• -40%

    ಕಾಣುತಿದೆ ನದಿಯ ಆಚೆಯ ದಂಡೆ

    0

    ಕಾಣುತಿದೆ ನದಿಯ ಆಚೆಯ ದಂಡೆ
    ಕಾಣುತಿದೆ ನದಿಯ ಆಚೆಯ ದಂಡೆ- ಈ ಸಂಗ್ರಹದಲ್ಲಿಯ ಕೆಲವೊಂದು ಕಥೆಗಳು “ಇದು ನನ್ನ ಜೀವನ. ನನ್ನ ಮನಸ್ಸಿನಂತೆ ತುಂಬಿದ ಭಾವರಂಗಗಳನ್ನು ಉಪಯೋಗಿಸುವ ಪೂರ್ಣ ಅಧಿಕಾರ ನನಗಿದೆ” – ಈ ರೀತಿಯ ಸ್ವಾಭಿಮಾನವನ್ನುಂಟು ಮಾಡುವಂಥವುಗಳು ಹಾಗೂ ಪರಂಪರೆಯಲ್ಲಿಯ ಒಳ್ಳೆಯದನ್ನು ಸ್ವತಃ ಬಿತ್ತುವ ಮಹಿಳೆಯರ ಕಥೆಗಳು ಇಲ್ಲಿವೆ.

    Original price was: $1.44.Current price is: $0.86.
    Add to basket
  • -40%

    ಮಳೆ ನಿಂತು ಹೋದ ಮೇಲೆ

    0

    ಮಳೆ ನಿಂತು ಹೋದ ಮೇಲೆ
    ಮಳೆ ನಿಂತು ಹೋದ ಮೇಲೆ ಇದು ಪ್ರಚಲಿತ ವಿದ್ಯಮಾನಗಳ ಮೇಲೆ ಬೆಳಕೆರೆವ ಕಿರು ವೈಚಾರಿಕ ಲೇಖನಗಳ ಸಂಗ್ರಹ. ಈ ಸಂಕಲನದ ‘ಸಿಇಓ ಆಫ್ ದ ಹೋಮ’, ‘ಕೆಪಿಒದಲ್ಲಿ ಸಂಧಿ’, ‘ತ್ಸುನಾಮಿ’ಯಂತಹ ಲೇಖನಗಳು ಲೇಖಕಿಯ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆ, ಬೆಳವಣಿಗೆಗಳ ಸೂಕ್ಷ್ಮ ನೋಟವನ್ನು ಅನಾವರಣಗೊಳಿಸುತ್ತದೆ. ‘ಬದಲಾಗುತ್ತಿರುವ ಅತ್ತೆ-ಸೊಸೆಯರ ಸಂಬಂಧ’ ಮತ್ತು ‘ಪ್ರಬುದ್ಧ ಮಹಿಳೆಯ ಸಾಮಾಜಿಕ ಜವಾಬ್ದಾರಿ’ ಲೇಖನಗಳಲ್ಲಿ ಲೇಖಕಿ ಇಂದಿನ ಸುಶಿಕ್ಷಿತ ಮತ್ತು ಪ್ರಜ್ಞಾವಂತ ಮಹಿಳೆ ಇಡಬೇಕಾದ ಎಚ್ಚರಿಕೆಯ ಹೆಜ್ಜೆ ಗುರುತುಗಳ ನೀಲನಕ್ಷೆಯಿದೆ. ವಿವಿಧ ಸಂಬಂಧಗಳಲ್ಲಿದ್ದುಕೊಂಡು ಮಹಿಳೆ ನಿರ್ವಹಿಸಬೇಕಾದ ಕರ್ತವ್ಯ ಮತ್ತು ಜವಾಬ್ದಾರಿಗಳ ಮಾಹಿತಿಯನ್ನು ನೀಡುತ್ತವೆ.

    Original price was: $0.96.Current price is: $0.58.
    Add to basket
  • -40%

    ಮಾತು ಹೇಗಿದ್ದರೆ ಚೆನ್ನ ?

    0

    ಮಾತು ಹೇಗಿದ್ದರೆ ಚೆನ್ನ ?
    (ವ್ಯಕ್ತಿತ್ವ ವಿಕಸನ)
    ಮಾತಿನಿಂದ ಏನೆಲ್ಲಾ ಸಾಧ್ಯ? ಎಂಬ ಪ್ರಶ್ನೆಗೆ `ಮಾತಿನಿಂದ ಎಲ್ಲವೂ ಸಾಧ್ಯ’ ಎನ್ನುವುದೊಂದೇ ಉತ್ತರ. ಮಾತನ್ನು ಬರೀ ಆಡಲು ಕಳಿತರೆ ಸಾಲದು. ಹೇಗೆ? ಎಲ್ಲಿ? ಎಷ್ಟು ಆಡಬೇಕು? ಹೇಗೆ ಆಡಬಾರದು? ಯಾಕೆ ಆಡಬಾರದು? ಎನ್ನುವುದನ್ನೂ ತಿಳಿದಿರಬೇಕು. ಮಾತಿನ ಬಗ್ಗೆ ಎಲ್ಲವೂ ಈ ಪುಸ್ತಕದಲ್ಲಿ ಇದೆ ಎಂದಲ್ಲ. ಅದು ಸಾಧ್ಯವೂ ಇಲ್ಲ. ಆದರೆ ಕನಿಷ್ಟ ಇಷ್ಟನ್ನಾದರೂ ತಿಳಿದಿದ್ದರೆ ಒಂದಿಷ್ಟು ವ್ಯಕ್ತಿತ್ವ ವಿಕಸನ ಸಾಧ್ಯ.

    Original price was: $1.44.Current price is: $0.86.
    Add to basket
  • -40%

    ಪರಿತ್ಯಕ್ತ ಮತ್ತು ಇತರ ಕತೆಗಳು

    0

    ಪರಿತ್ಯಕ್ತ ಮತ್ತು ಇತರ ಕತೆಗಳು
    ಮೊದಲ ಸ್ಪಂದನ
    ಇವರ ‘ಪರಿತ್ಯಕ್ತ ಮತ್ತು ಇತರ ಕಥೆಗಳು’ ಎಂಬ ಪ್ರಥಮ ಕಥಾ ಸಂಕಲನದಲ್ಲಿ ಆಧುನಿಕ ಪರಿಸರದಲ್ಲಿ ಮಹಿಳಾ ಸಂವೇದನೆ ಕುರಿತ ಕಥೆಗಳೇ ಇವೆ. ವಿವಿಧ ಪತ್ರಿಕೆಗಳಲ್ಲಿ ಅನೇಕ ವೈಚಾರಿಕ ಲೇಖನಗಳನ್ನು ಪ್ರಕಟಿಸಿದ ಲೇಖಕಿ ಅದರ ಮುಂಬಡ್ತಿ ಎಂಬಂತೆ ಕಥೆಗಳಿಗೆ ಕೈ ಇಕ್ಕಿರುವುದು ಸಹಜವೇ ಆಗಿದೆ. ಹತ್ತು ಕಥೆಗಳ ಹರಹಿನಲ್ಲಿ ಅವರ ಅನುಭವಗಳು ಅನಾವರಣಗೊಂಡಿವೆ.

    Original price was: $0.72.Current price is: $0.43.
    Add to basket
  • -40%

    ಹೊಸ ಹಾಡಿನ ಪಲ್ಲವಿ ಮತ್ತು ಇತರ ಕಥೆಗಳು

    0

    ಅತಿ ಸಂಶಯ ಪ್ರವೃತ್ತಿಯ ಗಂಡ, ಅವನಿಂದ ಹಿಂಸೆಗೊಳಗಾಗುವ ಪತ್ನಿ ‘ಹೊಸ ಹಾಡಿನ ಪಲ್ಲವಿ’ ಕತೆಯ ಕೇಂದ್ರಬಿಂದು. ಗಂಡ ಕೊನೆಗೆ ಬದಲಾಗುವ ಸನ್ನಿವೇಶ ಹೃದಯಸ್ಪರ್ಶಿಯಾಗಿದೆ. ‘ತಿರುವು’ ಅನೀರಿಕ್ಷಿತ ತಿರುವು ಹೊಂದಿರುವ ಕತೆ. ಸ್ವಾರಸ್ಯಕರವಾಗಿ ನಿರೂಪಿತವಾಗಿದೆ. ಅಂತರ್ಜಾತಿ ವಿವಾಹಕ್ಕೆ ಮನೆಯವರ ಅಡ್ಡಿ, ಅದಕ್ಕಾಗಿ ಮಗ ಅನುಸರಿಸುವ ತಂತ್ರ ಇಲ್ಲಿಯ ವಿಶೇಷ.

    Original price was: $0.72.Current price is: $0.43.
    Add to basket
  • -40%

    ಅಕ್ವೇರಿಯಮ್ ಮೀನು

    0

    ಅಕ್ವೇರಿಯಮ್ ಮೀನು
    ಇದು ನನ್ನ ಮೊದಲ ಕವನ ಸಂಕಲನ. ಆಗೀಗ ಬರೆಯುತ್ತ ಬಂದ ಕವಿತೆಗಳಲ್ಲಿ ಕೆಲವನ್ನು ಆಯ್ದು ಇಲ್ಲಿ ಸಂಗ್ರಹಿಸಿದ್ದೇನೆ. ಕೆಲವು ರೂಪಾಂತರಗಳೂ ಇವೆ. ನಲ್ವತ್ತೊಂದು ವರ್ಷಗಳ ಹಿಂದೆ ನನ್ನ ಕವನ ಸಂಕಲನ ‘ಅಕ್ವೇರಿಯಮ್ ಮೀನು’ ಪ್ರಕಟವಾಯಿತು.

    Original price was: $0.84.Current price is: $0.50.
    Add to basket
  • -40%

    ಹಾಗೇ ಸುಮ್ಮನೇ

    0

    ಹಾಗೇ ಸುಮ್ಮನೇ
    ಮನೆಯಲ್ಲೇ ಜರುಗಿದ ಹಾಸ್ಯ ಪ್ರಸಂಗಗಳನ್ನು  ಆಗಾಗ್ಗೆ ಬರೆದು  ಮಯೂರ, ಕಸ್ತೂರಿ ತುಷಾರಕ್ಕೆ ಕಳುಹಿಸುತ್ತಿದ್ದೆ. ಅದನ್ನೋದಿದ ಸಾಕಷ್ಟು ಜನ  ಫೊನಾಯಿಸಿ ಅಭಿನಂದಿಸುತ್ತಿದ್ದರು. ಹೀಗಾಗಿ ದೊಡ್ಡ ಪ್ರಸಂಗಗಳನ್ನೇ: ಸೇರಿಸಿ  ಬರೆಯಬಾರದೇಕೆ ಎಂದು ಅನ್ನಿಸಿದ್ದುಂಟು, ಬಾಲ್ಯದಲ್ಲಿ ಜರುಗಿದ ಘಟನೆಗಳೋ,  ಪತಿಯೊಂದಿಗಿನ ಹಾಸ್ಯ ಪ್ರಸಂಗವೋ ತೆಗೆದುಕೊಂಡು ಬರದೆ, ಮನೆಗೆ ಬಂದ  ಅಣ್ಣ ಅಕ್ಕಂದಿರ ಮುಂದೆ ಓದಿ ತೋರಿಸುತ್ತಿದ್ದೆ.  ಅವರ ಮುಖದಲ್ಲಿ ಅರಳಿದ  ಮುಗುಳ್ನಗೆ ನನ್ನಲ್ಲಿ ಬರೆಯುವುದಕ್ಕೆ ಪ್ರೆರೇಪಿಸಿತು ಎಂದು ಹೇಳಬಹುದು.

    Original price was: $0.60.Current price is: $0.36.
    Add to basket
  • -40%

    ಕೋತಿಕಥೆ

    0

    ಕೋತಿಕಥೆ
    ಬೆಸಗರಹಳ್ಳಿ ರಾಮಣ್ಣ
    ರಂಗರೂಪ
    ಸುರೇಶ ಬಿ.
    ಇದೊಂದು ರಾಜಕೀಯ ನಾಟಕ.

    Original price was: $0.84.Current price is: $0.50.
    Add to basket
  • -40%

    ಕಾಡು ಮಲ್ಲಿಗೆ

    0

    ಕಾಡು ಮಲ್ಲಿಗೆ
    ೧೯೮೪ರಲ್ಲಿ ವ್ಯಾಸರಾಯ ಬಲ್ಲಾಳರ ಕೃತಿಗಳನ್ನು ಕುರಿತ ವಿಚಾರ ಸಂಕಿರಣ ನಡೆದಾಗ ಈ ನಾಟಕವನ್ನು ಸಿದ್ಧಪಡಿಸಲಾಯಿತು.
    “ಟೆರೇಸ್ ಥಿಯೇಟರ್” ಎಂಬ ಆಲೋಚನೆಯಡಿಯಲ್ಲಿ ಕಲಾಮಂದಿರದ ಮಹಡಿಯ ಮೇಲೆ ಮೊದಲ ಪ್ರಯೋಗವನ್ನು ಬಿ.ಸುರೇಶ ನಿರ್ದೇಶನದಲ್ಲಿ ಚಿತ್ರಾ ತಂಡದ ಗೆಳೆಯರು ಅಭಿನಯಿಸಿದರು. ಬೆಂಗಳೂರು ದೂರದರ್ಶನದ ಮೂಲಕ ೧೯೯೧ರಲ್ಲಿ ನಾಟಕವು ಪ್ರಸಾರವಾಯಿತು.
    ಈ ನಾಟಕ ಕತೆ ಭಾರತಕ್ಕೆ ಸ್ವಾತಂತ್ರ್ಯ ಬಂದ ಆರಂಭದ ದಿನಗಳದ್ದು ಸುಮಾರು ೧೯೫೦ರ ಆಸುಪಾಸು. ಆದರೆ ೧೯೭೦ರ ದಶಕದ ಭರತರಾಜ್ ಸಿಂಗ್ ಅವರ ವಿವರವೂ ಮಾತಾಗಿ ನಾಟಕದಲ್ಲಿ ಬರುತ್ತದೆ.
    ಹೀಗೆ ‘ಕಾಲ’ವನ್ನು ಹಾರುವುದು ವಿಮರ್ಶಾ ಮಾನ್ಯವಲ್ಲ, ಆದರೆ ಕಷ್ಟವಲ್ಲ. ಅಭಿನಯಿಸುವವರಿಗೆ ಎದುರಿಗೆ ಕೂತವರು ಪ್ರಬುದ್ಧರು ಎಂಬ ನಂಬಿಕೆ ಇದ್ದರೆ ಸಾಕು.
    ಹೀಗೆಯೇ ೧೯೬೦ರ ದಶಕದ ಮಿಲ್ಲುಗಳ ಮುಷ್ಕರ ಹಾಗೂ ಗೋಲಿಬಾರು ಸಹ ಈ ನಾಟಕದೊಳಗೆ ಪ್ರಸ್ತಾಪವಾಗುತ್ತದೆ. ಈ ‘ಕಾಲೋಲ್ಲಂಘನ” ಕಥನ ಕಾರಣಕ್ಕಾಗಿ ಮಾತ್ರ ಆಗಿದೆ.

    Original price was: $0.84.Current price is: $0.50.
    Add to basket
  • -40%

    ಬೆಟ್ಟದ ತಪ್ಪಲಿನಿಂದ ಕಡಲ ತಡಿಗೆ

    0

    ಬೆಟ್ಟದ ತಪ್ಪಲಿನಿಂದ ಕಡಲ ತಡಿಗೆ
    ಬೆಟ್ಟದ ತಪ್ಪಲಿನಿಂದ ಕಡಲ ತಡಿಗೆ ಪುಸ್ತಕವು ಬೆಟ್ಟದ ತಪ್ಪಲ ಮಾರಿಯಾದ ಹುಲಿಯನ್ನು ಮನೆಗೆ ತಂದು, ಅದು ಪಾಪ ರೂಪದ ಬೇತಾಳನಾಗಿ ಬೆಂಬತ್ತಿ ಹೆಗಲೇರಿ ಅನುದಿನವೂ ಪೀಡಿಸುತ್ತಿರಲಾಗಿ, ಅದರ ಜೀವನವನ್ನು ದುರಂತದಲ್ಲಿ ಅಂತ್ಯಗೊಳಿಸಿದ ಘಟನೆಯಾಗಿದೆ.

    Original price was: $0.96.Current price is: $0.58.
    Add to basket
  • -40%

    ಈಡೊಂದು ಹುಲಿಯೆರಡು 

    0

    ಈಡೊಂದು ಹುಲಿಯೆರಡು
    ‘ಬೇಟೆಯ ನೆನಪುಗಳು ‘ ಕನ್ನಡ ಜನತೆಯಲ್ಲಿ ಮೂಡಿಸಿದ ಪರಿಣಾಮ ರಮಣೀಯತೆಗೆ ಸರಿಮಿಗಿಲೆನಿಸಿ ‘ ಈಡೊಂದು ಹುಲಿಯೆರಡು’ ಎಂಬೀ ಕೃತಿಯು ಮತ್ತಷ್ಟು ಬಣ್ಣ ಬೆಡಗು ಬೆರಗುಗಳನ್ನು ಹೊತ್ತು ವಿಜೃಂಭಿಸುವುದರಲ್ಲಿ ಸಂಶಯವಿಲ್ಲ.  ಇಲ್ಲಿರುವುದು ಬರಿಯ ಬೇಟೆಯ ವ್ಯಸನದ ಕ್ರೌರ್ಯದ ರಕ್ತರಂಜಿತ ಕಥನವಲ್ಲ; ನಾಲ್ಕೈದು ದಶಕಗಳ ಹಿಂದಿನ ತುಳುವ ಮಲೆನಾಡಿನ ಬದುಕಿನ ಜೀವಂತ ಚಿತ್ರಣ; ಒಂದು ಸೀಮೆಯ ಜನದ ನಡವಳಿಕೆಯನ್ನು ನಿಚ್ಚಳವಾಗಿ ಬಣ್ಣಿಸಿದ ಕುಂಚದ ಕುಶಲತೆ.

    Original price was: $1.80.Current price is: $1.08.
    Add to basket
  • -40%

    ಬೇಟೆಯ ನೆನಪುಗಳು

    0

    ಬೇಟೆಯ ನೆನಪುಗಳು
    ಪ್ರವಾಸ ಕಥನ ಸಾಹಿತ್ಯದ ಒಂದು ಪ್ರಕಾರ; ಅದರಲ್ಲಿ ಕತೆಗಾರಿಕೆಯ ಅಂಶ ಅಡಕವಾಗಿರುವುದರಿಂದ ಆ ಪ್ರಬಂಧಪ್ರಕಾರ ಹೆಚ್ಚಿನ ಮೆಚ್ಚುಗೆ ಪಡೆದಿದೆ. `ಬೇಟೆಯ ನೆನಪುಗಳು’ ಎಂಬೀ ತೆರನ ಬರವಣಿಗೆ ಅದೇ ಹಾದಿಯಲ್ಲಿ ಸಾಗಿದರೂ, ಅದಕ್ಕಿಂತಲೂ ಆಕರ್ಷಕವಾಗಿ ಮೂಡಿಬಂದ ಒಂದು ಮಹತ್ತರ ಸಾಹಿತ್ಯ ಪ್ರಕಾರವೆನ್ನಬೇಕು. ಇದರಲ್ಲಿನ ವರ್ಣನೆ ಕಾದಂಬರಿಗಳ ವರ್ಣನೆಯ ಮಟ್ಟವನ್ನು ಮುಟ್ಟಬಲ್ಲುದು; ಅನೇಕ ಕುತೂಹಲಕಾರೀ ಘಟನೆಗಳು ಅಲ್ಲಲ್ಲಿ ಮೂಡಿ ಬಂದಿರುವುದರಿಂದ ಪತ್ತೇದಾರಿ ಕತೆಗಳ ಆಸಕ್ತಿ ಕೆರಳಿಸುವ ಅಂಶಗಳೂ ಇಲ್ಲಿ ವಿಪುಲವಾಗಿ ತುಂಬಿರುತ್ತವೆ.

    Original price was: $1.80.Current price is: $1.08.
    Add to basket
  • -40%

    ಬೇಟೆಯ ಉರುಳು

    0

    ಬೇಟೆಯ ಉರುಳು
    ತುಳುನಾಡ ಮಲೆನಾಡ ಮಣ್ಣಿನ – ಕನ್ನಡದ ಕೊಡುಗೆ. ಈ ಮಾತಿಗೆ ಪೂರಕವಾಗಿ ಭಾವೀ ಜನಾಂಗಕ್ಕಾಗಿ `ಬೇಟೆಯ ಉರುಳು’ – ಎಂಬ ಈ ಕೃತಿಯನ್ನು ರಚಿಸಿದ್ದಾರೆ. ಬೇಟೆಯ ಕುರಿತಾದ ಇವರ ಅನುಭವ ಬತ್ತದ ತೊರೆಯಾಗಿ ಹರಿಯುತ್ತದೆ.
    ಇಲ್ಲಿ ಚಿಕ್ಕ ಪುಟ್ಟ ಬೇಟೆಗಳಲ್ಲಿರುವ ಜಾಣ್ಮೆ, ವಿಶಿಷ್ಟತೆಗಳ ಸಜೀವ ವಿವರಣೆಗಳಿವೆ. ಬೇಟೆಯ ಹವ್ಯಾಸ ಕಾರಣಾಂತರಗಳಿಂದ ದೂರವಾಗುತ್ತಿರುವ ಈ ಕಾಲದಲ್ಲಿ ಈ ಸಂಬಂಧವಾದ ಸಾಕ್ಷ್ಯಚಿತ್ರದ ದಾಖಲೆಯು ಇದಾಗಿದೆ. ಬಾಯಿಮಾತಿನ ಅನುಭವವು ಬರೆಹರೂಪವಾಗಿ ಚಿತ್ರವತ್ತಾಗಿ ಇಲ್ಲಿ ಉಳಿಯುತ್ತದೆ.
    ಭಾವೀಜನಾಂಗಕ್ಕಾಗಿ ಬೇಟೆಯ ಉರುಳು ಎಂಬ ಈ ಕೃತಿಯು ಶ್ರೀ ಜತ್ತಪ್ಪ ರೈಗಳ ಈ ಹಿಂದಿನ ಎರಡು ಕೃತಿಗಳನ್ನೂ ಇನ್ನೊಂದು ಮುಖವಾಗಿ ದಾಟಿಹೋಗಿದೆ ಎನ್ನಬೇಕು. ಪುರಾಣ ಚರಿತ್ರೆಗಳ ಕಾಲದಲ್ಲಿ ದೊರೆಯುವ ಬೇಟೆಯ ಸಂದರ್ಭಗಳ ಸಂಶೋಧಕ ಮೌಲ್ಯವನ್ನು ಈ ಕೃತಿಯು ಎತ್ತಿ ತೋರಿಸುತ್ತದೆ. ಇದು ಇದರ ಹೆಚ್ಚಳ. ಮಕ್ಕಳಿಗಾಗಿ ಕಥೆ ಹೇಳುವಾಗ ಕೊಂಡಿ ಕಳಚಿಕೊಳ್ಳದಂತೆ ಕುತೂಹಲ ಕೊನರಿಡುವಂತೆ ಮಾಡುವ ತನ್ನದೇ ಆದ ಕಥಾನಕದ ತಂತ್ರವಿಲ್ಲಿ ಎದ್ದು ತೋರುತ್ತಿದೆ. ಕಥೆಗಳನ್ನು ಹೇಳುವಾಗ ವಿವರಣೆಗಾಗಿ ತಡಕಾಡುವುದಿಲ್ಲ. ಅವೆಲ್ಲ ತಾವಾಗಿಯೇ ಒಂದರ ಹಿಂದೊಂದು ಹರಿದುಬಂದಿವೆ.

    Original price was: $1.80.Current price is: $1.08.
    Add to basket
  • -40%

    ರಕ್ತಚಂದನ

    0

    ರಕ್ತಚಂದನ

    …..ಒಂದು ವೈವಿಧ್ಯಮಯ ಕಥಾ ಸಂಕಲನ

    ಹನ್ನೆರಡು ಕಥೆಗಳ ಹೂರಣ…
    ನಾಡಿನ ಪ್ರಮುಖ ಪತ್ರಿಕೆಗಳಾದ ಸುಧಾ, ತರಂಗ, ಉತ್ಥಾನ ಮತ್ತು ತುಷಾರದಲ್ಲಿ ಪ್ರಕಟಿತ ಸಾಮಾಜಿಕ ಮತ್ತು ಪತ್ತೇದಾರಿ ಕತೆಗಳ ಸಂಕಲನ

    Original price was: $1.92.Current price is: $1.15.
    Add to basket
  • -40%

    ನಾಳೆಯನ್ನು ಗೆದ್ದವನು

    0

    ನಾಳೆಯನ್ನು ಗೆದ್ದವನು
    ಅಭಿಮನ್ಯು ಎಂಬ ಇಂಟೆಲಿಜೆನ್ಸ್ ಉಪ ನಿರ್ದೇಶಕನನ್ನು ಅನ್ಯಗ್ರಹ ಜೀವಿಗಳು ತಮ್ಮ ನೌಕೆಗೆ ಕದ್ದೊಯ್ದು ಕಾಲಮಾನದ ರಹಸ್ಯ, ಅಂತರಿಕ್ಷದ ಗುಪ್ತ ಮತ್ತು ಅನೂಹ್ಯ ಸಂಗತಿಗಳನ್ನು ತೆರೆದಿಡುತ್ತದೆ…ಆದರೆ ಈ ಪರಮಸಶಕ್ತ ಮತ್ತು ಮುಂದುವರೆದ ಜೀವಿಗಳು ಭೂಮಿಯಲ್ಲಿನ ಮುಂದೆ ನಡೆಯುವ ದೊಡ್ಡ ಅನಾಹುತ ತಡೆಯಲು ಅಭಿಮನ್ಯುವಿನ ಸಹಾಯ ಬೇಡುತ್ತವೆ.. ಅಭಿಮನ್ಯುವಿನ ಜೀವನದ ಅತ್ಯಂತ ಸೂಕ್ಷ್ಮ ಹಾಗೂ ಅಪಾಯಕರ ಮಿಶನ್ ಇದಾಗುತ್ತದೆ. ಭೂತ, ವರ್ತಮಾನ, ಭವಿಷ್ಯ ಕಾಲಗಳ ಹಿನ್ನೆಲೆಯ ವೈಜ್ಞಾನಿಕ ಥ್ರಿಲ್ಲರ್!

    Original price was: $0.83.Current price is: $0.50.
    Add to basket
  • -20%

    ಸಮಸ್ತ ಕಥೆಗಳು

    0
    Original price was: $5.76.Current price is: $4.61.
    Add to basket
  • -40%

    ಬೆಳೆವ ಸಿರಿ ಮೊಳಕೆಯಲ್ಲಿ

    0

    ಬೆಳೆಯ ಸಿರಿಯನ್ನು ಮೊಳಕೆಯಲ್ಲೇ ನೋಡಬಹುದಂತೆ. ಹಾಗೆಯೇ ಮಕ್ಕಳ ಭವಿಷ್ಯವನ್ನು ಅವರು ಬೆಳೆವ ಸಮಯದಲ್ಲೇ ಕಾಣಬಹುದು.‘ಅಜ್ಜಾ ಕಥೆ ಹೇಳು’ ಎಂದ ಮೊಮ್ಮಕ್ಕಳು ದುಂಬಾಲು ಬಿದ್ದಾಗ, ಅವರಿಂದಲೇ ಒಂದು ಕಥೆಯನ್ನು ರಚಿಸಬಹುದಲ್ಲ ಅನ್ನಿಸಿ ಪ್ರಯತ್ನಿಸಿದೆ.
    -ಹ. ಶಿ. ಭೈರನಟ್ಟಿ

    Original price was: $0.48.Current price is: $0.29.
    Add to basket
  • -40%

    ಮೃಗಶಿರ

    0

    ಮೃಗಶಿರ
    ‘ಮೃಗಶಿರ’ ಒಂದು ಸಣ್ಣಕಥೆಗಳ ಸಂಕಲನ, ಇದರಲ್ಲಿ ಕಂಡುಬರುವ ಬೋರವ್ವ, ಮಲ್ಲಿ, ಶಾರಿ, ಉಮಾಪತಿರಾಯ ಇವರೆಲ್ಲಾ ನಮ್ಮ ಸಮಾಜದಲ್ಲಿ ಎಲ್ಲೆಲ್ಲಿಯೂ ಕಾಣಸಿಗುವ ವ್ಯಕ್ತಿಗಳು. ಇವರೆಲ್ಲರ ನಡುವಳಿಕೆ, ಮೇಲು ನೋಟಕ್ಕೆ ‘ನಾಗರಿಕ’ ನಡುವಳಿಕೆಯಾದರೂ, ಹಿನ್ನೆಲೆಯಲ್ಲಿ ಕಾಡಿನ ಪ್ರಾಣಿಗಳ ಪಶುಸಹಜ ನಡುವಳಿಕೆಗಳನ್ನು ಮನುಷ್ಯ ಮಾನಸಿಕವಾಗಿ ಅನುಸರಿಸುತ್ತಿದ್ದಾನೋ ಎಂಬ ಸಂಶಯ     ಬರುವಂತೆ ಅವುಗಳ ನಡುವಣ ಸಾಮ್ಯತೆಯನ್ನು ರಾ.ಶಿ.ಯವರು ಈ ಪುಸ್ತಕದಲ್ಲಿ ನಮ್ಮ ಮುಂದಿಟ್ಟಿದ್ದಾರೆ. ಈ ಪುಸ್ತಕದಲ್ಲಿನ ಹತ್ತು ಹನ್ನೆರಡು ಕಥೆಗಳು ಓದುಗರ  ಆಸಕ್ತಿಯನ್ನು ಉಳಿಸಿಕೊಳ್ಳುತ್ತಲೇ, ಪ್ರಾಣಿಲೋಕದ ನಡುವಳಿಕೆ ಇಂದಿಗೂ ಮಾನವನ ಸುಪ್ತ ಮನಸ್ಸಿನಲ್ಲಿ ಎಷ್ಟು ಭದ್ರವಾಗಿ ನೆಲೆಯೂರಿಗೆ ಎಂಬ ಸಂಗತಿಯನ್ನು ಬಹು ಸ್ಪಷ್ಟವಾಗಿ ತೋರಿಸಿಕೊಡುತ್ತೇವೆ. ಕಥೆಗಳ ಕೊನೆಯಲ್ಲಿ ರಾ.ಶಿ ಯವರು ಬರೆದಿರುವ ಸುದೀರ್ಘ ಪ್ರಸ್ತಾವನೆ, ಮನುಕುಲಕೆ ವಿಕಾಸ ಹಾಗೂ ಮನಸ್ಸಿನ ವಿವಿಧ ವ್ಯಾಪಾರಗಳ ಬಗ್ಗೆ ಹೇಳುವುದಾರೆ,  ‘ವಿಚಾರ ಪ್ರಚೋದನೆಳು ಮಹತ್ಕಾರ್ಯಕ್ಕೆ ಇಷ್ಟೊಂದು ಪರಿಣಾಮಕಾರಿಯಾಗಿ ಲಲಿತ ಸಾಹಿತ್ಯದ ಬಳಕೆಯಾಗುವುದು ಎಂದಾದರೊಮ್ಮೆ’ ಈ ಕಾರಣದಿಂದ ಈ ಕೃತಿ ಅಮೂಲ್ಯವಾದದ್ದು. 

    Original price was: $1.08.Current price is: $0.65.
    Add to basket
  • -40%

    ಚೌಕಟ್ಟಿನಾಚೆ

    0

    ಚೌಕಟ್ಟಿನಾಚೆ
    ಕಥಾ ಸಂಕಲನ
    ಉಮೇಶ್ ದೇಸಾಯಿ ಆಧುನಿಕ ಕಾಲದ ತಲ್ಲಣಗಳನ್ನು ಕತೆಗಳ ಮೂಲಕ ಹಿಡಿಯಲು ಹೊರಡುತ್ತಾರೆ. ಅವರದು ಅಪಾರ್ಟ್ ಮೆಂಟು ಬದುಕಿನ ಅಪರೂಪದ ಕಥಾ ಪ್ರಪಂಚ. ಅಪಾರ್ಟುಮೆಂಟು ಬದುಕು ಅನ್ನುವ ಪದವೇ ನಗರಾಧುನಿಕ ಜೀವನಶೈಲಿಯನ್ನೂ ಅದರ ಏಕತಾನತೆ, ಒತ್ತಡ ಮತ್ತು ಏಕಾಂತಗಳನ್ನು ಸೂಚಿಸುತ್ತದೆ. ನಗರ ಜೀವನದ ಅತಿದೊಡ್ಡ ಸಂಕಟವೆಂದರೆ ಏಕಾಂತ, ಕಡಿದ ಕೊಂಡಿಗಳು, ಚದುರಿದ ಸಂಬಂಧಗಳು ಮತ್ತು ಬೆಸೆಯಲಾಗದ ಮನಸ್ಸುಗಳು ಎಂಬುದನ್ನು ಹೇಳುವಂಥ ಅನೇಕ ಕತೆಗಳು ಈ ಸಂಕಲನದಲ್ಲಿವೆ.

    Original price was: $1.44.Current price is: $0.86.
    Add to basket
  • -40%

    ಮಠದ ಹೋರಿ ಮತ್ತು ಈವರೆಗಿನ ಕತೆಗಳು

    0

    ಮಠದ ಹೋರಿ ಮತ್ತು ಈವರೆಗಿನ ಕತೆಗಳು
    ಕತೆಗಾರನ ಮಾತಿನಲ್ಲಿ ಹನುಮಂತ ಹಾಲಿಗೇರಿ ಹೇಳಿಕೊಂಡಿರುವಂತೆ “ಇಲ್ಲಿನ ಎಲ್ಲ ಕತೆಗಳು ನಮ್ಮೂರು ಸೀಮೆಯಲ್ಲಿ ನೆಡಯುವಂಥವೆ. ಕಥೆ ನನ್ನೊಳಗಡೆ ಹುಟ್ಟುವುದಿಲ್ಲ . ದಿನನಿತ್ಯದ ಬದುಕಿನಲ್ಲಿ ಸಂಭವಿಸಿ, ನನ್ನೊಳಗೆ ಬೆಳೆದು ಕಥೆಯಾಗಿ ಹರಡಿಕೊಳ್ಳುತ್ತದೆ. ನನ್ನೂರು ಸೀಮೆಯಲ್ಲಿ ಇಲ್ಲಿನ ಪಾತ್ರಗಳೆಲ್ಲವೂ ಇನ್ನೂ ಜೀವಂತವಾಗಿವೆ. ಕಥೆಗಳಲ್ಲಿ ಅವುಗಳ ಸಂಕಷ್ಟ ಒಂದು ತಹಬಂದಿಗೆ ಬಂದಿದ್ದರೂ ಬದುಕಿನಲಿ ಇನ್ನೂ ಮುಂದುವರಿದೇ ಇದೆ.
    ಓದುಗನಿಗೆ ಮನರಂಜನೆ ನೀಡುವುದಕ್ಕಾಗಿ ನನ್ನಂಥವರು ಕಥೆ ಕಟ್ಟುವುದಿಲ್ಲ. ಈ ಕತೆಗಳನ್ನು ಓದುವವರ ಮನದಲ್ಲಿ ರಂಜನೆ ಹುಟ್ಟುವುದಕ್ಕಿಂತಲೂ ತಳಮಳ ಹುಟ್ಟಿದರೆ, ಚಿಂತೆನೆಗ ಹಚ್ಚಿದರೆ ಅಷ್ಟರಮಟ್ಟಿಗೆ ಈ ಕತೆಗಳು ಸಾರ್ಥಕ್ಕೆ ಕಂಡಂತೆ.”

    Original price was: $2.88.Current price is: $1.73.
    Add to basket
  • -40%

    ಜಯ

    0

    ಮಹಾಭಾರತದ ಬೃಹತ್ ಕಥೆಯನ್ನು ಸಂಗ್ರಹವಾಗಿ ನಿರೂಪಿಸಿರುವ ಈ ಕಥನ ತನ್ನ ಅಚ್ಚುಕಟ್ಟಾದ ನಿರೂಪಣೆ, ಚಕಮಕಿಯಂತೆ ಮಿಂಚುವ ಚುರುಕಾದ ಸಂಭಾಷಣೆಗಳಿಂದ ಆಕರ್ಷಕವಾಗಿ, ಸವೇಗವಾಗಿ ಕಥೆಯನ್ನು ನಡೆಸಿಕೊಂಡು ಹೋಗುತ್ತದೆ. ಕಥೆಗಳನ್ನು ಸಂಗ್ರಹಿಸಿ ಹೇಳಿದ್ದರೂ, ಅವುಗಳ ನಾಟ್ಯಾಯಮಾನತೆ ಎದ್ದುಕಾಣುತ್ತದೆ. ಇದೆಲ್ಲ ಪಟ್ಟನಾಯಕರು ಸಿದ್ಧಹಸ್ತ ಕತೆಗಾರರು ಎಂಬುದಕ್ಕೆ ಸಾಕ್ಷಿಯಾಗಿದೆ.

    Original price was: $7.81.Current price is: $4.68.
    Add to basket
  • -19%

    ಉಘೇ ಉಘೇ

    0

    ಉಘೇ ಉಘೇ
    ಕಥಾ ಸಂಕಲನ
    ನನಗೆ ಬರೆಯುವುದಕ್ಕಿಂತಲೂ ಓದುವುದೇ ಇವತ್ತಿಗೂ ಹೆಚ್ಚು ಇಷ್ಟದ ವಿಷಯ. ಆದರೂ ಬಿಡುವು ಸಿಕ್ಕಾಗಲೆಲ್ಲಾ ನನ್ನ ತಲೆಯಲ್ಲಿ ವರ್ಷಗಟ್ಟಲೇ ಗಿರಕಿ ಹೊಡೆಯುವ ಕಥೆಗಳನ್ನು ಬರೆದೆ. ಅದರಲ್ಲಿ ‘ಟ್ಯೂಷನ್ ಫೀ’ ಎಂಬ ಕತೆ ನನಗೆ ಒಂದು ಬಹುಮಾನವನ್ನು ಮತ್ತು ಅಪಾರ ಜನಮನ್ನಣೆಯನ್ನು ತಂದು ಕೊಟ್ಟಿತು. ಈ ಕತೆಯಿಂದ ನಾನು ಕತೆಗಾರ ಎಂದು ಗುರುತಿಸಿಕೊಳ್ಳಲು ಸಾಧ್ಯವಾಯಿತು. ಮತ್ತಷ್ಟು ಉತ್ತಮ ಕತೆಗಳನ್ನು ಬರೆಯಬೇಕೆಂಬ ಹಂಬಲದಿಂದಲೇ ಬಹುತೇಕ ಎಲ್ಲಾ ಉತ್ತಮ ಕನ್ನಡ ಮತ್ತು ಇಂಗ್ಲೀಷ್ ಕತೆಗಾರರನ್ನು ಸಾಧ್ಯವಾದಷ್ಟು ಓದಿಕೊಂಡೆ. ಅದರ ಫಲವೇ ಈ ಸಂಕಲನ.
    -ಗುಬ್ಬಚ್ಚಿ ಸತೀಶ್

    Original price was: $0.72.Current price is: $0.58.
    Add to basket
  • -20%

    ಭಾವದ ಅಂಬಾರಿ

    0

    ಭಾವದ ಅಂಬಾರಿ
    ‘ಭಾವದ ಅಂಬಾರಿ’ ಎಂಬುದು ಅವರ ಒಂಬತ್ತು ಕಥೆಗಳ ಸಂಕಲನ. ಇದರಲ್ಲಿನ ಕೆಲವು ಕಥೆಗಳು ‘ಮಂಗಳ’, ‘ಕರ್ಮವೀರ’ ದಂಥ ವಾರಪತ್ರಿಕೆಗಳಲ್ಲಿ, ‘ಅಡ್ವೈಸರ್’ನಂಥ ಮಾಸಪತ್ರಿಕೆಯಲ್ಲಿ ಈಗಾಗಲೇ ಬೆಳಕು ಕಂಡಿವೆ. ಹೀಗಾಗಿ ಅವರು ಉದಯೋನ್ಮುಖ ಕಥೆಗಾರರಾಗಿಯೂ ಹೊಮ್ಮುತ್ತಿರುವುದನ್ನು ದಾಖಲಿಸಿದ್ದಾರೆ. ಅವರ ಈ ಸಂಕಲನ ಇದಕ್ಕೆ ಇನ್ನೊಂದು ಸಾಕ್ಷಿಯನ್ನು ಒದಗಿಸಿದೆ.

    Original price was: $1.20.Current price is: $0.96.
    Add to basket
  • -21%

    ಬೆಳದಿಂಗಳು ಮತ್ತು ಮಳೆ

    0

    ಬೆಳದಿಂಗಳು ಮತ್ತು ಮಳೆ
    ‘ಐದು ನಿಮಿಷದಲ್ಲಿ ಐದು ಕತೆಗಳು, ಊಹಿಸಲಾಗದ ಅಂತ್ಯಗಳು’ – ದಟ್ಸ್ ಕನ್ನಡ ಡಾಟ್ ಕಾಂ
    ಈ ಸಂಕಲನದಲ್ಲಿ ಜೀವನದ ಸಮಗ್ರ ಮತ್ತು ಪರಿಪಕ್ವವಾದ ಮನೋಭಾವನೆ ಮೂಡಿಬಂದಿರುವುದನ್ನು ಕಾಣಬಹುದಾಗಿದೆ. ಇಲ್ಲಿನ ಕಥೆಗಳಲ್ಲಿ ವಿರಳ, ವಿಷಾದ, ಸೂಕ್ಷ್ಮ ಸಂವೇದನಾಶೀಲ ಜೀವನದರ್ಶನ ಪಡೆಯಬಹುದು. ಇಲ್ಲಿಯ ಚುಟುಕು ಕಥೆಗಳು ಕೆಲವೇ ಕ್ಷಣದಲ್ಲಿ ಓದಬಹುದಾದರೂ ಇಡೀ ದಿನ ಯೋಚಿಸುವಂತೆ ಮಾಡುತ್ತವೆ.
    ಈ ಕಥೆಗಳಲ್ಲಿ ಸಾಮಾಜಿಕ ಕಾಳಜಿಯ ಸ್ಪರ್ಶ, ಪ್ರಗತಿಪರ ಚಿಂತನೆಗಳ ಮನೋಭಾವನೆ, ಪ್ರಕೃತಿ ಬಗೆಗಿನ ಒಲವು ಮತ್ತು ಸಮಕಾಲೀನ ವಿದ್ಯಮಾನಗಳ ಅಂತರ್ಗತದೃಷ್ಟಿ, ಗತಕಾಲದ ನೆನಪು ಪ್ರಸ್ತುತ ವ್ಯವಸ್ಥೆಯ ಕೈಗನ್ನಡಿಯಾಗಿ ಮೂಡಿಬಂದಿವೆ.

    Original price was: $0.48.Current price is: $0.38.
    Add to basket
  • -40%

    ರಾಘವೇಂದ್ರ ಖಾಸನೀಸ ಸಮಗ್ರ

    0

    ರಾಘವೇಂದ್ರ ಖಾಸನೀಸ ಸಮಗ್ರ
    ರಾಘವೇಂದ್ರ ಖಾಸನೀಸರು ಕನ್ನಡದ ಅತ್ಯಂತ ಮಹತ್ವದ ಕಥೆಗಾರರಲ್ಲಿ ಒಬ್ಬರು. ಸಾಮಾನ್ಯವಾಗಿ ಎಲ್ಲ ಪ್ರಾತಿನಿಧಿಕ ಕಥಾ ಸಂಗ್ರಹಗಳಲ್ಲಿ ಅವರ ಕಥೆಗಳು ಕಾಣಿಸಿಕೊಳ್ಳುವವು. ಕೆಲವೇ ಕಥೆಗಳನ್ನು ಬರೆದರೂ ಖಾಸನೀಸರು ಸಣ್ಣ ಕಥೆಯ ಪ್ರಕಾರದ ಸಾಧ್ಯತೆಗಳನ್ನು ಸೊರೆಗೊಂಡಿದ್ದಾರೆ ಅಷ್ಟೇ ಅಲ್ಲದೆ ಅವುಗಳನ್ನು ಆಶ್ಚರ್ಯಕರವಾಗಿ ವಿಸ್ತರಿಸಿದ್ದಾರೆ. ಅವರ ಚಿಂತನೆ ಸ್ವರೂಪ ಹಾಗೂ ಅವರ ಕಥೆಗಳ ಬಂಧ ಅವ್ರಿಗೆಯೇ ವಿಶಿಷ್ಟವಾದವುಗಳು. ಈ ಕೃತಿಯಲ್ಲಿ ಖಾಸನೀಸರ ೧೬ ಪ್ರಕಟಿತ ಕಥೆಗಳು ಮತ್ತು ೭ ಅಪ್ರಕಟಿತ ಕಥೆಗಳು ಸೇರಿವೆ. ಇವುಗಳನ್ನು ಡಾ. ಜಿ.ಎಸ್ ಅಮೂರ ಹಾಗೂ ಡಾ. ರಮಾಕಾಂತ ಜೋಶಿ ಸಮರ್ಥವಾಗಿ ಸಂಪಾದನೆ ಮಾಡಿದ್ದಾರೆ.

    Original price was: $3.00.Current price is: $1.80.
    Add to basket
  • -39%

    ಬೆಳಕಿನ ಬೇಲಿ

    0

    ಬೆಳಕಿನ ಬೇಲಿ :

    {ನ್ಯಾನೋ ಕತೆಗಳು}

    ‘ನ್ಯಾನೋ ಕತೆ’, ‘ಸೂಜಿ ಮಲ್ಲಿಗೆ’, ‘ಚೌಕಟ್ಟು ಮೀರಿದ ಚಿತ್ರ’, ‘ಹನಿಗತೆ’ ಹೀಗೆ ನಾನಾ ಹೆಸರುಗಳಡಿ ಕನ್ನಡಪ್ರಭ, ವಿಜಯವಾಣಿ, ಪ್ರಜೋದಯ ಮತ್ತು ತುಷಾರ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಇಲ್ಲಿನ ಬರಹಗಳನ್ನು ಬರೆದಿದ್ದಾರೆ.

    Original price was: $0.67.Current price is: $0.41.
    Add to basket
  • -40%

    ಕರಗದ ನಗು

    0

    ಕರಗದ ನಗು

    ಪತ್ರಕರ್ತೆ ಕಾವೇರಿ ಎಸ್ ಎಸ್ ಅವರ ಕಥಾಸಂಕಲನವಿದು. ಇದರಲ್ಲಿ ಹನ್ನೆರಡು ಕಥೆಗಳಿದ್ದು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದವುಗಳು. ಈ ಕೃತಿ ಕನ್ನಡ ಪುಸ್ತಕ ಪ್ರಾಧಿಕಾರ ಯುವ ಬರಹಗಾರರ ಚೊಚ್ಚಲ ಕೃತಿಗೆ ನೀಡುವ ಪ್ರೋತ್ಸಾಹ ಧನ ಯೋಜನೆಗೆ ಆಯ್ಕೆಯಾಗಿದೆ.

    Original price was: $0.78.Current price is: $0.47.
    Add to basket