Your Cart

Need help? Call +91 9535015489

📖 Print books shipping available only in India. ✈ Flat rate shipping

ವ್ಯಕ್ತಿಯ ಬದುಕು ಹಾಗೂ ತಾತ್ವಿಕತೆ.

ವ್ಯಕ್ತಿಯ ಬದುಕು ಹಾಗೂ ತಾತ್ವಿಕತೆ. ಭಗವದ್ಗೀತೆಯ ಉದ್ದೇಶಗಳಲ್ಲಿ ಅತ್ಯಂತ ಮುಖ್ಯವಾದದ್ದು ವೈಯಕ್ತಿಕ ಬದುಕು ಮತ್ತು ಸಾಮುದಾಯಿಕ ಬದುಕುಗಳ ಮಧ್ಯೆ ಸಾಮರಸ್ಯತೆಯನ್ನು ಉಂಟುಮಾಡುವುದು, ವ್ಯಕ್ತಿ ಮತ್ತು ಸಮಾಜ ಆರೋಗ್ಯದಿಂದಿರಲು ಮತ್ತು ಬದುಕಿನ ಇತಿಮಿತಿಗಳನ್ನು ಮೀರಲು ಸಾಧ್ಯವಾಗುವಂತೆ ಇರಲು ಪ್ರೇರೇಪಿಸುವುದು. ಸಮಾಜದ ಸುಖ ಸಂತೋಷಗಳೊಂದಿಗೇ ವ್ಯಕ್ತಿಯ ಸುಖ ಸಂತೋಷಗಳೂ  ತಳುಕುಹಾಕಿಕೊಂಡಿರುತ್ತವೆ. ವ್ಯಕ್ತಿಯನ್ನು ಸಮಾಜದಿಂದ ಪ್ರತ್ಯೇಕಿಸಿ ಅಥವಾ ಸಮಾಜವನ್ನು ವ್ಯಕ್ತಿಯಿಂದ ಪ್ರತ್ಯೇಕಿಸಿ ವ್ಯಕ್ತಿಯ ಮತ್ತು ಸಮಾಜದ ಅಗತ್ಯಗಳನ್ನಾಗಲೀ, ಕೆಲಸಕಾರ್ಯಗಳನ್ನಾಗಲೀ ಅರ್ಥಮಾಡಿಕೊಳ್ಳ ಬಯಸಿದರೆ ಅದಕ್ಕೆ ಯಾವ ಬೆಲೆಯೂ ಇಲ್ಲ. ವ್ಯಕ್ತಿಯ ಮತ್ತು ಸಮಾಜದ […]

ಪ್ರಶಸ್ತಿ

ಪ್ರಶಸ್ತಿ ‘ಕಲರ್ಸ್’ ಟಿ.ವಿ. ಚಾನೆಲ್ ನಲ್ಲಿ ಬಿತ್ತರಗೊಳ್ಳುತ್ತಿರುವ ‘ಬಿಗ ಬಾಸ್’ನ್ನು ಅದೇಕ ಚಿತ್ತದಿಂದ ನೋಡುವುದರಲ್ಲಿ ತಲ್ಲೀನನಾಗಿದ್ದೆ. ಫೋನು ರಿಂಗಣಿಸಿತು. ಆನಂದಕ್ಕೆ ಸೂಜಿ ಚುಚ್ಚಿದ ಬಲೂನಿನಂತೆನಿಸಿತು. ಯಾವುದೇ ಒಂದು ನಮಗಿಷ್ಟವಾದ ಪ್ರೋಗ್ರ್ಯಾಂ ನೋಡುತ್ತಿರುವಾಗ ಅಡೆತಡೆಯಾದರೆ ಮನಸ್ಸಿಗೆ ಒಂಥರ ಪಿಚ್ಚೆನಿಸುತ್ತದೆ. ಬೇಸರದಿಂದಲೇ ಫೋನೆತ್ತಿದೆ. ಅತ್ತ ಕಡೆಯಿಂದ ಅಪರಿಚಿತ ಪುರುಷ ಧ್ವನಿ! ‘ಹಲೋ’ ಎಂದೆ. ಅತ್ತ ಕಡೆಯಿಂದ ‘ದೀಪಿಕಾ ಅವರಿದ್ದಾರೆಯೇ’ ಎಂದಾಗ ‘ಹೌದು, ನಾನೇ ಮಾತನಾಡುವುದು ಏನಾಗಬೇಕಿತ್ತು?’ ಎಂದೆ ಮುಗುಮ್ಮಾಗೆ. ‘ನಿಮಗೆ ಒಂದು ಪ್ರಶಸ್ತಿ ಬಂದಿದೆ’ ಎನ್ನಬೇಕೆ. ನಾನು ದಿಗ್ಭ್ರಾಂತಳಾಗಿ ಹೋದೆ. […]

ರೋನೇ ಕೋ ಏಕ ಕಂಧಾ ಚಾಹಿಯೇ

ರೋನೇ ಕೋ ಏಕ ಕಂಧಾ ಚಾಹಿಯೇ… ನಿನ್ನೆ ಸಾಯಂಕಾಲ ಏಳು ಗಂಟೆ. ಕರೆ ಗಂಟೆ ಬಾರಿಸಿತು… ಎದ್ದು ಹೋಗಿ ಬಾಗಿಲು ತೆರೆದಾಗ ನಮ್ಮದೇ ಕಾಲನಿಯ ಸವಿತಾ. “ಬನ್ನಿ ಒಳಗಡೆ ಎಂದೆ”. “ನೀವೇ ಬನ್ನಿ ಆಂಟಿ.  club house  ನಲ್ಲಿ ಕೂತು ಮಾತಾಡೋಣ” ಎಂದಳು. ಹೆಚ್ಚು ಪ್ರಶ್ನಿಸದೇ ಹಿಂಬಾಲಿಸಿದೆ. ಕುರ್ಚಿಯ ಮೇಲೆ ಕೂಡುತ್ತಲೇ ಜೋರಾಗಿ ಅಳತೊಡಗಿದಳು. ನಾನು ಗಾಬರಿಯಾದೆ. ಅವಳನ್ನು ಈ ಮೊದಲು ನೋಡಿಯಷ್ಟೇ ಪರಿಚಯ. ಒಮ್ಮೆ ಮಾತ್ರ ಮಾತಾಡಿಸಿದು. ಅದೂ ಕೇವಲ ಕೆಲವೇ ನಿಮಿಷ. ಹೆಚ್ಚೇನೂ ಗೊತ್ತಿರದ […]

ಚಟವಂತರ ಕೂಟದ ಹರಟೆಗಳು

ಚಟವಂತರ ಕೂಟದ ಹರಟೆಗಳು ನಮ್ಮೂರ ಹೈದ, ನಡಮನೀ ನಾರ್ಯಾ ಯಾವಾಗ ಕೇಳಿದರೂ ಆತನ ಬಾಯಿಂದ ಉದುರುವ ಅಣಿ ಮುತ್ತುಗಳು, ನನಗ ಈಗ ಭಾಳ ಅಡಚಣೀ ಅದ ಎನ್ನುವುದೇ ಆಗುತ್ತಿತ್ತು. ಮದುವಿಗಿಂತ ಮೊದಲು ಒಂಥರಾ ಅಡಚಣಿ, ಮದುವೀ ಆದಮ್ಯಾಲೇ ಇನ್ನೊಂಥರ, ಒಟ್ಟ ಅಡಚಣೇ ಒಳಗ ಇರೂದನ ಅವನ ಜನ್ಮ ಸಿದ್ಧ ಹಕ್ಕು ಎಂಬಂತಾಗಿತ್ತು. ಊರ ನಡು ಹಣಮಂತದೇವರ ಗುಡಿ, ಗುಡಿಗೆ ಒಂದ ಲಠ್ಠ ಕಟ್ಟಿ, ಆ ಕಟ್ಟೀ ಮ್ಯಾಲ ಸಂಜೀ ಆತು ಅಂದರ ಅವನ ವಾಸ್ತವ್ಯ ಅಲ್ಲೇ. ಯಾಕೆಂದರೆ […]

ಆಧ್ಯಾತ್ಮ ಎಂದರೇನು?

ಆಧ್ಯಾತ್ಮ ಎಂದರೇನು? ಭಾರತದಲ್ಲಿ ತತ್ತ್ವಶಾಸ್ತ್ರವನ್ನು ಎತ್ತಿ ಹಿಡಿದುದು ಜ್ಞಾನಕ್ಕಾಗಿ ಅಲ್ಲ. ಮನುಷ್ಯ ಈ ಬದುಕಿನಲ್ಲಿ ಸಾಧಿಸಬಹುದಾದ ಅತ್ಯುನ್ನತ ಗುರಿಯನ್ನು ತಲುಪುವುದಕ್ಕಾಗಿ. ಇಲ್ಲಿ ತತ್ತ್ವಶಾಸ್ತ್ರವು ಆಶ್ಚರ್ಯ, ಕುತೂಹಲಗಳಿಂದಾಗಿ ರೂಪುಗೊಂಡಿಲ್ಲ, ಬದಲಿಗೆ ಅದು ರೂಪುಗೊಂಡಿರುವುದು ಬದುಕನ್ನು ಸುಂದರಗೊಳಿಸಿಕೊಳ್ಳುವುದಕ್ಕಾಗಿ. ಇಲ್ಲಿ ತತ್ತ್ವಾನುಸಂಧಾನವು ಕೇವಲ ಬೌದ್ಧಿಕ ಜಿಜ್ಞಾಸೆ ಅಲ್ಲ. ಅದು ಕೇವಲ ಆಚರಣೆ ಪ್ರಧಾನವಾದ ನೈತಿಕತೆಯೂ ಅಲ್ಲ. ಭಾರತೀಯ ಚಿಂತಕರ ಮನಸ್ಸನ್ನು ಕಲಕಿದುದು ಬದುಕಿನ ಇತಿಮಿತಿಗಳೇ. ಇವುಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದೇ ಅವರ ಮುಖ್ಯ ಕಾಳಜಿ. ನಮ್ಮ ತತ್ವಶಾಸ್ತ್ರದ ಆಧಾರವೇ ಆಧ್ಯಾತ್ಮ. ಆಧ್ಯಾತ್ಮ ಎಂದರೇನು? […]

ಮತ್ತೆ ಯುಗಾದಿ

ಮತ್ತೆ ಯುಗಾದಿ ಬದಲಾವಣೆ ಎಂದರೆ ಹೊಸತು…, ಹೊಸತು ಎಂದರೆ ಸೌಂದರ್ಯ. ಸೌಂದರ್ಯ ಎಂದರೆ ಉಲ್ಲಾಸ. ಉಲ್ಲಾಸ ಅಂದರೆ ಬದುಕು… ಬದುಕು ಅಂದರೆ ಬದಲಾವಣೆ… ಎಲೆ ಉದುರಿದ ಮರ ಮತ್ತೆ ಚಿಗುರಿನಿಂದ ಕಂಗೊಳಿಸಲು ತಯಾರಾಗುತ್ತದೆ. ಮತ್ತೆ ಚಿಗುರನ್ನು ಎಲೆಯಾಗಿಸಿ, ಎಲೆ ಹಣ್ಣಾಗಿಸಿ, ಉದುರಿಸಿಕೊಳ್ಳಲೂ ಕೂಡಾ….. ಮತ್ತೆ, ಮತ್ತೆ ಯುಗಾದಿ. ಇದೇ ನಿಸರ್ಗ ಮಾನವ ಬದುಕಿಗೆ ಶಾಶ್ವತವಾಗಿ ನೀಡುತ್ತಿರುವ ಸಂದೇಶ ಹಾಗೂ ಸಂತೋಷ. ಇದು ಪ್ರಕೃತಿಯಲ್ಲಿ ನಿತ್ಯ ಪವಾಡದಂತೆ ನಡೆಯುತ್ತದೆ. ಪ್ರಕೃತಿಯು ಹಸುರಿನಿಂದ ಸಜ್ಜಾಗುವ ಈ ಸುಂದರ ಕ್ಷಣ ಯುಗಾದಿ. […]

ಹಾಗೇ ಸುಮ್ಮನೇ

ಹಾಗೇ ಸುಮ್ಮನೇ ಸ್ಕೂಟೀ ತೆಗೆದುಕೊಂಡ ಹೊಸದಾಗಿ ಲೈಸನ್ಸು ಮಾಡಿಸುವುದಿತ್ತು. ಆರ್.ಟಿ.ಓ. ಆಫೀಸಿಗೆ ಹೋದೆ. ಯಾರನ್ನು ಭೆಟ್ಟಿಯಾಗುವುದೆಂದು   ತಿಳಿಯದೆ ಅತ್ತಿತ್ತ ನೋಡುತ್ತ ನಿಂತಿದ್ದೆ. ಅಲ್ಲಿ RTO (ಲೋಕಲ್ ಹೆಡ್ ಆಫೀಸರ) ಅಂತ ಬರೆದ ಬೋರ್ಡು ಕಾಣಿಸಿತು. ಅಲ್ಲಿ ಹೋಗಿ ನಿಂತೆ. ‘ಕನ್ನಡಕ ಹಾಕಿದ ಬೋಳು ತಲೆಯ ವ್ಯಕ್ತಿಯೊಂದು ‘ಏನ ಬೇಕಾಗಿತ್ತು’ ಎಂಬುದನ್ನು ತನ್ನ ಹುಬ್ಬನ್ನಷ್ಟೆ ಮೇಲಕ್ಕೇರಿಸಿ ಕೇಳಿದ. ‘ಲೈಸನ್ನರೀ’ ‘ಹಂಗಾದ್ರೆ ಇನ್ನೊಂದು ಆ ಕಡೆ ಟೇಬಲ್ಲಿಗೆ ಹೋಗ್ರಿ’ ಎಂದು ತೋರಿಸಿ ತನ್ನ ಮುಂದಿನ ಪೈಲಿನಲ್ಲಿ ತಲೆ ಹುದುಗಿಸಿ ಕುಳಿತ. […]

ನಮ್ಮ ನಿತ್ಯ ಜೀವನದಲ್ಲಿ ಭಗವದ್ಗೀತೆಯ ಪಾತ್ರ

ನಮ್ಮ ನಿತ್ಯ ಜೀವನದಲ್ಲಿ ಭಗವದ್ಗೀತೆಯ ಪಾತ್ರ ನಮ್ಮ ಭಾರತೀಯ ಚಿಂತನೆಯ ಮೂಲಾಧಾರ ವೇದ, ಉಪನಿಷತ್ತು, ಭಗವದ್ಗೀತೆಗಳು. ಇವುಗಳ ಪಾರಮ್ಯವನ್ನು ಒಪ್ಪಿಕೊಳ್ಳಲೀ ಒಪ್ಪಿಕೊಳ್ಳದಿರಲೀ ಅವು ಪ್ರತಿಪಾದಿಸುವ ಚಿಂತನೆಯ ಸಾರವನ್ನು ತಮ್ಮದೇ ಆದ ರೀತಿಯಲ್ಲಿ ಅಳವಡಿಸಿಕೊಳ್ಳದಿರುವ ಭಾರತೀಯ ಚಿಂತನಾ ಪ್ರಕಾರ ಇಲ್ಲವೆಂದೇ ಹೇಳಬೇಕು. ಶ್ರೀಮದ್ಭಗವದ್ಗೀತೆಯ ಜಗತ್ತಿನ ಅನೇಕ ಧರ್ಮಗ್ರಂಥಗಳಲ್ಲಿ ಒಂದು ವಿಶೇಷ ಸ್ಥಾನವನ್ನು ಪಡೆದಿದೆಯಲ್ಲದೆ ನಮ್ಮ ಭಾರತೀಯರ ಪವಿತ್ರ ಗ್ರಂಥ. ಹಿಂದೂ ತತ್ವಶಾಸ್ತ್ರದ ಮತ್ತು ಆಚಾರಸಂಹಿತೆಯ ಅತ್ಯಂತ ಪ್ರಮಾಣೀಕೃತ ಮೂಲಗ್ರಂಥಗಳಲ್ಲಿ ಇದೂ ಒಂದು. ಭಗವಾನ್ ವಾಸುದೇವನೇ ಇದರ ಕರ್ತೃ.. ಅವನ […]

ನಂಬುವದೋ…. ಬಿಡುವದೋ…ನೀವೇ ಹೇಳಿ…

ನಂಬುವದೋ…. ಬಿಡುವದೋ…ನೀವೇ ಹೇಳಿ… ನಮ್ಮ ಕಡೆಗೆ ಕೆಲವು ನಂಬಿಕೆಗಳಿವೆ. ಅವು ಮೂಢ ನಂಬಿಕೆಗಳೇ ಅಲ್ಲವೇ ಎಂಬುದನ್ನು ಬಲ್ಲವರು ಹೇಳಬೇಕು.’ಮೂಢ’ ಶಬ್ಧ ನಮ್ಮ ಶಬ್ಧಕೋಶಗಳೊಳಗೆ ಸೇರುವಷ್ಟರಲ್ಲೇ ನಮ್ಮ ನಂಬುಗೆಗಳು ಗಟ್ಟಿಗೊಂಡಿದ್ದವು. ಅವುಗಳನ್ನು ನಂಬಿ ಅನಾಹುತಗಳೇನೂ ಆಗಿರಲಿಲ್ಲ. ಅಂದ ಮೇಲೆ ಬದಲಿಸಬೇಕೆಂಬ ಭಾವನೆ, ಒತ್ತಾಯ ಯಾವುದೂ ಇರಲಿಲ್ಲ. ನಂಬಿದ್ದು ಆಕಸ್ಮಿಕವಾಗಿ ನಿಜವಾದರೆ ನಂಬಿಗೆಗೆ credit, ನಿಜವಾಗಲಿಲ್ಲವೋ’ಕತ್ತೆ ಬಾಲ’ ಹೋಯ್ತು ಎಂಬ ತತ್ವ ನಮ್ಮನ್ನು ಸುರಕ್ಷಿತ ವಲಯದಲ್ಲೇ ಇರಗೊಟ್ಟಿತ್ತು. ಇಂದು ಇದೆಲ್ಲ ಯಾಕೆ ನೆನಪಾಯಿತೆಂದರೆ ಬೆಳಿಗ್ಗೆ ಸೀರೆಯುಡುವಾಗ ಅದು ಗೊತ್ತಿಲ್ಲದೇ ಉಲ್ಟಾ […]