Your Cart

Need help? Call +91 9535015489

📖 Print books shipping available only in India. ✈ Flat rate shipping

ಹೆಣ್ಣೇಕೆ ಶ್ವೇತಸುಂದರಿಯಾಗಿರಬೇಕು?

ಹೆಣ್ಣೇಕೆ ಶ್ವೇತಸುಂದರಿಯಾಗಿರಬೇಕು? ಸೌಂದರ್ಯವೆನ್ನುವುದು ನೋಡುಗರ ಕಣ್ಣಿನಲ್ಲಿದೆ ಎಂದು ಶೇಕ್ಸಪಿಯರ್ ನಂಥ ಮಹಾನ್ ಸಾಹಿತಿಯೇ ಹೇಳಿದ್ದಾನೆ.. ಆದರೂ ಸೌಂದರ್ಯದ ಅಳತೆಗೋಲುಗಳು ಇದ್ದೇ ಇವೆ. ಅವೇನೂ ಸೌಂದರ್ಯ ಸ್ಪರ್ಧಾಳುಗಳಿಗೆಂದು ಮಾಡಲಾದವುಗಳಲ್ಲ. ಸಾಮಾನ್ಯರ ದೃಷ್ಟಿಯಲ್ಲಿಯ ಅಳತೆಗೋಲುಗಳೇ. ಸೌಂದರ್ಯವೆಂದರೆ ಹಾಲುಬಿಳುಪು ಬಣ್ಣ, ಎತ್ತರವಾದ ಆದರೆ ತೆಳುವಾದ ಹಾಗೂ ಒಳ್ಳೆಯ ಉಬ್ಬು ತಗ್ಗುಗಳನ್ನು ಹೊಂದಿದ ಮೈಕಟ್ಟು, ಸ್ವಚ್ಛವಾದ ಹಾಗೂ ಹೊಳಪುಳ್ಳ ಚರ್ಮ, ಕೂದಲು ಉದ್ದ ಅಥವಾ ಗಿಡ್ಡ ಹೇಗೇ ಇರಲಿ, ಅದರೆ ದಟ್ಟವಾದ ಹಾಗೂ ನಯವಾದ ಕೇಶರಾಶಿ ಇರಬೇಕು… ದೊಡ್ಡ ದೊಡ್ಡ ಕಣ್ಣುಗಳು, ಚೂಪನೆಯ […]

ಕೋಲೆ ಬಸವ…!

ಕೋಲೆ ಬಸವ…! ಆಧುನಿಕತೆಯ ಭರಾಟೆಯಿಂದಾಗಿ ನೇಪಥ್ಯಕ್ಕೆ ಸರಿಯುತ್ತಿರುವ ಅನೇಕ ಜಾನಪದ ಆಟಗಳು ಹಾಗೂ ಕಲೆಗಳಲ್ಲಿ ಕೋಲೆ ಬಸವನ ಆಟ ಒಂದು. ಕೋಲೆ ಬಸವ ನೋಡಲು ಬಹಳ ಸುಂದರ. ಅವುಗಳ ಭುಜಗಳನ್ನು ಎತ್ತರವಾಗಿ ಕಾಣುವಂತೆ ಬಣ್ಣ ಬಣ್ಣದ ಜೂಲುಗಳಿಂದ ಅಲಂಕಾರ ಮಾಡಿ, ಕೋಡಿನ ತುದಿಗೆ ಬಣ್ಣದ ರಿಬ್ಬನ್ ಗಳನ್ನು ಕಟ್ಟಿ ಸಿಂಗರಿಸುತ್ತಾರೆ. ಕಾಲುಗಳಿಗೆ ಗಗ್ಗರ, ಹಣೆಗೆ ದೇವರ ಪಟದೊಂದಿಗೆ ಕವಡೆ ಸರದ ಅಲಂಕಾರ. ಈ ರೀತಿ ಶೃಂಗಾರಗೊಂಡ ಗೋವುಗಳು ತಮ್ಮ ಯಜಮಾನನ ಅಣತಿಯಂತೆ ವಿವಿಧ ಆಟಗಳನ್ನು ಪ್ರದರ್ಶಿಸುತ್ತಾ ನೆರೆದ […]

ಧಾರವಾಡದ ಜೆ ಎಸ್ಎಸ್ ಕಾಲೇಜಿನ ನನ್ನ ಮೊದಲ ದಿನ…

ಧಾರವಾಡದ ಜೆ ಎಸ್ಎಸ್ ಕಾಲೇಜಿನ ನನ್ನ ಮೊದಲ ದಿನ… ನಮ್ಮದು ತಾಲೂಕೂ ಅಲ್ಲದ ಅತಿ ಚಿಕ್ಕ ಹಳ್ಳಿ, ರಟ್ಟೀಹಳ್ಳಿ.ಅಲ್ಲಿಂದ ಮೊಟ್ಟ ಮೊದಲಿಗೆ ಧಾರವಾಡಕ್ಕೆ ಬಂದದ್ದು ೧೯೬೫ ರಲ್ಲಿ, ನಾನು ಹತ್ತೊಂಬತ್ತು ವರ್ಷದವಳಿದ್ದಾಗ…ಅದೂ ಪಿ.ಯು.ಸಿ ಗೆ ಅಂದರೆ ಯಾರಿಗೂ ಸಹಜವಾಗಿಯೇ ಆಶ್ಚರ್ಯವಾದೀತು. ಹೌದು, ಶಿಕ್ಷಣ ಇದ್ದುಳ್ಳವರ ಸೊತ್ತು ಎಂಬಂತಿದ್ದ ಕಾಲಮಾನವದು. ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆಯಂತೂ ಒಂದು ರೀತಿಯ ದಿವ್ಯ ನಿರ್ಲಕ್ಷ್ಯ. ಇದ್ದವರು ಮಕ್ಕಳನ್ನು ಹತ್ತಿರದ ರಾಣೆಬೆನ್ನೂರು, ಹಾವೇರಿ ಹೆಚ್ಚೆಂದರೆ ಧಾರವಾಡದಲ್ಲಿ ಬಂಧುಗಳ ಮನೆಯಲ್ಲಿ ಇಟ್ಟು ಓದಿಸುತ್ತಿದ್ದರು. ಉಳಿದವರು […]

ಟಿ.ವಿ.

ಟಿ.ವಿ. ಟಿ.ವಿ ಎಂಬ ಯಡವಟ್ಟು ಮನೆಯ ಮೂಲೆಯಲಿ ತಂದಿಟ್ಟು ಆಗಿಹುದು ಪಡಿವಾಟಲು ಒಬ್ಬರಿಗೊಬ್ಬರದು ಮಾತಿಲ್ಲ ಕಥೆಯಿಲ್ಲ ಸೀರೆಯಲ್ಲುಗಳ ಕಂದರದಲಿ ಹುಗಿದಿಹರೆಲ್ಲ ಅವು ನಕ್ಕರೆ ಮನೆಮಂದಿಯ ಮುಖದಲಿ ರಾರಾಜಿಸುವುದು ನಗೆ ಎಂಬ ಸಕ್ಕರೆ ಅವು ಅತ್ತರೆ ಮನೆ ಮಂದಿಯ ಮುಖವೆಲ್ಲ ಹ್ಯಾಪು ಮೋರೆ ಟಿವಿ ಕಲಾಕಾರರದೇ ಭಾವಗಳೂ ನಮ್ಮವೂ ಆದುವಲ್ಲ ಅನ್ನದ ಜೊತೆಗೆ ಚಟ್ನಿಯ ತಿಂಬುವರಲ್ಲ ಚಪಾತಿಗೆ ಹುಳಿಯೇ ಗತಿಯಾಯ್ತಲ್ಲ! ಉಪ್ಪು ಹುಳಿ ಸಿಹಿ ಬಾರದ ರುಚಿಯೇ ಮರೆತೋಯ್ತಲ್ಲ ಕಣ್ಣುಗಳೆಲ್ಲ ಟಿವಿಯಲಿ ನೆಟ್ಟು ಕುಳಿತಿರುವವರೆಲ್ಲ ಕಂಗೆಟ್ಟು ಆಟವೂ ಉಂಟು […]

ಮರದ ಮನೆ…!

ಮರದ ಮನೆ…! ಪ್ರಕೃತಿಯ ಮಡಿಲಲ್ಲಿ ಮರದ ಮೇಲಿನ ಮನೆಯನೇರಿ ಕಾಲ ಕಳೆಯುವುದು ಅದ್ಭುತ ಅನುಭವ. ಹಕ್ಕಿಗಳ ಚಿಲಿಪಿಲಿ ನಾದದ ಜೊತೆಗೆ ತಂಪಾದ ಗಾಳಿ, ಬೆಳದಿಂಗಳು, ಸೂಯೋದಯದ ಸೊಬಗಿನ ಕ್ಷಣವನ್ನು ಮನದಣಿಯೆ ಆಸ್ವಾದಿಸಲು ಮರದ ಮನೆ ಹೆಚ್ಚು ಸೂಕ್ತ. ಅಪರೂಪ ಎನ್ನುವಂತಿರುವ ಇದು ತನ್ನ ವಿಶೇಷ ವಿನ್ಯಾಸದಿಂದ ಗಮನ ಸೆಳೆಯುತ್ತದೆ. ಈ ಟ್ರೀ ಹೌಸ್ ಇರುವುದು ಶಿಕಾರಿಪುರದಿಂದ ಮೂರು ಕಿಲೋಮೀಟರ್ ದೂರದ ಇಕ್ಬಾಲ್ ಅಹಮದ್ ರವರ ತೋಟದ ಮನೆಯಲ್ಲಿ ನಟರೂ ನಾಟಕಕಾರರೂ ಆಗಿರುವ ಇವರ ಕೈ ಚಳಕದಿಂದ ಹಸಿರ […]

ಪಯಣ

ಪಯಣ ತಾಯಿಯ ಮಡಿಲಲಿ ಬೆಚ್ಚಗೆ ಪವಡಿಸಿದ್ದ ಮಗುವಿಗೆ ಮಡಿಲು ಚಿಕ್ಕದಾಯ್ತು ಅಂಬೆಗಾಲಿಕ್ಕುತ ನಡೆವ ಮಗು ಈಗ ಅಂಗಳಕ್ಕಿಳಿದಾಯ್ತು ಅಂಗಳವು ಸಾಲದಾಗಿ ಬೀದಿಗೆ ನಡೆದಾಯ್ತು ಪುಟ್ಟ ಪಾದಗಳು ದೊಡ್ಡದಾಗಿ ಮಗು ಶಾಲೆಗೆ ನಡೆದಾಯ್ತು ವರ್ಗದಿಂದ ವರ್ಗಕ್ಕೆ ತೇರ್ಗಡೆಯಾಗುತ್ತಾ ಕಾಲೇಜು ಕಲಿಕೆ ಮುಗಿದಾಯ್ತು ಅಣ್ಣನ ಜೊತೆಯ ಕದನ ತಮ್ಮ ತಂಗಿಯರೊಂದಿಗಿನ ಜಗ್ಗಾಟ, ಕಳ್ಳಾಟಗಳು ಕೊನೆಯಾಗಿ ಮಗು ಈಗ ಬೆಳೆದು ನಿಂತ ವಧುವಾಗಿ ಕಣ್ಗಳಲಿ ಕನಸಿನ ಗೋಪುರ ಮನದಲಿ ಆಸೆಗಳ ಮಹಾಪೂರ ಚೆಂದದ ವರನಿಗೆ ಈಕೆ ವಧುವಾಗಿ ನಡೆದಳು ಆತನ ಮನೆಯೆಡೆಗೆ […]

ವೈವಾಹಿಕ ಜೀವನದ ಯಶಸ್ಸಿಗೆ ಹೊಂದಾಣಿಕೆ ಹಾಗೂ ಸಾಮರಸ್ಯ ಮುಖ್ಯ

ವೈವಾಹಿಕ ಜೀವನದ ಯಶಸ್ಸಿಗೆ ಹೊಂದಾಣಿಕೆ ಹಾಗೂ ಸಾಮರಸ್ಯ ಮುಖ್ಯ ಬದುಕಿನ  ಪ್ರಮುಖ ನಿರ್ಧಾರಗಳಲ್ಲಿ ವಿವಾಹವೂ ಒಂದು. ಹೊಸದಾಗಿ ಮದುವೆ ಮಾಡಿಕೊಂಡು ತನ್ನ ಸಂಗಾತಿಯೊಂದಿಗೆ ಜೀವನ ಹಂಚಿಕೊಳ್ಳುವ ಉತ್ಸಾಹ ಒಂದು ಕಡೆಯಾದರೆ, ಮತ್ತೊಂದು ಕಡೆ  ಹೊಸ ಪರಿಸರ, ಹೊಸ ಸಂಗಾತಿಯೊಂದಿಗೆ ಅಪರಿಚಿತ  ವಾತಾವರಣದಲ್ಲಿ ವಾಸಿಸುವುದು ಸವಾಲಿನ ಸಂಗತಿಯಾಗಿರುತ್ತದೆ. ಇದು ಹೆಣ್ಣು ಹಾಗೂ ಗಂಡು ಇಬ್ಬರಿಗೂ ಕೂಡ ಅನ್ವಯವಾಗುತ್ತದೆ. ಆದರೂ ಹೊಸ ಬದುಕಿಗೆ ಹೊಂದಿಕೊಳ್ಳುವುದು ಎಂದರೆ ಗಂಡಿಗಿಂತಲೂ ಹೆಣ್ಣಿಗೇ ತೀವ್ರ ಒತ್ತಡಕರ ವಿಷಯ. ಏಕೆಂದರೆ ಗಂಡಿಗೆ ಕೇವಲ ಹೆಂಡತಿಯೊಬ್ಬಳೇ ಅಪರಿಚಿತಳಾದರೆ […]

ಅಮ್ಮ’ ನಂಥ ಒಬ್ಬ ತಮ್ಮನಿದ್ದ

ಅಮ್ಮ’ ನಂಥ ಒಬ್ಬ ತಮ್ಮನಿದ್ದ’ (ಮೂರು ದಿನ… ನೂರು ನೆನಪು…) ಹೆಸರು ಸುಧೀಂದ್ರ. ನನಗಿಂತ ಏಳು ವರ್ಷಗಳಷ್ಟು ಕಿರಿಯ ವಯಸ್ಸಿನಲ್ಲಿ. ಹದಿನಾಲ್ಕು ವರ್ಷ ‘ಹಿರಿಯ’ ಮನಸ್ಸಿನ ಪಕ್ವತೆಯಲ್ಲಿ. ಹೃದಯದಿಂದ ಮಗು, ಸಹಾಯಕ್ಕೆ ನಿಂತರೆ ‘ಸೇವಕ’. ಸಲಹೆಗಳನ್ನು ಕೊಡುವಲ್ಲಿ ಮಂತ್ರಿ. ಸೋದರ, ಸಹೋದರಿಯರಿಗೆ ಅಭಯಹಸ್ತ. ಗೆಳೆಯರಿಗೆ ಆಪ್ತಮಿತ್ರ. ಇದು ಅಕ್ಕನೆಂಬ ಅಕ್ಕರೆಯಿಂದ ಬಂದ ಅತಿಶಯೋಕ್ತಿಯಲ್ಲ. ಅವನಿದ್ದುದೇ ಹಾಗೆ. ಅಣ್ಣ ಕಟ್ಟಿದ ಕಾಲೇಜನ್ನು ತನ್ನ ಸ್ವಂತ ಮಕ್ಕಳಂತೆ ಬೆಳೆಸಿ ಅಣ್ಣನ ಬಲಗೈ ಬಂಟನಾದ. ನನ್ನ ಮೊದಲ ಪುಸ್ತಕ ‘ನೀರ ಮೇಲೆ […]

ಅನುವಾದ ಸಾಹಿತ್ಯ  ಭಾಗ ೩

ಅನುವಾದ ಸಾಹಿತ್ಯ  ಭಾಗ ೩ ಭಾಷಾವೈಶಿಷ್ಟ್ಯಗಳ ಬಳಕೆಯ ಅಪರೂಪದ, ಆಡುಭಾಷೆಯ ನುಡಿಗಟ್ಟುಗಳು ಒಂದು ರೀತಿಯಲ್ಲಿ ಭಾಷೆಯಿಂದ  ಬೇರ್ಪಡಿಸಲಾಗದ ಅಭಿವ್ಯಕ್ತಿಗಳಾಗಿವೆ.  ಅವುಗಳು ಒಂದು ನಿರ್ದಿಷ್ಟ ಅರ್ಥವನ್ನು ಹೊಂದಿರುತ್ತವೆ, ಅವುಗಳಲ್ಲಿ ಒಳಗೊಂಡಿರುವ ಅಂಶಗಳಿಂದ ಸ್ವತಂತ್ರವಾಗಿರುತ್ತವೆ. ಒಮ್ಮೊಮ್ಮೆ ಈ ನುಡಿಗಟ್ಟುಗಳು ಶಬ್ದಶಃ ಅನುವಾದ ಹೊಂದಿದಾಗ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ನನಗೆ ಶ್ರೀಮತಿ ಇಂದ್ರಾಯಣಿ ಸಾಹುಕಾರರವರ ಮೇನಕಾ ಹಾಗೂ ಏಕ್ ಹೋತಾ ಸಿಕಂದರ ಕಾದಂಬರಿಗಳನ್ನು ಅನುವಾದ ಮಾಡುವಾಗ ಕೆಲವು ನುಡಿಗಟ್ಟುಗಳನ್ನು ಹೇಗೆ ಅರ್ಥ ಕೆಡದಂತೆ ಅನುವಾದಿಸಬೇಕೆಂಬ ಸಮಸ್ಯೆ ಉಂಟಾಗಿತ್ತು.. ‘ಸೋನ್ಯಾ ಪೇಕ್ಷಾ ಪಿವಳಾ’.. ಬಹಳ […]