Your Cart

Need help? Call +91 9535015489

📖 Print books shipping available only in India. ✈ Flat rate shipping

ಟಿ.ವಿ.

ಟಿ.ವಿ. ಟಿ.ವಿ ಎಂಬ ಯಡವಟ್ಟು ಮನೆಯ ಮೂಲೆಯಲಿ ತಂದಿಟ್ಟು ಆಗಿಹುದು ಪಡಿವಾಟಲು ಒಬ್ಬರಿಗೊಬ್ಬರದು ಮಾತಿಲ್ಲ ಕಥೆಯಿಲ್ಲ ಸೀರೆಯಲ್ಲುಗಳ ಕಂದರದಲಿ ಹುಗಿದಿಹರೆಲ್ಲ ಅವು ನಕ್ಕರೆ ಮನೆಮಂದಿಯ ಮುಖದಲಿ ರಾರಾಜಿಸುವುದು ನಗೆ ಎಂಬ ಸಕ್ಕರೆ ಅವು ಅತ್ತರೆ ಮನೆ ಮಂದಿಯ ಮುಖವೆಲ್ಲ ಹ್ಯಾಪು ಮೋರೆ ಟಿವಿ ಕಲಾಕಾರರದೇ ಭಾವಗಳೂ ನಮ್ಮವೂ ಆದುವಲ್ಲ ಅನ್ನದ ಜೊತೆಗೆ ಚಟ್ನಿಯ ತಿಂಬುವರಲ್ಲ ಚಪಾತಿಗೆ ಹುಳಿಯೇ ಗತಿಯಾಯ್ತಲ್ಲ! ಉಪ್ಪು ಹುಳಿ ಸಿಹಿ ಬಾರದ ರುಚಿಯೇ ಮರೆತೋಯ್ತಲ್ಲ ಕಣ್ಣುಗಳೆಲ್ಲ ಟಿವಿಯಲಿ ನೆಟ್ಟು ಕುಳಿತಿರುವವರೆಲ್ಲ ಕಂಗೆಟ್ಟು ಆಟವೂ ಉಂಟು […]

ಪಯಣ

ಪಯಣ ತಾಯಿಯ ಮಡಿಲಲಿ ಬೆಚ್ಚಗೆ ಪವಡಿಸಿದ್ದ ಮಗುವಿಗೆ ಮಡಿಲು ಚಿಕ್ಕದಾಯ್ತು ಅಂಬೆಗಾಲಿಕ್ಕುತ ನಡೆವ ಮಗು ಈಗ ಅಂಗಳಕ್ಕಿಳಿದಾಯ್ತು ಅಂಗಳವು ಸಾಲದಾಗಿ ಬೀದಿಗೆ ನಡೆದಾಯ್ತು ಪುಟ್ಟ ಪಾದಗಳು ದೊಡ್ಡದಾಗಿ ಮಗು ಶಾಲೆಗೆ ನಡೆದಾಯ್ತು ವರ್ಗದಿಂದ ವರ್ಗಕ್ಕೆ ತೇರ್ಗಡೆಯಾಗುತ್ತಾ ಕಾಲೇಜು ಕಲಿಕೆ ಮುಗಿದಾಯ್ತು ಅಣ್ಣನ ಜೊತೆಯ ಕದನ ತಮ್ಮ ತಂಗಿಯರೊಂದಿಗಿನ ಜಗ್ಗಾಟ, ಕಳ್ಳಾಟಗಳು ಕೊನೆಯಾಗಿ ಮಗು ಈಗ ಬೆಳೆದು ನಿಂತ ವಧುವಾಗಿ ಕಣ್ಗಳಲಿ ಕನಸಿನ ಗೋಪುರ ಮನದಲಿ ಆಸೆಗಳ ಮಹಾಪೂರ ಚೆಂದದ ವರನಿಗೆ ಈಕೆ ವಧುವಾಗಿ ನಡೆದಳು ಆತನ ಮನೆಯೆಡೆಗೆ […]

ಸುನಾಮಿ

ಸುನಾಮಿ ಹೊಸವರುಷನು ಹರುಷದಿ ಎದುರುಗೊಳ್ಳುವಾಗ ಸಿಡಿದೆದ್ದ ಭೂತಾಯಿ ಕಡಲಾಳದಿ ಸಿಡಿಸಿಹ ಜ್ವಾಲಾಮುಖಿ ಎದೆಯೆತ್ತರಕೂ ಮೀರಿ ಪುಟಿದಿಹ ಅಲೆಗಳು ಮೈಮರೆತ ಜನಗಳ ಕನಸ ಕಂಬಳಿಯನು ಸರಿಸಿ ವಾಸ್ತವಕ್ಕಿಳಿಸಿತಲ್ಲಾ ಬೆಚ್ಚಗಿನ ತಾಯ ತೆಕ್ಕೆಯಲಿ ಪವಡಿಸಿಹ ಕಂದಮ್ಮಗಳಿಗೆ ಅಲೆಯ ಹಾಸುಗೆ ಹೊದಿಸಿತಲ್ಲಾ ಅರಳುವ ಕಂಗಳಿಂದ ಕಾಮನಬಿಲ್ಲನು ವೀಕ್ಷಿಸುವ ಮಕ್ಕಳ ತಾಯ್ತಂದೆಯನು ಮರೆಯಾಗಿಸಿ ಬೆಳಗುವ ಬಾಳಿಗೆ ಅಂಧಕಾರವ ಮೂಡಿಸಿ ಕಾರ್ಮೋಡವ ಮುಸುಗಿಸಿ ಬಾಳ ಬರಿದಾಗಿಸಿತಲ್ಲಾ ಸ್ತಬ್ಧ ವಾತಾವರಣದಿ ತಾನು ಒಳಗೊಳಗೇ ಕುದಿದು ತನ್ನ ಆರ್ಭಟವ ಮೆರೆದು ಮುನುಕುಲಕೆ ಜಲಪ್ರಳಯದ ಭೀತಿ ಮೂಡಿಸಿ ಮರೆಯಾದ […]

ಸಾರ್ಥಕದ ಸಾವು!

ಸಾರ್ಥಕದ ಸಾವು! ಅನುದಿನವೂ ದಿನಕ್ಕಿಂತ ಹೆಚ್ಚುತ್ತಿದೆ ಶೋಕ ಮೌನದಲ್ಲೂ ಉಕ್ಕುವ ಕಂಬನಿ ತಡೆಯಲಾಗದ ದುಃಖ ಕೇಳಿದಷ್ಟು ಮತ್ತೆ ಮತ್ತೆ ಕೇಳಲು ಬಯಸುತ್ತಿದೆ ನಿನ್ನದೇ ಮಾತು ಈ ಜೀವ ನೋಡಿದಷ್ಟೂ ನೋಡುತ್ತಲೇ ಇರಬೇಕೆನ್ನುವ ಭಾವ ದಿನ ದಿನವೂ ನೀ ಮತ್ತೆ ಮತ್ತೆ ಹುಟ್ಟುತ್ತಲೇ ಇರುವ ಮಾಣಿಕ್ಯ ಸಾವ ಕಂಡ ಕ್ಷಣದಿಂದ ಜೀವಂತವಾದ ಪುನೀತ ರಾಜಕುಮಾರ ಬದುಕುವುದಾದರೆ ಹೀಗೆ ಬದುಕಬೇಕೆಂದು ತೋರಿಸಿದ ಭಾಗ್ಯವಂತ ಕೋಟಿ ಕೋಟಿ ಕನ್ನಡಿಗರಿಗೆ ಪ್ರೇಮದ ಕಾಣಿಕೆ ನೀಡಿದ ಸಿರಿವಂತ ನೊಂದ ಹೆಂಗಳೆಯರ ದಾರಿ ದೀಪವಾಗಿ ದಾರಿ […]

ಚಲುವು..

ಚಲುವು… ” ಇನ್ನೆಷ್ಟು ದಿನ ವಿದ್ದೀತು ನನ್ನ ಚಲುವು?.. ನನ್ನವಳು ಕೇಳಿದಳು ಇವತ್ತು.. ” ನಿನಗೆಷ್ಟು ವರ್ಷ ಬೇಕು?.. ಮೂವತ್ತು? ಇಲ್ಲವೇ ಐವತ್ತು..? ನಿನಗೆ ಎಂಬತ್ತಾಗಲಿ..ಆಗ ನೋಡು ನಿನ್ನ ಚಲುವಿನ ಗತ್ತು… ನಿನ್ನಾಯ್ಕೆಯ, ನಿನ್ನೊಲುಮೆಯ ಬದುಕು ನಿನಗಿತ್ತ ಗಟ್ಟಿ ಮೈಮೆರಗು… ಕಾಂತಿಯುತ ಪಕ್ವ ಸೊಬಗು… ಮಾಗಿಯ ಮೆರಗಿಗೆ ಬೆಳ್ಳಿ ಕೂದಲು… ದಶಕಗಳ ಕಲಿಕೆ, ಕೊಡುಕೊಳ್ಳುವಿಕೆ ನಿನ್ನ ಕಣ್ಣಂಚಿನಲ್ಲಿ ಮೂಡಿಸಿದ ಮಿಂಚು ಮಂದಹಾಸ… ಎಂದಾದರೊಮ್ಮೆ ನಿನ್ನ ನೋಡಲು ಬರುವ ಮಕ್ಕಳು ಕಂಡಾರು ತಮ್ಮ ಇತಿಹಾಸ…. ನಿನಗೀಗ ಕಿಂಚಿತ್ತು ಭಯವಿಲ್ಲ….ನಿನಗೆ […]

ಪ್ರಕೃತಿ ಹೆಣ್ಣು

ಪ್ರಕೃತಿ  ಹೆಣ್ಣು ಪ್ರಕೃತಿ ಮಾತೆಯೇ ಹೆಣ್ಣಾಗಿ ಬಂದಿಳಿದಿಹಳು ಈ ಇಹದಲಿ ಕಷ್ಟಕೋಟಲೆ ನಿಷ್ಠೂರ ಕಾಟಗಳಲೇ ಹಣ್ಣಾಗಿ ಸಣ್ಣಾಗಿ ಮನಮಿಡಿಯುತಿಹಳು ಬಿರುಸಿನಾ ಬೇಗುದಿಗೆ ಮನವ ತಲ್ಲಣಿಸಿ ಇನಿತು ಇನಿತಾಗಿ ತನ್ನ ತಾನೇ ಕರಗುತಿಹಳು ಕಾರುಣ್ಯದ ನೋಟಕೆ ಹಪಹಪಿಸಿ ಪ್ರೇಮದಾ ಸಿಂಚನಕೆ ಪರಿತಪಿಸಿ ತನ್ನೊಡಲ ಕುಡಿಗೆ ಉಣಬಡಿಸಿ ತಾನಿರುತಿಹಳು ಉಪವಾಸ ವನವಾಸದಲಿ ಹೆಣ್ಣಿಗೆ ರಜ ಎಂಬುದಿಲ್ಲ ಒಳಹೊರಗೂ ದುಡಿದು ಒಳಹೊರ ಉಸಿರು ಒಂದಾಗಿಸೆ ಬಾಳ ಬೆಳಗಬೇಕೆಂಬಾಸೆ ಹೆಣ್ಣು ಹುಟ್ಟಿ ತಾ ಎರಡು ಮನೆಯ ಬೆಳಗುವಳು ತನ್ನ ಬಾಳ ಕಹಿ ಮರೆತು […]

ಮಕ್ಕಳು…

ಮಕ್ಕಳು… ನಿಮ್ಮ ಮಕ್ಕಳು ನಿಮ್ಮವಲ್ಲ… ನಿಮ್ಮ ‘ಬಯಕೆ’ಯ ಕೂಸುಗಳು… ನಿಮ್ಮ ಮುಖಾಂತರ ಬಂದಿರಬಹುದು… ನಿಮಗಾಗಿಯೇ ಅಲ್ಲ, ನಿಮ್ಮ ಜೊತೆಗಿರಬಹುದು, ಆದರೂ ನಿಮ್ಮವರಲ್ಲ. ಅವರಿಗೆ ನಿಮ್ಮ ಪ್ರೀತಿ ಕೊಡಬಲ್ಲಿರಿ… ನಿಮ್ಮ ಯೋಚನೆಗಳನ್ನಲ್ಲ… ಅವರಿಗೆ ತಮ್ಮವೇ ವಿಚಾರಗಳುಂಟು. ನೀವವರ ಶರೀರಗಳಿಗೆ ಆಸರೆ ಕೊಡಬಲ್ಲಿರಿ…ಮನಸ್ಸುಗಳಿಗಲ್ಲ. ಅವರ ಆತ್ಮ/ ಮನಸ್ಸುಗಳು ಅವರ ‘ನಾಳೆ’ ಗಳಲ್ಲಿವೆ… ನೀವು ತಪ್ಪಿಯೂ ಕನಸಿನಲ್ಲಿಯೂ ಅವುಗಳನ್ನು ಮುಟ್ಟಲಾರಿರಿ. ಅವರಂತೆ ನಿಮಗೆ ಆಗಬೇಕೆನಿಸುವಷ್ಟು ಚಂದದ ಬದುಕು ಅವರದಾಗಬಹುದು. ಬದುಕೆಂದೂ ಹಿಮ್ಮುಖವಾಗಿ ಹರಿಯಲಾರದು, ಅದಕ್ಕೆ ಕಿಂಚಿತ್ತೂ ‘ನಿನ್ನೆ’ಯ ಹಂಗಿಲ್ಲ… ಮುಂದೆ ಚಿಮ್ಮುವ […]

ದೇವರಿಗೊಂದು ಪತ್ರ! ( 42)

ದೇವರಿಗೊಂದು ಪತ್ರ!( 42) ಹೇಗೆ ಇರುವೆ ಹೇಳು ನೀನು ಎನ್ನ ಹೃದಯದ ದೈವ? ಜಗದ್ರಕ್ಷಕ! ನನಗಂತೂ ಹಾದಿ ಬೇರೆಯೇ ತೋರಿದೆ ನೀನು! ಜಗದ್ಬಂಧು! ಈ ಪತ್ರ ಒಂದರ್ಥದಲ್ಲಿ ನಿನ್ನ ಉತ್ತರದ್ದೇ ಇರಬಹುದು! ಜನಾರ್ದನ! ಹೇಳುವುದು ಬಹಳವಿದೆ ಹರಿ ಮಾತು ಬರುತ್ತಿಲ ಅಕ್ಷರ ಸಾಲುತ್ತಿಲ್ಲ ಜಗತ್ಕಾರಣ! ನನ್ನಾತ್ಮದ ಮೂಲೆ ಮೂಲೆಯಲಿ ನಿನ್ನ ನಾಮಸ್ಮರಣೆಯೊಂದೆ ಜಗನ್ನಾಥ! ಗೊತ್ತೆನಗೆ ಈ ದೇಹ ಬಿಡುತ್ತಿಲ್ಲ ವಾಸನೆಗಳ ಮರ್ಕಟನಂತೆ ಮಾಧವ! ಚಿತ್ತ ಚಂಚಲತೆಯಲಿ ತೇಲುವುದು ಆಗೊಮ್ಮೆ ಈಗೊಮ್ಮೆ ಮಧುಸೂದನ! ಮೋಹದ ಬಲೆಯಲ್ಲಿ ಬೀಳುವುದು ಎಡವಿ […]

ಅಕ್ಕಮಹಾದೇವಿ

ಅಕ್ಕಮಹಾದೇವಿ ನಿನ್ನಂತರಂಗವ ಬಿಚ್ಚಿಡುತಾ ಚೆನ್ನಮಲ್ಲಿಕಾರ್ಜುನನ ಮೆಚ್ಚಿಸುತಾ ಬೆತ್ತಲಾದೆ ಬೆಳ್ಳಬೆಳಗಿನಲಿ ವೈರಾಗ್ಯದ ಪ್ರತಿರೂಪದಲಿ ಭಕ್ತಿ ಪ್ರೇಮದ ಸಾಂಗತ್ಯದಲಿ ತೊರೆದ ರಾಜ ಕೌಶಿಕನ ಸಿರಿವೈಭವದ ಸಡಗರವ ಅಂಜಿಕಿಲ್ಲ ಅಳುಕಿಲ್ಲ ಯಾರ ಹಂಗೂ ನಿನಗಿಲ್ಲ ಕಾರ್ಮೋಡಗಳ ಮರೆಯಲ್ಲಿ ಸೂರ್ಯರಷ್ಮಿ ತಾ ಅವಿತಂತೆ ಜಗಕಾವರಿಸಿದ ಮೋಹ ನಿನ್ನಲ್ಲಿ ಸುಳಿಯದೆ ನೀ ತೊಳೆದ ಚಿನ್ನವಾದೆ ಭಾವಭಾವಕ್ಕೂ ಬೆರಗಾದೆ ಮನದಾಳದಿ ಭಕ್ತಿ ಒಸಗಿಸುತ ಅಂತರಾತ್ಮವ ಕಾಣುತ ಕಲ್ಯಾಣದಿ ನೆರೆದಿಹಸಂತರ ನಿಬ್ಬೆರಗಾಗಿಸಿದೆ ಅಕ್ಕ ವೈರಾಗ್ಯ ಪ್ರತಿರೂಪ ನೀನಾದೆ ಭೋಗ ಸರಿಸಿ ಭಾಗ್ಯವಂತೆ ನೀನಾದೆ ಭಗವಂತನಾನಂದ ನಿನ್ನ ವಚನದಿ […]