Your Cart

Need help? Call +91 9535015489

📖 Print books shipping available only in India. ✈ Flat rate shipping

ಗಂಗೆ

ಗಂಗೆ ಪಾಪನಾಶಿನಿ ಗಂಗೆ- ಈಗಲ್ಲ ಪರಿಶುದ್ಧ… ಅವಳ ಶುದ್ಧೀಕರಣ – ಒಂದು ಮಹಾ ಯುದ್ಧ… ಶತ- ಶತಮಾನಗಳ ಕೂಡಿಟ್ಟ ಹೊಲಸು… ಸಂಪೂರ್ಣ ಪರಿಹಾರ ಆದೀತೆ ಸಲೀಸು ? ಸೇಡು ನಾವು ಉಂಡದ್ದನ್ನು ನೀವೂ ಉಣ್ಣಬೇಕು… ನಮ್ಮ ಸಂಕಟ ನಿಮಗೂ ಗೊತ್ತಾಗಬೇಕು… “ಕಣ್ಣಿಗೆ-ಪ್ರತಿ-ಕಣ್ಣು”- ಎನ್ನುವ ಈ ನೀತಿ… ಮನುಕುಲವ ಕುರುಡಾಗಿಸೀತೆಂಬ ಭೀತಿ…

ಮಹಾರ್ ಕೇರಿಯಲ್ಲಿ ಮಗುವಾದ ಮಹಾತ್ಮ

ಆದಿ ಅಸ್ಪೃಶ್ಯ ಲೋಕದ ಅನಾದಿ ಪುಟ್ಟ ಸಂಸಾರವೊಂದು ಮಹಾನಗರಿ ಮುಂಬೈನಿಂದ ಆಶ್ರಮಕ್ಕೆ ಆಗಮಿಸಿತ್ತು ಅಲ್ಲಿದ್ದ ಪರಿವಾರವೆಲ್ಲ ಮೈಚರ್ಮವನ್ನೇ ಸುಲಿದುಕೊಳ್ಳಲು ಬೇಕಾದರೆ ಉಸಿರಾಟವನ್ನು ನಿಲ್ಲಿಸಿಕೊಳ್ಳಲು ತಯಾರಿತ್ತುದೂಧಾಭಾಯಿ ದೀನಾಬೆನ್ ಬೆಸೆದ ಬಂಧನಕ್ಕೆ ಕರುಳಕುಡಿಯ ಹಣತೆಯಂತೆ ಬೆಳಕು ‘ಲಕ್ಷ್ಮೀ’ ಎಂಥ ಹೆಸರು! ಗಾಂಧಿ ಮುಗುಳ್ನಕ್ಕರು, ಕರೆದು ಮೈದಡವಿದರು ಕಸ್ತೂರಬಾ ಭಾವನೆಗಳ ಕತ್ತರಿಸಿದ ಕುಹಕಿ | ಪತ್ನಿಯೇ ಇವಳು ಆಫ್ರಿಕಾಕ್ಕೆ ಹೋಗಿಬಂದರೂ ಕಳಂಕ ಕಲ್ಮಶದ ಮಹಾನ್ ಧರ್ಮಿಷ್ಠೆ | ಯಾವ ದೇವರ ಹಾವು ಕುಟುಕಿದೆ | ನಾನು ಕೈಹಿಡಿದೇನೇ ಇವಳನ್ನ ಕೈಕೈ ಹಿಸುಕಿಕೊಳ್ಳುತ್ತಾರೆ, […]

ಧರ್ಮಸಂಕಟವನು ಎದುರಿಸಿದವನ ಕಥೆ

2018 ರ ಅಕ್ಟೋಬರ್ ತಿಂಗಳಲ್ಲಿ ನಡೆದ ನೀನಾಸಮ್ ಸಂಸ್ಕೃತಿ ಶಿಬಿರದಲ್ಲಿ ‘ಗಾಂಧಿ ವಿದ್ವಾಂಸ’ ತ್ರಿದೀಪ್ ಸುಹೃದ್ ಅವರ ಮಾತುಗಳನ್ನು ಕೇಳಿದಾಗ ಮತ್ತು ಮಹಾತ್ಮರ ಕುರಿತು ಅವರು ಮಾಡಿದ ಬೌದ್ಧಿಕ ಕೆಲಸಗಳ ಬಗ್ಗೆ ತಿಳಿದುಕೊಂಡಾಗ ಕನ್ನಡದಲ್ಲೂ ಒಬ್ಬ ತ್ರಿದೀಪ್ ಸುಹೃದ್ ಕಾಣಿಸಿಕೊಳ್ಳಬಾರದೆ ಎಂದನ್ನಿಸಿತ್ತು. ಅಂದಿನ ನನ್ನ ಸಂಚಾರೀ ಭಾವಕ್ಕೆ ಈಗ ನಾನೇ ಕೌತುಕ ಪಡುವಂತೆ, ಸಾಹಿತ್ಯ ವಿಮರ್ಶಕರು ಮತ್ತು ರಾಜಕೀಯ ಚಿಂತಕರೂ ಆಗಿರುವ ಡಿ.ಎಸ್. ನಾಗಭೂಷಣ್‍ ಅವರು ಮಹಾತ್ಮ ಗಾಂಧೀಜಿಯವರ ಸಮಗ್ರ ಬದುಕನ್ನು ಪುನರ್‌ ನಿರೂಪಿಸಿ 700 ಪುಟಗಳ […]

ಸತ್ಸಂಗದಲ್ಲಿದ್ದು ಜ್ಞಾನ ಪಡೆದುಕೊ

ಸತ್ಸಂಗದಲ್ಲಿದ್ದು ಜ್ಞಾನ ಪಡೆದುಕೊ ‘ಅಧ್ಯಯನ, ಯಾಜನ. ದೇವತಾಪೂಜನ. ಕರ್ತವ್ಯಕರ್ಮ, ಯಜ್ಞಶೇಷವನ್ನು ಉಣ್ಣುವುದು (ಪರಿಣಾಮವಾಗಿ ಏನು ಸಿಕ್ಕರೆ ಅದನ್ನೇ ಮಹಾಪ್ರಸಾದವೆಂದು ಸ್ವೀಕರಿಸುವುದು), ಧ್ಯಾನ. ಮುಂತಾದ ಹಲವು ವಿಧಗಳಲ್ಲಿ ಕರ್ಮಯೋಗವನ್ನಾಚರಿಸುವ ವಿವರಗಳು ವೇದದಿಂದಲೇ ಬಂದಿವೆ, ಅದನ್ನು ಅರಿತು ಆಚರಿಸಬಲ್ಲವನು ಮುಕ್ತನಾಗುತ್ತಾನೆ’ ಎನ್ನುವ ವಿಷಯವನ್ನು ಶ್ರೀಕೃಷ್ಣನು ವಿವರಿಸುತ್ತಿದ್ದನು. ಮುಂದುವರಿಸುತ್ತ ಹೇಳುತ್ತಾನೆ; ‘‘ಕೇವಲ ದ್ರವ್ಯಗಳನ್ನು ಬಳಸಿ ಮಾಡುವ ಯಜ್ಞಕ್ಕಿಂತ, ಜ್ಞಾನಯಜ್ಞವು ಹೆಚ್ಚು ಶ್ರೇಯಸ್ಕರ, ಎಲ್ಲ ಕರ್ಮಗಳೂ ಕೊನೆಗೆ ಜ್ಞಾನದಲ್ಲೇ ಪರಿಸಮಾಪ್ತಿಯಾವುದು’’ ಎಂದು. (ಭ.ಗೀ.: 4.33) ‘ದ್ರವ್ಯಯಜ್ಞ’ ಎಂದರೆ ಭೌತಿಕವಸ್ತುಗಳನ್ನು ಬಳಸಿ ಮಾಡುವ ಪೂಜೆ, […]

‘ದ.ರಾ.ಬೇಂದ್ರೆ: ಆಧುನಿಕ ಭಾರತೀಯ ಕಾವ್ಯ ಪರಂಪರೆ’-ರಾಷ್ಟ್ರೀಯ ವಿಚಾರ ಸಂಕಿರಣ

ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಧಾರವಾಡ, ಇಂದಿರಾಗಾಂಧಿ ರಾಷ್ಟ್ರೀಯ ಆದಿವಾಸಿ ವಿಶ್ವವಿದ್ಯಾಲಯ ಮಧ್ಯಪ್ರದೇಶ ಮತ್ತು ದೆಹಲಿ ಕರ್ನಾಟಕ ಸಂಘ ನವದೆಹಲಿ ಇವುಗಳ ಸಂಯುಕ್ತಾಶ್ರಯದಲ್ಲಿ ದೆಹಲಿಯ ಕರ್ನಾಟಕ ಸಂಘದಲ್ಲಿ ‘ದ.ರಾ.ಬೇಂದ್ರೆ: ಆಧುನಿಕ ಭಾರತೀಯ ಕಾವ್ಯ ಪರಂಪರೆ’ ಎಂಬ ವಿಷಯದ ಮೇಲೆ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದ ವರದಿ. ಬಂಡಾಯೋತ್ತರ ಸಂದರ್ಭದಲ್ಲಿ ಬೇಂದ್ರೆ ಕಾವ್ಯದ ಕುರಿತು ಹೆಚ್ಚಿನ ಅಧ್ಯಯನಗಳು ನಡೆಯಲಿಲ್ಲ. ಈ ಕಾಲಘಟ್ಟದಲ್ಲಿ ಬೇಂದ್ರೆ ಕಾವ್ಯ ಏಕೆ ಹಿನ್ನೆಲೆಗೆ ಸರಿಯಿತು ಎಂದು ತಿಳಿದುಕೊಳ್ಳಬೇಕಿದೆ. ಮಾರ್ಗಭಾಷಾಶೈಲಿ ತೊರೆದು ದೇಶಿ ಭಾಷಾಶೈಲಿಯನ್ನು ಅಳವಡಿಸಿಕೊಂಡಿದ್ದರಿಂದ […]

ದುರಹಂಕಾರಿ ಕುದುರೆ

ಒಂದಾನೊಂದು ಕಾಲದಲ್ಲಿ ಮಾವಿನಹಳ್ಳಿಯಲ್ಲಿ ಸಿದ್ದಪ್ಪ ಎಂಬ ವ್ಯಾಪಾರಿ ಇದ್ದ. ಅವನು ಒಂದು ಕುದುರೆ ಹಾಗೂ ಒಂದು ಕತ್ತೆಯನ್ನು ಸಾಕಿಕೊಂಡಿದ್ದ. ತನ್ನ ವ್ಯಾಪಾರಕ್ಕಾಗಿ ಬೇರೆ ಕಡೆಗಳಿಂದ ತರುವ ಮತ್ತು ಬೇರೆ ಕಡೆಗೆ ತೆಗೆದುಕೊಂಡು ಹೋಗುವ ಸಾಮಾನು-ಸರಂಜಾಮುಗಳನ್ನು ಸಾಗಿಸಲು ಕುದುರೆ ಮತ್ತು ಕತ್ತೆಯನ್ನು ಅವನು ಬಳಸುತ್ತಿದ್ದ. ಜೊತೆಗೆ ಆಗಾಗ್ಗೆ ತಾನು ಕುಳಿತು ಓಡಾಡಲು ಕೂಡ ಕುದುರೆಯನ್ನು ಬಳಕೆ ಮಾಡಿಕೊಳ್ಳುತ್ತಿದ್ದ. ಕುದುರೆ ಸವಾರಿ ಮಾಡುವುದೆಂದರೆ ಸಿದ್ದಪ್ಪನಿಗೆ ದೊಡ್ಡಸ್ತಿಕೆಯ ವಿಷಯವೂ ಆಗಿತ್ತು. ಹಾಗಾಗಿ ಅವನು ಕುದುರೆಯನ್ನು ವಿಶೇಷ ಕಾಳಜಿಯಿಂದ, ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. […]

ಮಕ್ಕಳ ಕಥೆ- ಅಮ್ಮನೆಂದರೆ ಅಮ್ಮನೇ

ಒಂದು ಹಳ್ಳಿಯಲ್ಲಿ ಮೇಕೆಯೊಂದು ತನ್ನ ನಾಲ್ಕು ಮರಿಗಳೊಂದಿಗೆ ವಾಸವಾಗಿತ್ತು. ಮರಿಗಳ ಮೇಲೆ ಅದಕ್ಕೆ ತುಂಬ ಮಮತೆ ಇತ್ತು. ಒಂದು ಸಲ ಹಳ್ಳಿಯಲ್ಲಿ ಮಳೆ ಬರಲಿಲ್ಲ. ಸೂರ್ಯನ ಬಿಸಿಲಿನ ಝಳಕ್ಕೆ ಹಸಿರೆಲ್ಲವೂ ಸುಟ್ಟುಹೋಯಿತು. ಮರಿಗಳಿಗೆ ಹೊಟ್ಟೆ ತುಂಬ ಹಾಲು ಕೊಡಲು ಮೇಕೆಗೆ ಕಷ್ಟವಾಯಿತು. ಅದು ಮರಿಗಳ ಬಳಿ, ‘ನಾಳೆಯಿಂದ ನಾನು ಮೇವು ಹುಡುಕಿಕೊಂಡು ತುಂಬ ದೂರ ಹೋಗಬೇಕು. ನೀವು ಭದ್ರವಾಗಿ ಬಾಗಿಲು ಹಾಕಿಕೊಂಡು ಮನೆಯೊಳಗೇ ಕುಳಿತುಕೊಳ್ಳಬೇಕು. ಹೊರಗಿನಿಂದ ನಾನು ಬಂದು ಕರೆದರೆ ಮಾತ್ರ ಬಾಗಿಲು ತೆರೆಯಬೇಕು. ಇಲ್ಲವಾದರೆ ನಿಮಗೆ […]

ನಾ ಗೆಲ್ಲುವೆ!

ನಾ ಗೆಲ್ಲುವೆ! ಬಿಟ್ಟೂ ಬಿಡದ ಮಳೆಯಲ್ಲಿ ನಲಿದು ಕುಪ್ಪಳಿಸಿ ಕುಣಿಯುವೆ ಉಕ್ಕಿ ಬರುವ ಕಣ್ಣೀರು ಕಾಣದಂತೆ ಕತ್ತಲೆಯಲ್ಲಿ ಸಂತಸದಿ ಹಾಡುವೆ ರಾಗ ಅನುರಾಗಗಳ ಫಲ್ಲವಿಸಿ ಭಾವನೆಗಳು ಕಾಣದಂತೆ ಬಯಲಲ್ಲಿ ಪುಷ್ಪಗಳ ಹಾಸಿ ನಿದ್ರಿಸುವೆ ಸುಂದರ ಸ್ವಪ್ನವೆಂಬಂತೆ ಆಂತರ್ಯದ ಮುಳ್ಳು ಕಾಣದಂತೆ ಬೆಳಕಲ್ಲಿ ಎಲ್ಲರೊಡಗೂಡಿ ಬೆರೆಯುವೆ ನಕ್ಕು ನಲಿಯುವೆ ಒಂದಾಗಿ ದುಗುಡ ದುಮ್ಮನ ಕಾಣದಂತೆ ವನಸಿರಿಯಲಿ ಹಸಿರು ತೊಟ್ಟು ಕಂಗೊಳಿಸುವೆ ಹುಸಿ ಸಂತಸದಿ ಕಾಂಡಕೆ ಮೆತ್ತಿದ ಜಿಗಳೆ ಕಾಣದಂತೆ ಬಾನಲಿ ಹೊಳೆವ ನಕ್ಷತ್ರವಾಗಿ ಜಗಮಗಿಸುವೆ ಮುಗಿಲಲಿ ಉರಿದು ಭಸ್ಮವಾದರೂ […]

ಹಿರಿಯ ಹಾಗೂ ಕಿರಿಯ ತಲೆಮಾರುಗಳಲ್ಲಿ ಹೊಂದಾಣಿಕೆಯ ಸಾಧ್ಯತೆ ಹೇಗೆ?

ಹಿರಿಯ ಹಾಗೂ ಕಿರಿಯ ತಲೆಮಾರುಗಳಲ್ಲಿ ಹೊಂದಾಣಿಕೆಯ ಸಾಧ್ಯತೆ ಹೇಗೆ? ಒಂದು ವೃಕ್ಷವು ಹೂ-ಕಾಯಿ-ಹಣ್ಣುಗಳನ್ನು ಹೊತ್ತು ನಳನಳಿಸುವಲ್ಲಿ ಚಿಗುರಿನಷ್ಟೇ ಬೇರೂ ಕೂಡ ಮಹತ್ವದ ಪಾತ್ರ ವಹಿಸುತ್ತದೆ. ತಾಯಿಬೇರನ್ನು ಮರೆತು ಹಸಿರು ಉಳಿಸಿಕೊಂಡ ಮರವನ್ನು ನಾವೆಂದಾದರೂ ನೋಡಿರುವೆವೆ? ಅದೇ ರೀತಿ ಬೇರು ಕಡಿದಮೇಲೆ ವೃಕ್ಷ ಚಿಗುರು ಹೊತ್ತು ನಿಂತ ಉದಾಹರಣೆಯಿದೆಯೇ? ಮಾನವನ ಜೀವನವೂ ಕೂಡ ವೃಕ್ಷದಂತೆಯೇ. ಸಸಿಯಿಂದ ವೃಕ್ಷವಾಗುವವರೆಗಿನ ಅವನ ಅನುಭವದ ಕಣಜದಲ್ಲಿ ದುಃಖ, ಸುಖ, ನೋವು ನಲಿವು ಎಲ್ಲವೂ ಇವೆ. ಒಂದು ರೀತಿಯಲ್ಲಿ ಮಾಗಿದ ಫಲವಿದ್ದಂತೆ. ಇಂದು ನಾವು […]