರೇಣುತೃಣದಿಂದ ಬ್ರಹ್ಮ ಬ್ರಹ್ಮಾಂಡ ಪರ್ಯಂತವಾದವು. ಅಡಿಗೆ ಮನೆ ಸೌಟಿನಿಂದ ಹಿಡಿದು, ಚಪ್ಪಲಿ, ಕುಂಚ, ಕಲ, ಬಲ, ಬೆಟ್ಟ, ಕಡಲು, ಗಗನ, ಅಳು- ನಗು, ಸೂರ್ಯ- ಚಂದ್ರ, ಗಂಡ- ಹೆಂಡತಿ, ಇರುವೆ- ಅನೆ, ನಾಯಿ- ನರಿ, ವಸ್ತುಗಳನ್ನು ಒಮ್ಮೆ ಚಕಮಕಿಯ ಬೆಳಕಾಗಿ ಮಿಂಚಾಗಿ , ಒಮ್ಮೆ ರಸಾರ್ದ್ರ ನುಡಿಯಾಗಿ , ಕಿಡಿಯಾಗಿ, ಲೇವಡಿಯಾಗಿ, ಉಪಹಸ್ಯವಾಗಿ, ಹಂಗಿಸಿ, ಭಂಗಿಸಿ, ನೇರವಾಗಿ , ವಕ್ರವಾಗಿ, ತಿರುಚಿ, ಮಣಿಸಿ, ಖಂಡಿಸಿ, ಮಂಡಿಸಿ, ಸಿಹಿಯಾಗಿ, ಒಗರಾಗಿ, ಖಾರವಾಗಿ, ಕಹಿಯಾಗಿ, ನಾನಾ ಕಲ್ಲಹರಳುಗಳನ್ನು ಎಸೆಯುತ್ತ, ಬಾಣಬಿರುಸು ಬಿಡುತ್ತ, ಪಟಾಕಿ – ಚಟಾಕಿಗಳನ್ನು ಹಾರಿಸುತ್ತ , ಕಾವ್ಯ ದಿಗಂತವನ್ನು ವಿಸ್ತರಿಸುತ್ತಾ ನಡೆದಿದ್ದಾರೆ.

    Original price was: $0.42.Current price is: $0.25.
    Add to basket
  • -40%

    ಅಲೆಯ ಆಲಾಪ

    0

    ಅಲೆಯ ಆಲಾಪ
    ಕನ್ನಡದಲ್ಲಿ ಇತ್ತೀಚೆಗೆ ಹೇರಳವಾಗಿ ಹನಿಗವನ, ಚುಟುಕುಗಳ ಸಾಹಿತ್ಯ ಸೃಷ್ಟಿಯಾಗಿದೆ. ತ್ರಿಪದಿ , ಮುಕ್ತಕ, ಚೌಪದಿಗಳು ಕೂಡ ಅಷ್ಟ ಜನ ಸಾಮಾನ್ಯರನ್ನು ಆಕರ್ಷಿಸಿದೆ. ಬೃಹತ್ತಾದುದನ್ನು , ಮಹತ್ತಾದದನ್ನು ಕಾಯಿಸಿ ಶೋಧಿಸಿ ಭಟ್ಟಿ ಇಳಿಸಿ ಮೂರು ಹ್ರಸ್ವ ಪಂಕ್ತಿಗಳಲ್ಲಿ ಹೇಳುವ ಯತ್ನಕ್ಕೆ ನನ್ನ ಮನ ಮುದಗೊಂಡಿತು.
    ನನ್ನ ಅನುಭವಗಳ, ನೆನಪುಗಳ , ಮನದ ಒಳಪುಗಳ ಸಾರೆಸರ್ವಸ್ವವನ್ನು ಹಿತಮಿತವಾಗಿ ಚಿತ್ರಿಸಲು ಯತ್ನಿಸಿದ್ದೇನೆ. ಪ್ರಾಸ ಎಲ್ಲಿ ಸಹಜವಾಗಿ ಬಂದಿದೆಯೋ ಅಲ್ಲಲ್ಲಿ ಅದನ್ನು ಬರಮಾಡಿಕೊಂಡಿದ್ದೇನೆ.
    ಇನ್ನು ಸುಂದರವಾದ ‘ಹೈಕು ಹಂದರದಲ್ಲಿ ಮನವು ವಾಯುವಿಹಾರ ಮಾಡುತ್ತದೆ ಬುವಿಬಾನ ದಾರಿಯಲಿ, ಜಪಾನಿನ ಹೈಕು ಕವಿತೆಗಳು ಮನದ ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮಭಾವ ಪ್ರಚೋದಿಸಿ ಭಾವನೆಗೆ ಪ್ರತಿಷ್ಠಾಪನೆಯ ಮಂಟಪವನ್ನು ಕಟ್ಟತ್ತದೆ ಕೇವಲ ಮೂರು ಸಾಲುಗಳಲ್ಲಿ.
    ಈ ಪುಸ್ತಕದಲ್ಲಿ ಬರುವ ತ್ರಿಪದಿಗಳು
    ಅಲೆಯ ಆಲಾಪ
    ಮುಕ್ಕಾಲು ಪದ್ಯಗಳು
    ಹೈಕು – ಹಂದರ

    Original price was: $0.42.Current price is: $0.25.
    Add to basket
  • -40%

    ಕಥೆ ಹೇಳುವೆ ಬಾ ಕಂದ

    0

    ಕಥೆ ಹೇಳುವೆ ಬಾ ಕಂದ
    ಈ ಪುಸ್ತಕವು ಹಲವಾರು ಕಥೆಗಳನ್ನು ಒಳಗೊಂಡಿದೆ. ಆ ಕಥೆಗಳೆಂದರೆ :
    ಬುದ್ಧಿವಂತ ಬದರಿ, ನರಿಯ ಸೇಡು, ಹಸಿರು ಚಿನ್ನ, ಮುಯ್ಯಿಗೆ ಮುಯ್ಯಿ, ಕುಸ್ತಿ ಕಲಿತ ಆಮೆ, ಮಂಗೂಸ್ ಮತ್ತು ಹಾವು, ರೈತ ರಾಮಣ್ಣ,  ಪಾಠ ಕಲಿತ ಒಂಟೆ,  ನರಿಯ ಮೋಸ,ಸೊಂಬೇರಿ ಮೊಲ, ಸಿಂಹದ ಜನ್ಮ ದಿನ, ಮೂರ್ಖ ನಾಯಿಗಳು, ಬೆಲೆಯಿಲ್ಲದ ಧನ್ಯತೆ, ವ್ಯಾಪಾರಿಯ ಸಾಕ್ಷಿ, ದೇವರು ಮತ್ತು ಮಾನವ, ಕಪ್ಪೆ ವೈದ್ಯನಾಥ, ಮೇಕೆಯ ಉಪದೇಶ,  ದೇವರು ಕರುಣಾಮಯ, ಕಪ್ಪೆಗಳ ಜಗಳ, ಚಿನ್ನದ ವಿಗ್ರಹ, ಸಂಗೀತಗಾರ ತೋಳ, ಬುದ್ಧಿವಂತ ಕತ್ತೆ, ಸತತ ಪ್ರಯತ್ನದ ಫಲ, ತಾಳ್ಮೆಯ ಫಲ, ದೇವರು ಕೊಟ್ಟ ವರ, ಬುದ್ಧಿವಂತ ಕಲಾವಿದ, ಮೇಧಾವಿ ನ್ಯಾಯಾಧೀಶ, ಪಕ್ಷಿಯ ಉಪಕಾರ, ನರಿಯ ಪುನರ್ಜನ್ಮ, ಮೂರ್ಖ ಸ್ನೇಹಿತರು, ಕುಂಬಾರನ ಪ್ರಾರ್ಥನೆ, ಹೂದಳ ಮತ್ತು ಮುಳ್ಳು, ಪಕ್ಷಿಗಳಿಗೆ ವೈದ್ಯ,  ಕೆಟ್ಟದ್ದು ಮಾಡಬಾರದು,  ಕುತಂತ್ರಿ ಕಾಗೆ, ಬುದ್ಧಿವಂತ ವ್ಯಾಪಾರಿ, ಎದೆಗಾರಿಕೆ, ಕನಸುಗಳು ನಿಜವಾಗುವುವೇ?, ನಂಬಿ ಕೆಟ್ಟ ಕರಿಯಣ್ಣ, ಇಲಿಯ ಚಾತುರ್ಯ, ದೇವರನ್ನು ದೂಷಿಸಬೇಡ,  ಸಮಯಕ್ಕೆ ತಕ್ಕ ನುಡಿ, ಸೋಮಾರಿ ಹಕ್ಕಿಗಳು, ಮ್ಯಾಜಿಕ್ ಗಂಗಾಳ, ಕತ್ತೆ ಜಂಭ, ಕೋತಿಗೇಕೆ ಉಪದೇಶ?, ಸತ್ತ ಮೊಸಳೆ, ಚಿಟ್ಟೆಯ ಹಿರಿಮೆ, ಕುಂಟು ನಾಯಿ, ಎರಡು ಕಪ್ಪೆಗಳು,  ಆನೆಯ ಉದ್ದ ಸೊಂಡಿಲು,ರಾಜಕುಮಾರಿಗೆ ಒಲಿದ ಹಕ್ಕಿ, ಆನೆಯ ಹಲ್ಲು, ನರಿಯ ಉಡುಗೊರೆ, ಪಂಜರದ ಕೋತಿ, ಮೂರ್ಖ ಕಪ್ಪೆ, ನರಿಯ ಉಪಾಯ, ಮುಯ್ಯಿಗೆ ಮುಯ್ಯಿ, ಸಿಂಹದ ಪ್ರೀತಿ.

    Original price was: $0.60.Current price is: $0.36.
    Add to basket
  • -40%

    ಅಂತರಂಗಯಾನ

    0

    ಅಂತರಂಗಯಾನ
    ಹೈಕುಗಳು ಸಹೃದಯರ ಹೃದಯವನ್ನು ಹಾಯ್ದು ಒಳನುಗ್ಗಿ ಚಿರವಾಗಿ ಅಲ್ಲೇ ಸೆರೆಯಾಗಿರಬಲ್ಲವು. ಏಕೆಂದರೆ ಇಲ್ಲಿನ ಕಾವ್ಯದ ವಿಚಾರಗಳಿಗೆ ಭಾವನೆಗಳಿಗೆ ಕಾಲವನ್ನು ಮೀರಿ ನಿಲ್ಲುವ ಸತ್ಯದ ಸ್ಪರ್ಶಗುಣವಿದೆ.
    ಈ ಕೃತಿಯಲ್ಲಿನ ವಿಷಯ ವ್ಯಾಪ್ತಿಯ ಹರಹು ತುಂಬ ವಿಶಾಲವಾದುದು. ಸೃಷ್ಟಿಯಲ್ಲಿನ ಪ್ರಕೃತಿ ಪರಿಸರದಿಂದ ಮೊದಲ್ಗೊಂಡು ದಿನಬಳಕೆಯ ಅತ್ಯಂತ ಪರಿಚಿತ ಸಾಮಾನ್ಯ ಸಂಗತಿಗಳವರೆಗೂ ಈ ಹೈಕುಗಳು ನಮ್ಮೊಂದಿಗೆ ಆಪ್ತವಾಗಿ ಸಂಭಾಷಿಸುತ್ತವೆ. ಊದುಕಡ್ಡಿ,, ಇರುವೆ, ಸೌಟು, ಕುಕ್ಕರ್, ಸಾಬೂನುಗುಳ್ಳೆ, ಗಾಳಿಪಟ…. ಕಡೆಗೆ ಸೋಪಿನಲ್ಲಿ ಸಿಕ್ಕ ಕೂದಲೆಳೆ… ಅದೇನೇ ಇರಲಿ, ಇವೆಲ್ಲ ಯಾವುದೊ ತತ್ವವೊಂದನ್ನು ಬಿಂಬಿಸುವ ಸತ್ವಶಾಲಿ ಸಾಲುಗಳಾಗಿ ಪರಿಣಮಿಸಿಬಿಡುತ್ತವೆ. ಅತಿಬಳಕೆಯಿಂದಾಗಿ ಗಮನಕ್ಕೇ ಬಾರದ ವಿಷಯವಸ್ತು ಕೂಡ ಇಲ್ಲಿ ಓದುಗನ ಗಮನ ಸೆಳೆದು ಸೃಷ್ಟಿವೈಚಿತ್ರ್ಯಕ್ಕೆ ನನ್ನ ನಮನ ಸಲ್ಲಿಸಿಬಿಡುತ್ತದೆ. ಇದು ನಿಜಕ್ಕೂ ಕವಯತ್ರಿಯಲ್ಲಿರುವ ಕಾವ್ಯ ಕೈಚಳಕವೇ ಸರಿ!

    Original price was: $0.60.Current price is: $0.36.
    Add to basket
  • -40%

    ಚೌಕಟ್ಟಿನಾಚೆ

    0

    ಚೌಕಟ್ಟಿನಾಚೆ
    ಕಥಾ ಸಂಕಲನ
    ಉಮೇಶ್ ದೇಸಾಯಿ ಆಧುನಿಕ ಕಾಲದ ತಲ್ಲಣಗಳನ್ನು ಕತೆಗಳ ಮೂಲಕ ಹಿಡಿಯಲು ಹೊರಡುತ್ತಾರೆ. ಅವರದು ಅಪಾರ್ಟ್ ಮೆಂಟು ಬದುಕಿನ ಅಪರೂಪದ ಕಥಾ ಪ್ರಪಂಚ. ಅಪಾರ್ಟುಮೆಂಟು ಬದುಕು ಅನ್ನುವ ಪದವೇ ನಗರಾಧುನಿಕ ಜೀವನಶೈಲಿಯನ್ನೂ ಅದರ ಏಕತಾನತೆ, ಒತ್ತಡ ಮತ್ತು ಏಕಾಂತಗಳನ್ನು ಸೂಚಿಸುತ್ತದೆ. ನಗರ ಜೀವನದ ಅತಿದೊಡ್ಡ ಸಂಕಟವೆಂದರೆ ಏಕಾಂತ, ಕಡಿದ ಕೊಂಡಿಗಳು, ಚದುರಿದ ಸಂಬಂಧಗಳು ಮತ್ತು ಬೆಸೆಯಲಾಗದ ಮನಸ್ಸುಗಳು ಎಂಬುದನ್ನು ಹೇಳುವಂಥ ಅನೇಕ ಕತೆಗಳು ಈ ಸಂಕಲನದಲ್ಲಿವೆ.

    Original price was: $1.44.Current price is: $0.86.
    Add to basket
  • -40%

    ಬಾಜೀರಾವ್ ಮಸ್ತಾನಿ

    0

    ಬಾಜೀರಾವ್ ಮಸ್ತಾನಿ
    ಡಾ. ಸರಜೂ ಕಾಟ್ಕರ್
    ಬಾಜೀರಾವ್ ಮಸ್ತಾನಿ ಒಂದು ಅದ್ಭುತವಾದ ಪ್ರೇಮದ ಕಥೆ. ಪುಣೆಯಲ್ಲಿ ಮಸ್ತಾನಿ ಮಹಲ್ ಎಂಬ ವಾಸ್ತು ಇದ್ದರೂ ಇತಿಹಾಸದ ಅಧಿಕೃತ ದಾಖಲೆಯಲ್ಲಿ ಎಲ್ಲೂ ಮಸ್ತಾನಿಯ ಉಲ್ಲೇಖವೇ ಬರುವುದಿಲ್ಲ. ಬಾಜೀರಾವ್ ನಿಂದ ಆಕೆಗೆ ಆದ ಮಗ ಸಮಶೇರ ಬಹಾದ್ದೂರ ಪಾನೀಪತ್ ದಲ್ಲಿ ನಡೆದ ಯುದ್ಧದಲ್ಲಿ ಕೊಲ್ಲಲ್ಪಟ್ಟ ಎಂದು ಹೇಳುವ ಇತಿಹಾಸ ಮಸ್ತಾನಿಯ ಬಗ್ಗೆ ಜಾಣ ಮೌನ ತೋರಿಸುತ್ತದೆ. ಆದರೆ ಲೋಕ ಸಾಹಿತ್ಯದಲ್ಲಿ, ಜಾನಪದ ಕಥಾ ಕಥನಗಳಲ್ಲಿ ಅಲ್ಲಲ್ಲಿ ಬಾಜೀರಾವ್-ಮಸ್ತಾನಿಯರ ಕಥೆ ಉಲ್ಲೇಖಿಸಲ್ಪಡುತ್ತದೆ.

    Original price was: $1.44.Current price is: $0.86.
    Add to basket
  • -40%

    ಯಯಾತಿ

    0

    ‘ಕವಿಯಾಗಬೇಕು’ ಎಂದು ಕೊಂಡಿದ್ದ ಗಿರೀಶ್ ಕಾರ್ನಾಡ್ ಅವರು ಬರೆದ ಮೊದಲ ನಾಟಕ. ರೋಡ್ಸ್ ಸ್ಕಾಲರ್ಶಿಪ್ ಮೇಲೆ ಇಂಗ್ಲೆಂಡಿಗೆ ತೆರಳುವ ಮುನ್ನ ತನ್ನ ’ಯಯಾತಿ’ಯ ಹಸ್ತಪ್ರತಿಯನ್ನು ಮನೋಹರ ಗ್ರಂಥಮಾಲೆಯ ಜಿ.ಬಿ. ಜೋಶಿ ಅವರ ಬಳಿ ನೀಡಿದ್ದರು ಗಿರೀಶ್ ಕಾರ್ನಾಡ್ ಅವರು.

    Original price was: $0.96.Current price is: $0.58.
    Add to basket