Your Cart

Need help? Call +91 9535015489

📖 Print books shipping available only in India. ✈ Flat rate shipping

ತ್ಯಾಜ್ಯ ನಿರ್ವಹಣೆ

ತ್ಯಾಜ್ಯ ನಿರ್ವಹಣೆ “ಕಸಾನ ಅಲ್ಲಿಲ್ಲೆ,ಗಟರದಾಗ ಒಗೀತೀರ್ಯಾಕ? ಅಪಾರ್ಟ್ಮೆಂಟ್ ನ ಬೇಸ್ ಮೆಂಟ್ ದಾಗ ಕಸದ ಡಬ್ಬೀ ಇಟ್ಟೇವಿ. ಅದರಾಗನ ಹಾಕರಿ. ” “ನಾ ಇಲ್ಲೇ ಒಗ್ಯಾಕಿ. ನಿಂಗೇನ ಮಾಡೂದು? ನಿನ್ನ ಮನೀ ಹತ್ರಂತೂ ಚೆಲ್ಲಿಲ್ಲಾ…” “ರಸ್ತೆದಾಗ ಯಾಕ ಊಟಾ ಮಾಡಿದ ಎಲೀ ಛೆಲ್ಲತೀರೀ? ಕಸದ ಡಬ್ಯಾಗ ಹಾಕ್ರೆಲಾ…” “ಯಾಕರೀ ನಿಮಗ ಮಾಡಲಿಕ್ಕೆ ಕೆಲಸಿಲ್ಲೇನು?ಎಲ್ಲಾರಿಗೂ ಫುಕಟ ಉಪದೇಶ ಕೊಟಗೋತ ಹೊಂಟೀರಿ?” “ಮುಗೀತsss ಮಂಗಳಾರತೀ.. ಊರ ಉಸಾಬರಿ ಮಾಡಿ…” ನಮಗ ಇಂಥಾ ಅನುಭವ ಜೀವನದಾಗ ಭಾಳ ಆಗತಾವರೀ. ಅದಕ ಕಾರಬಾರ […]

ಮಳೆ ಈ ಮಳೆ

ಆಷಾಢ ಮೋಡ ಸರಿಸಿ ಬಂದಳು ಈ ಶ್ರಾವಣ ಮಳೆ ಎಲ್ಲೇಡೆ ಹಸಿರಿನ ಚಾಪೆ ಹಾಸಿದ ಈ ಮಳೆ ಆಸೆಯ ಶ್ರಾವಣಕ್ಕೆ ಮೊದಲ ಈ ಮಳೆ ತವರಿಗೆ ಹೊಗುವ ಅಕ್ಕ -ತಂಗಿಯರಿಗೆ ತಳಿ ಹಾಕುವ ಈ ಮಳೆ ಒಟ್ಟು ಶ್ರಾವಣ ಸಂಭ್ರಮಕ್ಕೆ ಮಣೆ ಹಾಕುವ ಈ ಮಳೆ.. ವಿಜಯ ಇನಾಮದಾರ ಧಾರವಾಡ

ಓ ಮಲಪ್ರಭೆ

ಕಣಕುಂಬಿಯಲಿ ಮಲಪ್ರಭೆ ನೀ ಉದ್ಭವಿಸಿ ಸವದತ್ತಿಯಲ್ಲಿ ಎಲ್ಲಮ್ಮನ ಸಂದರ್ಶಿಸಿ,ಪಾದ ಸ್ಪರ್ಶಿಸಿ ನವಿಲುತೀರ್ಥದಲಿ ರೇಣುಕಾಸಾಗರ ನೀನಾದೆ. ಹಿರೇ,ತುಪ್ಪರಿ,ಬೆಣ್ಣೆ ಹಳ್ಳಗೂಡಿ ಕೃಷ್ಣೆಯನ್ನು ಕೂಡಲಸಂಗಮ ದಲ್ಲಿ ಕೂಡಿ ರೈತ ನ ಬೆಳೆ ಹಸಿರಾಗಿಸಿ ನೀ ಸಾಗರದಲ್ಲಿ ಒಂದಾದೆ.ನೀ ಜೀವ ಜಲ ನನ್ನ ಪ್ರಾಣ ಜಲ ನಿರಂತರ ಸದಾ ನಮ್ಮ ಮನೆಯಲ್ಲಿರುವೆ ಓ ಮಲಪ್ರಭೆ,ನೀನೆ ಗಂಗೆ,ಯಮುನೆ ಮನುಜನ ಮಲಿನ ದೂರಟ್ಟಿ ನೀ ಮಲಾಪಹಾರಿ ಮನುಕುಲದ ಪ್ರಭೆಯನ್ನು ಹೆಚ್ಚಿಸಿರುವೆ… ಧಾರವಾಡವಿಜು ನೀರ ಮಿತವಾಗಿ ಬಳಸಿ  

ಸಂಸದ ಆದರ್ಶ ಗ್ರಾಮ ಯೋಜನೆಯು ಇತರೆ ಗ್ರಾಮಗಳಿಗೆ ಮಾದರಿಯಾಗಬಲ್ಲುದೇ?

ಸಂಸದ ಆದರ್ಶ ಗ್ರಾಮ ಯೋಜನೆಯು ಇತರೆ ಗ್ರಾಮಗಳಿಗೆ ಮಾದರಿಯಾಗಬಲ್ಲುದೇ? ಭಾರತದಲ್ಲಿ ಗ್ರಾಮ ಅಥವಾ ಹಳ್ಳಿ, ವ್ಯವಸ್ಥೆಯು ಇತಿಹಾಸ ಕಾಲದಿಂದಲೂ ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ರಾಜ ಮನೆತನಗಳ ಕಾಲದಲ್ಲಿ ಗ್ರಾಮ, ದಶಗ್ರಾಮ ಹಾಗೂ ಮಹಾಗ್ರಾಮಗಳೆಂದು ಮೂರು ಪಂಗಡಗಳಿದ್ದವು. ಗ್ರಾಮ ಕೇವಲ ಒಂದು ಗ್ರಾಮವಾಗಿರದೇ ದಶಗ್ರಾಮ (10 ಗ್ರಾಮಗಳನ್ನೊಳಗೊಂಡು) ಮತ್ತು 25 ಗ್ರಾಮಗಳನ್ನು ಒಳಗೊಂಡು ಇಂದಿನ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್ಗಳಂತೆ ಕಾರ್ಯ ನಿರ್ವಹಿಸುತ್ತಿದ್ದವು. ಗ್ರಾಮಗಳು ನಗರ ಪ್ರದೇಶಗಳಿಗೆ ಕೃಷಿ ಉತ್ಪನ್ನ ತೋಟಗಾರಿಕೆ, ಹೈನುಗಾರಿಕೆ ಸಂಸ್ಕೃತಿ ಮತ್ತು ಕಾರ್ಮಿಕರ […]

ಗ್ರಾಮೀಣ ಶುದ್ಧ ಕುಡಿಯುವ ನೀರಿನ ಘಟಕಗಳ ಅನುಕೂಲ, ಅನಿವಾರ್ಯತೆ, ಮತ್ತು ನಿರ್ವಹಣೆ

ಗ್ರಾಮೀಣ ಶುದ್ಧ ಕುಡಿಯುವ ನೀರಿನ ಘಟಕಗಳ ಅನುಕೂಲ, ಅನಿವಾರ್ಯತೆ, ಮತ್ತು ನಿರ್ವಹಣೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಈ ವರ್ಷ ಬರಗಾಲ ಪರಿಸ್ಥಿತಿ ಇದ್ದ ಕಾರಣ ನೀರಿಗಾಗಿ ಪರದಾಟ ಶುರುವಾಗಿದ್ದು, ಸಮರ್ಪಕವಾಗಿ ನೀರು ಪೂರೈಸುವುದು ಅತ್ಯಂತ ಕಷ್ಟಕರವಾಗಿದೆ ಮತ್ತು ಕುಡಿಯುವ ನೀರಿಗಾಗಿ ಏಪ್ರಿಲ್-ಮೇ ತಿಂಗಳಲ್ಲಿ ತುಂಬಾ ಭೀಕರ ಪರಿಸ್ಥಿತಿ ಎದುರಿಸುವಂತಾಗಿದೆ ಹೆಚ್ಚಿನ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಅಂತರ್ಜಲ ಮಟ್ಟದ ಕುಸಿತದಿಂದ ಎಷ್ಟೋ ಕೊಳವೆಬಾವಿಗಳಲ್ಲಿ ನೀರಿನ ಕಡಿಮೆ ಲಭ್ಯತೆ, ವಿದ್ಯುತ್ ಕೊರತೆಯಿಂದ ಪಂಪಸೆಟ್ ಕೊಳವೆಬಾವಿ ಸುಟ್ಟು ಹೋಗುವುದು. ಹೀಗೆ ದಿನೇ […]

ಹಿಂಗ್ಯಾಕೆ ನಾವೆಲ್ಲ….! ಭಾಗ-3 – ಕಸ ಚೆಲ್ಲಬೇಡಿ

  ಕಸ ಚೆಲ್ಲಬೇಡಿ – ರಘೋತ್ತಮ ಕೊಪ್ಪರ್ ಇಂದು ನಮ್ಮ ನಗರಗಳನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ತ್ಯಾಜ್ಯ ವಿಲೇವಾರಿಯೂ ಪ್ರಮುಖ ಸಾಲಿನಲ್ಲಿ ಬರುತ್ತೆ. ಎಷ್ಟೋ ಜನರು ಘನ ತ್ಯಾಜ್ಯ ಮತ್ತು ಹಸಿ ತ್ಯಾಜ್ಯವನ್ನು ಪ್ರತ್ಯೇಕಿಸುವುದಿಲ್ಲ. ಒಂದೇ ಪ್ಲಾಸ್ಟಿಕ್ ಚೀಲದಲ್ಲಿ ಕಾಯಿಪಲ್ಯೆ ಸಿಪ್ಪೆ, ಒಡೆದ ಬಲ್ಬ್ ಇವೆಲ್ಲ ಹಾಕಿ ಒಗೆದರೆ, ಅದನ್ನು ಪ್ರತ್ಯೇಕಿಸುವವರ ಕೈಗೆ ಬಲ್ಬ್ ಚುಚ್ಚ ಬಹುದು ಎಂಬ ಸಾಮಾನ್ಯ ಜ್ಞಾನವೂ ಇಲ್ಲವೇ! ನಮ್ಮ ಮನೆಯಿಂದ ಹೊರಗೆ ಹೋದರೆ ನಮ್ಮ ಕೆಲಸ ಆಯಿತು ಮುಂದೆ ಏನಾದರೂ ಆಗಲಿ ಎಂಬ […]

ಇನಿತೇನಿಲ್ಲವೊ ಈ ಚಳಿಗಾಲ

ಇನಿತೇನಿಲ್ಲವೊ ಈ ಚಳಿಗಾಲ — ಶೈಲಜಾ ಹೂಗಾರ ಇನ್ನೇನು ಕುಳಿರ್ಗಾಳಿ ಬೀಸುತಲಿದೆ ಅನ್ನುವಾಗಲೂ ಮಳೆಗಾಲದ ಹಸಿ ಹಸಿ ನೆನಪ ಮಳಿ ಹನಿಯುವುದು ನಿಂತಿರಲಿಲ್ಲ. ಹಳೆಯದರ ಹಳವಂಡ ಅಷ್ಟು ಬೇಗ ಹೋಗಲೊಲ್ಲದಲ್ಲ. ಆ ಗುಟುರುವ ಕಪ್ಪೆ, ಮಳೆಹನಿಗೆ ತೊಪ್ಪೆಯಾದ ಮನವೀಗ ಚಳಿಗೆ ನಿಧಾನವಾಗಿ ಹೇಗೆ ಹೊಂದಿಕೊಳ್ಳುವುದೆಂದು ಹಲವು ಹಾದಿ ಹೊಳಹು. ಕನಸು ಕನವರಿಕೆಗಳಿಗೆಲ್ಲ ಪ್ರಶಸ್ತ ಸುದೀರ್ಘ ಕತ್ತಲು ಕಾಲ. ಅವುಗಳ ನನಸಿಗೆ ಇರುವ ಸಮಯ ಅತ್ಯಲ್ಪ ಎಂಬ ನೀತಿ ಸಾರಿಬಿಡುತ್ತದೆ ನಿಸರ್ಗ ಚಳಿಗಾಲದ ಹಗಲಿನಲೆ. ಮುಂದೆ ಇನ್ನೇನು ಆ […]

ಮಂಗ್ಯಾ

ಮಂಗ್ಯ—- ಅಂದ ಕೂಡಲೇ ನಮಗ ನೆನಪ ಬರುದು ಒಂದು ಖರೆ ಖರೆ ಮಂಗ್ಯ ಇನ್ನೊಂದು ನಮ್ಮ ಧಾರವಾಡ್ ಭಾಷಾದಾಗ್ ಮೂರ್ಖ ಅನ್ನಲಿಕ್ಕೆ ಅವಾಗ್ ಅವಾಗ ಮಂಗ್ಯ ಅಂತ ಬೈಯ್ಯುದು ರೂಢಿ ರೀ ಮನುಷ್ಯ ಆಗಿದ್ದ ಮಂಗ್ಯಾನಿಂದ(ಮಂಗನಿಂದ ಮಾನವ ) ಅದನ್ಯಾಕೋ ಬೈಯಲಿಕ್ಕೆ ತಗೊಂಡರು ?ತಿಳಿಯದ ಮಾತೇನು ಅಲ್ಲ .ಮಂಗ್ಯಾ ಅಲ್ಲಿಂದ ಇಲ್ಲಿಗೆ ಜಿಗದ ಜಿಗದ ಮಾಡು ಕಾರ್ಬಾರಕ್ಕೆ ಅದ ಬೈಗಳ ಬಂದದ ಅನಸತದ . ಅಂದಂಗ ಹಿಮಾಚಲಪ್ರದೆಶದಾಗ ಮಂಕಿ ಪಾಯಿಂಟ್ ಅಂತ ಅದ ಅಂತ ರೀ ಅಲ್ಲೇ […]

ನೆರೆ ಬರದಿರಲಿ ದೇವರೇ

ನೆರೆ ಬರದಿರಲಿ ದೇವರೇ ನೆರೆ ಬಂತು ಕೊಟ್ಟಿತು ಬರೆ ಕೇಳುವವರಿಲ್ಲ ಸಂತ್ರಸ್ತರ ಕರೆ ಹಣವೂ ಇಲ್ಲ , ಮನೆಯೂ ಇಲ್ಲ ಭರವಸೆಗಳೇ ಬರೆ ಬರೆ ಹಣ ಬರಲಿ ಬಿಡಲಿ ಈ ವರ್ಷ ಮಾತ್ರ ನೆರೆ ಬರದಿಅರಲಿ ದೇವರೆ ….   ವಿಜಯ  ಇನಾಮದಾರ ,  ಧಾರವಾಡ