ಅಣ್ಣಾ ನಿನಗ ಎಷ್ಟ ಮಿರ್ಚಿ ಅಕ್ಕಾರ ನಿಮಗ ಗಿರಮಿಟ್ ಕೊಡಲಿ..ಲೆ ಗಿಡ್ಡ ಒಂದ ಬಳ್ಳೊಳ್ಳಿ ಚುರಮರಿ ತಾ ಇಲ್ಲೆ ..ಚಹಾ ಹಾಕ..ನಾಲ್ಕನೇ ಶ್ರಾವಣ ಸೋಮವಾರ ಬಂತಂದ್ರ ಇಷ್ಟ ಅಳತಿ ಗದ್ದಲಾ ಧಾರವಾಡ ಉಳವಿ ಬಸಪ್ಪನ ಜಾತ್ರ್ಯಾಗ ಸಿಗ್ತದ ಹುಡುಗುರಗೇ ಸಾಲಿ ಸೂಟಿ,ನಡಿ ಮೂರು ಸಂಜಿ ಆತ ಅಂದ್ರ ನಡಿ ಮಾಳಮಡ್ಡಿ ಬಸಪ್ಪನ ಜಾತ್ರಿ ಸಡ್ಲ ಇಲ್ಲದ ಗುಡಿಗೂ ಪಾಳಿ ಮಿರ್ಚಿ ಟೆಂಟಗೂ ಪಾಳಿ….ಬಿಟ್ರ ಹಾರು ಪುಗ್ಗಾದ ಮಜಾ. ತಿರಗೂ ಜೋಕಾಲಿ, ಹೇ ಅಂದಂಗ ಮರತ ಬಿಟ್ಟಿದ್ದೆ ಸಣ್ಣ […]
Category: ಪಾಕಪದ್ಧತಿ ಮತ್ತು ಭಕ್ಷ್ಯಗಳು
ಅಳ್ಳಿಟ್ಟು ಅರಳ್ಳಿಟ್ಟು
ಅಳ್ಳಿಟ್ಟು– ಇದು ಉತ್ತರಕರ್ನಾಟಕದ ಸುಪ್ರಸಿದ್ಧವಾದ ತಿಂಡಿ ಇದನ್ನು ಸಾಮಾನ್ಯವಾಗಿ ಬ್ರಾಹ್ಮಣರು ಅನಾದಿಕಾಲದಿಂದಲೂ ತಿನ್ನುತ್ತಾ ಬಂದಾರ.ಇದು ಅಳ್ಳಿನ ಜೊಳದಿಂದ ಮಾಡಿದ ಪದಾರ್ಥ. ಇದನ್ನ ಹ್ಯಂಗ ಮಾಡುದಪಾ ಅಂದ್ರ?ಮೊದಲು ಅಳ್ಳೀನ ಜೋಳ ನೀರಾಗ ಹಾಕಿ ಹತ್ತಿಪ್ಪತ್ತು ನಿಮಿಷ ಕುದಿಸಿ ನೀರಿನಿಂದ ಹೊರಗ ತಗಿಬೇಕು,ನೀರನ್ನ ಎಲ್ಲಾ ಬಸದು ಜೋಳ ನೆರಳಾಗ ಆರಲಿಕ್ಕೆ ಇಡಬೇಕು .ಆಮೇಲೆ ಕಬ್ಬಿಣದ ಬುಟ್ಟಿಯೊಳಗೆ ಜೋಳ ಹಾಕಿ ಹುರಿಬೇಕು ಅಂದರ ರೋಸ್ಟ್ಮಾಮಾಡುದು ಅಂತಾರಲ್ಲಾ ಆಗ ಅಳ್ಳು ಮ್ಯಾಲೆ ಬರತಾವ. ಅದನ್ನಗಿರಣಿಗೆ ಹಾಕಿಸಿದರ ಆತು.ಅಳ್ಳೀಟ್ಟು ತಯಾರ ಆದಂಗ. ಇದರಾಗ ನಾರಿನ […]
ಭಯ್ಯಾ… ಪ್ಲೇಟ್ ಪಾನಿಪುರಿ
ಭಯ್ಯಾ… ಪ್ಲೇಟ್ ಪಾನಿಪುರಿ ಹೌದ್ರೀ, ಧಾರವಾಡದಾಗ ಮೂರು ಸಂಜೆ ಆತು ಅಂದ್ರ ಮಂದಿ ಭಯ್ಯಾ… ಪ್ಲೇಟ್ ಪಾನಿಪುರಿ. ಭಯ್ಯಾ… ಒಂದು ಭೇಲ್ ಪುರಿ ಅಂತ ಪಾನಿಪುರಿ ಗಾಡಿ ಮುಂದ ಮುಕರಿರತಾರ ನೋಡ್ರಿ. ಹೌದ್ರೀ, ಆ ರಾಜಸ್ತಾನ ಮಂದಿ ಏನ ಜಾದೂ ಮಾಡ್ಯಾರೊ ಏನ ತಾನೋ. ಎಲ್ಲಾ ಸಣ್ಣ ಹುಡುಗರು ಕಾಲೇಜಗೆ ಹೋಗೂ ಹುಡುಗ ಹುಡುಗೀರೂ ಭೇಲ್ ತಿನ್ನೋಣ ಏನ್, ಮೊದಲ ಒಂದ ಪ್ಲೇಟ್ ಪಾನಿಪುರಿ ಹೇಳ ಅಂತಾರ್ರಿ. […]