Your Cart

Need help? Call +91 9535015489

📖 Print books shipping available only in India. ✈ Flat rate shipping

ಆಶ್ವಿಚ್ ನ ಕರುಣಕತೆ.

ಆಶ್ವಿಚ್ ಕ್ರಕಾವ್ ನಲ್ಲಿ ಇಳಿದುಕೊಂಡಿದ್ದ ನಮ್ಮ ಅಪಾರ್ಟ್ ಮೆಂಟಿನಿಂದ ಮುಂಜಾನೆ ನಾವು ಬುಕ್ ಮಾಡಿದ್ದ ಮಿನಿ ವ್ಯಾನ್ ಟೈಮಿಗೆ ಸರಿಯಾಗಿ ಆಶ್ವಿಚ್ ನತ್ತ ಹೊರಟಾಗ ಅದರ ಡ್ರೈವರ್ ಹೇಳುತ್ತಿದ್ದ ಸಂಗತಿಗಳ ಕಡೆಗೆ ಗಮನಿವಿತ್ತಿದ್ದೆ ನಾನು. ಯಾವುದೇ ದೇಶಕ್ಕೆ ಹೋದರೂ ಅಂತರ್ಜಾಲವಾಗಲಿ, ಇನ್ನಿತರ ಯಾವುದೇ ಪುಸ್ತಕವಾಗಲೀ ಕೊಡಲಾರದ ಸಂಗತಿಗಳನ್ನು ಅಲ್ಲಿನ ಡ್ರೈವರ್ ಗಳು ಕೊಡುತ್ತಾರೆ ಎನ್ನುವ ಮಾತು ನಿಜ. ಆದರೂ ನನ್ನ ಮನಸ್ಸು ಮಾತ್ರ‌ ವಿಚಿತ್ರವಾದ ಕ್ಷೋಭೆಯ ಮಡಿಲಾಗಿತ್ತು.ಯಾಕೆ ಹೋಗಬೇಕು ಆಶ್ವಿಚ್ ಗೆ? ಅದರಿಂದ ಆಗುವುದಾದರೂ ಏನು? ಲಕ್ಷಾವಧಿ […]

ನಮ್ಮ ಗೋಕಾಕ ಫಾಲ್ಸ್ ಪ್ರವಾಸ ಕಥನ

ಅದು ಎಲ್ಲರಿಗೂ ಅತೀ ಕುತೂಹಲ ತುಂಬಿರುವ ಮುಂಜಾನೆ ೨೧ ಜುಲೈ ೨೦೧೯*ಗೋಕಾಕ್ ಫಾಲ್ಸ್ ಗೋಕಾಕ್ ಫಾಲ್ಸ್*..ನಾವೆಲ್ಲರೂ ರವಿವಾರ ಕಣ್ಣು ತೆಗೆದಾಗ ಮುಂಜ ಮುಂಜಾನೆ ೪:30 ಆಗಿತ್ತು ಎಲ್ಲರೂ ಅರ್ಭಾಟ ತಯಾರ ಆಗಿ ಕಬ್ಬೂರ ರಸ್ತೆ ಬದಿಯಲ್ಲಿ ಇರುವ ನೀರಿನ ಟಾಕಿಗೆ ಬಂದು ನಿಂತಾಗ ೬ ಹೊಡದಿತ್ತು.ಅವ್ರು ಬಂದ್ರಿಲ್ಲೋ ಇವ್ರು ಬಂದ್ರಿಲ್ಲೋ ಅನಕೋತ ಎಲ್ಲಾ ಲಗೇಜು ಪಗೇಜು ಹಾಕಿ ನಡ್ರಿ ಹೋಗುಣ ಇನ್ನ ಅಂದಾಗ ೭ ಹೊಡದಿತ್ತು.. ಎಲ್ಲಾರೂ ಟೈಂಶೀರ ಬಂದಿದ್ದರಿಂದ ನಾವು ಅಂದಕೊಡಂಗ *ಸೊಗಲ* ಕ್ಕೆ ೯:೩೦ […]

ಓ ಮಲಪ್ರಭೆ

ಕಣಕುಂಬಿಯಲಿ ಮಲಪ್ರಭೆ ನೀ ಉದ್ಭವಿಸಿ ಸವದತ್ತಿಯಲ್ಲಿ ಎಲ್ಲಮ್ಮನ ಸಂದರ್ಶಿಸಿ,ಪಾದ ಸ್ಪರ್ಶಿಸಿ ನವಿಲುತೀರ್ಥದಲಿ ರೇಣುಕಾಸಾಗರ ನೀನಾದೆ. ಹಿರೇ,ತುಪ್ಪರಿ,ಬೆಣ್ಣೆ ಹಳ್ಳಗೂಡಿ ಕೃಷ್ಣೆಯನ್ನು ಕೂಡಲಸಂಗಮ ದಲ್ಲಿ ಕೂಡಿ ರೈತ ನ ಬೆಳೆ ಹಸಿರಾಗಿಸಿ ನೀ ಸಾಗರದಲ್ಲಿ ಒಂದಾದೆ.ನೀ ಜೀವ ಜಲ ನನ್ನ ಪ್ರಾಣ ಜಲ ನಿರಂತರ ಸದಾ ನಮ್ಮ ಮನೆಯಲ್ಲಿರುವೆ ಓ ಮಲಪ್ರಭೆ,ನೀನೆ ಗಂಗೆ,ಯಮುನೆ ಮನುಜನ ಮಲಿನ ದೂರಟ್ಟಿ ನೀ ಮಲಾಪಹಾರಿ ಮನುಕುಲದ ಪ್ರಭೆಯನ್ನು ಹೆಚ್ಚಿಸಿರುವೆ… ಧಾರವಾಡವಿಜು ನೀರ ಮಿತವಾಗಿ ಬಳಸಿ  

ಮರಳುಗಾಡಿನ ಮಲೆನಾಡು ಓಮನ್ ದೇಶದ ಸಲಾಲ್ಹ

ಮರಳುಗಾಡಿನ ಮಲೆನಾಡು ಓಮನ್ ದೇಶದ ಸಲಾಲ್ಹ — ರಂಗನಾಥ ಪಿ.ಎಸ್. ಮಲೆನಾಡು ಎಂದಾಕ್ಷಣ ನಮ್ಮ ಕಣ್ಮುಂದೆ ಪಶ್ಚಿಮಘಟ್ಟ, ಹಲವಾರು ನದಿಗಳು, ನೂರಾರು ಜಲಪಾತಗಳು ಸದಾ ಹಸಿರು ತುಂಬಿರುವ ಗಿರಿಶ್ರೇಣಿಗಳು, ದಟ್ಟ ಕಾನನಗಳು ಸುಳಿಯುತ್ತವೆ. ಆದರೆ ಈ ಹಸಿರಿಗು ಮತ್ತು ಮರಳುಗಾಡಿಗು ಎತ್ತಣಿಂದೆತ್ತಣ ಸಂಬಂಧ? ಓಮನ್ ದೇಶದ ದಕ್ಷಿಣ ಭಾಗದ ದೋಫರ್ ಎನ್ನುವ ಪ್ರಾಂತ್ಯ ಇಂತಹ ಗಿರಿಶಿಖರಗಳಿಂದ ತುಂಬಿದೆ. ಅಲ್ಲಲ್ಲಿ ಹರಿಯುವ ನದಿಗಳು, ಚಿಕ್ಕ ಚಿಕ್ಕ ಜಲಪಾತಗಳು, ನದಿ ತೊರೆಗಳು ನಮ್ಮ ಮಲೆನಾಡನ್ನು ಜ್ಞಾಪಿಸುತ್ತವೆ. ಸಲಾಲ್ಹ ಎನ್ನುವ ನಗರ […]

ಆ ದಿನಗಳ ಸಂತೆಯ ಸೊಗಡು: ಈ ಶಿಲಾ ತೋಟದಲ್ಲಿ ನೋಡು

ಆ ದಿನಗಳ ಸಂತೆಯ ಸೊಗಡು: ಈ ಶಿಲಾ ತೋಟದಲ್ಲಿ ನೋಡು                                                                                — ರಘೋತ್ತಮ್ ಕೊಪ್ಪರ್ ಇಂದಿನ ದಿನಗಳಲ್ಲಿ ಹಳೆಯ ಕಾಲದ ಸಂತೆಗಳು ಸಿಗುವುದು ತೀರಾ ವಿರಳ. ಎಲ್ಲೊ ಹಳ್ಳಿಗಳಲ್ಲಿ, ಸಣ್ಣ ನಗರಗಳಲ್ಲಿ ಕಾಣಬಹುದು. ಈಗ ಎಲ್ಲಾ ಬದಲಾಗಿಬಿಟ್ಟಿದೆ. ಸೂಪರ್ ಮಾರ್ಕೆಟ್‍ಗಳು ಲಗ್ಗೆ ಇಟ್ಟು ಆ ಹಳೆಯ ಮಾರುಕಟ್ಟೆಯ ಸೊಗಡನ್ನು ನಮ್ಮಿಂದ ದೂರವಾಗಿಸಿಬಿಟ್ಟಿವೆ. ನಮ್ಮ ಮುಂದಿನ ಜನಾಂಗದವರಿಗೆ ಇವೆಲ್ಲವನ್ನು ಹೇಗೆ ತೋರಿಸಬೇಕು? ಚಿಂತಿಸಬೇಡಿ ಅದಕ್ಕೆಂದೆ ಇದೆ ಒಂದು ಸೂಕ್ತ ಪ್ರವಾಸಿ ಕೇಂದ್ರ. ಅದರ ಹೆಸರು ಉತ್ಸವ ರಾಕ್ ಗಾರ್ಡನ್. […]

ನನ್ನ ಮೊದಲ ಪಾದಯಾತ್ರೆ ಹಂಪಿಹೊಳಿ ಗೆ

ನನ್ನ ಮೊದಲ ಪಾದಯಾತ್ರೆ ಹಂಪಿಹೊಳಿ ಗೆ ಪಾದಯಾತ್ರೆ ಅಂದ ಕೂಡಲೇ ಎಲ್ಲಾರಿಗೂ ಓಮ್ಮಲೆ ನೆನಪು ಬರುದು ಆಳಂದಿ -ಪಂಡರಪುರ ಪಾದಯತ್ರೆ . ಜೇಷ್ಠ ತಿಂಗಳಿನಲ್ಲಿ ಲಕ್ಷಾವದಿ ವಿಠ್ಠಲನ ಭಕ್ತರು ಸಂತ ಜ್ಞಾನೇಶ್ವರರ ಪಾದುಕೆಯೊಂದಿಗೆ ಪುಣೆ ಹತ್ತಿರ ಇರುವ ಆಲಂದಿಯಿಂದ ೧೫೦ ಕಿ.ಮಿ ನಷ್ಟು ದೂರ ನಡೆದು ಪಾದಯಾತ್ರೆ ಮಾಡುತ್ತಾ ಆಷಾಡ ಏಕಾದಶಿ ಯಂದು ಪಂಡರಾಪುರ ತಲುಪುತ್ತಾರೆ . ಇದೊಂದು ಅತೀ ದೊಡ್ಡ ಪಾದಯಾತ್ರೆ . ಇದಕ್ಕೆ ವಾರಕರಿ ಸಂಪ್ರದಾಯ ಅಥವಾ ದಿಂಡಿ ಅಂತನೂ ಕರಿತಾರೆ. ಇನ್ನೂ ಲಕ್ಷ್ಮೇಶ್ವರದ […]

ಉತ್ಸವ ರಾಕ್ ಗಾರ್ಡನ್ ನಲ್ಲಿ ಗ್ರಾಮರಾಜ್ಯದ ಪುನರುತ್ಥಾನ

ಕಾರ್ಪೋರೇಟ್ ಜಗತ್ತಿನ ಅಬ್ಬರದ ಪರಿಣಾಮ ನಮ್ಮ ಜನಪದ ಸಂಸ್ಕøತಿ, ದೇಶೀಯತೆ ಅನ್ನೋದು ಬರೀ ಭಾಷಣದ ಸರಕಾಗಿದೆ. ಅದರ ಕಲ್ಪನೆಯೂ ಮಕ್ಕಳಿಗಿಲ್ಲ. ಅದರ ಬಗ್ಗೆ ಕಲ್ಪನೆ ಮೂಡಿಸುವ ಪ್ರಯತ್ನಗಳೂ ಕಡಿಮೆನೇ ಅಂತ ಹೇಳಬಹುದು. ಹಾಗಾದರೆ ಈ ಮಕ್ಕಳಿಗೆ ಇವೆಲ್ಲದರ ಪರಿಚಯ ಬೇಡವೇ? ಬೇಕು ಯಾರು ಈ ಕೆಲಸ ಮಾಡಬೇಕು. ಹೇಗೆ ಮಾಡಬೇಕು. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಗೋಟಗೋಡಿಯಲ್ಲಿದೆ. ಇಂದಿನದು ಧಾವಂತದ ಬದುಕು. ಯಾವುದಕ್ಕೂ ಸಮಯಾವಕಾಶವಿಲ್ಲ.ಇದಕ್ಕೆ ಜೀವನದ ಮಹತ್ವಘಟ್ಟವೆಂದೇ ಕರೆಯಲ್ಪಡುವ ಮದುವೆಯೂ ಹೊರತಾಗಿಲ್ಲ.ಸುದೀರ್ಘ ಆಚರಣೆಗಳಿಗೆ ಗುಡ್‍ಬೈ ಹೇಳಿ ಫಟಾಫಟ್ […]

ಭವ್ಯ ವೃಕ್ಷಸಂಪತ್ತಿನ ಭೀಮಗಡ ವನ್ಯಧಾಮ

ನೀವು ನಗರ ಜೀವನದ ಜಂಜಾಟದಿಂದ ಬೇಸತ್ತಿದ್ದೀರಾ? ಯಾಂತ್ರಿಕ ಬದುಕಿಗೆ ಅಲ್ಪ ವಿರಾಮ ಹೇಳಲು ಇಷ್ಟಪಡುತ್ತೀರಾ? ಪರಿಶುದ್ಧ ಗಾಳಿ, ನೆಮ್ಮದಿ ಅರಸುತ್ತಿದ್ದೀರಾ? ಹಾಗಾದರೆ ತಡವೇಕೆ ಇಂದೇ ಹೊರಡಿ ಗಡಿ ಜಿಲ್ಲೆ ಬೆಳಗಾವಿ ತಾಲೂಕಿನ ಖಾನಾಪೂರದ ಅರಣ್ಯಪ್ರದೇಶಕೆ. ಇಲ್ಲಿ ಭೀಮಗಡ ವನ್ಯಧಾಮ, ಲೊಂಡಾ ಬಳಿ ದೂಧಸಾಗರ್ ಜಲಪಾತ, ಕಾರಂಜಾಳ ಕೆರೆ ಒಂದೇ ಎರಡೇ ಹಲವು ವಿಶೇಷವನ್ನೊಳಗೊಂಡ ವೃಕ್ಷ ಸಂಪತ್ತಿನ ಜತೆಗೆ ಹವಾಮಾನದ ಹಲವು ಮುಖಗಳ ವಿರಾಟದರ್ಶನ ಇಲ್ಲಿದೆ. ಮಳೆಗಾಲ ಆರಂಭವಾಗಿದೆ. ದಟ್ಟ ಕಾಡು ಹಸಿರು ತೊಟ್ಟು ನಿಂತಿದೆ. ಮಳೆ ಇಲ್ಲಿನ […]

ಊರಿನ ಹೆಸರಿನಲ್ಲೇನಿದೆ?

ಹೆಸರಿನಲ್ಲೇನಿದೆ?…..ಈ ಜನಪ್ರಿಯ ಉಲ್ಲೇಖ ಎಲ್ಲರೂ ಕೇಳಿರಬಹುದು. ಹೆಸರು ಕೇವಲ ಮನುಷ್ಯನನ್ನು, ವಸ್ತುವನ್ನು ಅಥವಾ ಸ್ಥಳ ಗುರುತಿಸಲು ಬಳಸುವ ನಾಮಪದವಲ್ಲ. ಗುಲಾಬಿ ಹೂವನ್ನು ಬೇರೊಂದು ಹೆಸರಿನಿಂದ ಕರೆದರೂ ಅದರ ಸುವಾಸನೆ ಬದಲಾಗಲ್ಲ……ಆದರೆ ಯಾರಿಗಾದರು ಗುಲಾಬಿ ಹೂವು ಎಂದ ಕೂಡಲೇ ನೆನಪಾಗುವ ಸುವಾಸನೆ ಒಂದೇ…..ಇದು ಹೆಸರಿನ ಪ್ರಭಾವ. ಹೆಸರು ಸರಿಯಾಗಿ ಬಳಸದಿದ್ದರೆ ಕ್ರಮೇಣ ಅದರ ಬಳಕೆ ಮತ್ತು ಅರ್ಥ ಎರಡೂ ಬದಲಾಗಿ ಅಪಾರ್ಥಕ್ಕೆ ಎಡೆ ಮಾಡಿಕೊಡುತ್ತದೆ. ನಮ್ಮ ಕನ್ನಡದ ಹೆಸರಾಂತ ಹಾಸ್ಯ ಕಲಾವಿದ ಪ್ರಾಣೇಶ್ ಅವರು ತಿಳಿಸುವ ಹಾಸ್ಯ ಪ್ರಸಂಗ […]