Your Cart

Need help? Call +91 9535015489

📖 Print books shipping available only in India. ✈ Flat rate shipping

ಬುಡಾಪೆಸ್ಟ್ ನ ನಾಲಿಗೆಯಿಲ್ಲದ ಸಿಂಹಗಳು

ಬುಡಾಪೆಸ್ಟ್ ಡಾನ್ಯೂಬ್ಮ ತ್ತು ನಾಲಿಗೆಯಿಲ್ಲದ ಸಿಂಹಗಳು. ಗಜಗಾತ್ರದ ನಾಲ್ಕು ನಾಲಿಗೆಯಿಲ್ಲದ ಸಿಂಹಗಳು ಡಾನ್ಯೂಬ್ ನದಿಯ ಚೇನ್ ಬ್ರಿಜ್ ಮೇಲಿನ ನಾಲ್ಕೂ ನಿಟ್ಟಿನಲ್ಲಿ ಭವ್ಯವಾಗಿ ಕೂತು ಹೋಗುಬರುವವರನ್ನೇ ದಿಟ್ಟಿಸುತ್ತಿವೆಯಲ್ಲ ಅನಿಸಿ ಇದೇನಿದು? ಆ ಸಿಂಹಗಳ ಜಿಹ್ವಾರಹಿತ ಕಥನದ ಹಿಂದೇನಿರಬಹುದು‌? ಎಂದು ನಾನು ಕೆದಕಿದೆ. ನದೀತಟದ ಎರಡು ಬದಿಗಳನ್ನು ಬೆಸೆಯಲು ಸೇತುವೆ ಕಟ್ಟೋಣ ಸಹಜ ಅಲ್ಲವೇ? ಹಾಗೆ ಬುಡಾ ಮತ್ತು ಪೆಸ್ಟ್ ಎಂಬ ನಗರಗಳನ್ನು ಒಂದು ಮಾಡಲು ಅಲ್ಲಿನ ಡಾನ್ಯೂಬ್ ನದಿಯ ಮೇಲೆ ಚೇನ್ ಹೆಸರಿನ ಸೇತುವೆ ಎದ್ದು ನಿಂತಿತು.‌ […]

ಬುದ್ಧ ಮತ್ತು ನಾನು

ಬುದ್ಧ ಮತ್ತು ನಾನು! ಹಾ…ಇವತ್ತು ಬುದ್ಧನೊಟ್ಟಿಗೆ ಮಾತಿಗಿಳಿಯುವ ತವಕ ನನಗೆ…ಬುದ್ಧನಿಗೆ ನನ್ನ ಮನದ ಮಾತು ಹೇಳುವುದಿದೆ. ಬುದ್ಧ!… ಈಗಲ್ಲ ಚಿಕ್ಕವಳಿದ್ದಾಗಿನಿಂದ ನಿನ್ನ ಕುರಿತು ಕೇಳುತ್ತಿದ್ದೇನೆ. ಆಗ ನೀನು ಮುದ್ದಾದ ಗೊಂಬೆಯಂತೆ ಕಾಣುತ್ತಿದ್ದೆ. ನಿನ್ನೋಟ್ಟಿಗೆ ಆಟವಾಡಿ ಕಾಲ ಕಳೆಯುತ್ತಿದ್ದೆ. ಮುಂದೆ ಪಠ್ಯ ಪುಸ್ತಕಗಳಲ್ಲಿ ಓದಿದಾಗ ಓ…ಬುದ್ಧ ಸಾಮಾನ್ಯನಲ್ಲ ಏನೋ ಸಾಧನೆ ಮಾಡಿ, ಜ್ಞಾನ ಸಂಪಾದನೆ ಮಾಡಿರುವ ವ್ಯಕ್ತಿ ಎಂದು ತಿಳಿಯಿತು. ಮುಂದೆ ಬುದ್ಧನೆಂದಾಗ ಆಸೆ,ದುಃಖ,ಕರುಣೆ ಪ್ರೀತಿ,ಮೋಹ ಇನ್ನೂ ಹಲವಾರು ವಿಷಯಗಳು ತಿಳಿದುಕೊಂಡೆ. ಈಗ ಅರ್ಧ ಆಯಸ್ಸು ಕಳೆಯುವ ಹೊತ್ತಿಗೆ […]

ಭಗವದ್ಗೀತೆಯ ಸಾರಸರ್ವಸ್ವ  ಭಾಗ- ೨ 

ಭಗವದ್ಗೀತೆಯ ಸಾರಸರ್ವಸ್ವ  ಭಾಗ- ೨ ಆ) ಲೋಕ ಕಲ್ಯಾಣ– ವಾಸ್ತವಿಕವಾಗಿ ಪ್ರಪಂಚವನ್ನಾಗಲೀ, ಪ್ರಪಂಚದಲ್ಲಿ ದೊರಕುವ ಸುಖ ದುಃಖಗಳನ್ನಾಗಲೀ, ಪ್ರಾಪಂಚಿಕ ಇತಿಮಿತಿ ಚೌಕಟ್ಟು ಬಂಧ ವನ್ನಾಗಲೀ ಒಪ್ಪಿಕೊಳ್ಳದೇ ಇರಲು ಸಾಧ್ಯವಿಲ್ಲ. ಪ್ರಪಂಚದಲ್ಲಿ ಬಾಳನ್ನು ಸಾಗಿಸಲೇ ಬೇಕು, ಜವಾಬ್ದಾರಿಗಳನ್ನು ನಿರ್ವಹಿಸಲೇ ಬೇಕು; ಅದೇ ಸಹಜವಾದದ್ದು. ವ್ಯಕ್ತಿ ತನಗಾಗಿ, ತನ್ನ ಕುಟುಂಬ ಸಮಾಜ ರಾಜ್ಯ ಸುತ್ತಲಿನ ಪರಿಸರಕ್ಕಾಗಿ ಅತ್ಯಾವಶ್ಯಕವಾಗಿ ಮಾಡಬೇಕಾದ ಕರ್ಮ, ಕರ್ತವ್ಯಗಳನ್ನು ನಿರ್ವಹಿಸುತ್ತಾ ಕರ್ಮಾನುಷ್ಠಾನಿ ಆಗಲೇಬೇಕು. ವ್ಯಕ್ತಿಯ ಕರ್ತವ್ಯಗಳು ಮಾನವ ಸಮಾಜಕ್ಕೆ ಮಾತ್ರ ಸೀಮಿತವಾದದ್ದು ಅಲ್ಲ, ಸಮಸ್ತ ಚರಾಚರ ಜಗತ್ತನ್ನು […]

ಕಮಂಡಲದ ಕಥನ

ಕಮಂಡಲದ ಕಥನ…! ಕಮಂಡಲ; ಯತಿಗಳು ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಒಂದು ವಿಧವಾದ ಪಾತ್ರೆ ಅಥವಾ ಸಾಧನ, ಹಿಂದೂ ಧರ್ಮದಲ್ಲಿ ಇದಕ್ಕೊಂದು ಪವಿತ್ರ ಸ್ಥಾನವಿದೆ. ಕಮಂಡಲ ವೈರಾಗ್ಯದ ಸಂಕೇತ. ದಂಡ, ಕಮಂಡಲ ಕಾವಿ ಬಟ್ಟೆ, ರುದ್ರಾಕ್ಷಿ, ಜಪಮಾಲೆ ಇವೆಲ್ಲಾ ತಪಸ್ವಿಗಳ ಬಳಿ ಕಾಣುವಂತಹುದು , ಹೀಗಾಗಿ ಈ ಲಾಂಛನಗಳಿಗೊಂದು ಪೂಜನೀಯ ಸ್ಥಾನವೂ ಇದೆ. ಋಷಿ-ಮುನಿಗಳು, ಸಾಧು ಸಂತರು, ಯೋಗಿಗಳು, ಸನ್ಯಾಸಿಗಳು, ಸಾಧು- ಸಂತರು, ಯೋಗಿಗಳು, ಸನ್ಯಾಸಿಗಳು, ತಪಸ್ವಿಗಳು ಕಮಂಡಲವನ್ನು ಬಳಸುತ್ತಾರೆ, ಬ್ರಹ್ಮ, ಶಿವ, ದತ್ತಾತ್ರೇಯ, ವಾಮನ ಇನ್ನೂ ಹಲವಾರು ದೇವರುಗಳ […]

ಫೇಸ್ ಬುಕ್ ,,, ಒಂದು ಜಿಜ್ಞಾಸೆ

ಫೇಸ್ ಬುಕ್ ,,, ಒಂದು ಜಿಜ್ಞಾಸೆ…. ನಾನು ಫೇಸ್ ಬುಕ್ಕಿಗೆ ಬಂದು ಐದು ವರ್ಷಗಳು ಮುಗಿದವು. ಅದನ್ನು ಸೇರಿಕೊಂಡಾಗ ನನಗೆ ನನ್ನದೇ ಆದ ನಿರೀಕ್ಷೆಗಳೇನೂ ಇರಲಿಲ್ಲ. ನನ್ನೊಂದು ಅದರ ಬಗ್ಗೆ ಪುಟ್ಟ ಕುತೂಹಲ, ಮಕ್ಕಳ ಸಹಾಯ ಒತ್ತಾಯದಿಂದ ಅದರ ಸುಳಿಯೊಳಗೆ ಬಂದೆ. Technological knowledge   ನಲ್ಲಿ ನಾನು ಒಂದು ದೊಡ್ಡ ಶೂನ್ಯ. ಬೇಕಾದುದನ್ನು ಅವರಿವರಿಂದ, ಆಗಾಗ ಅಷ್ಟಿಷ್ಟು ಕಲಿತು ಒಂದೊಂದೇ ಮೆಟ್ಟಿಲು ಹತ್ತುತ್ತ ಇಲ್ಲಿಗೆ ಬಂದಿದ್ದೇನೆ. ಇದರಲ್ಲಿಯೇ ಹೆಚ್ಚು ತೊಡಗಿಕೊಳ್ಳು ವಿಚಾರವೇನೂ ನನಗಿಲ್ಲ. ಬೆಂಗಳೂರಿನಂಥ ಮಹಾನಗರದಲ್ಲಿ […]

ಪರಿಸರ ಸ್ನೇಹಿ ಆಟಿಕೆ

ಪರಿಸರ ಸ್ನೇಹಿ ಆಟಿಕೆ…! ಮಗುವಿನ ದೊಡ್ಡ ಪ್ರಪಂಚವೇ ಆಟಿಕೆ. ಹಿಂದೆ ಮಕ್ಕಳ ಆಟಿಕೆಗಳು ಹೆಚ್ಚಾಗಿ ಕಟ್ಟಿಗೆ, ಕಲ್ಲುಗಳಿಂದ ತಯಾರಾದಂತಹ ಆಟಿಕೆಗಳೇ ಆಗಿದ್ದವು. ಇಲ್ಲಿ ಕಾಣುವ ಆಟಿಕೆಗಳು ಅಪರೂಪವೇ ಆಗುತ್ತಿರುವ ನಮ್ಮದೇ ನೆಲದ ಸೃಷ್ಟಿಯಾದ ಬಳಪದ ಕಲ್ಲಿನ ಆಟಿಕೆಗಳು. ಪರಿಸರ ಸ್ನೇಹಿಯಾದ ಇಂತಹ ಆಟಿಕೆಗಳನ್ನು ಮರೆತು ಈಗ ನಾಔಉ ಚೀನಾ, ಜಪಾನ್ ನಿರ್ಮಿತ ಪ್ಲಾಸ್ಟಿಕ್ ಆಟಿಕೆಗಳನ್ನು ತಂದು ಕೊಟ್ಟು ಸಂಭ್ರಮಿಸುತ್ತಿದ್ದೇವೆ. ಪ್ಲಾಸ್ಟಿಕ್ ಲೋಹಗಳಿಂದ ತಯಾರಾದ ಆಟಿಕೆಗಳಲ್ಲಿ ಮಗುವಿನ ಆರೋಗ್ಯಕ್ಕೆ ಮಾರಕವಾದ ರಾಸಾಯನಿಕಗಳಿರುತ್ತವೆಂದು ತಿಳಿದು ಬಂದಿದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸರಕಾರವು […]

ಭಗವದ್ಗೀತೆಯ ಸಾರಸರ್ವಸ್ವ ಭಾಗ-೧

ಭಗವದ್ಗೀತೆಯ ಸಾರಸರ್ವಸ್ವ  ಭಾಗ-೧ ನಮ್ಮ ಭಾರತೀಯ ಚಿಂತನೆಯ ಮೂಲಾಧಾರ ವೇದ, ಉಪನಿಷತ್ತು, ಭಗವದ್ಗೀತೆಗಳು. ಇವುಗಳ ಪಾರಮ್ಯವನ್ನು ಒಪ್ಪಿಕೊಳ್ಳಲೀ ಒಪ್ಪಿಕೊಳ್ಳದಿರಲೀ ಅವು ಪ್ರತಿಪಾದಿಸುವ ಚಿಂತನೆಯ ಸಾರವನ್ನು ತಮ್ಮದೇ ಆದ ರೀತಿಯಲ್ಲಿ ಅಳವಡಿಸಿಕೊಳ್ಳದಿರುವ ಭಾರತೀಯ ಚಿಂತನಾ ಪ್ರಕಾರ ಇಲ್ಲವೆಂದೇ ಹೇಳಬೇಕು. ಭಾರತದಲ್ಲಿ ತತ್ತ್ವಶಾಸ್ತ್ರವನ್ನು ಎತ್ತಿ ಹಿಡಿದುದು ಜ್ಞಾನಕ್ಕಾಗಿ ಅಲ್ಲ. ಮನುಷ್ಯ ಈ ಬದುಕಿನಲ್ಲಿ ಸಾಧಿಸಬಹುದಾದ ಅತ್ಯುನ್ನತ ಗುರಿಯನ್ನು ತಲುಪುವುದಕ್ಕಾಗಿ. ಇಲ್ಲಿ ತತ್ತ್ವಶಾಸ್ತ್ರವು ಆಶ್ಚರ್ಯ, ಕುತೂಹಲಗಳಿಂದಾಗಿ ರೂಪುಗೊಂಡಿಲ್ಲ, ಬದಲಿಗೆ ಅದು ರೂಪುಗೊಂಡಿರುವುದು ಬದುಕನ್ನು ಸುಂದರಗೊಳಿಸಿಕೊಳ್ಳುವುದಕ್ಕಾಗಿ. ಇಲ್ಲಿ ತತ್ತ್ವಾನುಸಂಧಾನವು ಕೇವಲ ಬೌದ್ಧಿಕ ಜಿಜ್ಞಾಸೆ […]

ನೋತ್ರ ದೇಮಿನ ಗೂನನ  ಚರ್ಚಿನಲ್ಲೆರಡು ಕ್ಷಣ

ನೋತ್ರ ದೇಮಿನ ಗೂನನ  ಚರ್ಚಿನಲ್ಲೆರಡು ಕ್ಷಣ! ನಿಮಗೂ ನೆನಪಿರಬಹುದಲ್ಲ? ಆ ಗೂನನನದು ? ನಿಜ, ಬಹಳ ದಿನಗಳಾದುವು “ದಿ ಹ೦ಚ್ ಬ್ಯಾಕ್ ಆಫ್ ನೋತ್ರ  ದೇಮ್” ಕಾದ೦ಬರಿಯನ್ನು   ಕೈಯಲ್ಲಿ ಹಿಡಿದು ಪುಟಗಳ ತಿರುಗಿಸಿದ್ದು .ಚರ್ಚಿನ ಗ೦ಟೆ ಬಾರಿಸುವ ಗೂನ ಕ಼್ವಾಸಿಮೊಡೊನ ದುರ೦ತ ಬದುಕಿನ ಚಿತ್ರದ ಪ್ರತಿಯೊ೦ದು ಪುಟವನ್ನು ತನ್ನ ಒಡಲಲ್ಲೇ ಬೆಳೆಸಿ ಕಟ್ಟಿಕೊಟ್ಟ ನೋತ್ರ ದೇಮ್  ಕಥೀಡ್ರಲ್ . ಕಥೆಗಾರ  ವಿಕ್ಟೋರ್ ಹ್ಯೂಗೋ ಇದೇ ಚರ್ಚನ್ನೇ ಸಮಗ್ರ ಹಿನ್ನೆಲೆಯನ್ನಾಗಿಸಿ  ಹ೦ಚ್- ಬ್ಯಾಕ್ ನ ಕಥೆಯಲ್ಲಿ ಮೂಡಿರುವ  ಪಾತ್ರಗಳನ್ನು […]

ಆಹಾ ಆ ಬಾಲ್ಯವೆಷ್ಟು ಚೆನ್ನ

ಆಹಾ ಆ ಬಾಲ್ಯವೆಷ್ಟು ಚೆನ್ನ! ಪ್ರಕೃತಿಯ ನಿಯಮದಂತೆ ಬಾಲ್ಯ ಯೌವನ ಹಾಗೂ ಮುಪ್ಪು ಪ್ರತಿಯೊಬ್ಬರ ಬಾಳಿನಲ್ಲೂ ಅನಿವಾರ್ಯ. ಅದರಲ್ಲಿ ಬಾಲ್ಯದ ನೆನಹುಗಳು ಸವಿಯಾಗಿದ್ದರಂತೂ ತೀರಿತು ಅದು ಹಾಗೇ ಉಳಿಯಬೇಕೆನ್ನುವ ಅಪೇಕ್ಷೆ ಎಲ್ಲರದು. ಚಿಕ್ಕಂದಿನಲ್ಲಿ ಸ್ವಲ್ಪ ಜಾಣರ ಪಟ್ಟಿಯಲ್ಲಿ ನಾನೂ ಒಬ್ಬಳಿದ್ದೆ, ಜಮಖಂಡಿಯ ಪಿ.ಬಿ. ಹಾಯಸ್ಕೂಲಿನಲ್ಲಿ ಆರನೇ ಇಯತ್ತೆ ಇರಬಹುದು. ಶಾಲೆ ವಿವಿಧ ಕ್ರೀಡೆ, ಭಾಷಣ ನಿಬಂಧ ಸ್ಪರ್ಧೆಗಳಲ್ಲೆಲ್ಲ ನಾನೇ ಮೊದಲಿಗಳಾಗಿದ್ದೆ ಎಂದರೆ ಅತಿಶಯೋಕ್ತಿಯೇನಲ್ಲ. ಅವತ್ತು ಬಹುಮಾನದ ವಿತರಣೆಯ ಸಮಾರಂಭವಿತ್ತು. ಮುಖ್ಯ ಅತಿಥಿಗಳಾಗಿ ರಾಮತೀರ್ಥ ರಾಜನ ಮೊಮ್ಮಗ ಬರುವವನಿದ್ದ. […]